


ಪಾರದರ್ಶಕ ಮತ್ತು ಪ್ರಾಮಾಣಿಕ ಮಾಧ್ಯಮ ಇಂದಿನ ಅಗತ್ಯವಾಗಿದ್ದು ಅರೆಶಿಕ್ಷಿತರು,ಅಧ್ಯಯನ ಮಾಡದ ಪತ್ರಕರ್ತರು ಸಮಾಜಕ್ಕೆ ಹೊರೆಯಾಗುವ ಬಗ್ಗೆ ಬೇಸರಿಸಿದ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ನಮ್ಮ ಕ್ಷೇತ್ರ ಮತ್ತು ಜಿಲ್ಲೆ ಮಾಧ್ಯಮ ರಂಗಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸಂಬ್ರಮಿಸಿದರು. ಸಿದ್ದಾಪುರ ಲಯನ್ಸ್ ಬಾಲಭವನದಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳ ಸಂಘದ ಉದ್ಘಾಟನೆ ಮತ್ತು ಮಾಧ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಪ್ರಖ್ಯಾತ ಯಕ್ಷಗಾನ ಕಲಾವಿದ ಕೇಶವ ಹೆಗಡೆ ಕೊಳಗಿ, ಚಿತ್ತಾರ ಕಲಾವಿದ ಚಂದ್ರಶೇಖರ್ ಸಿರಿವಂತೆ, ತೆರಿಗೆ ಸಲಹೆಗಾರ ನರೇಂದ್ರ ಹಿರೇಕೈ ರನ್ನು ಸನ್ಮಾನಿಸಿ, ಗೌರವಿಸಿದ ಅವರು ಶಿಕ್ಷಣ ಕ್ರಾಂತಿ ಮಾಡಬಹುದೆಂಬುದಕ್ಕೆ ಇಲ್ಲಿಯ ಸಾಧಕರೇ ಮಾದರಿ ಎಂದ ಅವರು ತಾವು ಕೂಡಾ ಶಿಕ್ಷಣಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.


ಪತ್ರಕರ್ತ ನಾಗರಾಜ್ ಮಾಳ್ಕೊಡು ಸ್ವಾಗತಿಸಿದರು. ಪ್ರಾಸ್ಥಾವಿಕವಾಗಿ ಮಾತನಾಡಿದ ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ವೈಯಕ್ತಿಕ ಹಿತಾಸಕ್ತಿಗಿಂತ ಸಾಮೂಹಿಕ ಹಿತಾಸಕ್ತಿಗೆ ಸಂಘ ಬೇಕು. ಎಲ್ಲರ ತೊಂದರೆ ಅನ್ಯಾಯ, ಶೋಷಣೆ ಬಗ್ಗೆ ವಕಾಲತ್ತು ವಹಿಸುವ ಮಾಧ್ಯಮ ಮಿತ್ರರಿಗೆ ಶೋಷಣೆ, ಅನ್ಯಾಯವಾಗುವುದನ್ನು ಪ್ರತಿಭಟಿಸುವ ಸಂದರ್ಭದಲ್ಲಿ ಸಮಾಜದ ನೆರವು, ಸಹಾನುಭೂತಿ ಅವಶ್ಯ ಎಂದರು. ಸನ್ಮಾನಿತ ಕೇಶವ ಹೆಗಡೆ ಕೊಳಗಿ, ಚಂದ್ರ ಶೇಖರ್ ಸಿರಿವಂತೆ ಗೌರವ ಉಪಸ್ಥಿತಿಯ ಗ್ಯಾರಂಟಿ ಸಮೀತಿ ಅಧ್ಯಕ್ಷ ಕೆ.ಜಿ.ನಾಗರಾಜ್, ಕಸಾಪ ತಾಲೂಕಾಧ್ಯಕ್ಷ ಚಂದ್ರು ಕುಂಬ್ರಿಗದ್ದೆ ಸಾಂದರ್ಭಿಕವಾಗಿ ಮಾತನಾಡಿದರು.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






