ಲಾಭದಾಯಕ ವಾಗುತ್ತಾ, ಕಾಡಿಂದ ನಾಡಿಗೆ ಬರುತ್ತಿದೆ ಮಾಡ ಹಾಗಲ


ಮಲೆನಾಡು ಭಾಗದ ಕಾಡ ಬೆಳೆ ಕಾಡ ಹಾಗಲ ಅಥವಾ ಮಾಡಹಾಗಲ ಈಗ ಲಾಭದಾಯಕ ಬೆಳೆಯಾಗಿ ನಾಡಿಗೆ ಬರುತ್ತಿದೆ. ಕೆಲವೇ ವರ್ಷಗಳ ಹಿಂದೆ ಹೆಚ್ಚಿನ ಔಷಧಿಗುಣ, ಪೌಷ್ಠಿಕಾಂಶಗಳ ಆಗರ ಎನ್ನಲಾಗುತ್ತಿದ್ದ ಮಾಡ ಹಾಗಲವನ್ನು ಕಾಡಿಂದ ಕೊಯ್ದು ತರಕಾರಿ, ಆಹಾರವಾಗಿ ಬಳಸುತಿದ್ದರು. ಆದರೆ ಇದೇ ಕಾಡ ಹಾಗಲ ಈಗ ರೈತನ ಕೃಷಿಭೂಮಿಯ ಬೆಳೆ, ಮಾರುಕಟ್ಟೆಯ ದುಬಾರಿ ತರಕಾರಿಯಾಗಿ ಗಮನ ಸೆಳೆಯುತ್ತಿದೆ.
ಕೆಲವೇ ವರ್ಷಗಳ ಹಿಂದೆ ಮಾರುಕಟ್ಟೆಮೌಲ್ಯವಿಲ್ಲದ ಈ ಮಾಡ ಹಾಗಲವನ್ನು ಕಾಡಿನಲ್ಲಿ ಹುಡುಕಿ ತಂದು ಬಳಸಿ ಖುಷಿಪಡುತ್ತಿದ್ದ ಮಲೆನಾಡಿನ ಜನತೆ ಈಗ ಈ ತರಕಾರಿಗೆ 200-300 ಬೆಲೆ ನೀಡಬೇಕಾಗಿ ಬಂದಿರುವುದು ಅದಕ್ಕೆ ಬಂದಿರುವ ಮಾರುಕಟ್ಟೆ ಮೌಲ್ಯಕ್ಕೆ ಸಾಕ್ಷಿ. ಅಡಿಗೆಯಲ್ಲಿ ಚಟ್ನಿ, ಪಲ್ಲೆ,ಗೊಜ್ಜಾಗಿ ಬಳಕೆಯಾಗುತಿದ್ದ ಈ ಕಾಡ ಹಾಗಲ ಈಗ ಇನ್ನಷ್ಟು ವಿಭಿನ್ನ ಖಾದ್ಯವಾಗಿ ಗಮನ ಸೆಳೆಯುತ್ತಿದೆ.
ಮನೆಯಂಗಳ, ಬಯಲುಪ್ರದೇಶ, ತಾರಸಿಗಳಲ್ಲಿ ನೆಟ್ಟು ಬೆಳೆಸಬಹುದಾದ ಈ ಬಹುಉಪಯೋಗಿ ತರಕಾರಿ60 ರಿಂದ 70 ದಿವಸಗಳ ಬೆಳೆಯಾಗಿದ್ದು ವರ್ಷಕ್ಕೆ ಮೂರ್ನಾಲ್ಕಕ್ಕೂ ಹೆಚ್ಚುಬಾರಿ ನಿರಂತರವಾಗಿ 5-6 ವರ್ಷಗಳ ವರೆಗೆ ಒಂದೇ ಬಳ್ಳಿಯಲ್ಲಿ ಕಾಯಿಕೊಡುವ ಕಾಮಧೇನು. ಈ ಮಾಡ ಹಾಗಲ ಈಗ ರೈತರಿಗೆ ಲಾಭದಾಯಕ ಬೆಳೆಯಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಕೃಷಿ ತಜ್ಞರು.
ಟೀಸಲ್ಗೌಡ್ ವೈಜ್ಞಾನಿಕ ಹೆಸರಿನ ಮಾಡಹಾಗಲ ಮೂಲತ: ಬರ್ಮಾ ದೇಶದ್ದು, ಮಲೆನಾಡಿನ ಬಯಲಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಂಡು ಹೂ,ಕಾಯಿ ಬಿಟ್ಟು ಮರೆಯಾಗುವ ಸಸ್ಯ ಪಶ್ಚಿಮಬಂಗಾಲ, ಓರಿಸ್ಸಾ, ತ್ರಿಪುರಾ, ಅಂಡಮಾನ್‍ಗಳ ವಾಣಿಜ್ಯ ಬೆಳೆ.
ಆರೋಗ್ಯಕಾರಿ ಪೌಷ್ಠಿಕಾಂಶ ಗಳ ವಿಶೇಶತೆಯ ಈ ಕಾಡಹಾಗಲದ ಬಗ್ಗೆ ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲೂ ಅಧ್ಯಯನ, ಪ್ರಾಯೋಗಿಕತೆ ನಡೆದಿದೆ. ಮಾಡಹಾಗಲದ ವಿಶೇಶ, ಮಾರುಕಟ್ಟೆ, ಬೆಳೆಯುವ ರೀತಿಗಳ ಮಾಹಿತಿಗಾಗಿ 7483282402,9449636569 ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಪ್ರಾಯೋಗಿಕ ಮಾಧ್ಯಮ ನಿರ್ಬಂಧ ಬಿ.ಜೆ.ಪಿ.ಪ್ಯಾಸಿಸ್ಟ್ ನೀತಿ ಮತ್ತು ಬಹುಸಂಖ್ಯಾತ ವಿರೋಧಿ ನೀತಿಪ್ರತಿಬಿಂಬ
ರಾಜ್ಯ ವಿಧಾನಸಭೆಯ ಕಲಾಪಕ್ಕೆ ಖಾಸಗಿ ದೃಶ್ಯಮಾಧ್ಯಮಗಳ ನಿಷೇಧ ಮತ್ತು ಪ್ರವಾಹ ಪರಿಹಾರದ ಬಗ್ಗೆ ಚರ್ಚೆಗೆ ಅವಕಾಶ ನೀಡದ ರಾಜ್ಯ ವಿಧಾನಸಭಾ ಅಧ್ಯಕ್ಷ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆಯವರ ಪಕ್ಷಪಾತದ ನಡೆ ಬಗ್ಗೆ ಸಾರ್ವಜನಿಕ ವಲಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ. ಶಾಸನ ಸಭೆಯಲ್ಲಿ ಜನಪ್ರತಿನಿಧಿಗಳು ಏನು? ಮಾಡುತ್ತಾರೆ. ಹ್ಯಾಗೆ ವರ್ತಿಸುತ್ತಾರೆ ಎಂದು ತಿಳಿಯುವ ಹಕ್ಕು ಮತದಾರ ಸಾರ್ವಜನಿಕರು ಅಥವಾ ಜನಸಾಮಾನ್ಯರಿಗಿದೆ. ಹಿಂದೆಲ್ಲಾ ಮಾಧ್ಯಮಸ್ವಾತಂತ್ರ್ಯ, ಶಾಸಕರ ಹಕ್ಕು, ಹಕ್ಕುಚ್ಯುತಿ,ಜನಪ್ರತಿನಿಧಿಗಳ ತೇಜೋವಧೆ, ಮಾಧ್ಯಮಗಳ ಮಿತಿಗಳ ಬಗ್ಗೆ ಅನೇಕ ಬಾರಿ ವಿಧಾನಸಭೆಯಲ್ಲಿ ಚರ್ಚೆಯಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *