ಗೋಪಾಲ ಕಾನಳ್ಳಿಗೆ ಕರುನಾಡಕಣ್ಮಣಿ ಕನ್ನಡರಾಜ್ಯೋತ್ಸವ ಪ್ರಶಸ್ತಿ


ಸಿದ್ದಾಪುರ; ತಾಲೂಕಿನ ಉದಯೋನ್ಮುಖ ಕಲಾವಿದ, ಗಾಯಕ ಗೋಪಾಲ ಆರ್ ಕಾನಳ್ಳಿಯವರಿಗೆ “ಕರುನಾಡಕಣ್ಮಣಿಕನ್ನಡರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ನೀಡಿಗೌರವಿಸಲಾಗ
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸುರ್ವೆಕಲ್ಚರಲ್‍ಅಕಾಡೆಮಿ(ರಿ), ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ(ರಿ) ಡಿಸೆಂಬರ್ 12 ರಂದು ಆಯೋಜಿಸಿದ್ದ 64 ನೇ ಕನ್ನಡರಾಜ್ಯೋತ್ಸವ ಸಂಭ್ರಮದ ಸಾಂಸ್ಕøತಿಕ ಪ್ರತಿಭೋತ್ಸವಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಅವರು ಸುಮಾರು 10 ವರ್ಷಗಳಿಂದ ಯುವಜನ ಮೇಳ, ಬೀದಿನಾಟಕಗಳು, ನಾಡ, ರಾಷ್ಟ್ರೀಯ ಹಬ್ಬಗಳು, ಶಾಲಾ ಕಾಲೇಜುಗಳಲ್ಲಿಯ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ತಮ್ಮದೆ ವಿಶಿಷ್ಟ ಕಂಠದಲ್ಲಿ ಹಾಡಿ ರಂಜಿಸುತ್ತಿದ್ದಾರೆ.

ಗೋಪಾಲ ಕಾನಳ್ಳಿ ಮಾತು-ಹಾಡಿಗಾಗಿ samajamukhi youtube channel nodi

ವಿಧಾನಸಭಾ ಅಧ್ಯಕ್ಷ ಕಾಗೇರಿ
& ಸಂಸದ ಅನಂತ ಹೆಗಡೆ ವಿರುದ್ಧ ವಾಗ್ದಾಳಿ
ಹೊಸವರ್ಷದ ಮೊದಲವಾರ ಸರ್ಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ
ರೈತರು,ಬಡವರು, ಹಿಂದುಳಿದವರು,ಹಿರಿಯನಾಗರಿಕರ ತೊಂದರೆ,ಬೇಡಿಕೆಗಳಿಗೆ ಸ್ಫಂದಿಸದ ಸ್ಥಳಿಯ ಶಾಸಕರು,ಸಂಸದರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ (ಸಿದ್ಧಾಪುರ) ಬಿ.ಬಣ ಸಿಡಿದೆದ್ದಿದೆ.
ಇಂದು ಇಲ್ಲಿಯ ಖಾಸಗಿ ಪ್ರದೇಶದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಬಿ ಬಣದ ಸದಸ್ಯರಾದ ವಿ.ಎನ್. ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಮಳವಳ್ಳಿ,ಹನುಮಂತ ನಾಯ್ಕ ಹೊಸೂರು ವಿವೇಕ ಭಟ್ ಮತ್ತು ನಾಶಿರ್‍ಖಾನ್ ಹಾಗೂ ಸಾವೇರ್ ಡಿ ಸಿಲ್ವಾ ಸೇರಿದ ಕಾಂಗ್ರೆಸ್ ಬಿ.ಬಣದ ಸದಸ್ಯರು ರಾಜ್ಯದಲ್ಲಿ ಸರ್ಕಾರ ಅಸ್ಥಿತ್ವದಲ್ಲಿ ಇದೆ ಇಂದು ತಿಳಿಯುವುದೇ ಓ.ಸಿ.,ಇಸ್ಫೀಟ್,ಮಟಕಾ,ಜುಗಾರಿಯಂಥ ಕಾನೂನುಬಾಹೀರ ಚಟುವಟಿಕೆಗಳಿಗೆ ಬೆಂಬಲಿಸುತ್ತಿರುವ ಜನಪ್ರತಿನಿಧಿಗಳು,ಅಧಿಕಾರಿಗಳಿಂದ. ಶಾಸಕರು,ಸಂಸದರ ಆಪ್ತರು,ಕೆಲವು ಉದ್ಯಮಿಗಳು, ಆಡಳಿತ ಪಕ್ಷದ ಪ್ರಮುಖರು ಸಾಮೂಹಿಕವಾಗಿ ಅಕ್ರಮ ದಂಧೆಗಳಿಗೆ ಬೆಂಬಲಿಸುತ್ತಿರುವ ಗುರುತರವಾದ ಆರೋಪಗಳಿವೆ.
ಕಳೆದ 6 ತಿಂಗಳುಗಳಿಂದ ಸಾಮಾಜಿಕ ಪಿಂಚಣಿಯೋಜನೆಯ ಫಲಾನುಭವಿಗಳು ಮಾಸಿಕ ಪಿಂಚಣಿಯಿಲ್ಲದೆ ಪರದಾಡುತಿದ್ದಾರೆ. ಮಳೆ,ಪ್ರವಾಹ ಪೀಡಿತ ಜನರು ಪರಿಹಾರ ಸಿಗದೆ,ಪುನರ್ವಸತಿ ದೊರೆಯದೆ ಪರಿತಪಿಸುತಿದ್ದಾರೆ. ಆಡಳಿತ ಯಂತ್ರ ಚುರುಕುಪಡಿಸಿ ಸಾರ್ವಜನಿಕರ ಹಿತ ಕಾಯಬೇಕಾದ ಶಾಸಕ ಕಾಗೇರಿ ಮತ್ತು ಸಂಸದ ಅನಂತಕುಮಾರ ಹೆಗಡೆ ನಿಷ್ಕ್ರೀಯರಾಗಿ ಜನಹಿತ ಕಡೆಗಣಿಸಿದ್ದಾರೆ.
ಈ ತೊಂದರೆಗಳಿಗೆ ಶೀಘ್ರ ಸ್ಫಂದಿಸದಿದ್ದರೆ ಜನೇವರಿ ಮೊದಲ ವಾರದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟಿಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮಾಧ್ಯಮಗೋಷ್ಠಿಯ ಪ್ರಮುಖ ಅಂಶಗಳು ಹೀಗಿವೆ-
ನೆರೆ ಮತ್ತು ಮಳೆ ಪೀಡಿತ ಜನರಿಗೆ ಒಂದು ತಿಂಗಳೊಳಗಾಗಿ ಪುನರ್ವಸತಿ ಕಲ್ಫಿಸುತ್ತೇವೆಂದು ಭರವಸೆ ನೀಡಿದ ವಿಧಾನಸಭಾಧ್ಯಕ್ಷರು,
ಮುಖ್ಯಮಂತ್ರಿಗಳ ಭರವಸೆ ಈವರೆಗೆ ಈಡೇರಿಲ್ಲ. ಜನಪ್ರತಿನಿಧಿಗಳ ಬೆಂಬಲದಿಂದಲೇ ಜಿಲ್ಲೆಯಾದ್ಯಂತ ಇಸ್ಫೀಟ್ ಕ್ಲಬ್, ಮಟಕಾ, ಜೂಜು,ಜುಗಾರಿಯಂಥ ಅಕ್ರಮ ವ್ಯವಹಾರಗಳು ನಡೆಯುತ್ತಿವೆ. ಹಿಂದಿನ ಸರ್ಕಾರಗಳು ಸಾರ್ವಜನಿಕ ಬೇಡಿಕೆ, ಜನಸಾಮಾನ್ಯರ ಅವಶ್ಯಕತೆಗಳಿಗೆ ಸ್ಫಂದಿಸುತಿದ್ದವು ಆದರೆ ಈ ಸರ್ಕಾರ ಜನಸಾಮಾನ್ಯರ ಹಿತ ಮರೆತು ಅಕ್ರಮ ವ್ಯವಹಾರಿಗಳು,ಅವರ ಬೆಂಬಲಿಗರ ನೆರವಿಗೆ ನಿಂತಿದೆ.
ಅಧಿಕಾರಿಗಳ ಬೇಜವಾಬ್ಧಾರಿ ಸರ್ಕಾರದ ನಿರ್ಲಕ್ಷದಿಂದಾಗಿ ಜನಸಾಮಾನ್ಯರ ಬವಣೆ ಹೆಚ್ಚಿದೆ. ಈ ತೊಂದರೆಗಳ ವಿರುದ್ಧ ಜನೇವರಿ ಮೊದಲವಾರದಲ್ಲಿ ಪ್ರತಿಭಟನೆ ನಡೆಸುತ್ತೇವೆ.
-ವಿ.ಎನ್. ನಾಯ್ಕ ಜಿ.ಪಂ. ಮಾಜಿ ಸದಸ್ಯ.
ನೆರೆಯ ಶಿವಮೊಗ್ಗ ಜಿಲ್ಲೆಯಲ್ಲಿ ಸಂಸದರು ಅಭಿವೃದ್ಧಿ ಕೆಲಸ ಮಾಡುತಿದ್ದಾರೆ.ನಮ್ಮ ಜಿಲ್ಲೆಯಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷರು, ಸಂಸದರು ನಿಷ್ಕ್ರೀಯರಾಗಿದ್ದಾರೆ. ಹಿಂದಿನ ವಿಧಾನಸಭೆ,ಲೋಕಸಭೆ ಚುನಾವಣೆಗಳ ವೇಳೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಅಕ್ರಮಮದ್ಯದ ಹಾವಳಿ ಹೆಚ್ಚುತ್ತದೆ ಎಂದು ಬಿ.ಜೆ.ಪಿ. ಪ್ರಚಾರ ಮಾಡಿತ್ತು. ಈಗ ಬಿ.ಜೆ.ಪಿ. ಆಡಳಿತದಲ್ಲಿ ಹಳ್ಳಿ ಹಳ್ಳಿ ಗಳಲ್ಲಿ ಕೈಚೀಲದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.ಸಂಸದರು,ಶಾಸಕರ ಆಪ್ತರು,ಉದ್ಯಮಿಗಳು ಇಸ್ಫೀಟ್ ಕ್ಲಬ್, ಓಸಿ. ವ್ಯವಹಾರ, ಮಟಕಾ ದಂಧೆ ನಡೆಸುತಿದ್ದಾರೆ ಇದಕ್ಕೆಲ್ಲಾ ವಿಧಾನಸಭಾ ಅಧ್ಯಕ್ಷರ ಬೇಜವಾಬ್ದಾರಿ ಕಾರಣ.ಇಂಥ ಜನಪ್ರತಿನಿಧಿಗಳು ನಮಗೆ ಬೇಕೆ? ಸಾಮಾಜಿಕ ಪಿಂಚಣಿ ಯೋಜನೆಗಳ ಸ್ಥಗಿತ, ಪ್ರವಾಹ ಸಂತೃಸ್ತರ ಕಡೆಗಣನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ.

  • ವಸಂತ ನಾಯ್ಕ,ಮಳಲವಳ್ಳಿ. ತಾ.ಪಂ. ಮಾಜಿ ಸದಸ್ಯ.
    ಕಲ್ಯಾಣಪುರದಲ್ಲಿ ಪ್ರವಾಹ ಪೀಡಿತ 26 ಕುಟುಂಬಗಳಲ್ಲಿ 2 ಕುಟುಂಬಗಳಿಗೆ ತಲಾ 50 ಸಾವಿರ ಮತ್ತು 24 ಕುಟುಂಬಗಳಿಗೆ 10 ಸಾವಿರತಾತ್ಕಾಲಿಕ ಪರಿಹಾರ ನೀಡಲಾಗಿದೆ.
    ಪ್ರವಾಹ ಪೀಡಿತರಿಗೆ ಪುನರ್ವಸತಿ ಕಲ್ಫಿಸುತ್ತೇವೆಂದವರು ಎಲ್ಲಿದ್ದಾರೆ?
    -ನಾಶಿರ್ ಖಾನ್, ತಾ.ಪಂ. ಸದಸ್ಯ.
    ನೆರೆ ಪರಿಹಾರ,
    ಸಾಲಾಮನ್ನಾ, ಬೆಳೆವಿಮೆ ಎಲ್ಲದರಲ್ಲೂ ತಾರತಮ್ಯ ನಡೆದಿದೆ.
    ಜನಪ್ರತಿನಿಧಿಗಳು ಇಲ್ಲೂ ಇಲ್ಲದಂತಾಗಿದ್ದಾರೆ.
  • ಸಿ.ಆರ್.ನಾಯ್ಕ, ತಾ.ಪಂ.ಮಾಜಿ ಅಧ್ಯಕ್ಷ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *