ಮಳೆಪಾಠ!

ಸಿದ್ಧಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆ, ಮಲೆನಾಡು, ಕರಾವಳಿ ಪ್ರವಾಹದಲ್ಲಿ ಮಿಂದೆದ್ದು ಮುಳುಗುತ್ತಿವೆ.
ಉತ್ತರ ಕರ್ನಾಟಕದಲ್ಲಿ ಮಳೆ ನಿರೀಕ್ಷಿತವಲ್ಲ. ಆದರೆ ಮಹಾರಾಷ್ಟ್ರದ ಮಳೆ ಉತ್ತರ ಕರ್ನಾಟಕದಲ್ಲಿ ನೆರೆ ಸೃಷ್ಟಿಸುತ್ತದೆ. ಹಾಗಾಗಿ ಮನೆ ಕುಸಿಯುವುದು, ಹಳ್ಳ.ಕೊಳ್ಳ. ತುಂಬಿ ಕೆರೆ ಒಡೆದು ತೊಂದರೆ ಆಗುವುದು ಸಾಮಾನ್ಯ. ಅಲ್ಲಿಯ ವ್ಯವಸ್ಥೆ ಅದನ್ನೆಲ್ಲಾ ಮೈಕೊಡವಿಕೊಂಡು ಮತ್ತೆ ಮೊದಲಿನಂತಾಗಲು ಹರಸಾಹಸ ಪಡಬೇಕು.
ಆದರೆ ಮಲೆನಾಡು, ಕರಾವಳಿಯ ಮಳೆ ಹಾಗಲ್ಲ. ಇಲ್ಲಿ ಬಹುತೇಕ ನಿಶ್ಚಿತ, ನಿರೀಕ್ಷಿತ. ಇಲ್ಲಿಯ ಜಲಾಶಯಗಳು ಭರ್ತಿಯಾದಾಗ ನೀರು ಹೊರಬಿಡಬೇಕು ಆಗ ಆಗುವ ತೊಂದರೆ ನಿರೀಕ್ಷಿತವೇ. ಹಾಗೆಯೇ ಸಿದ್ಧಾಪುರದ ಹೆಮ್ಮನಬೈಲು, ಕಲ್ಯಾಣಪುರ, ಶಿರಸಿಯ ಮೊಗವಳ್ಳಿ ಸೇರಿದಂತೆ ಇಲ್ಲಿಯ ಬಹುತೇಕ ಮುಳುಗಡೆ ಪ್ರದೇಶಗಳ ಸ್ಥಿತಿ-ಗತಿ ನಿರೀಕ್ಷಿತವೇ.
ಸಾವಿರಾರು ಮಿ.ಮೀ. ಮಳೆ ಬೀಳುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆ ನಿರ್ಮಾಣ ಸಮಯದಲ್ಲಿ ಸ್ಥಳಿಯ ಸಂಸ್ಥೆಗಳು ನಿರಪೇಕ್ಷಣಾ ಪತ್ರ ನೀಡಿ ಮನೆ ನಿರ್ಮಾಣಗಳಾಗುತ್ತವಲ್ಲವೆ? ಹಾಗಿರುವಾಗ ಕಾಯಿದೆ, ಕಾನೂನು ರೀತಿಯೇ ಸೋವಿನಕೊಪ್ಪದ ಹೆಮ್ಮನಬೈಲು ನದಿ ತೀರದ ಪ್ರದೇಶದಲ್ಲಿ, ಕಲ್ಯಾಣಪುರದ ನೆರೆ ನೀರು ನಿಲ್ಲುವ ಬಯಲು ಪ್ರದೇಶದಲ್ಲಿ ಹೀಗೆಯೇ ಪ್ರತಿವರ್ಷ ಮಹಾಪೂರ ಬಾಧಿಸುವ ಮೊಗಳ್ಳಿಯಲ್ಲಿ ಮನೆ ನಿರ್ಮಾಣ, ಸರ್ಕಾರಿ ರಸ್ತೆ, ಇನ್ನಿತರ ವ್ಯವಸ್ಥೆಗಳು ಹೇಗಾದವು?
ಇಂಥ ಅವ್ಯವಸ್ಥೆಗಳನ್ನು ತಪ್ಪಿಸದ ಅಯಾ ತಾಲೂಕು, ಜಿಲ್ಲಾಡಳಿತಗಳು ಸಹಜವಾಗಿ ಬೀಳುವ ಮರ, ಜರಿ, ಧರೆ ಗಳ ಅಪಾಯ ತಪ್ಪಿಸುವುದ್ಹ್ಯಾಗೆ? ಮೊಗಳ್ಳಿಯ ಅನೇಕ ನೆರೆಗಳನ್ನು ನೋಡಿದ ಪತ್ರಕರ್ತರು ಸ್ಥಳಿಯರಿಗೆ ಪ್ರಶ್ನಿಸಿದಾಗ ಸರ್ಕಾರ ಎತ್ತರದ ಪ್ರದೇಶದಲ್ಲಿ ನಮಗೆ ನಿವೇಶನ ನೀಡಿದೆ ಆದರೆ ನೀರು, ಭಾವನಾತ್ಮಕತೆ ಕಾರಣಕ್ಕೆ ನಾವು ಇಲ್ಲಿದ್ದೇವೆ ಎಂದು ಅಲ್ಲಿಯ ಪ್ರವಾಹ ಸಂತೃಸ್ತರೇ ಹೇಳುತ್ತಾರೆ.
ಇದರಂತೆಯೇ ಕಲ್ಯಾಣಪುರದ ನೆರೆ ಪೀಡಿತರು, ಹೆಮ್ಮನಬೈಲಿನ ಮಹಾಪೂರ ಸಂತೃಸ್ತರು ಎಲ್ಲರ ಕತೆಯೂ ಇದಕ್ಕಿಂತ ಭಿನ್ನವಲ್ಲ. ಹಾಗಾಗಿ ನೆರೆ, ಬರಗಳು ಅನೇಕರ ಐಚ್ಛಿಕ ಮತ್ತು ಸ್ವಯಂಕೃತ ಅಪರಾಧಗಳು. ಇಂಥ ಜನರ ಬಗ್ಗೆ ಇಡೀ ವ್ಯವಸ್ಥೆ, ಜನತೆ ಅಯ್ಯೋ ಎನ್ನುತ್ತೇವೆ ಆದರೆ ಅವರಿಗೆ ಅವರ ಜವಾಬ್ಧಾರಿ, ರಕ್ಷಣೆ, ಭದ್ರತೆ ಕಾಡುವುದಿಲ್ಲವೆ?
ಪ್ರತಿವರ್ಷó, ಕಡಿಮೆ ಅಥವಾ ಹೆಚ್ಚು ಮಳೆ ಆಗುತ್ತದೆ. ಆದರೆ ಅದಕ್ಕೆ ಮಳೆಗಾಲದ ಪೂರ್ವ ತಯಾರಿ ಸಭೆಯನ್ನೂ ಮಾಡಲಾಗುತ್ತದೆ! ಆದರೆ ಮುಂಚಿತವಾಗಿ ಶಾಶ್ವತ ಕ್ರಮಗಳ ಬಗ್ಗೆ ಯಾಕೆ ಯೋಚಿಸುವುದಿಲ್ಲ, ಈ ವ್ಯವಸ್ಥೆ. ಇದರ ಹಿಂದೆ ಎಲ್ಲರಿಗೂ ಇಷ್ಟವಾಗುವ ಬರ!, ಮಹಾಪೂರಗಳ ಲಾಭದ ಕಾರಣಗಳಿವೆ. ಹಾಗಾಗಿ ಮಲೆನಾಡಿನ ಜನತೆ ಮಳೆಕೊಯ್ಲು, ಮಳೆಪಾಠಗಳನ್ನು ಕೇಳುತ್ತಾ ಎಂದೆಂದೂ ಬದಲಾಗದ ರೀತಿ ನಡೆದುಕೊಂಡರೆ, ನಡವಳಿಕೆ ರೂಢಿಸಿಕೊಂಡರೆ ಪ್ರತಿವರ್ಷ ಸಾಯುವವರ ಬಗ್ಗೆ ಅಳುವವರ್ಯಾರು? ಯಾಕೆ ಅಳಬೇಕು?ಎನ್ನುವ ಮನಸ್ಥಿತಿ ಹೆಚ್ಚಾಗುವ ಅಪಾಯವಿದೆ.
ಸಂಬಂಧಿಸಿದವರು ಈ ಬಗ್ಗೆ ಯೋಚಿಸಲು ಇದು ಸಕಾಲ.

ಜಲಪ್ರಳಯ ಕೆರೆಕಟ್ಟೆಒಡೆದುಬೆಳೆಹಾನಿ.ರಸ್ತೆ,ಸಂವಹನ,ಸಂಪರ್ಕಸ್ಥಗಿತ,
ಜಿಲ್ಲಾಡಳಿತದ ಸಮರೋಪಾದಿಯ ಕ್ರಮ
ನಿರಂತರ ಗಾಳಿ ಮಳೆ ಪರಿಣಾಮ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಾಗಾಟ ಸ್ಥಗಿತಗೊಂಡಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಪ್ರಮುಖ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳಿಂದ ನೀರು ಹೊರಬಿಡುತಿದ್ದು ನಿರಾಶ್ರಿತರ ಸಂಖ್ಯೆ ವೃದ್ಧಿಯಾಗುತ್ತಿದೆ. ಶಿರಸಿ ಬನವಾಸಿ ಬಳಿಯ ಮೊಗಳ್ಳಿಯಲ್ಲಿ ವರದಾ ಪ್ರವಾಹದಿಂದಾಗಿ ಇಡೀ ಗ್ರಾಮವೇ ಸ್ಥಳಾಂತರವಾಗಿದೆ. ಶಿವಮೊಗ್ಗ ಜಿಲ್ಲೆಯ ಜೋಳದಗುಡ್ಡೆ, ಕತವಾಯಿ ನಡುವಿನ ಗದ್ದೆ ಬಯಲು ವರದಾ ನೀರಿನಿಂದ ತುಂಬಿದ್ದು ಬೆಳೆ ನಾಶವಾಗುವ ಸಾಧ್ಯತೆ ಹೆಚ್ಚಿದೆ.
ಸಿದ್ಧಾಪುರದಲ್ಲಿ ಅಘನಾಶಿನಿ ನದಿ, ಉಪನದಿಗಳೆಲ್ಲಾ ತುಂಬಿ ಹರಿಯುತಿದ್ದು ಹೆಮ್ಮನಬೈಲಿನ ಆರು ಕುಟುಂಬಗಳಿಗೆ ಸೋವಿನಕೊಪ್ಪ ಶಾಲೆಯಲ್ಲಿ ಪುನರ್ ವಸತಿ ಕಲ್ಫಸಲಾಗಿದೆ. ಸಿದ್ಧಾಪುರ ಕಲ್ಯಾಣಪುರದಲ್ಲೂ ನೆರೆ ಇಳಿಯದ ಪರಿಣಾಮ ಗಂಜಿಕೇಂದ್ರ ಮುಂದುವರಿದಿದೆ.
ರಸ್ತೆ ಸಂಪರ್ಕ, ದೂರವಾಣಿ, ಮೊಬೈಲ್ ಸಂಪರ್ಕಗಳೆಲ್ಲಾ ಸ್ಥಗಿತಗೊಂಡಿದ್ದು ಸಂವಹನ, ಸಂಪರ್ಕ ಕಷ್ಟಸಾಧ್ಯವಾಗಿದೆ. ಕರಾವಳಿ,ಮಲೆನಾಡು ಬೆಸೆಯುವ ಪ್ರಮುಖ ರಸ್ತೆಗಳ ಮೇಲೆಲ್ಲಾ ನೀರು ಹರಿದು, ಮರಬಿದ್ದು ಸಂಪರ್ಕ ಅಸ್ಯವ್ಯಸ್ತವಾಗಿದೆ. ಈ ತೊಂದರೆಗಳ ಹಿನ್ನೆಲೆಯಲ್ಲಿ ಗುರುವಾರ ಕೂಡಾ ಉತ್ತರ ಕನ್ನಡ ಜಿಲ್ಲೆಯ ಶಾಲಾ, ಕಾಲೇಜು ಅಂಗನವಾಡಿಗಳಿಗೆ ರಜೆ ಮುಂದುವರಿಸಲಾಗಿದೆ.
ಸಿದ್ಧಾಪುರದ ಸುದ್ದಿ- ಕಳೆದ 48 ಗಂಟೆಗಳಲ್ಲಿ ಸಿದ್ಧಾಪುರ ತಾಲೂಕಿನಲ್ಲಿ ರಾಜ್ಯದಲ್ಲೇ ಗರಿಷ್ಟ 300 ಮಿ.ಮೀ. ಮಳೆ ಸುರಿದಿದೆ. ಈ ಮಹಾಮಳೆಯ ಪರಿಣಾಮ ಕಾನಗೋಡಿನ ಕೆರೆಯ ಕೋಡಿ ಮುರಿದು ನೀರು ಗದ್ದೆ, ತೋಟಗಳ ಮೇಲೆ ಹರಿಯುತ್ತಿದೆ.
ನಿನ್ನೆ ರಾತ್ರಿಯ ವಿಪರೀತ ಮಳೆಗೆ ಅವರಗುಪ್ಪಾ ಕೆರೆಯ ಕೋಡಿಯ ಕೆಳಗಿನ ಜಾಗ ಕುಸಿದಿದ್ದು, ಇದರಲ್ಲಿ ನೀರು ನುಗ್ಗಿದರೆ ನೂರಾರು ಎಕರೆ ಅಡಿಕೆ, ಭತ್ತದಗದ್ದೆ ಬೆಳೆ ನಾಶವಾಗುವ ಅಪಾಯ ಎದುರಾಗಿದೆ. ತಾಲೂಕಿನಾದ್ಯಂತ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು ಪುನರ್‍ರ್ವಸತಿ,ತುರ್ತು ಕೆಲಸ ಭರದಿಂದ ನಡೆಯುತ್ತಿದೆ. ಈ ಮಳೆಯ ಪರಿಣಾಮ ತಾಲೂಕಿನ ಹಣಜಿಬೈಲ್ ನಲ್ಲಿ ಒಂದು ಜೀವಹಾನಿ ಮತ್ತು ಇನ್ನೊಂದು ಕಡೆ ಜಾನುವಾರು ತೇಲಿಹೋದ ವರದಿಯಾಗಿದೆ. ಐಸೂರು,ಚಪ್ಪರಮನೆ,ಹಳದೋಟ ಸೇರಿದಂತೆ ಅನೇಕ ಕಡೆ ಜರಿ ಕುಸಿದಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ತಾಲೂಕಿನಲ್ಲಿ 344 ಎಕರೆ ಬೆಳೆಗೆ ಹಾನಿಯಾಗಿದೆ. 67 ಜನರನ್ನು ಸಂತ್ರಸ್ತರೆಂದು ಗುರುತಿಸಿದ್ದು ಅವರಿಗೆ ಎರಡು ಕಡೆ ಪುನರ್ ವಸತಿ ಕಲ್ಫಿಸಲಾಗಿದೆ. ಕೆರೆ ಹಾನಿ ಮತ್ತು ಬೆಳೆ ಹಾನಿ ಸಂಭವನೀಯತೆ ಹಿನ್ನೆಲೆಯಲ್ಲಿ ಅವರಗುಪ್ಪಾ ಮತ್ತು ಕಾನಗೋಡಿನ ಜನರು ಸೂಕ್ತ ವ್ಯವಸ್ಥೆಗಾಗಿ ತಹಸಿಲ್ಧಾರರಿಗೆ ಮನವಿ ಮಾಡಿದ್ದಾರೆ. ತಾಲೂಕಿನ ಸೋವಿನಕೊಪ್ಪಾ ಹೆಮ್ಮನಬೈಲಿನ ಪುನರ್ವಸತಿ ಕೇಂದ್ರಕ್ಕೆ ಇಂದು ಭೇಟಿ ನೀಡಿದ ತಾಲೂಕಾ ಪಂಚಾತ್ ಅಧ್ಯಕ್ಷರು ಸದಸ್ಯರು ವ್ಯವಸ್ಥೆ ಪರಿಶೀಲಿಸಿದರು. ಜನಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂತೃಸ್ತರು ತಮಗೆ ಅಪಾಯವಿಲ್ಲದ ಪ್ರದೇಶದಲ್ಲಿ ಶಾಶ್ವತ ವಸತಿ ವ್ಯವಸ್ಥೆಗೆ ಆಗ್ರಹಿಸಿದರು. ಪುನರರ್ವಸತಿ ಕೇಂದ್ರದಲ್ಲಿ ಆರೋಗ್ಯ, ಆಹಾರ, ರಕ್ಷಣೆ, ಭದ್ರತೆ ವ್ಯವಸ್ಥೆಗಳು ಸಮರ್ಪಕವಾಗಿರುವುದು ಕಂಡು ಬಂತು.ಸರ್ಕಾರಿವ್ಯವಸ್ಥೆಯೊಂದಿಗೆ ಸ್ಥಳಿಯರು ಅಲ್ಲಲ್ಲಿ ಸಂತ್ರಸ್ತರ ನೆರವಿಗೆ ಬಂದಿದ್ದು ಗಮನಕ್ಕೆ ಬಂತು. ಹೆಮ್ಮನಬೈಲಿನಲ್ಲಿ ಪ್ರವಾಹ ಪರಿಸ್ಥಿತಿ ಕುಗ್ಗಿದ ಪರಿಣಾಮ ಹಾನಿಗೊಳಗಾದ ಪ್ರದೇಶ, ಮನೆಗಳ ಪರಿಸ್ಥಿತಿ ಅವಲೋಕನಕ್ಕೆ ಅವಕಾಶವಾಯಿತು. ನೂರಾರು ವರ್ಷಗಳಿಂದ ವಾಸ್ತವ್ಯ ಹೂಡಿದ್ದ ಜನತೆ ಜನಜಾನುವಾರುಗಳೊಂದಿಗೆ ಸ್ಥಳಾಂತರವಾಗಿದ್ದು ವಸ್ತು, ಪರಿಸ್ಥಿತಿ ವಸ್ತುಸ್ಥಿತಿ ಅವಲೋಕಿಸಲು ಅವಕಾಶವಾಯಿತು. ಸಂಪೂರ್ಣ ಹಾನಿ ಸಮೀಕ್ಷೆ ಈವರೆಗೆ ಸಾಧ್ಯವಾಗಿಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *