



ಈಗಿರುವ ಬಿ.ಜೆ.ಪಿ.,ಕಾಂಗ್ರೆಸ್,ಜಾತ್ಯಾತೀತ ಜನತಾದಳಗಳ ಬದಲು ಹಿಂದುಳಿದವರ ಹೊಸ ಪಕ್ಷ ರಚಿಸುವ ಚಿಂತನೆ ತಮ್ಮ ಮುಂದಿದೆ ಎಂದು ಪ್ರಣವಾನಂದ ಸ್ವಾಮಿಜಿ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಕನ್ನಡದ ಶಿರೂರು ಗುಡ್ಡ ದುರಂತದ ಬಾಧಿತರಿಗೆ ಪುಡಿಗಾಸು ನೀಡಿ ಉಪೇಕ್ಷಿಸಲಾಗಿದೆ. ಆರ್.ಸಿ.ಬಿ. ದುರಂತದಲ್ಲಿ ಸಾವಿಗೀಡಾದವರಿಗೆ ಸರ್ಕಾರದಿಂದ ೨೫ ಲಕ್ಷ ಧನ ಸಹಾಯ ನೀಡಲಾಗಿದೆ ಈ ತಾರತಮ್ಯ ಕೇಳುವವರಿಲ್ಲ. ಉತ್ತರ ಕನ್ನಡದ ಜನಪ್ರತಿನಿಧಿಗಳು ಈಡಿಗರು, ಬಿಲ್ಲವರು, ದೀವರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಶಿರೂರು ದುರಂತದ ಬಾಧಿತರ ಪರವಾಗಿ ನಿಲ್ಲಲಿಲ್ಲ .ಹಾಗಾಗಿ ಜೆ.ಡಿ.ಎಸ್. ಮಾದರಿಯಲ್ಲಿ ರಾಜ್ಯದಲ್ಲಿ ಈಡಿಗರ ನೇತೃತ್ವದ ಹಿಂದುಳಿದವರ ಹೊಸ ಪಕ್ಷ ಸ್ಥಾಪನೆ ಚಿಂತನೆ ನಮ್ಮ ಮುಂದಿದೆ ಎಂದು ವಿವರಿಸಿದರು.


ಸೆಪ್ಟೆಂಬರ್ ಮೊದಲ ವಾರ ಈ ಬಗ್ಗೆ ಸಿದ್ಧಾಪುರದಲ್ಲಿ ಚಿಂತನಾ ಸಭೆ ನಡೆಸಿ ಜನಜಾಗೃತಿಗಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆ ಮನೆಗೆ ಭೇಟಿ ನೀಡಿ ರಾಜಕೀಯ ಶಕ್ತಿ, ಸಾಮಾಜಿಕ ಶಕ್ತಿಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹ ಮಾಡುತ್ತಾ ಸಂಘಟನಾತ್ಮಕವಾಗಿ ಒಂದುಗೂಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






