ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿ ಗಣೇಶ ನಾಡೋರ

ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಪ್ರಕ್ರಿಯೆಯನ್ನು ಖಂಡಿಸಿ, ಸಾಹಿತಿ ಗಣೇಶ ಪಿ. ನಾಡೋರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ಮಾಡುವುದಾಗಿ ಘೋಷಿಸಿದ್ದಾರೆ.
ನಾಡೋರ ಅವರಿಗೆ ಸಾಹಿತ್ಯ ಅಕಾಡೆಮಿಯು 2003 ರಲ್ಲಿ ಪ್ರಶಸ್ತಿ ನೀಡಿತ್ತು. ಈಗ 18 ವರ್ಷಗಳ ಬಳಿಕ ಪ್ರಶಸ್ತಿ ಹಿಂದಿರುಗಿಸಲು ಮುಂದಾಗಿದ್ದಾರೆ. ಬಾಲವಿಕಾಸ ಅಕಾಡೆಮಿಯು ಅವರಿಗೆ 2015 ರಲ್ಲಿ ಪ್ರಶಸ್ತಿ ನೀಡಿತ್ತು. ಶೀಘ್ರದಲ್ಲಿಯೇ ಸಂಬಂಧಪಟ್ಟ ಅಕಾಡೆಮಿಗಳಿಗೆ ಪ್ರಶಸ್ತಿಯನ್ನು ವಾಪಸ್ ಮಾಡುತ್ತೇನೆ ಎಂದು ನಾಡೋರ ಮಾಹಿತಿ ನೀಡಿದ್ದಾರೆ.

ಬಿ.ಜೆ.ಪಿ.ಮುಕ್ತ ಭಾರತವಾಗುವುದು ಖಚಿತ ಎಂದ ಬಿ.ಜೆ.ಪಿ. ಮುಖಂಡ ಸ್ವಾಮಿ
ಭಾರತದ ಆರ್ಥಿಕತೆ ವೇಗವಾಗಿ ಕುಸಿಯುತ್ತಿರುವ ಬಗ್ಗೆ ಪ್ರಧಾನಿಯವರಿಗೇ ಮಾಹಿತಿ ಇಲ್ಲ ಎಂದು ಟೀಕಿಸಿರುವ ಬಿ.ಜೆ.ಪಿ. ಮುಖಂಡ ಸುಬ್ರಮಣ್ಯ ಸ್ವಾಮಿ ಪ್ರಧಾನಿಯವರ ಆರ್ಥಿಕ ಸಲಹೆಗಾರರು ಅವರನ್ನು ಮಾಹಿತಿ ನೀಡದೆ ಕತ್ತಲಲ್ಲಿಟ್ಟಿದ್ದಾರೆ ಎಂದಿದ್ದಾರೆ.
ಇಂದು ನವದೆಹಲಿಯಲ್ಲಿ ಬಿ.ಜೆ.ಪಿ.ಸಭೆಯ ನಂತರ ಮಾತನಾಡಿದ ಅವರು ದೇಶದ ಆರ್ಥಿಕತೆಯೂ ಕುಸಿಯುತ್ತಿದೆ,ಬಿ.ಜೆ.ಪಿ. ಜನಪ್ರೀಯತೆಯೂ ಕುಸಿಯುತ್ತಿದೆ. ದೇಶದ ಆರ್ಥಿಕತೆಯನ್ನು ಸರಿಪಡಿಸದಿದ್ದರೆ ಬಿ.ಜೆ.ಪಿ. ಮುಕ್ತ ಭಾರತ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಮುಕ್ತ ಭಾರತ ಮಾಡುವ ಮೋದಿ,ಶಾ ಕನಸಿಗೆ ಅವರ ಪಕ್ಷದವರೇ ತಿರುಗೇಟು ನೀಡಿರುವುದು ರಾಜಕೀಯ ವಲಯದ ಕುತೂಹಲಕ್ಕೂ ಕಾರಣವಾಗಿದೆ.

ಸೈದೂರಿನ ವಿದ್ಯಾ
ಸಾರ್ಥಕ್ಯದ
ಕತೆ ಸ್ಮರಿಸಿ…..
ಸುಳ್ಳೂರು,ಸೈದೂರು,ತಡಗಳಲೆ,
ಪಡವಗೋಡು,ಕಣಸೆ, ಕಾಗೋಡುಗಳೆಂದರೆ….
ಅಧಿಕಾರಿಗಳು ಬೆವರುತಿದ್ದರು.
ಈ ಧೀರ ಬಂಡುಕೋರ ಸೇನಾಪಡೆಯಂತಿದ್ದ ಈ ಗ್ರಾಮಗಳ ಮುಗ್ಧಜನರ ಎದೆಯಲ್ಲಿ
ಅಕ್ಷರ ಬಿತ್ತಲು ಹೋದವರು ಎಚ್.ಗಣಪತಿಯಪ್ಪ.
ಹೊಸೂರು ಗಣಪತಿಯಪ್ಪ ಗಾಂವಟಿಶಾಲೆ ಮಾಸ್ತರಿಕೆ ಮಾಡುತ್ತಾ ಬಿತ್ತಿದ ಅಕ್ಷರಗಳು ಫಲಕೊಡತೊಡಗಿದ್ದು ಕಾಗೋಡು ರೈತ ಹೋರಾಟದಿಂದ.
ಈ ಸಮಯದಲ್ಲಿ ಸಮಾಜವಾದವನ್ನು ಉಸಿರಾಡುತ್ತಾ ಅದಕ್ಕೆ ಹೋರಾಟದ ಹುರುಪು ಕೊಟ್ಟವರು ಶಾಂತವೇರಿ ಗೋಪಾಲಗೌಡ. ಗಣಪತಿಯಪ್ಪ,ಗೋಪಾಲಗೌಡ, ಲೋಹಿಯಾ ಇವರೊಂದಿಗೆ ಒಂದು ದೊಡ್ಡಸಮೂಹ ಈ ಭಾಗದ ಜನರಲ್ಲಿ ಆತ್ಮವಿಶ್ವಾಸ,ವಿವೇಕ,ಜಾಗೃತಿಗೆ ಕಾರಣರಾದದ್ದು ಒಂದು ರೋಚಕ ಇತಿಹಾಸ.
ಈ ಹೋರಾಟದ ಮೂಸೆಯಲ್ಲಿ ಒಡಮೂಡಿದ ನಾಯಕರು ಈ ಭಾಗದ ಸಾರ್ವಜನಿಕ ನೇತೃತ್ವ ವಹಿಸಿ ಶಿಕ್ಷಣ,ಆರೋಗ್ಯ, ಆಡಳಿತ ಸುಧಾರಿಸುವ ಹೋರಾಟದಲ್ಲಿ ಗೆದ್ದದ್ದು ಇನ್ನೊಂದು ವಿಶಿಷ್ಟ ಚರಿತ್ರೆ.
ಈ ಎರಡು ಹೋರಾಟಗಳ ಜ್ವಾಲೆ ಉರಿಯುತಿದ್ದಾಗಲೇ ಶಿಕ್ಷಣದ ತಂಗಾಳಿ ಪಸರಿಸುವ ಕೆಲಸವೂ ಸದ್ದಿಲ್ಲದೆ ನಡೆಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *