ಕಣ್ಣು, ಮನ ತುಂಬಿದ ಬೀಳ್ಕೊಡುಗೆ! ಮಿ.ಪರಫೆಕ್ಟ್‌ ಎನಿಸಿದ ಎಂ.ಎಚ್.‌ ನಾಯ್ಕ

ಮನ್ಮನೆ ಶಾಲೆಯ ಶಾಲಾಭಿವೃದ್ಧಿ ಸಮೀತಿ ಪೆಂಡಾಲ್‌ ಕಟ್ಟಿ ನೂರಾರುಕುರ್ಚಿ ಇಟ್ಟು ವೇದಿಕೆಯ ಮೇಲೆ ಪ್ಲೆಕ್ಸ್‌ ಬೋರ್ಡ್‌ ನಲ್ಲಿ ಎಂ.ಎಚ್.‌ ನಾಯ್ಕರಿಗೆ ಬೀಳ್ಕೊಡುಗೆ ಎಂದು ಬರೆಸಿ, ಎಲ್ಲರೂ ವೇದಿಕೆ ಏರಿ, ನಂತರ ಊಟ ಬಡಿಸಿ ತಮ್ಮ ಶಾಲೆಯಲ್ಲಿ ನಿವೃತ್ತರಾದ ಶಿಕ್ಷಕರಿಗೆ ಬೀಳ್ಕೊ ಡುಗೆ ಏರ್ಪಡಿಸಿದ್ದರು.

ಶಿಕ್ಷಕರೆಲ್ಲಾ ತಮ್ಮ ಮುಖ್ಯ ಶಿಕ್ಷಕ ಎಂ. ಎಚ್.‌ ನಾಯ್ಕ ರ ಸಹನೆ, ತಾಳ್ಮೆ, ಶಿಸ್ತು, ಸಮಯಪಾಲನೆ ಬಗ್ಗೆ ಮಾತನಾಡಿದರು.

ಊರಿನಮುಖಂಡರಾದ ಗಣೇಶ್‌ ನಾಯ್ಕ, ವಸಂತ ನಾಯ್ಕ ,ನಾಗರಾಜ್‌ ನಾಯ್ಕ, ಆನಂದ ನಾಯ್ಕ ಸೇರಿದಂತೆ ಎಲ್ಲರೂ ಶಿಕ್ಷಕ ಎಂ.ಎಚ್.ನಾಯ್ಕ ಬಗ್ಗೆ ಪ್ರಶಂಸಿಸಿ ಮಾತನಾಡಿದರು.

ಬಾಲಿಕೊಪ್ಪ ಶಾಲೆಯ ಶಿಕ್ಷಕ ಎಸ್.ಜಿ. ನಾಯ್ಕ, ಎಂ.ಎಚ್.‌ ನಾಯ್ಕರ ಪತ್ನಿ ವಿಜಯಾ ನಾಯ್ಕರು ತನು-ಮನ ದಲ್ಲಿ ಶಾಲೆಯನ್ನೇ ಧ್ಯಾನಿಸುತ್ತಿರುವ ಬಗ್ಗೆ ಹೇಳಿದರು. ನೂರಾರು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಗಿಫ್ಟ್‌ ನೀಡಿ ಶುಭಕೋರಿದರು.

ಈ ಸುಂದರ ಕಾರ್ಯಕ್ರಮ ನೋಡಿದ ನನಗೆ ಡಾ. ಅಬ್ದುಲ್‌ ಕಲಾಂ ರಾಮೇಶ್ವರಕ್ಕೆ ಬಂದು ತನ್ನ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಗೌರವಿಸಿದ್ದು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುವೆಂಪು ರಿಂದ ಆಶೀರ್ವಾದ ಪಡೆದದ್ದನ್ನು ನೆನಪಿಸಿತು. ಅದನ್ನೇ ಬಣ್ಣಿಸಿ ಮುಂದೆ ಇಲ್ಲಿಯ ಮಕ್ಕಳು ಹೀಗೆ ಇಲ್ಲಿಯ ಶಿಕ್ಷಕರನ್ನು ಗೌರವಿಸುವಂತಾಗಲಿ ಎಂದು ಆಶಿಸಿ ಎಂ.ಎಚ್.‌ ನಾಯ್ಕರಿಗೆ ಶುಭ ಕೋರಿದೆ.

ಕೊನೆಗೆ ದಂಗಾಗುವ ಸರದಿ ನಮ್ಮದಾಗಿತ್ತು. ಎಂ.ಎಚ್.‌ ನಾಯ್ಕ ಮಾತನಾಡುತ್ತಾ ತನ್ನ ತಾಯಿ ಚಿಕ್ಕಂದಿನಲ್ಲಿ ಸತ್ತು ಹೋಗಿದ್ದು, ನಂತರ ತಂದೆ ತಾನು ಕೆಲಸ ಮಾಡುತಿದ್ದ ಊರಿನ ಬಿಡಾರದಲ್ಲಿ ಬಾಲಕ ಎಂ.ಎಚ್.‌ ನಾಯ್ಕ ಮತ್ತು ಅವರ ಅಕ್ಕನನ್ನು ಬಿಟ್ಟು ಹೋಗಿದ್ದು. ನಂತರ ಅಕ್ಕ ಮದುವೆಯಾಗಿ ಹೋಗಿದ್ದು,ತನ್ನನ್ನು ಬ್ರಾಹ್ಮಣರೊಬ್ಬರು ತಮ್ಮ ಸ್ವಂತ: ಮಗನಂತೆ ಸಾಕಿದ್ದು………

ಅನಾಥನಂತೆ ಪ್ರಾರಂಭವಾದ ಬದುಕು ಬಡತನದಲ್ಲಿ ಮುಳುಗಿ ನಂತರ ಶಿಕ್ಷಕನಾಗಿ ಬದುಕು ಕಟ್ಟಿಕೊಂಡದ್ದು…….

ನಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತಮ್ಮ ಮಕ್ಕಳಂತೆ ಭಾವಿಸಿದ್ದು….

ಬೆಳಿಗ್ಗೆ ೧೧.೩೦ ರಿಂದ ಪ್ರಾರಂಭವಾದ ಕಾರ್ಯಕ್ರಮ ೨.೩೦ ರ ವರೆಗೆ ಮುಂದುವರೆದರೂ ಈ ಕಾರ್ಯಕ್ರಮದ ಸೊಬಗಿನ ಮಧ್ಯೆ ಹಸಿವು ಮಾಯವಾಗಿದ್ದು…ಇಂಥದ್ದೊಂದು ಹೃಯಸ್ಫರ್ಶಿ ಬೀಳ್ಕೊಡುಗೆ ಮಾಡಿಸಿಕೊಂಡ ಮಿ.ಪರಫೆಕ್ಟ್‌ ಎಂ.ಎಚ್.‌ ನಾಯ್ಕ ಬಗ್ಗೆ ಮುಂದೆಂದಾದರು ಬರೆದೇನು. ಮನ್ಮನೆ ಗ್ರಾಮದ ಜನರ ಬಗ್ಗೆ ಗೌರವ, ಅಭಿಮಾನ ಉಕ್ಕಲು ಸದ್ಯ ಇಷ್ಟು ಸಾಕು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *