ಉತ್ತರ ಕನ್ನಡ- ಫೀನಿಕ್ಸನಂತೆ ಮೇಲೆದ್ದ mp ಹುರಿಯಾಳುಗಳು!‌ ಯಾರಿವ ಹೊಸ ಅಭ್ಯರ್ಥಿ ಮಿಥುನ್‌ ಶೇಟ್!

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಕಾವು ಪ್ರಾರಂಭವಾದಂತಿದೆ. ಕಾಂಗ್ರೆಸ್‌ ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಬೇಕೆಂದು ಪ್ರಯತ್ನದಲ್ಲಿ ತೊಡಗಿದೆ ಎನ್ನಲಾಗುತ್ತಿದೆಯಾದರೂ ಅದು ತನ್ನ ಅಭ್ಯರ್ಥಿ ಯಾರು ಎಂದು ಸ್ಪಷ್ಟಪಡಿಸಿಲ್ಲ (ಶಿವಮೊಗ್ಗ ಜಿಲ್ಲೆಯೊಂದನ್ನು ಬಿಟ್ಟು ಬೇರೆ ಯಾವ ಕ್ಷೇತ್ರದ ಟಿಕೇಟೂ ನಿರ್ಧಾರವಾಗಿಲ್ಲ )

ಪಕ್ಷದ ಪ್ರಮುಖ ನಾಯಕರು ಅಭ್ಯರ್ಥಿಗಳಾಗಲು ಹಿಂದೇಟುಹಾಕುತ್ತಿರುವುದರಿಂದ ಅಂಜಲಿ ನಿಂಬಾಳ್ಕರ್‌, ರವೀಂದ್ರ ನಾಯ್ಕ ಹೆಸರು ಬಿಟ್ಟರೆ ಬೇರೆ ಯಾವ ಹೆಸರೂ ಪಕ್ಷದ ವಲಯದಲ್ಲಿ ಚರ್ಚೆಯಲ್ಲಿಯೂ ಇಲ್ಲ. ತಮ್ಮದೇ ಮಿತಿಯಲ್ಲಿ ಅಭ್ಯರ್ಥಿಗಳಾಗಲು ಸಿದ್ಧರಾಗಿರುವ ಜಿ.ಟಿ. ನಾಯ್ಕ ಮತ್ತು ಆರ್.‌ ಎಚ್.ನಾಯ್ಕ ಬಿಟ್ಟರೆ ಬೇರೆ ಯಾವ ಅಭ್ಯರ್ಥಿಗಳೂ ತಾವು ಹುರಿಯಾಳುಗಳು ಎಂಬುದನ್ನೂ ಹೇಳಿಕೊಂಡಿಲ್ಲ. ಸದ್ಯ ಬಿ.ಜೆ.ಪಿ.ಯಲ್ಲಿರುವ ಶಿವರಾಮ ಹೆಬ್ಬಾರ್‌ ಕಾಂಗ್ರೆಸ್‌ ಗೆ ಬಂದು ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಪಕ್ಷವಾಗಲಿ ಶಿವರಾಮ್‌ ಹೆಬ್ಬಾರ್‌ ಆಗಲಿ ಎಲ್ಲಿಯೂ ತುಟಿಬಿಚ್ಚಿಲ್ಲ.

ಬಿ.ಜೆ.ಪಿ. ಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆ.ಡಿ.ಎಸ್.‌ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಿದ್ದರೂ ಮೈತ್ರಿಯನ್ನು ಸಮ್ಮತಿಸದ ಬಣವೊಂದು ಪಕ್ಷತ್ಯಜಿಸುವ ಸಿದ್ಧತೆಯಲ್ಲಿದ್ದರೆ ಉಳಿದ ಜಾದಳ ಅನಿವಾರ್ಯವಾಗಿ ಬಿ.ಜೆ.ಪಿ.ಯೊಂದಿಗೆ ಸೇರಿಕೊಳ್ಳಲು ತಯಾರಾದಂತಿದೆ. ಈ ಸ್ಥಿತಿಯಲ್ಲಿ ಕೂಡಾ ಕಾರವಾರದ ಆನಂದ ಅಸ್ನೋಟಿಕರ್‌ ಮತ್ತು ಕುಮಟಾದ ಸೂರಜ್‌ ಸೋನಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿರುವಂತಿದೆ.

ಸದ್ಯ ಚಾಲತಿಯಲ್ಲಿರುವ ಅಭ್ಯರ್ಥಿಗಳಲ್ಲಿ ಕೆಲವರು ಬಿ.ಜೆ.ಪಿ. ಅಭ್ಯರ್ಥಿಗಳಾಗಲು ತಯಾರಿ ನಡೆಸಿದ್ದು ಆ ಪಟ್ಟಿಯಲ್ಲಿ ಹಾಲಿ ಸಂಸದ ಅನಂತಕುಮಾರ ಹೆಗಡೆ,ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ, ಕಾರವಾರದ ನಾಗರಾಜ್‌ ನಾಯಕ,ಶಿರಸಿಯ ಅನಂತಮೂರ್ತಿ ಹೆಗಡೆ ಸೇರಿದಂತೆ ಕೆಲವರು ಪ್ರಚಾರದಲ್ಲಿದ್ದಾರೆ. ಇವರ ಜೊತೆಗೆ ಹೊಸ ವರ್ಷ ಪ್ರಾರಂಭವಾದಂತೆ ಸೇರ್ಪಡೆಯಾದ ಎರಡು ಹೆಸರುಗಳು ಹರಿಪ್ರಕಾಶ ಕೋಣೆಮನೆ ಮತ್ತು ಚಕ್ರವರ್ತಿ ಸೂಲಿಬೆಲೆ!

ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಬೆಂಗಳೂರಿನಲ್ಲಿದ್ದು ಪಕ್ಷದ ವಕ್ತಾರರಾಗಿ ನೇಮಕವಾಗಿದ್ದಾರೆ. ಮಾಧ್ಯಮಗಳ ಮೂಲಕ ತಮ್ಮ ಹೆಸರು ಪರಿಗಣನೆಗೆ ತರಲು ಪ್ರಯತ್ನಿಸುತ್ತಿರುವ ಇವರು ಅನಂತ ಕುಮಾರ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆವರ ಬದಲು ತನಗೆ ಟಿಕೆಟ್‌ ನೀಡಿದರೆ ಗೆಲ್ಲುವ ಅವಕಾಶ ಹೆಚ್ಚು ಎಂಬುದನ್ನು ಪಕ್ಷಕ್ಕೆ ಮನವರಿಕೆ ಮಾಡುವಂತಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರಮುಖ ಬಹುಸಂಖ್ಯಾತ ಮತದಾರರಲ್ಲಿ ೪-೫ ಸ್ಥಾನದ ಹವ್ಯಕ ಅಭ್ಯರ್ಥಿಗಳು ಟಿಕೇಟ್‌ ವಿಚಾರದಲ್ಲಿ ಮುಂಚೂಣಿಯಲ್ಲಿರುವುದು ವಿಶೇಶ.

ಬಿ.ಜೆ.ಪಿ. ಯ ಮೇಲ್ಜಾತಿ, ಮೇಲ್ವರ್ಗದ ಓಲೈಕೆ ವಿಚಾರ ಮುನ್ನೆಲೆಗೆ ಬಂದು ಹಿಂದುಳಿದ ವರ್ಗಗಳ ಮುಖಂಡರು ಹಿಂದುಳಿದ ವರ್ಗಗಳಿಗೆ ಅವಕಾಶ ಕೇಳಿರುವುದರಿಂದ ಮೇಲ್ವರ್ಗ, ಮೇಲ್ಜಾತಿ ಪರವಾಗಿ ವಕಾಲತ್ತು ವಹಿಸುವ ಹಿಂದುಳಿದವರ ಹೆಸರುಗಳಲ್ಲಿ ಹೊನ್ನಾವರದ ಮಿಥುನ್‌ ಸೇಟ್‌ ಅಲಿಯಾಸ್‌ ಚಕ್ರವರ್ತಿ ಸೂಲಿಬೆಲೆ ಹೆಸರು ಮುನ್ನೆಲೆಗೆ ಬಂದಿದ್ದು ದಿಕ್ಸೂಚಿ ಭಾಷಣದ ಮೂಲಕ ಹಿಂದುಳಿದವರ ಅವಕಾಶ ಕೀಳಲು ಬಂದಿರುವ ಈ ಸೋಗಲಾಡಿ ಸುಳ್ಳುಕೋರ ಅತ್ತ ವೈದಿಕರ ಆಯ್ಕೆಯೂ ಆಗದೆ ಇತ್ತ ಹಿಂದುಳಿದವರ ಆಯ್ಕೆಗೂ ಸಲ್ಲದೆ ತನ್ನ ಎಡಬಿಡಂಗಿ ಸ್ಥಾನಕ್ಕೇ ತೃಪ್ತಿ ಪಟ್ಟುಕೊಂಡಿದ್ದು ವೈಯಕ್ತಿಕ ವರ್ಚಸ್ಸಿಲ್ಲದ ತಾಕತ್ತಿಲ್ಲದ ಇವರೆಲ್ಲರಲ್ಲಿಯೂ ಅಭ್ಯರ್ಥಿ ಯಾರಾದರಾಗಲಿ ಚಿನ್ಹೆ ಮಾತ್ರ ಕಮಲ ಎನ್ನುವ ಅನಿವಾರ್ಯತೆಯನ್ನು ಸಾಮೂಹಿಕವಾಗಿ ಒಪ್ಪಿಕೊಂಡಿರುವಂತಿದೆ.!

ಜಾತಿ ಬೇಡ ಧರ್ಮ ಬೇಕು ಎನ್ನುವ ಬಿ.ಜೆ.ಪಿ. ನೀತಿ ಕೇವಲ ಬಾಯುಪಚಾರದ ಮಾತಾಗಿದ್ದು ಮೇಲ್ವರ್ಗದವರು ಅಥವಾ ಮೇಲ್ವರ್ಗದ ದಾಸರು ಬಿಟ್ಟು ಕಡರ್‌ ಅಭ್ಯರ್ಥಿಗಳು ಬಿ.ಜೆ.ಪಿ. ಯಲ್ಲಿ ಅವಕಾಶ ಪಡೆಯುವುದಿಲ್ಲ ಎನ್ನುವ ವಾಸ್ತವದ ವಿದ್ಯಮಾನದ ನಡುವೆ ಸಿದ್ಧಾಪುರದ ಕೆ.ಜಿ.ನಾಯ್ಕ, ಕಾರವಾರದ ವಸಂತ ಅಸ್ನೋಟಿಕರ್‌, ಕುಮಟಾದ ಸೂರಜ್‌ ನಾಯ್ಕ, ಹಳಿಯಾಳದ ಸುನಿಲ್‌ ಹೆಗಡೆ ಈ ಬಾರಿ ಮೈತ್ರಿ ಅಭ್ಯರ್ಥಿಗಳಾಗಲು ಅರ್ಹರಿದ್ದು ಇವರನ್ನು ಬಿಟ್ಟು ಅನ್ಯರನ್ನು ಆಯ್ಕೆ ಮಾಡಿದರೆ ಬಿ.ಜೆ.ಪಿ. ಸತತ ಐದು ಅವಧಿಯ ನಂತರ ಈ ಕ್ಷೇತ್ರವನ್ನು ಕಳೆದುಕೊಳ್ಳಲಿದೆ ಎನ್ನುವ ವಿಶ್ಲೇಶಣೆಗಳಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *