ಉರಿ ಕೆಂಡವಾದ ಮಲೆನಾಡ ರಾಜಕೀಯ…


೨೦೨೪ ರ ಮೊದಲು ಬಿ.ಜೆ.ಪಿ.ಯ ಪ್ರಯೋಗಶಾಲೆಯಂತಾಗಿದ್ದ ಕರಾವಳಿ ಮಲೆನಾಡಿನಲ್ಲಿ ಈ ವರ್ಷ ಉರಿಬಿಸಿಲಿನೊಂದಿಗೆ ರಾಜಕೀಯ ಕಾವು ಪ್ರಾರಂಭವಾಗಿದೆ. ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಸಿದ್ದೇಶ್ವರ ಕುಟುಂಬದ ವಿರುದ್ಧ ಮಾಜಿ ಶಾಸಕ ರೇಣುಕಾಚಾರ್ಯ ಬಂಡಾಯದ ಬಾವುಟ ಹಾರಿಸಿದ್ದಾರೆ.
ಅಲ್ಲಿಂದ ಮಲೆನಾಡು ಪ್ರವೇಶಿಸುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಹಳೆ ದೋಸ್ತಿಗಳ ರಾಜಕೀಯ ಕಾದಾಟ ಸದಾ ಸುದ್ದಿಯ ಕೇಂದ್ರ ಬಿಂದುವಾಗಿದೆ.

ಕಳೆದ ವರ್ಷದ ವಿಧಾನ ಸಭೆಯ‌ ಚುನಾವಣೆಯ ಬಿ.ಜೆ.ಪಿ. ಟಿಕೇಟ್ ವಂಚಿತ ಈಶ್ವರಪ್ಪ ಆದ ಅವಮಾನ ನುಂಗಿಕೊಂಡು ನೋವಿನಲ್ಲೂ ನಗುತ್ತಾ ಸುಧಾರಿಸಿಕೊಂಡಿದ್ದರು. ಆದರೆ ಈ ಬಾರಿ ಈಶ್ವರಪ್ಪ ಸಿಟ್ಟಾಗಿ ಮಾಜಿ ಗೆಳೆಯ ಬಿ.ಎಸ್.‌ ಯಡಿಯೂರಪ್ಪನವರ ಕುಟುಂಬದ ವಿರುದ್ಧ ಕೆಂಡ ಕಾರಿ ಬಿ.ಜೆ.ಪಿ.ಯಲ್ಲಿ ಕುಟುಂಬ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪನವರನ್ನು ನಿಯಂತ್ರಿಸದ ಮೋದಿ ಉಧಾರತೆಗೆ ಬಂಡೆದ್ದು ಸ್ವತಂತ್ರ ಸ್ಫರ್ಧೆಯ ಸುಳಿವು ನೀಡಿದ್ದಾರೆ.


ಅಲ್ಲಿಂದ ಮಂಗಳೂರಿನತ್ತ ಕಣ್ಣು ಹಾಯಿಸಿದರೆ ಅಲ್ಲಿ ಕೂಡಾ ಸಂಘ ನಿಷ್ಟರು ಇತ್ತೀಚಿನ ಬಿ.ಜೆ.ಪಿ. ರಾಜಕಾರಣ, ಟಿಕೆಟ್‌ ಹಂಚಿಕೆಗಳ ಬಗ್ಗೆ ಸಮಾಧಾನ ಕಳೆದುಕೊಂಡು ಮಾತನಾಡಿದ್ದಾರೆ. ನಳಿನ್‌ ಕುಮಾರ್‌ ಕಟೀಲು ಬದಲು ಹೊಸಮುಖಕ್ಕೆ ಮಣೆಹಾಕಿರುವ ಬಿ.ಜೆ.ಪಿ. ನಿರ್ಧಾರಕ್ಕೆ ನಳಿನ್ ಕಟೀಲು ‌ಪಕ್ಷದ ವಿರುದ್ಧ ಸಮರ ಸಾರದಿದ್ದರೂ ಅಲ್ಲಿಯ ಹಳೆಮುಖಗಳು ತಕರಾರು ಎತ್ತಿದ್ದಾರೆ.
ದಕ್ಷಿಣ ಕನ್ನಡದೊಂದಿಗೆ ಈ ಬಾರಿ ಉತ್ತರ ಕನ್ನಡದಲ್ಲಿ ಕೂಡಾ ಹಿರಿಯ ಸಂಸದ ಅನಂತಕುಮಾರ ಹೆಗಡೆಯವರಿಗೆ ಟಿಕೆಟ್‌ ಇಲ್ಲ ಎನ್ನುತ್ತಿರುವುದು ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ.

ಅನಂತಕುಮಾರ ಹೆಗಡೆ ಕಳೆದ ನಾಲ್ಕು ವರ್ಷಗಳಿಂದ ನೇಪಥ್ಯದಲ್ಲಿದ್ದು ಈಗ ನಾನೇ ಅಭ್ಯರ್ಥಿ ಎನ್ನುವಂತೆ ಕ್ಷೇತ್ರ ಸುತ್ತಿದ್ದರು. ಆದರೆ ಈ ಬಾರಿ ಅನಂತಕುಮಾರ ಹೆಗಡೆ ಯೋಜನೆ ತಲೆಕೆಳಕಾಗಿದೆ. ಅನಂತಕುಮಾರ ಬದಲು ಹಿರಿಯ ನಾಯಕ ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಚಕ್ರವರ್ತಿ ಸೂಲಿಬೆಲೆಗೆ ಟಿಕೇಟ್‌ ಎನ್ನುತ್ತಿರುವಂತೆ ಅನಂತಕುಮಾರ ಮೌನಕ್ಕೆ ಶರಣಾಗಿದ್ದಾರೆ. ಇದರ ಮಧ್ಯೆ ಕುಮಾರ ಬಂಗಾರಪ್ಪನವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಅಭ್ಯರ್ಥಿ ಮಾಡಲು ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಪಕ್ಷಗಳು ಸಂಪರ್ಕಿಸಿವೆ ಎನ್ನಲಾಗುತ್ತಿದೆ!


ತಮ್ಮ ವಿರೋಧಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಚಕ್ರವರ್ತಿ ಸೂಲಿಬೆಲೆ ಬದಲು ತಮ್ಮ ಸಂಬಂಧಿ ರಾಮಕೃಷ್ಣ ಹೆಗಡೆ ಕುಟುಂಬದ ಡಾ. ಶಶಿಭೂಷಣ ಹೆಗಡೆಯವರಿಗೆ ಟಿಕೇಟ್‌ ನೀಡಲು ಅನಂತಕುಮಾರ್‌ ಸೂಚಿಸಿದ್ದಾರಂತೆ. ಅನಂತಕುಮಾರ ಸೂಚನೆಯನ್ನು ಪಕ್ಷ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಆಗ ಮತ್ತದೇ ಕಾಗೇರಿ ವಿಶ್ವೇಶ್ವರ ಹೆಗಡೆ ಅಥವಾ ಚಕ್ರವರ್ತಿ ಸೂಲಿಬೆಲೆ, ಮಾಜಿ ಸಚಿವ ಕುಮಾರಬಂಗಾರಪ್ಪ ಅಭ್ಯರ್ಥಿಯಾಗುತ್ತಾರೆ. ಇವರೆಲ್ಲ ರೂ ಈ ಕ್ಷೇತ್ರಕ್ಕೆ ಹೊಸ ಮುಖಗಳು. ಕಾಗೇರಿ ಶಿರಸಿ ಕ್ಷೇತ್ರಕ್ಕೆ ಸೀಮಿತವಾಗಿದ್ದ ಹಿರಿಯ ನಾಯಕ, ಚಕ್ರವರ್ತಿ ಸೂಲಿಬೆಲೆ ಸ್ಥಳೀಯವಾಗಿ ಜನಪ್ರೀಯರಲ್ಲದ ಪ್ರಚಾರಕ. ಕುಮಾರ ಬಂಗಾರಪ್ಪ ಹೊರಗಿನವರು.


ಈ ಸ್ಥಿತಿಯಲ್ಲಿ ಕಾಂಗ್ರೆಸ್ ಎದುರಿಸಲು ಮೋದಿ ಅಲೆ ನೆರವಾಗುವುದು ಕಷ್ಟ. ಹೀಗೆ ಬಿ.ಜೆ.ಪಿ. ಯ ಭದ್ರ ಕೋಟೆಗಳಂತಿದ್ದ ಮಲೆನಾಡು ಕರಾವಳಿಯ ಇನ್ನೊಂದು ಕ್ಷೇತ್ರ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಜ್ಜನ, ಸರಳ ನಾಯಕ ಶ್ರೀನಿವಾಸ್‌ ಪೂಜಾರಿ ಬಿ.ಜೆ.ಪಿ. ಅಭ್ಯರ್ಥಿ ಅಲ್ಲಿಕೂಡಾ ಪರಿಸ್ಥಿತಿ ಬೂದಿಮುಚ್ಚಿದ ಕೆಂಡವೇ. ಶೋಭಾ ಕರಂದ್ಲಾಜೆ ವಿರುದ್ಧ ಶೀಥಲ ಸಮರ ಸಾರಿದ್ದ ಕೆಲವು ಪ್ರಮುಖ ನಾಯಕರು ಶ್ರೀನಿವಾಸ ಪೂಜಾರಿ ಪರ ಕೆಲಸಮಾಡುವುದು ಅನುಮಾನ. ನೆರೆ ಹೊರೆಯ ಕ್ಷೇತ್ರಗಳಂತೆ ಇಲ್ಲಿಯೂ ಅಸಮಧಾನದ ಹೊಗೆ ಬಂಡಾಯದ ಬೆಂಕಿಯಾದರೆ ಬಿ.ಜೆ.ಪಿ. ನಿರೀಕ್ಷೆ ಸುಳ್ಳಾಗುವ ಸಾಧ್ಯತೆಗಳೇ ಹೆಚ್ಚು. ಹೊಸ ಸುದ್ದಿ ಎಂದರೆ ಬಿ.ಜೆ.ಪಿ. ನಾಯಕ ಸದಾನಂದ ಗೌಡ ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಎನ್ನಲಾಗುತ್ತಿದೆ!


ಸದ್ಯಕ್ಕೆ ಬಿ.ಜೆ.ಪಿ. ಅಭ್ಯರ್ಥಿಗಳ  ಘೊಷಣೆಯ ನಂತರದ ಸ್ಥಿತಿ ಇದು. ಇದರ ನಂತರ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ನಂತರ ಈ ರೀತಿ ಅಸಮಾಧಾನ ಭುಗಿಲೇಳುವ ಅವಕಾಶಗಳಿಲ್ಲ, ಯಾಕೇಂದರೆ ಕಾಂಗ್ರೆಸ್‌ ನಲ್ಲಿ ಈ ರೀತಿ ನಾಯಕತ್ವದ ಸ್ಫರ್ಧೆ, ಪೈಪೋಟಿ ಇಲ್ಲ.
ಚುನಾವಣೆ ಘೋಷಣೆಯ ಮೊದಲ ವಾರದಲ್ಲಿ ಈ ಸ್ಥಿತಿಯಾದರೆ ಇನ್ನೂ ಒಂದೂವರೆ ತಿಂಗಳ ಅವಧಿಯಲ್ಲಿ ಏನಾಗುವುದೋ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆದರೆ ಇದೇ ಮೊದಲ ಬಾರಿ ಬಿ.ಜೆ.ಪಿ. ಈ ಪ್ರಮಾಣದಲ್ಲಿ ಆಂತರಿಕ ವಿರೋಧ,ಸಂಘರ್ಷ ಕ್ಕೆ ತುತ್ತಾಗಿದೆ. ಈ ಉರಿಯಲ್ಲೂ ಮೈ ಕಾಯಿಸಿಕೊಳ್ಳದಿದ್ದರೆ ಕಾಂಗ್ರೆಸ್‌ ಕೊಟ್ಟ ಕುದುರೆ ಏರದ ಧೀರನಂತಾಗುವುದಂತೂ ಸತ್ಯ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *