

ಕಾಡುಪ್ರಾಣಿ ದ್ವಿಚಕ್ರವಾಹನಕ್ಕೆ ಸಿಕ್ಕು ಹಿಡಿತ ತಪ್ಪಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೇರೂರು ಬಳಿ ನಡೆದಿದೆ. ಮೃತ ಬಾಳೆಕೊಪ್ಪದ ವಿನಯ ದೇವರು ಹೆಗಡೆ ಎಂದು ಗುರುತಿಸಲಾಗಿದ್ದು ಇವರು ಅಂಚೆಕಛೇರಿಯ ನೌಕರರಾಗಿದ್ದರು ಎನ್ನಲಾಗಿದೆ.

ಸಾಗರಮಾಲಾ ಮೀನುಗಾರರ ಹಿತರಕ್ಷಣೆ ವಿಷಯದಲ್ಲಿ ಸೂಕ್ಷ್ಮಜ್ಞತೆಯಿಂದ ಕೆಲಸಮಾಡಲು ಆಸ್ನೋಟಿಕರ್ ಸೂಚನೆ
ಕಾರವಾರದ ಸಾಗರಮಾಲಾ ಯೋಜನೆ ಅನುಷ್ಠಾನ ಸಂಘರ್ಷಕ್ಕೆಡೆಮಾಡಿದ್ದು ಮೀನುಗಾರರ ಹಿತರಕ್ಷಿಸಿ,ವಿಶ್ವಾಸದಿಂದ ಕೆಲಸಮಾಡಲು ಮಾಜಿ ಸಚಿವ ಆನಂದ ಅಸ್ನೋಟಿಕರ್ ಸಲಹೆ ನೀಡಿದ್ದಾರೆ.
ಸಮಾಜಮುಖಿಯೊಂದಿಗೆ ಮಾತನಾಡಿದ ಅವರು ಕೇಂದ್ರಸರ್ಕಾರದ ಈ ಯೋಜನೆ ಅನುಷ್ಠಾನದಲ್ಲಿ ಮೀನುಗಾರರ ವಿಶ್ವಾಸ ಪಡೆಯುವ ಪ್ರಯತ್ನ ಮಾಡಿಲ್ಲ. ಬಿ.ಜೆ.ಪಿ. ಕೂಡಾ ಇಂಥ ವಿಷಯದಲ್ಲಿ ಸೂಕ್ಷ್ಮಜ್ಞತೆಯಿಂದ ವರ್ತಿಸಬೇಕಿದ್ದು. ಮೀನುಗಾರರ ವಿಷಯದಲ್ಲಿ ದುಡುಕುವುದು, ಅಸೂಕ್ಷ್ಮತೆಯಿಂದ ವರ್ತಿಸುವುದು ಅಕ್ಷಮ್ಯ.
ಮೀನುಗಾರರಿಗೆ ತೊಂದರೆ ಆಗದಂತೆ ಬಾವಟಿಕಟ್ಟಾ ನದಿ ಹೊರತು ಪಡಿಸಿ, ಮೂರು ಹಡಗು ನಿಲ್ದಾಣಗಳ ಬದಲು ಒಂದನ್ನೇ ನಿರ್ಮಿಸುವ ಮೂಲಕ ತಡೆಗೋಡೆ ಲಾಭ-ನಷ್ಟ, ನೋಡಿ, ಕಾರವಾರದ ಕಡಲತೀರ, ಮೀನುಗಾರರ ಜೀವನೋಪಾಯ ಯಾವುದಕ್ಕೂ ತೊಂದರೆಯಾಗದಂತೆ,ಸಂಘರ್ಷಕ್ಕೆಡೆಯಾಗದಂತೆ ಎಲ್ಲರ ವಿಶ್ವಾಸದಿಂದ ಕೆಲಸಮಾಡಬೇಕು. ಮೀನುಗಾರರನ್ನು ಬಂಧಿಸುವುದು, ಅವರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






