ಯುವಕರು ಅಪರಾಧ ಜಗತ್ತಿನೆಡೆ ಆಕರ್ಷಿತರಾಗುತ್ತಿರುವುದು ಕಳವಳಕಾರಿ

ಯುವಕರು ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತಿದ್ದು ಸಾಧನೆಯ ಅವಧಿಯನ್ನೇ ಕಿರಿದು ಮಾಡುತಿದ್ದಾರೆ ಎಂದು ಅಭಿಪ್ರಾಯ ಪಟ್ಟಿರುವ ಪಶ್ಚಿಮ ವಲಯ ಡಿ.ಐ.ಜಿ. ಅರುಣ್ ಚಕ್ರವರ್ತಿ ಕಿರಿಯರು ಅಪರಾಧ, ಅನಾಚಾರಗಳಲ್ಲೂ ಮುಂದಿರುವುದು ನಮ್ಮ ಕಳವಳಕ್ಕೆ ಕಾರಣವಾಗಿದೆ ಎಂದರು.
ಸಿದ್ದಾಪುರದ ರಾಘವೇಂದ್ರಮಠದ ಸಭಾಭವನದಲ್ಲಿ ಸಮ್ಮಿಲನ,ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಧಿಸುವ ಮನೋಭಾವದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಸಂಪರ್ಕ ಜಗತ್ತು ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ. ಆದರೆ ಈ ಅನುಕೂಲಗಳನ್ನು ಕೆಲವರು ದುರುಪಯೋಗಪಡಿಸಿಕೊಂಡು ಜೀವನ ಹಾಳುಮಾಡಿಕೊಳ್ಳುತಿದ್ದಾರೆ.
ಒಬ್ಬ ಅಧಿಕಾರಿಯಾಗಿ, ಒಬ್ಬ ಪಾಲಕನಾಗಿ ನನ್ನ ಕಳವಳ, ಕಳಕಳಿಯೆಂದರೆ ಪಾಲಕರು ಮಕ್ಕಳನ್ನು ಮುಕ್ತವಾಗಿ ಬಿಡುತ್ತಿಲ್ಲ. ಸ್ವತಂತ್ರ ಯುವಕರಿಗಿಂತ ಪಾಲಕರ ನಿಯಂತ್ರಣ, ಬಂಧನದಲ್ಲಿರುವ ಯುವಕರೇ ಅಪರಾಧ ಜಗತ್ತಿನೆಡೆಗೆ ಮುಖಮಾಡುತ್ತಾರೆ ಎಂದು ವಿವರಿಸಿದರು.
ವಿದ್ಯಾರ್ಥಿಗಳೊಂದಿಗೆ
ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಿಸುವವರು ಶ್ರಮ,ಸಂಯಮಕ್ಕೆ ಸಮಯ ನೀಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಲೆನಾಡು, ಕರಾವಳಿಯಲ್ಲೆ ಹೆಚ್ಚು ಸಮಯ ಸೇವೆ ಸಲ್ಲಿಸಿದ ತಮಗೆ ಇಲ್ಲಿಯ ಶಾಂತಿ-ಸುವ್ಯವಸ್ಥೆ, ಸಾಮರಸ್ಯಕ್ಕೆ ಶ್ರಮಿಸಿದ ಸಮಾಧಾನವಿದೆ ಎಂದರು.

ಭಾರತದ ಅಮೇರಿಕಾ ರಾಯಭಾರಿ
ಕಛೇರಿ ಅಧಿಕಾರಿ ರಾಜೇಶ್ ಅಭಿಮತ
ಅಭಾವವೇ ವ್ಯಕ್ತಿ, ವಸ್ತು ಪರಿಸ್ಥಿತಿಯ ಮಹತ್ವ ತಿಳಿಸುತ್ತದೆ
ಶಾಂತಿ-ಸುವ್ಯವಸ್ಥೆಯ ಅಭಾವ ತಲೆದೋರಿದಾಗ ಶಾಂತಿ,ಸುವ್ಯವಸ್ಥೆ,ಸೌಹಾರ್ದತೆಯ ಮಹತ್ವದ ಅರಿವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ನಿಯೋಜಿತ ಭಾರತದ ಅಮೇರಿಕಾ ರಾಯಭಾರಿ ಕಛೇರಿಯ ಅಧಿಕಾರಿ ರಾಜೇಶ್ ನಾಯ್ಕ ಎಲ್ಲರನ್ನೂ ಒಳಗೊಳ್ಳುವ ಭಾರತದ ಸಂವಿಧಾನದ ಸೊಬಗು ಮಹತ್ತರವಾದದ್ದು, ಅದರ ವೈಶಿಷ್ಟ್ಯದಿಂದಾಗಿಯೇ ಭಾರತಕ್ಕೆ ವಿಶ್ವಸಮೂದಾಯದಲ್ಲಿ ಮತ್ತು ಒಳಗಿನ ಎಲ್ಲಾ ಗುಂಪು, ಪ್ರಾಂತ್ಯಗಳಲ್ಲಿ ಶ್ರೇಷ್ಠತೆಯ ಗೌರವವಿದೆ ಎಂದರು.
ಸಿದ್ಧಾಪುರದ ರಾಘವೇಂದ್ರಮಠದ ಸಭಾಭವನದಲ್ಲಿ ನಡೆದ ಸಮ್ಮಿಳನ-ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತದ ವೈವಿಧ್ಯತೆ, ವೈಶಿಷ್ಟ್ಯತೆಯ ಜೊತೆಗೆ ಸಮಾನತೆಯ ಆದರ್ಶ ಮುಂದುವರಿದ ದೇಶಗಳಲ್ಲಿಲ್ಲ, ಭಾರತ ಎಲ್ಲರ ಆಸೆ, ಆಶೋತ್ತರಗಳ ಸಾಕಾರಮೂರ್ತಿಯಾಗಿ ಜಗತ್ತಿಗೆ ಶಾಂತಿ-ಸೌಹಾರ್ದತೆ, ಸಮಾನತೆಯ ಸಂದೇಶವಾಹಕವಾಗಿರುವುದು ನಮ್ಮ ಹಿರಿಯರ ದೂರದೃಷ್ಟಿತ್ವ, ಉದಾರತೆಯ ಪ್ರಯತ್ನದಿಂದ ಎಂದರು.
ಸಾಮಾನ್ಯ ಅಸಾಮಾನ್ಯನಾಗಿ ಬೆಳೆಯುವುದು ವೈಯಕ್ತಿಕ ಶ್ರಮದಿಂದಾದರೂ ದೇಶದಲ್ಲಿ ಆ ವಾತಾವರಣ ಇರಬೇಕಾಗುತ್ತದೆ. ಪ್ರತಿಷ್ಠಿತ ಹಿನ್ನೆಲೆಯವರೊಂದಿಗೆ ಬುಡಕಟ್ಟುಗಳು, ಧಮನಿತ ಸಮೂದಾಯಗಳು ಸ್ಫರ್ಧೆಮಾಡುತ್ತಿರುವುದು ಭಾರತ ದೇಶ, ಸಂವಿಧಾನದ ಹೆಗ್ಗಳಿಕೆ. ಈ ವೈಶಿಷ್ಟ್ಯತೆಯ ರಕ್ಷಣೆಗಾಗಿ ಕೆಲಸಮಾಡಲು ಯುವಕರು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಹುಟ್ಟೂರ ಪ್ರೀತಿ, ಗೌರವ ಹತ್ತೂರ ಪ್ರೀತಿ, ಗೌರವಕ್ಕಿಂತ ಮಿಗಿಲು ಎಂದ ಅವರು ಹುಟ್ಟೂರಿನ ಅಭಿವೃದ್ಧಿ ಹೊಸಪೀಳಿಗೆಯ ಕನಸಿಗೆ ಶಕ್ತಿ ತುಂಬುವ ಜವಾಬ್ಧಾರಿಯಿಂದ ಇಂಥ ಕೆಲಸಗಳಾಗುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡೆಗೆ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಸಿದ್ದಾಪುರ ಹೊಸಮಂಜುವಿನ ಗಿರೀಶ್ ಪುಂಡಲೀಕ ನಾಯ್ಕ ಮತ್ತು ಅವರ ಮಾರ್ಗದರ್ಶಕ ಪಿ.ಟಿ. ವಾಲ್ಮಿಕಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಸಿದ್ಧಾಪುರದ ಗುರು ಫೌಂಡೇಶನ್,ಬೆಂಗಳೂರಿನ ಗಗನಕುಸುಮ
ಫೌಂಡೇಶನ್,ಬೆಂಗಳೂರಿನ ನಿಭಾ ಫೌಂಡೇಶನ್ ಗಳು ಆಯೋಜಿಸಿದ್ದವು. ತಾಲೂಕಾ ನಾಮಧಾರಿ ನೌಕರರ ಸಂಘ ಮತ್ತು ವಕೀಲ ಎನ್.ಡಿ. ನಾಯ್ಕ ಕುಟುಂಬ ಸಹಕರಿಸಿತ್ತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

2 Comments

Leave a Reply

Your email address will not be published. Required fields are marked *