

ಉಪರಾಷ್ಟ್ರಪತಿ ಜಗದೀಪ್ ಧನಕರ್ ಉಪಸ್ಥಿತಿಯ ಸಿದ್ದಾಪುರದ ಬಹುನಿರೀಕ್ಷಿತ ಕಾರ್ಯಕ್ರಮ ನುಡಿನಮನ ಇಂದು ಸಂಪನ್ನವಾಯಿತು.

ಹಿರಿಯ ವಕೀಲ ಎನ್,ಡಿ.ನಾಯ್ಕ ರ ಪತ್ನಿ, ಉಪ ರಾಷ್ಟ್ರಪತಿಗಳ ವಿಶೇಶ ಅಧಿಕಾರಿ ರಾಜೇಶ್ ಎನ್. ನಾಯ್ಕರ ತಾಯಿ ಲಕ್ಷ್ಮೀ ನಾರಾಯಣ ನಾಯ್ಕ ನಿಧನದ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿಗಳು ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾಡಳಿತದ ಸಹಕಾರದೊಂದಿಗೆ ಎನ್.ಡಿ. ನಾಯ್ಕರ ಕುಟುಂಬ ಸಿದ್ಧಾಪುರ ಎ.ಪಿ.ಎಂ.ಸಿ. ಇಂದಿರಾ ನಗರದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಗಣ್ಯರ ಸಮ್ಮುಖದಲ್ಲಿ ಉಪರಾಷ್ಡ್ರಪತಿಗಳು ವೃಕ್ಷಾರೋಪಣ ಮಾಡುವ ಮೂಲಕ ಲಕ್ಷ್ಮೀ ನಾಯಕರ ನೆನಪನ್ನು ಚಿರಸ್ಥಾಯಿಯಾಗಿಸಿದರು.


ರಾಜೇಶ್ ನಾಯ್ಕರ ಕುಟುಂಬ ಪರಿವಾರ, ಸಂಬಂಧಿಗಳು ಅಧಿಕಾರಿ ವರ್ಗ,ನ್ಯಾಯಾಧೀಶರು, ನ್ಯಾಯವಾದಿಗಳೆಲ್ಲಾ ಸೇರಿದ್ದ ಈ ಕಾರ್ಯಕ್ರಮದಲ್ಲಿ ಲಕ್ಷ್ಮೀ ನಾಯ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ವಂದನೆ ಮಾಡಿದರು.
ಬಿಗಿ ಪೊಲೀಸ್ ಭದ್ರತೆಯ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿ ವರ್ಗ ಸೇರಿದಂತೆʻಅನೇಕ ವಿಶೇಶ ಗಣ್ಯರು ಉಪಸ್ಥಿತರಿದ್ದರು.
ಸರ್ವರನ್ನೂ ನಮಸ್ಕರಿಸುತ್ತಾ ಫೋಟೋ, ಸೆಲ್ಫಿಗಳಿಗೂ ಪೋಜು ನೀಡಿದ ಉಪರಾಷ್ಟ್ರಪತಿಗಳ ಸರಳತೆ ಜನಮಾನಸ ಗೆದ್ದಿತು. ಉಪಸ್ಥಿತ ಗಣ್ಯರಿಗೆ ಗಿಡ ವಿತರಿಸುವ ಮೂಲಕ ಕಾರ್ಯಕ್ರಮ ಸಂಘಟಕರು ಏಕ್ ಪೇಡ್ ಮಾಕಿ ನಾಮ್ ಪೆ ಸಾಕಾರಗೊಳಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________







3 Comments