ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ.

ಕಬೀರ್‌ ಎನ್ನುವ ಪಕ್ಕಾ ಕಾಂಗ್ರೆಸ್‌ ಅಭಿಮಾನಿ ಸಿದ್ಧಾಪುರ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ವಸಂತ ನಾಯ್ಕ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಗಾಳಿ ಸುದ್ದಿಗೆ ಪ್ರತಿಕ್ರೀಯಿಸಿದ್ದೇ ಇಷ್ಟೆಲ್ಲಾ ಗಲಿಬಿಲಿಗೆ ಕಾರಣ.

ಅಸಲಿಗೆ ಆದದ್ದೇನೆಂದರೆ…… ಸಿದ್ಧಾಪುರದ ತಂಟೆಕೋರ! ವಸಂತ ನಾಯ್ಕ ಹಿಂದಿನ ವಾರದ ಕೊನೆಗೆ ದಿಢೀರನೇ ರಾಜೀನಾಮೆ ಪ್ರಕಟಿಸಿದರು. ಈ ರಾಜೀನಾಮೆ ಪ್ರಹಸನ ಆಕಸ್ಮಿಕ, ದೀಢೀರ್‌ ಅಲ್ಲ ಎನ್ನುವುದು ಕಾಂಗ್ರೆಸ್‌ ವಲಯದವರಿಗೆ ತಿಳಿದದ್ದೇ ಆದರೆ ವಸಂತ್‌ ನಾಯ್ಕ ರಾಜೀನಾಮೆ ಸುದ್ದಿ ನಂತರ ಅವರ ಆಪ್ತರು, ಹಿತೈಶಿಗಳು ವಸಂತ ನಾಯ್ಕರ ರಾಜೀನಾಮೆಗೆ ಅವರದೇ ರೀತಿಯಲ್ಲಿ ಪ್ರತಿಕ್ರೀಯಿಸಿದರು.

ಕೆಲವರು ಭಾವನಾತ್ಮಕವಾಗಿ, ಕೆಲವರು ವ್ಯವಹಾರಿಕವಾಗಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರತಿಕ್ರೀಯಿಸಿರುವ ಹಿಂದೆ ವಸಂತ ನಾಯ್ಕರ ಹೆಚ್ಚುಗಾರಿಕೆ ಇದೆ.

ಆದರೆ ಇಂಥ ವ್ಯವಹಾರಿಕ ಸಂಗತಿಗಳಿಗೆ ಸಲ್ಲದ ಕಬೀರ್‌ ಎನ್ನುವ ಯುವಕ ಕಾಂಗ್ರೆಸ್‌ ಪಕ್ಷ ನಿಷ್ಠೆಯಿಂದ ವಸಂತ ವಿರುದ್ಧ ಒಂದು ಪೋಸ್ಟ್‌ ತೇಲಿಸಿಬಿಟ್ಟರು. ಅದಕ್ಕೆ ವಸಂತ ನಾಯ್ಕರ ಹಿಂಬಾಲಕರು ಉಗ್ರವಾಗಿ ಪ್ರತಿಕ್ರೀಯಿಸಿದರು. ಈ ವಿಚಾರದಲ್ಲಿ ವಸಂತ ನಾಯ್ಕ ಕೂಡಾ ತೀಕ್ಷ್ಣ ವಾಗಿ ಪ್ರತಿಕ್ರೀಯಿಸಿ ರೋಶದ ಬೆಂಕಿಗೆ ತುಪ್ಪ ಸುರಿದು ಬಿಟ್ಟರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಧೂಳ್‌ ಏಳುವ ಬದಲು ರಾಡಿ ಎದ್ದು ಬಿಟ್ಟಿತು!.

ಈ ಬಗ್ಗೆ ಸಮಾಜಮುಖಿ ಡಾಟ್‌ ನೆಟ್‌ ಗೆ ಪ್ರತಿಕ್ರೀಯಿಸಿದ ಕಬೀರ್‌ʼ ಏನಿಲ್ಲ ಬ್ಲಾಕ್‌ ಅಧ್ಯಕ್ಷರಾದ ವಸಂತ ನಾಯ್ಕ ಕಾಂಗ್ರೆಸ್‌ ಬಿಡುತ್ತಾರೆ, ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಗಾಳಿ ಸುದ್ದಿಗೆ ಪ್ರತಿಕ್ರೀಯಿಸಿ ಹೀಗಾಗಿದೆ. ನನಗೇನೂ ಯಾರ ಮೇಲೂ ದ್ವೇಶ ಇಲ್ಲ, ಕಾಂಗ್ರೆಸ್‌ ಪಕ್ಷದಲ್ಲಿ ಪ್ರಮುಖ ಹುದ್ದೆ ಪಡೆದು ವಸಂತ್‌ ಬಿ.ಜೆ.ಪಿ. ಹೋಗುತ್ತಾರೆ ಎನ್ನುವ ತಪ್ಪು ತಿಳುವಳಿಕೆಯಿಂದ ನಾನು ಹಾಗೆ ಪ್ರತಿಕ್ರೀಯಿಸಿದ್ದೆ ಅದು ಮುಗಿದ ಪ್ರಕರಣ ಎಂದರು.

ವಸಂತ ನಾಯ್ಕ ಕಾಂಗ್ರೆಸ್‌ ನ ಸಿದ್ಧಾಪುರ ಬ್ಲಾಕ್‌ ಅಧ್ಯಕ್ಷತೆಗೆ ರಾಜೀನಾಮೆ ಕೊಟ್ಟಿದ್ದು ಸತ್ಯ. ಅದಕ್ಕೆ ಕಾಂಗ್ರೆಸ್‌ ವಲಯದಲ್ಲಿ ಪರ- ವಿರೋಧಗಳು ವ್ಯಕ್ತವಾಗಿದ್ದೂ ಸತ್ಯ. ಆದರೆ ತುಸು ಭಾವನಾತ್ಮಕವಾಗಿ ಪ್ರತಿಕ್ರೀಯಿಸಿದ ಕಬೀರ್‌ ಮತ್ತು ವಸಂತ ನಾಯ್ಕರ ಪೋಸ್ಟ್‌ ಗಳು ಚರ್ಚೆಗೆ ಕಾರಣವಾಗಿವೆಯಷ್ಟೇ.

ಕಾಂಗ್ರೆಸ್‌ ನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕಬೀರ್‌ ಹೆಗ್ಗರಣಿಯ ನಿಲ್ಕುಂದ ಮೂಲದವರು. ಕಬೀರ್‌ ರ ತಂದೆ ಮತ್ತವರ ಕುಟುಂಬ ಕಾಂಗ್ರೆಸ್‌ ಪಕ್ಷದೊಂದಿಗೆ ಅವಿನಾಭಾವ ಸಂಬಂಧ ಹೊಂದಿತ್ತು. ಕಬೀರ್‌ ಕುಟುಂಬದೊಂದಿಗಿನ ಎಸ್.‌ ಬಂಗಾರಪ್ಪನವರ ಹಾಗೂ ಗೋಪಾಲ ಕಾನಡೆಯವರ ಸಂಬಂಧ ನಿಕಟವಾಗಿತ್ತು. ಈ ಹಿನ್ನೆಲೆಯ ಕಬೀರ್‌ ಕಾಂಗ್ರೆಸ್‌ ಅಭಿಮಾನ ಈ ಗಲಿಬಿಲಿಗೆ ಕಾರಣವಾಗಿತ್ತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *