


ಗ್ರಾಮೀಣ ರೈತರ ಹೆಮ್ಮೆಯ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ತನ್ನ ಕಾನಸೂರು ಶಾಖೆಯ ನೂತನ ಕಟ್ಟಡಗಳ ಉದ್ಘಾಟನೆಯನ್ನು ಜ.೭ ರಂದು ಕಾನಸೂರಿನಲ್ಲಿ ನಡೆಸಲಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಟಿ.ಎಂ.ಎಸ್. ಸದಸ್ಯರು ಕಾನಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ನೀಡಿದರು.

ಟಿ.ಎಂ.ಎಸ್. ಸಂಸ್ಥೆ ಕಳೆದ ಐದು ವರ್ಷಗಳ ಅವಧಿಯಲ್ಲಿ ೨೪.೫ ಕೋಟಿ ಲಾಭ ಗಳಿಸಿದೆ. ಈ ಐದು ವರ್ಷಗಳಲ್ಲಿ ಸಂಸ್ಥೆಯ ಕಟ್ಟಡ ನಿರ್ಮಾಣ ನವೀಕರಣ ಗಳನ್ನು ಮಾಡಲಾಗಿದೆ ಜೊತೆಗೆ ಸಂಸ್ಥೆಗೆ ಎರಡು ನಿವೇಶನಗಳನ್ನೂ ಖರೀದಿಸಲಾಗಿದೆ.
ಸಂಸ್ಥೆಯ ಗ್ರಾಮೀಣ ಶಾಖೆ ಕಾನಸೂರಿನಲ್ಲಿ ೧.೮೬ ಕೋಟಿ ವೆಚ್ಚದಲ್ಲಿ ವ್ಯಾಪಾರಾಂಗಣ, ಅಡಿಕೆ ಮತ್ತು ಭತ್ತದ ಗೋದಾಮುಗಳ ನಿರ್ಮಾಣ, ೨೮.೫೦ ಲಕ್ಷಗಳಲ್ಲಿ ಶಾಖೆಯ ಕಛೇರಿ ನಿರ್ಮಾಣ ಮಾಡಲಾಗಿದೆ. ಇವುಗಳ ಉದ್ಘಾಟನೆ ಜನೇವರಿ ೬ ಮತ್ತು ೭ ರಂದು ನಡೆಯಲಿವೆ.- ಆರ್ೆಂ. ಹೆಗಡೆ ಬಾಳೇಸರ,-ಅಧ್ಯಕ್ಷ ಟಿ.ಎಂ.ಎಸ್. ಸಿದ್ಧಾಪುರ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
