



ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ ಮತ್ತೆ ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆದ ಈ ಚುನಾವಣೆಯ ಮತ ಎಣಿಕೆಯ ಪ್ರಕ್ರೀಯೆ ಸ್ಥಳೀಯ ಬಾಲಿಕೊಪ್ಪ ಶಾಲೆಯಲ್ಲಿ ತಡ ರಾತ್ರಿಯ ವರೆಗೆ ನಡೆದಿತ್ತು. ಹಿಂದಿನ ಅವಧಿಗೆ ಆಯ್ಕೆಯಾಗಿದ್ದ ನಾಲ್ಕು ಜನರಲ್ಲಿ ಹಿಂದಿನ ಅವಧಿಯ ವಿಜೇತ ತಂಡದ ಮೂವರು ಮತ್ತು ಎದುರಾಳಿ ತಂಡದ ಎಂ.ಕೆ. ನಾಯ್ಕ ಕಡಕೇರಿ ಸೇರಿದ್ದಾರೆ.



ಹಿಂದಿನ ಅವಧಿಯ ನಿರ್ಧೇಶಕರಾಗಿದ್ದ ಸತೀಶ್ ಹೆಗಡೆ, ಗುರುರಾಜ್ ನಾಯ್ಕ ಮತ್ತು ನಾಗರಾಜ್ ಮಡಿವಾಳ ಜೊತೆ ಮಾಜಿ ಅಧ್ಯಕ್ಷ ಮೋಹನ ನಾಯ್ಕ ಕಡಕೇರಿ ಪುನರಾಯ್ಕೆ ಆದವರಲ್ಲಿ ಸೇರಿದ್ದಾರೆ.

ಜಿ.ಜಿ. ಹೆಗಡೆ,ಮಂಜುನಾಥ ನಾಯ್ಕ ಸುಧಾಬಾಯಿ,ದಿವ್ಯಾ ನಾಯ್ಕ ಮತ್ತು ರೀಟಾ ಡಿಸೋಜಾ ಆಯ್ಕೆಯಾದ ಇತರ ಶಿಕ್ಷಕ, ಶಿಕ್ಷಕಿಯರಾಗಿದ್ದಾರೆ. ಒಟ್ಟೂ ೯ ಸ್ಥಾನಗಳಲ್ಲಿ ಹೆಚ್ಚಿನ ಮತಗಳಿಂದ ಆಯ್ಕೆಯಾಗಿರುವ ತಂಡದ ನಾಯಕ ಮೋಹನ ನಾಯ್ಕ ಗುಂಪಿನ ಆರು ಜನ ಸದಸ್ಯರ ಎದುರು ಹಿಂದಿನ ಅವಧಿಯ ಸದಸ್ಯರಲ್ಲಿ ಮೂರು ಜನರು ಹೊಸದಾಗಿ ಆಯ್ಕೆಯಾದಂತಾಗಿದೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






