ಹೊಸ ಪೀಳಿಗೆಗೆ ತುಳಸಿಯಾದ ಝಾಕಿರ್ ಸಮರ್ಪಣೆ!

ಜೋಗ ನೋಡಲು ನಿರಬಂಧ ವಿಧಿಸಲಾಗಿದೆ. ಜೋಗ ಜಲಪಾತ ಜಗತ್ತಿನ ಬೆರಗು,ಅದ್ಭುತ,ಕನಸು, ಕಲ್ಪನೆ ಅಗಾಧತೆ ಕೂಡಾ. ಇದೇ ಜೋಗದ ಝರಿಯನ್ನು ಶಿರಸಿಯ ಎಂ.ಇ.ಎಸ್.‌ ಕಾಲೇಜಿನ ಮೈದಾನದಲ್ಲಿ ವೇದಿಕೆಗೆ ಇಳಿಸಿದ್ದರು ಝಾಕಿರ್‌ ಹುಸೇನ್!‌

ಝಾಕಿರ್‌ ಹುಸೇನ್‌ ಇರಲಿ, ತಬಲಾ ಇರಲಿ, ತಬಲಾ ಶಾಸ್ರ್ತೀಯ ಸಂಗೀತಗಳಿರಲಿ ಇವುಗಳ ಗಂಧ-ಗಾಳಿ ಗೊತ್ತಿರದ ನಮ್ಮಂಥ ಅನೇಕರು ನಮ್ಮ ಬದುಕಿನಲ್ಲಿ ಮೊದಲ ಬಾರಿ ಙಾಕೀರ್‌ ಹುಸೇನ್‌ ತಮಲಾ ಕ್ಕೆ ಮೈ ಮರೆತು ಕುರಿತಿದ್ದೆವು.

ಜಾಕಿರ್‌ ಬೆಂಕಿ ಹೊತ್ತಿಸಿದರು,ಮಳೆ ಸುರಿಸಿದರು. ಜೋಗದ ಝರಿ ಹೀಗೆ ಧುಮುಕುತ್ತದೆ ನೋಡಿ ಎಂದು, ಕಾಡಿನ ಬೆಂಕಿ ವಿಸ್ತರಿಸುತ್ತಿದೆ ನೋಡಿ ಎಂದು ಹೀಗೆ ಬಿರುಗಾಳಿ, ಮಳೆ, ಹಿಮಾಲಯದ ಥಂಡಿ ಎಲ್ಲವನ್ನೂ ಕೂತಲ್ಲೇ ಅನುಭವಿಸಲು ಅನುಗ್ರಹಿಸಿದರು. ಇವೆಲ್ಲವನ್ನೂ ಸಾಧ್ಯ ಮಾಡಿದ್ದವು ಝಾಕಿರ್‌ ರ ಮಾಂತ್ರಿಕ ಬೆರಳುಗಳು!

ನಮ್ಮಂಥವರು ಅಲ್ಲೇ ಶರಣಾಗಿದ್ದೆವು. ಇವರೇ ಝಾಕಿರ್‌ ಹುಸೇನ್.‌ ಜಾಕಿರ್‌ ಹುಸೇನ್‌ ಅಲ್ಲಾ ರಖಾ ರ ಮಗನಾಗಿ ಹುಟ್ಟುತ್ತಲೇ ತಬಲಾ ಮುಟ್ಟುತ್ತಾ ಬೆಳೆದಿದ್ದರು. ಮೂರು ವರ್ಷದ ಮಗು ಝಾಕಿರ್‌ ತಬಲಾ ಮೇಲೆ ಕಣ್ಣಾಡಿಸತೊಡಗಿದ್ದರು. ಕೈಯಾಡಿಸಿ ತಬಲಾಕ್ಕೆ ಸಂಗಾತಿಯಾಗಿದ್ದರು. ಏಳನೇ ವರ್ಷಕ್ಕೆ ತಬಲಾ ನುಡಿಸತೊಡಗಿದ್ದರು ೧೧ ನೇ ವಯಸ್ಸಿಗೆ ತಬಲಾ ಕಾರ್ಯಕ್ರಮ ನೀಡಿದ್ದರು ಆ ನಂತರದ್ದು ಅವರ ಚರಿತ್ರೆಯಾದರೆ. ಅದು ಭಾರತದ ತಬಲಾ ಇತಿಹಾಸ!

ಇಂಥ ತಬಲಾ ಮಾಂತ್ರಿ ಕನಿಂದ ತಬಲಾ ಬಗ್ಗೆ ಆಸಕ್ತಿ ತಾಳಿದ ನನ್ನಂಥವರ ಸಂಖ್ಯೆ ಲಕ್ಷಾಂತರ.

ಸಾಧಕನೊಬ್ಬ ತಮ್ಮ ವೃತ್ತಿ- ಪ್ರಚೃತ್ತಿಗಳನ್ನು ನೂರಾರು ಜನ ಅನುಸರಿಸುವಂತೆ ಮಾಡಿದರೆ ಅದು ಆತನ ಸಾಧನೆ.

ಝಾಕಿರ ಭಯ್ಯಾ ಸಾಧಿಸಿ ತೋರಿಸಿದ್ದು ಹೀಗೆ.

ಇವರ ಅಂತ್ಯದ ದಿನವೇ ಅಂಕೋಲಾದ ತುಳಸಿ ಗೌಡ ನಿಧನರಾಗಿದ್ದಾರೆ. ತುಳಸಿ ಅನಿವಾರ್ಯತೆಯಿಂದ ಗುತ್ತಿಗೆ ಆಧಾರದ ಕೆಲಸ ಸೇರಿ ನಂತರ ಖಾಯಂ ನೌಕರರಾಗಿ ಆಮೇಲೆ ವಯೋ ನಿವೃತ್ತಿ ಹೊಂದಿ ಮರಣ ಹೊಂದಿದ್ದರೆ ಅವರ ಸಾವು ಆತ್ಮೀಯರ ಅಶ್ರುತರ್ಪಣ ದೊಂದಿಗೆ ಮುಕ್ತಾಯವಾಗುತಿತ್ತು. ಆದರೆ ತುಳಸಿ ವೃತ್ತಿಯನ್ನು ಪ್ರವೃತ್ತಿಯಾಗಿ ಸಮರ್ಪಿಸಿಕೊಂಡಿದ್ದರು. ಗಿಡ ಬೆಳೆಸುತ್ತಾ, ಮರ ಸಾಕುತ್ತಾ ವೃತ್ತಿ-ಪ್ರವೃತ್ತಿ ಎಲ್ಲವನ್ನೂ ವೃಕ್ಷ ಸಂರಕ್ಷಣೆಗೆ ಮೀಸಲಿಟ್ಟರು.

ಪ್ರಕೃತಿಯ ಮಕ್ಕಳಾದ ಹಾಲಕ್ಕಿಗಳು ಮುಗ್ಧರು, ವನವಾಸಿಗಳಾದರೂ ಅವರಲ್ಲಿ ಕ್ರೌರ್ಯ ಕಡಿಮೆ. ಇಂಥ ವಿಶಿಷ್ಟ ಜನಾಂಗ ಪ್ರತಿನಿಧಿಸಿದ್ದ ತುಳಸಿ ಗೌಡರ ಪ್ರಕೃತಿ ಪ್ರೀತಿ ಸಹಜ ಆದರೆ ಅದನ್ನು ಧ್ಯೇಯ- ನಿಷ್ಠೆಗಳನ್ನಾಗಿಸಿಕೊಂಡ ತುಳಸಿ ಪ್ರಕೃತಿಯನ್ನೇ ತನ್ನ ಕುಟುಂಬವೆಂದೇ ಪ್ರೀತಿಸಿದ್ದರು. ಅವರ ವನ ಪ್ರೀತಿ ಅವರಿಗೆ ಪದ್ಮಶ್ರೀ ಜೊತೆ ಖ್ಯಾತಿ-ಪ್ರೀತಿಯನ್ನು ದಯಪಾಲಿಸಿತು. ನಮ್ಮನ್ನೇ ನಾವು ವೈಶಿಷ್ಟ್ಯತೆಗೆ ಸಮರ್ಪಿಸಿಕೊಂಡರೆ ಸಮಾಜ ನಮ್ಮನ್ನು ಹೇಗೆ ಗೌರವಿಸುತ್ತದೆಂಬುದಕ್ಕೆ ಝಾಕಿರ್‌ ಹುಸೇನ್‌ ಮತ್ತು ತುಳಸಿ ಗೌಡ ದೃಷ್ಟಾಂತ ಇಂಥವರು ಮಾತ್ರ ಹೊಸ ಪೀಳಿಗೆಗೆ ಮಾದರಿಯಾಗಬಲ್ಲರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *