samajamukhi.net news… ಸಂಪಾದಕೀಯ.. ಆರೆಸ್ಸೆಸ್‌ ಮತ್ತದರ ಅಂತರಂಗ! ಭಾಗ -೦೧-

ಪತ್ರಿಕೆಯೊಂದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬರೆದಲೇಖನ ಒಂದಕ್ಕೆ ಪ್ರತಿಕ್ರೀಯೆ ನೀಡಿದ ಓದುಗರೊಬ್ಬರು ಆರೆಸ್ಸೆಸ್‌ ಮನಸ್ಸುಗಳು ತಮ್ಮಪ್ರತಿಭೆ ಬಗ್ಗೆ ಎಂಥಾ ಗೌರವ-ಮರ್ಯಾದೆ ನೀಡಿದ್ದರು! ಎಂದು ಬರೆದಿದ್ದಾರೆ. (ಕ.ಮು.-೭-೧೦-೨೫ ಸೋಮುವಾರ ಮೂರನೇ ಪುಟ)

ಇದು ಒಂದು ಸ್ಯಾಂಪಲ್‌ ಈ ಪ್ರತಿಕ್ರೀಯೆಗೆ ಸಂಬಂಧಿಸಿದ ಹಿರಿಯ ಪತ್ರಕರ್ತರ ಅಂಕಣ ನಾನು ಓದಿಲ್ಲ. ಆದರೆ ಆರೆಸ್ಸೆಸ್‌ ಗೆ ೧೦೦ ವರ್ಷ ಎಂದು ಸಂಭ್ರಮಿಸುವವರು ತಿಳಿಯಬೇಕಾದ, ಆರೆಸ್ಸೆಸ್‌ ಬಗ್ಗೆ ಸಕಾರಣ ತಕಾರುಗಳುಳ್ಳ ನನ್ನಂಥ ಅನೇಕರಿಗೆ ಉತ್ತರಿಸಲೇಬೇಕಾದ ನೂರಾರು ಪ್ರಶ್ನೆಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ. ….

  • ಸ್ವಾತಂತ್ರ್ಯ ಹೋರಾಟದ ಮಹತ್ವದ ಸಮಯದಿಂದ ಉಚ್ಛಾಯ ಸ್ಥಿತಿಯ ವರೆಗೆ ಎಳೆಯ ಸಂಸ್ಥೆಯಾಗಿದ್ದ ಆರೆಸ್ಸೆಸ್‌ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ?
  • ಮಹಾತ್ಮಾಗಾಂಧಿ ಸೇರಿದಂತೆ ಸಮಾಜಸುಧಾರಣೆ ಆ ಮೂಲಕ ಮಾನವ, ಭಾರತದ ಅಭಿವೃದ್ಧಿಗೆ ಶ್ರಮಿಸಿದ ಅಸ್ಪೃಶ್ಯತೆ ನಿವಾರಣೆ, ವರ್ಣಭೇದ ನೀತಿಗಳಂಥ ಅಮಾನವೀಯ ಆಚರಣೆಗಳ ವಿರುದ್ಧ ಆರೆಸ್ಸೆಸ್‌ ಕೈ ಜೋಡಿಸಿಲ್ಲ ಯಾಕೆ?
  • ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಿಂದ ಪ್ರಾರಂಭವಾಗಿ ಸ್ವಾತಂತ್ರ್ಯೋತ್ತರ ಕಾಲಗಳಲ್ಲಿ ಅಸಮಾನತೆ, ಗೇಣಿ ಪದ್ಧತಿ ನಿರ್ಮೂಲನೆ, ರೈತ ಚಳವಳಿ ಗಳು ಸೇರಿದ ಜನಸಾಮಾನ್ಯ ಬಡ ಭಾರತೀಯ ಬಹುಸಂಖ್ಯಾತರ ಪರ ಇದ್ದ ಅನೇಕ ಸಮಾನತೆಯ, ಮಾನವೀಯತೆ ಯ ಅಸಂಖ್ಯ ಹೋರಾಟಗಳಲ್ಲಿ ಆರೆಸ್ಸೆಸ್‌ ಎಷ್ಟು ಹೋರಾಟಗಳಲ್ಲಿ ಪಾಲ್ಗೊಂಡಿದೆ?. ಪಾಲ್ಗೊಳ್ಳದಿರಲು ಕಾರಣವೇನು?

ಆರೆಸ್ಸೆಸ್‌ ಮತ್ತವರ ಪರಿವಾರದ ಸಂಘಟನೆಗಳು ರಾಷ್ಟ್ರೀಯತೆ, ಹಿಂದುತ್ವ, ದೇಶಪ್ರೇಮಗಳ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುತ್ತವೆ. ಆದರೆ ಅವರೇ ಹೇಳುವಂತೆ ಅವರ ಹೋರಾಟ, ಧ್ಯೇಯ ಹಿಂದೂಗಳ ಪರವಾದರೆ… ಸ್ವಾತಂತ್ರ್ಯ ಹೋರಾಟ, ರೈತ ಹೋರಾಟಗಳು, ಕಾಗೋಡು, ದಲಿತ ಚಳವಳಿಯಂಥ ಚಳವಳಿಗಳು ಹಿಂದೂ ಪರ ಅಲ್ಲವೆ?

  • ಕಾಗೋಡು ಹೋರಾಟ ಸಾಂಕೇತಿಕ, ಕಾಗೋಡು ಹೋರಾಟ ಸೇರಿದಂತೆ ಅನೇಕ ಜನಪರ ಚಳವಳಿಗಳು ಜನಸಾಮಾನ್ಯ ಬಡ ಹಿಂದೂಗಳ ಪರವೇ ನಡೆದವುಗಳು.ಇವುಗಳಲ್ಲಿ ಕಾಗೋಡು ಚಳವಳಿಯಂಥ ರೈತ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯವೊಂದರಲ್ಲೇ ಲಕ್ಷಾಂತರ ಬಡ ಗೇಣಿದಾರರು ಭೂಮಾಲಿಕರಾದರು. ಇಂಥ ಹೋರಾಟಗಳಲ್ಲಿ ಆರೆಸ್ಸೆಸ್‌ ಪಾತ್ರವಿಲ್ಲ, ಹಾಗಾದರೆ ನೀವು ಭೂಮಾಲಿಕರು, ಜಮೀನ್ಧಾರರು, ಮೇಲ್ವರ್ಗದವರ ಪರವಾಗಿದ್ದು ಬಡ ಹಿಂದೂಗಳ ವಿರುದ್ಧ ಅಂತಾಗಲಿಲ್ಲವೆ? ಹಾಗಾದರೆ ನೀವು ಪ್ರತಿಪಾದಿಸುವ ಹಿಂದುತ್ವ ಭಾರತೀಯ ಬಹುಸಂಖ್ಯಾತ ಮೂಲನಿವಾಸಿ ಬಡಜನರ ವಿರುದ್ಧವಲ್ಲವೆ?
  • ಆರೆಸ್ಸೆಸ್‌ ಸೇರಿದಂತೆ ಅವರ ಪರಿವಾರದ ಸಂಘಟನೆಗಳು ಕೆಳವರ್ಗದ ಹಿಂದೂಗಳನ್ನು ಕಾರ್ಯಕರ್ತರಾಗಿ, ಸ್ವಯಂ ಸೇವಕರಾಗಿ ದುಡಿಸಿಕೊಳ್ಳುತ್ತಾರೆ ಆದರೆ ಅವರ ಸರಸಂಘಚಾಲಕ, ಅವರ ನೆಚ್ಚಿನ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಯಾಕೆ ನೇಮಿಸುವುದಿಲ್ಲ.?
  • ರೈತರು, ಕಾರ್ಮಿಕರು, ದುಡಿಯುವ ವರ್ಗದ ಹಿಂದೂ ಗಳ ಪರ ಎಂದೂ ವಕಾಲತ್ತು ವಹಿಸದ ಸಂಘ ದೇವರು, ದೇವಸ್ಥಾನ, ದೇವರು-ಮಠಗಳ ಪೂಜಾರಿಗಳ ವಿಚಾರ ಬಂದಾಗ ಮಾತ್ರ ಉಗ್ರವಾಗಿ ಹೋರಾಟ, ಸಂಘಟನೆ, ಹಕ್ಕೊತ್ತಾಯ ಮಾಡುವುದೇಕೆ?
  • ಮುಗ್ಧ ಬಡ ಕೆಳವರ್ಗದ ಹಿಂದೂಗಳಲ್ಲಿ ಹಿಂದುತ್ವ, ರಾಷ್ಟ್ರೀಯತೆಗಳ ವಿಚಾರ ತುಂಬುವ ಸಂಘ ಅವರನ್ನು ಪೊಸ್ಟರ್‌ ಹಚ್ಚಲು, ಜಗಳವಾಡಲು, ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ, ಅವಾಚ್ಯವಾಗಿ ಅನ್ಯರನ್ನು ನಿಂದಿಸಲು ಬಳಸುವ ಸಂಘ ಅಂಥವರಿಗೆ ಸಂಘದ ಸಹ ಪರಿವಾರಗಳಲ್ಲೂ ಮಹತ್ವದ ಹುದ್ದೆಗಳು, ಸ್ಥಾನಮಾನ ಕೊಡದಿರಲು ಕಾರಣವೇನು? ಇಂಥವರಿಗೆ ಸಂಘ ನೀಡುವ ತರಬೇತಿ- ಉತ್ತೇಜನ ಯಾವ ಮಾದರಿಯದ್ದು?
  • * ಸಂಘದಲ್ಲಿ ದೇಶಪ್ರೇಮ, ರಾಷ್ಟ್ರೀಯತೆ, ಶಿಸ್ತು ಬೆಳೆಸಲಾಗುತ್ತದೆ ಎಂದು ವ್ಯಾಪಕ ಪ್ರಚಾರವಿದೆ. ಇದು ಸತ್ಯ, ವಾಸ್ತವ, ನಿಜಗಳಾದಲ್ಲಿ ನಿಮ್ಮ ಪರಿವಾರದ ರಾಜಕೀಯ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಕಡುಬ್ರಷ್ಟರಾಗುವುದು ಹೇಗೆ? ನಿಮ್ಮ ಸಂಘ ಬ್ರಷ್ಟಚಾರದ ವಿರುದ್ಧವಿದ್ದರೆ… ಪ್ರತಿಶತ ೯೯ ರಷ್ಟು ಬ್ರಷ್ಟರಾಗಿರುವ ನೀವು ಬೆಂಬಲಿಸುವ ಪಕ್ಷದ ಮುಖಂಡರ ಜೊತೆ ಸಂಘಕ್ಕ್ಯಾಕೆ ತಕರಾರಿಲ್ಲ?.
  • (ಸಶೇಶ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *