ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ.

ಪ್ರಕರಣ ಒಂದು-

ಶಿರಳಗಿ ಗ್ರಾಮ ಪಂಚಾಯತ್‌ ನ ಪಿ.ಡಿ.ಓ ರಾಜೇಶ್‌ ನಾಯ್ಕ ಮೇಲೆ ಪ್ರಭು ದೊಡ್ಮನಿ ಎನ್ನುವ ವ್ಯಕ್ತಿ ಹಲ್ಲೆಗೆ ಮುಂದಾದ ಬಗ್ಗೆ ಪ್ರಕರಣ ದಾಖಲಾಗಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಶಿರಳಗಿ ಗ್ರಾಮ ಪಂಚಾಯತ್‌ ಪ್ರಭಾರಿ ಪಿ.ಡಿ.ಓ. ರಾಜೇಶ್‌ ಪೊಲೀಸ್‌ ದೂರು ನೀಡಿರುವ ಪ್ರಕಾರ ದಾಖಲೆ ಇಲ್ಲದ ತನ್ನ ಕೆಲಸ ಮಾಡಿಸುವ ಪ್ರಭು ದೊಡ್ಮನಿ ರಾಜೇಶ್‌ ನಾಯ್ಕರಿಗೆ ಕರ್ತವ್ಯಕ್ಕೆ ಅಡ್ಡ ಪಡಿಸಿದ್ದಲ್ಲದೆ ಕಲ್ಲಿನಿಂದ ಹೊಡೆದು ಹಿಂಸೆ ಮಾಡಿದ್ದಾನೆ ಎಂದು ಪೊಲೀಸ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಸಿದ್ಧಾಪುರದ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಯಂತ್ರ ಒದಗಿಸುವ ಒಪ್ಪಂದದಲ್ಲಿ ಲಕ್ಷಾಂತರ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪವಿರುವ ಪ್ರಭು ದೊಡ್ಮನಿ ತನ್ನ ಕೆಲಸಕ್ಕೆ ಕಾನೂನಾತ್ಮಕವಾಗಿ ವ್ಯವಹರಿಸಬಹುದಿತ್ತು ಆದರೆ ಅವರು ಹಲ್ಲೆ ಮಾಡಿ ಸರ್ಕಾರಿ ಸಿಬ್ಬಂದಿಗೆ ಹಿಂಸೆ ನೀಡಿರುವುದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ.

ರಾಜೇಶ್‌ ನಾಯ್ಕ ಹೇಳುವಂತೆ ದಾಖಲೆ ಪತ್ರಗಳು ಸರಿ ಇಲ್ಲದೆ ಉದ್ಯೋಗ ಪರವಾನಗಿ ಕೊಡುವುದು ತಪ್ಪು ಈ ಬಗ್ಗೆ ನಿಯಮ, ಕಾನೂನು ಮೀರಿಮಾಡಲು ಅವಕಾಶವಿಲ್ಲ ಇಂಥ ಕಾನೂನು ಬಾಹೀರ ಕೃತ್ಯ ಮಾಡಿಕೊಡಲಿಲ್ಲದ ಕಾರಣಕ್ಕೆ ತನ್ನ ತೇಜೋವಧೆ ಮಾಡುತ್ತಿರುವ ದಂಪತಿಗಳ ಬಗ್ಗೆ ಮಾನನಷ್ಟ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ ಎನ್ನುತ್ತಾರೆ. ಈ ಘಟನೆ ಸರ್ಕಾರಿ ನೌಕರರ ನೈತಿಕತೆ ಕುಸಿಯುವಂತೆ ಮಾಡಿದೆ ಎಂದಿರುವ ಸರ್ಕಾರಿ ನೌಕರರ ಸಂಘ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮನವಿ ಮಾಡಿದೆ. ಈ ಘಟನೆಯ ಮಧ್ಯೆ ರಾಜೇಶ್‌ ನಾಯ್ಕ ಮೇಲೆ ಕೂಡಾ ಪ್ರಭು ದೊಡ್ಮನಿ ದಂಪತಿಗಳಿಂದ ಪೊಲೀಸ್ ದೂರು ನೀಡುವ ವಿಫಲ ಯತ್ನ ನಡೆದಿರುವ ಬಗ್ಗೆ ವರದಿಯಾಗಿದೆ.

ಪ್ರಕರಣ -೦೨- ಲವ್‌ ಜಿಹಾದ್!‌?

ಶಿರಳಗಿ ಗ್ರಾ. ಪಂ. ನ ಹಿಂದುಳಿದ ವರ್ಗಗಳ ಯುವತಿಯೊಬ್ಬಳಿಗೆ ನಗರದ ಅನ್ಯ ಕೋಮಿನ ಯುವಕನೊಬ್ಬ ಪ್ರೀತಿ ಮಾಡುವ ನಾಟಕ ಆಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ಬಿ.ಜೆ.ಪಿ. ನೇತೃತ್ವದಲ್ಲಿ ದಾಖಲೆ ರಹಿತ ದೂರು ನೀಡಲಾಗಿದೆ. ಈ ಪ್ರೇಮ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾಗಿರುವ ಯುವತಿ ಅನ್ಯ ಧರ್ಮದ ವರನೊಂದಿಗೆ ಮದುವೆಯಾಗಲು ಅಡ್ಡಿ ಮಾಡಬಹುದಾದ ಕೆಲವು ಸಂಘಟನೆಗಳ ಭಯದಿಂದಲೇ ಮದುವೆಯಾಗದೆ ಪ್ರಾಣಕಳೆದುಕೊಂಡಲು ಎನ್ನುವ ಅಭಿಪ್ರಾಯ ಒಂದು ಬಣದ್ದಾದರೆ, ಕೆಲವು ಸಂಘಟನೆಗಳು ಇದನ್ನು ಲವ್‌ ಜಿಹಾದ್‌ ಎಂದು ತೀರ್ಪು ನೀಡಿ ಬಿಟ್ಟಿವೆ.‌

ಇಲ್ಲಿ ಬಾಧಿತ ಯುವತಿಯ ಕುಟುಂಬ ವಾಸ್ತವ, ಚಾರಿತ್ರಿಕ ಸತ್ಯ ಅರಿತು ಮೌನಕ್ಕೆ ಶರಣಾದರೆ ಕೆಲವು ಸಂಘಟನೆಗಳು ಈ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ಪ್ರಯತ್ನಿಸಿ ಸಾರ್ವಜನಿಕ ಶಾಂತಿ-ಸುವ್ಯವಸ್ಥೆ ಹಾಳು ಮಾಡಿ ಸರ್ಕಾರ

ಸ್ಥಳೀಯ ಜನಪ್ರತಿನಿಧಿಗಳಿಗೆ ಇರುಸುಮುರುಸುಮಾಡಿ ಅದರಲ್ಲಿ ರಾಜಕೀಯ ಹುಡುಕುತ್ತಿರುವ ವಾಸ್ತವ ಚರ್ಚೆಯಲ್ಲಿದೆ.

ಪೊಲೀಸ್‌ ವ್ಯವಸ್ಥೆ ವಾಸ್ತವ ತನಿಖೆ ಮಾಡಿ ತಪ್ಪಿತಸ್ಥರನ್ನು ಶಿಕ್ಷಿಸಲು ಯಾರ ತಕರಾರೂ ಇಲ್ಲ. ಆದರೆ ಬಾಧಿತರಿಗೆ ಶವ ಸಂಸ್ಕಾರ, ಇತರ ರೀತಿ-ನೀತಿಗಳಿಗೆ ನೆರವಾಗದ ಕೆಲವು ಸಂಘಟನೆಗಳು ಈಗ ಬಾಧಿತರಿಗೆ ನ್ಯಾಯ ಕೊಡಿಸುವ ಸೋಗಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಪ್ರಯತ್ನ ಮಾಡುತ್ತಿರುವುದು ಉತ್ತರ ಕನ್ನಡ ಮತ್ತು ಸಿದ್ದಾಪುರದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ದುಷ್ಟ ಪ್ರಯತ್ನ ಎಂದೇ ಚರ್ಚಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರೀಯಿಸಿ, ತಮ್ಮ ಹೆಸರು ಗೌಪ್ಯವಾಗಿಡಿ ಎಂದಿರುವ ಬಿ.ಜೆ.ಪಿ. ನಾಯಕರೊಬ್ಬರು ಎರಡು ಕೈ ಯಿಂದ ಚಪ್ಪಾಳೆ ಆಗಿದೆ. ಬಾಧಿತ ಯುವತಿ ಮತ್ತವರ ಕುಟುಂಬ ನೋವಿನಲ್ಲಿದೆ. ಈ ಅಸಹಾಯಕ ಕುಟುಂಬಕ್ಕೆ ನೆರವು-ಸಾಂತ್ವನ ಅಗತ್ಯ ಈಗಿದೆ. ಆದರೆ ಕೆಲವರು ಈ ಪ್ರಕರಣ ಮುಂದಿಟ್ಟುಕೊಂಡು ರಾಜಕೀಯ ಲಾಭಕ್ಕೆ ಪ್ರಯತ್ನಿಸುತಿದ್ದಾರೆ. ಇವರು ಈಗ ಯಾವ ಬೆಲೆ ತೆತ್ತಾದರೂ ಈ ಪ್ರಕರಣ ಲವ್‌ ಜಿಹಾದ್‌ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಇದರಿಂದ ಬಾಧಿತರ ಕುಟುಂಬಕ್ಕೇ ತೊಂದರೆ… ಈ ರಾಜಕೀಯ ಮಸಲತ್ತನ್ನು ನಾವು ವಿರೋಧಿಸುವಂತಿಲ್ಲ ಆದರೆ ಇಂಥ ಕೀಳು ನಡವಳಿಕೆಯನ್ನು ನಮ್ಮ ಅಂತರಾತ್ಮ ಒಪ್ಪಲ್ಲ ಎಂದು ಬೇಸರಿಸಿದ್ದಾರೆ,

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ...

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ ಮತ್ತೆ ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆದ ಈ ಚುನಾವಣೆಯ ಮತ ಎಣಿಕೆಯ ಪ್ರಕ್ರೀಯೆ ಸ್ಥಳೀಯ ಬಾಲಿಕೊಪ್ಪ ಶಾಲೆಯಲ್ಲಿ ತಡ ರಾತ್ರಿಯ ವರೆಗೆ ನಡೆದಿತ್ತು. ಹಿಂದಿನ ಅವಧಿಗೆ ಆಯ್ಕೆಯಾಗಿದ್ದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *