ಜನಮನ ಗೆದ್ದ ಶಾಸಕ ಭೀಮಣ್ಣ ಜನಪರ ನಾಯಕ

ಎಲ್ಲೂ ಮಾಸದ ನಗು, ಆಯಾಸವಾದರೂ ಕಾಣಿಸಿಕೊಳ್ಳದ ಮುಖದಲ್ಲಿ ಸದಾ ಮುಗುಳ್ನಗು. ಒಂದು ಕಿರುನಗೆ ಬೀರಿದರೆ ಚೆನ್ನಾಗಿದ್ದೀರಾ? ಎಂದು ಉಭಯ ಕುಶಲೋಪರಿ ವಿಚಾರಿಸಿಕೊಂಡಂತೆ…… ಮಾತು ಬೆಳ್ಳಿಯಾದರೆ, ಮೌನ ಬಂಗಾರ ಎನ್ನುವ ಭಾವ. ಇವರು ಮಾಜಿ ಮುಖ್ಯಮಂತ್ರಿ ಒಂಟಿಗಲಸ ಬಂಗಾರಪ್ಪನವರ ಭಾಮೈದ.

ಮಾತು-ನಡೆ-ನುಡಿ ಕಲಿಸಿಕೊಟ್ಟ ಭಾವ ಬಂಗಾರಪ್ಪ ಸತ್ತರೂ ಬದುಕಿರಲಿ ಆತ್ಮವಿಶ್ವಾಸ ಎಂದು ಭೋದಿಸಿದ್ದರು. ಭಾವ ಬಂಗಾರಪ್ಪನವರನ್ನು ಅನುಸರಿಸಿದ ಭೀಮಣ್ಣ ಬಂಗಾರಪ್ಪನವರಂತೆ ದೈಹಿಕ ಶ್ರಮ ರೂಢಿಸಿಕೊಂಡರು. ಪಕ್ಕಾ ಕೃಷಿಕರಾಗಿದ್ದ ಇವರು ಕೃಷಿಯಲ್ಲಿ ಲಾಭ ಮಾಡುತ್ತಲೇ ಉದ್ಯಮದೆಡೆ ಸಾಗಿದರು. ಅಲ್ಲಿಯೂ ಮುಟ್ಟಿದ್ದೆಲ್ಲ ಚಿನ್ನ.

ಸಾಮಾಜಿಕ, ರಾಜಕೀಯ ನೇತೃತ್ವದ ಮಳಲಗಾಂವ ತಿರುಕಪ್ಪನವರ ಕುಟುಂಬದ ಕುಡಿ ಭೀಮಣ್ಣ ರಾಜಕೀಯ ಸಂಪರ್ಕದಲ್ಲಿದ್ದು ಹಲವು ಬಾರಿ ವಿಧಾನಸಭೆ, ಲೋಕಸಭೆ ಪ್ರವೇಶಿಸುವ ಪ್ರಯತ್ನ ಮಾಡಿ ಸೋತರು. ಆದರೆ ಎದೆಗುಂದಲಿಲ್ಲ. ಕೃಷಿ-ಉದ್ಯಮ ಇಷ್ಟು ಅನಾಯಾಸವಾಗಿ ಕೈ ಹಿಡಿದಿರುವಾಗ ರಾಜಕೀಯದಲ್ಲಿ ಗೆಲುವು ಮರೀಚಿಕೆಯಾಗುತ್ತಿದೆಯಲ್ಲ ಎಂದರಿತವರು ಮತ್ತೆ ಪ್ರಯತ್ನ ಮಾಡಿದರು. ಹಿಂದೆ ಬಂಗಾರಪ್ಪನಂಥ ಬಲಶಾಲಿ ನಾಯಕನ ಜೊತೆ ಹಿಂಬಾಲಿಸಿ ಕೆಲವು ಹುದ್ದೆಗಳನ್ನು ಅನಾಯಾಸವಾಗಿ ಪಡೆದಿದ್ದರು ಆದರೆ ಛಲದಿಂದ ಗೆಲ್ಲಬೇಕೆಂದು ನಿರ್ಧರಿಸಿದಾಗ ಪಕ್ಷ ಬದಲಾಯಿತು.

ಬಂಗಾರಪ್ಪನವರ ಕೊನೆಗಾಲದಲ್ಲಿ ವೈಯಕ್ತಿಕ, ಕೌಟುಂಬಿಕ ಸಂಬಂಧಗಳನ್ನು ಜತನದಿಂದ ಕಾಪಾಡಿಕೊಂಡವರೇ ಭಿನ್ನ ದಾರಿ ಹಿಡಿದರು. ನಿರಂತರ ೧೩ ವರ್ಷಗಳ ಸುದೀರ್ಘ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷತೆಯ ಪಟ್ಟ ನಿರ್ವಹಿಸಿದ ಭೀಮಬಲ ಪ್ರದರ್ಶನದ ನಡುವೆ ಕೂಡಾ ಭೀಮಣ್ಣನವರಿಗೆ ಟಿಕೇಟ್‌ ನಿರಾಕರಣೆಯಾಗಿ ಪಕ್ಷ ಸೋಲು ಅನುಭವಿಸಿತು. ನಿರಂತರ ಮೂರು ದಶಕಗಳ ರಾಜಕೀಯ ಬದುಕಿನಲ್ಲಿ ಸಮಾಜವಾದಿ ಪಕ್ಷದಿಂದ ಒಮ್ಮೆ ಜಿ.ಪಂ. ಸದಸ್ಯರಾದ ಭೀಮಣ್ಣ ನಾಯ್ಕ ರಾಜಕೀಯ ಸಹವಾಸ ಬಿಟ್ಟು ಉದ್ಯಮ-ಕೃಷಿಯಲ್ಲೇ ಪೂರ್ಣಾವಧಿ ತೊಡಗಿಸಿಕೊಂಡರೆ ಹೆಚ್ಚು ಅನುಕೂಲ ಎಂದು ಯೋಚಿಸಿಯೂ ಆಗಿತ್ತು. ಆದರೆ ತನ್ನ ರಾಜಕೀಯ ಜೀವನದುದ್ದಕ್ಕೂ ದಾನ-ಧರ್ಮ ಮರೆಯದ ಭೀಮಣ್ಣ ಕಳೆದ ೨೦ ವರ್ಷಗಳ ಅವಧಿಯುದ್ದಕ್ಕೂ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ದಾನ ಮಾಡಿ ದಾನ ಶೂರ ಕರ್ಣ ಎನಿಸಿಕೊಂಡಿದ್ದಾರೆಂದರೆ… ಅತಿಶಯೋಕ್ತಿಯಲ್ಲ.

ನಿರೀಕ್ಷೆ ಹುಸಿಯಾಗಲಿಲ್ಲ ಗೆಲುವು-ಸೋಲಿನಲ್ಲಿ ಜನಪರವಾಗಿದ್ದ ಭೀಮಣ್ಣ ಒಲ್ಲದ ಮನಸ್ಸಿನಿಂದ ಮತ್ತೆ ವಿಧಾನಸಭೆ ಚುನಾವಣೆ ಎದುರಿಸಿದ್ದರು ಕೊನೆಗೂ ಗೆಲುವು ಅವರ ಪರವಾಯಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಪ್ರಬಲ ಪಕ್ಷ ಮತ್ತು ವ್ಯಕ್ತಿ ಬಿ.ಜೆ.ಪಿ. ಯ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸೋಲಿನ ರುಚಿ ತೋರಿಸಿದ ಭೀಮಣ್ಣ ಅಂತೂ ವಿಧಾನಸಭೆ ಪ್ರವೇಶಿಸಿದರು. ಸಾಕಷ್ಟು ಅನುಭವ- ಕಷ್ಟ ನಷ್ಟಗಳ ನಂತರ ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕನಾಗಿ ವಿಧಾನಸೌಧ ಪ್ರವೇಶಿಸುತ್ತಲೇ ಉತ್ತರ ಕನ್ನಡ ಜಿಲ್ಲೆಯ ಜನ ಸಂಬ್ರಮಪಟ್ಟರು. ಅವರ ನಿರೀಕ್ಷೆ ಹುಸಿಯಾಗಲಿಲ್ಲ ಜನಪ್ರತಿನಿಧಿಯಾಗದಿದ್ದರೂ ಜನರೊಂದಿಗಿದ್ದ ಭೀಮಣ್ಣ ಶಾಸಕರಾಗುತ್ತಲೇ ಸದನದಲ್ಲಿ ನಿರಂತರ ಹಾಜರಾತಿಯ ಸಮಯಪ್ರಜ್ಞೆಯ ಶಾಸಕ ಎನ್ನುವ ಗೌರವಕ್ಕೆ ಪಾತ್ರರಾದರು. ಕ್ಷೇತ್ರ ಪರ್ಯಟನೆ ಜನರಿಗೆ ಸಹಾಯ ಹಸ್ತ ನೀಡುವ ವಿಷಯದಲ್ಲಿ ವಿರೋಧಿಗಳ ಮೆಚ್ಚುಗೆಗೂ ಪಾತ್ರರಾದರು.

ಈ ಭೀಮಣ್ಣ ನಾಯ್ಕ ಮಳಲಗಾಂವ ರಿಗೆ ೬೦ ದಾಟಿದ ಪ್ರಬುದ್ಧತೆಯ ವಯಸ್ಸು ಆದರೆ ೪೦ ರ ಯುವಕರೂ ನಾಚುವಂತೆ ಕ್ರೀಯಾಶೀಲ, ನಿರಂತರ ಪ್ರವಾಸ ಮಾಡುವ ಭೀಮಣ್ಣ ಮಿತಭಾಶಿ ಅನ್ನೋದೊಂದನ್ನು ಬಿಟ್ಟರೆ ಅವರಿಗೆ ಸಾಟಿಯಾಗುವ ನಾಯಕನೇ ಇಲ್ಲ. ಕ್ಷೇತ್ರದಲ್ಲಿ ಬಡವರ ಬಂಧುವಾಗಿ ಗುರುತಿಸಿಕೊಳ್ಳುತ್ತಿರುವ ಭೀಮಣ್ಣ ಜಿಲ್ಲೆ ರಾಜ್ಯದ ಕ್ರೀಯಾಶೀಲ, ಜನಸ್ಫಂದನೆಯ ಶಾಸಕರಲ್ಲೊಬ್ಬರು. ಅಳಿಯ ರಾಜ್ಯದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಸಲಗೆ, ಮಾರ್ಗದರ್ಶನದ ಮೇರೆಗೆ ಜನಪರ ನಾಯಕನಾಗುತ್ತಿರುವ ಭೀಮಣ್ಣ ಶನಿವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತಿದ್ದಾರೆ. ಬಂಗಾರಪ್ಪ, ಶಿವರಾಜ್‌ ಕುಮಾರ, ಮಧುಬಂಗಾರಪ್ಪ ತನಗೆ ಸ್ಫೂರ್ತಿ ಎನ್ನುವ ಎಲ್ಲಾ ಜಾತಿ-ಜನವರ್ಗಗಳ ಬೆಂಬಲದ ಭೀಮಣ್ಣ ಶಿರಸಿ ಕ್ಷೇತ್ರದ ಬಹುಸಂಖ್ಯಾತ ನಾಮಧಾರಿಗಳ ಮೊದಲ ಶಾಸಕ. ಕ್ರೀಯಾಶೀಲತೆ, ದಾನ-ಧರ್ಮಗಳಿಂದ ಜನಮೆಚ್ಚುಗೆ ಗಳಿಸುತ್ತಿರುವ ಭೀಮಣ್ಣ ಈ ನೆಲದ ನೈಜ ಪ್ರತಿನಿಧಿ ಎನ್ನುವುದು ಕ್ಷೇತ್ರದ ಹೆಗ್ಗಳಿಕೆ. -ಸಂ. (- ಕೋಲಶಿರ್ಸಿ ಕನ್ನೇಶ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *