ಹಳ್ಳಿ ಹುಡುಗರೆ ಕೀಳರಿಮೆ ಬಿಡಿ, ನಾವು ಯಾರಿಗೂ ಕಡಿಮೆಇಲ್ಲ ಎನ್ನುವಂತೆ ಬದುಕಿ ಬಿಡಿ ಹೀಗೆಂದವರು ರಾಜ್ಯದ ಸುಪ್ರಸಿದ್ಧ ವಕೀಲ ಜಯಕುಮಾರ್ ಪಾಟೀಲ್ ಕೋಲಶಿರ್ಸಿ.

ಇವರು ಸಿದ್ದಾಪುರದ ಕೋಲಶಿರ್ಸಿಯವರು. ಸಿದ್ದಾಪುರ, ಧಾರವಾಡಗಳಲ್ಲಿ ಅಧ್ಯಯನ ಮಾಡಿದವರು. 70 ರ ದಶಕದಲ್ಲೇ ಬೆಂಗಳೂರು ಸೇರಿದರು. ಅದೇನೋ ಗೊತ್ತಿಲ್ಲ ಕಾನೂನು ಪ್ರ್ಯಾಕಟೀಸ್ ಮಾಡುವುದಿದ್ದರೆ ಅದು ಬೆಂಗಳೂರಿನಲ್ಲೇ ಎಂದು ಮನೆಯಲ್ಲಿ ಹಠ ಮಾಡಿದ್ದೆ. ಅಣ್ಣ ‘ಸರಿ, ಎಲ್ಲರೂ ಇಲ್ಲಿದ್ದು ಏನು ಮಾಡುವುದು ನಡಿ ಬೆಂಗಳೂರು ಎಂದು ಬೆಂಬಲಿಸಿದರು.
ಅಲ್ಲಿ ಬೆಂಗಳೂರು ನನ್ನನ್ನು ಒಪ್ಪಿಕೊಂಡದ್ದು, ನಾನು ಬೆಂಗಳೂರನ್ನು ಅಪ್ಪಿಕೊಂಡದ್ದು ಎಲ್ಲವೂ ಒಂಥರಾ ವಿಚಿತ್ರ ಎನ್ನುವ ಜಯಕುಮಾರ ಪಾಟೀಲ್ ಈಗ ಬೆಂಗಳೂರಿನ ಪ್ರಸಿದ್ಧ ವಕೀಲ. ಕೆಲವೊಮ್ಮ ನಮ್ಮ ಮೂರ್ಖತನ, ನಾವು ಮಾಡುವ ತಪ್ಪಿನಿಂದ ಹೇಗೆ ಅವಕಾಶ ಕಳೆದುಕೊಳ್ಳುತ್ತೇವೆಂದರೆ… ಬೆಂಗಳೂರಿನ ನನ್ನ ವಕೀಲಕೆಯ ಆರಂಭದ ದಿನಗಳಲ್ಲೇ ನನಗೆ ದೆಹಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಲು ನನ್ನ ಸಿನೀಯರ್ ಸಲಗೆ ಮಾಡಿ, ಧೈರ್ಯ ತುಂಬಿದ್ದರು. ಆದರೆ ನನಗೆ ಆಗಷ್ಟೆ ನನ್ನ ಅನ್ನ ನಾನು ಸಂಪಾದಿಸುವುದನ್ನು ಕಲಿತಿದ್ದೆ ಆ ಸಮಯದಲ್ಲಿ ಮತ್ತೆ ದೆಹಲಿಗೆ ಹೋಗಿ ನಮ್ಮ ಮನೆಯವರಿಗೆ ಹೊರೆಯಾಗಬಾರದೆಂದು ನಾನು ಸವೋಚ್ಛ ನ್ಯಾಯಾಲಯದ ವಕೀಲನಾಗುವ ಅವಕಾಶ ಕೈಬಿಟ್ಟೆ. ಹೀಗೆಂದು ಪಕ್ಕಾ ಹಳ್ಳಿಮುಕ್ಕನಂತೆ ನಕ್ಕು ಹೇಳುವ ಜಯಕುಮಾರ ಕೋಲಶಿರ್ಸಿಯಿಂದ ಬೆಂಗಳೂರಿಗೆ ಬಂದು ಬೆಳೆದೆ ಹಾಗೆಯೇ ದೆಹಲಿಯಲ್ಲೂ ಹೆಸರು ಮಾಡುವುದು ನನಗೆ ಕಷ್ಟದ ಕೆಲಸವಾಗಿರಲಿಲ್ಲ ಎನ್ನುವ ತಮ್ಮ ಆತ್ಮವಿಶ್ವಾಸವನ್ನು ಪಾಟೀಲ ಹೊರ ಹಾಕಿದ್ದು ಹೀಗೆ.
ಇಂಥ ಉಭಯ ಕುಶಲೋಪರಿಯ ಮಾತುಕತೆಯಿಂದ ಪ್ರಾರಂಭವಾದ ನಮ್ಮ ಸಂಭಾಷಣೆ ಈಗ ಸಮಾಜಮುಖಿಗೆ ಮೂಖಾಮುಖಿಯ ಸರಕಾಗಿದೆ. ನಮ್ಮೂರಿನ ಜೈಕುಮಾರ ಪಾಟೀಲ್ ಸಮಾಜಮುಖಿಗೆ ನೀಡಿದ ವಿಶೇಶ ಸಂದರ್ಶನ ಎನ್ನಬಹುದಾದ ಅನೌಪಚಾರಿಕ ಮಾತುಕತೆಯಲ್ಲಿ ತೆರೆದುಕೊಂಡದ್ದು ಹೀಗೆ.
ಸಮಾಜಮುಖಿ- ವಕೀಲರಾಗಿ ನೀವು ಪ್ರಸಿದ್ಧರಾಗಿದ್ದು ಹೇಗೆ?
ಜ.ಪಾ.- ಪ್ರಸಿದ್ಧ ಸಾಧಕ ಅನ್ನೋ ವಿಶೇಶ ಬಳಸಬೇಡಿ, ಏನೋ ಮೈಕ್ರೋ ಬಯಾಲಜಿ ಸೀಟು ಸಿಕ್ಕಿರಲಿಲ್ಲ. ಅಲ್ಲಿಯವರೆಗೆ ಕಾನೂನು ಪದವಿ ಓದಿದರಾಯಿತು ಎಂದು ಎಲ್.ಎಲ್.ಬಿ. ಪ್ರವೇಶ ಪಡೆದೆ. ನಂತರ ನನ್ನ ಸಹಪಾಠಿಗಳೆದುರು ನಾನು ಕಿರಿಯನಾಗುವ ಅಪಾಯ ಅರಿತು ದಾಷ್ಟ್ಯದಿಂದಲೇ ಮೈಕ್ರೋ ಬಯಾಲಜಿ ಓದುವ ಆಸೆ ಬದಿಗಿರಿಸಿ, ಕಾನೂನು ಪದವಿ ಪಡೆದೆ. ಅಲ್ಲಿವರೆಗೂ ಒಂಥರಾ ಮಜಾ ಜರ್ನಿ. ಆದರೆ ಬೆಂಗಳೂರಿಗೆ ಹೋಗಿ ಕಾನೂನು ಪ್ರಾಕ್ಟೀಸ್ ಪ್ರಾರಂಭಿಸಿದ ಮೇಲೆ ಸೀರಿಯಸ್ ಆದೆ. ನಮ್ಮ ಕ್ಲೈಂಟ್ ಗಳ ಬಗ್ಗೆ ನಮಗೆ ಕಳಕಳಿ ಇರಬೇಕು. ಎಲ್ಲಾ ಕ್ಷೇತ್ರಗಳಂತೆ ಜನರು ನಮ್ಮನ್ನು ತೂಗಿ ನೋಡುತ್ತಾರೆ. ಬದ್ಧತೆ,ಸಾಮಾಜಿಕ ಕಳಕಳಿ, ಪರಿಶ್ರಮ ಇದ್ದರೆ ನಮಗೆ ಪ್ರಾಮುಖ್ಯತೆ ದೊರೆಯುತ್ತಾ ಹೋಗುತ್ತದೆ. ಶಿಸ್ತು, ಬದ್ಧತೆ, ತೊಡಗಿಸಿಕೊಳ್ಳುವಿಕೆಗಳು ಮಾತ್ರ ನಮ್ಮನ್ನು ಉಳಿಸುತ್ತವೆ.
ಸಮಾಜಮುಖಿ-ಪ್ರಾರಂಭಿಕ ಜೀವನ?
ಜ.ಪಾ.- ನಮಗೂ ಬದುಕು ಕಷ್ಟ ಇತ್ತು. ನಮ್ಮ ನೆರೆಹೊರೆಯವರಿಗೆ ನಮಗಿಂತ ಹೆಚ್ಚು ಕಷ್ಟ ಇತ್ತು. ನಮ್ಮಣ್ಣ ಧೈರ್ಯಮಾಡಿ ಬೆಂಗಳೂರಿಗೆ ಕಳುಹಿಸಿಕೊಟ್ಟ, ಕೆಲಸದಲ್ಲಿ ಖುಷಿ ಕಾಣುವುದನ್ನು ಕಲಿತೆ ಉಳಿದದ್ದು ತನ್ನಿಂತಾನೇ ಆಯಿತು. ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ಹೊಂದಿಕೊಳ್ಳುವುದೇ ಕಷ್ಟ ಎನಿಸುತಿತ್ತು. ನನ್ನ ಅದೃಷ್ಟಕ್ಕೆ ಸಿರವಂತೆ ವೀರಪ್ಪ ಗೌಡರಿಗೆ ಕೆಳದಿ ವ್ಯಾಜ್ಯದ ವಿಚಾರದಲ್ಲಿ ಕೆ.ಎ.ಸ್ವಾಮಿಯವರ ಸಂಪರ್ಕವಿತ್ತು. ಅವರ ಕಚೇರಿಯಲ್ಲಿ ಮಾಡುವಷ್ಟು ಕೆಲಸ ವಿತ್ತು ಆದರೆ ಕೂಡ್ರಲು ಸ್ಥಳ ಇರಲಿಲ್ಲ. ಅವರೇ ವೀರಭದ್ರಪ್ಪನವರ ಬಳಿ ಸೇರಲು ಹೇಳಿದರು.
ಇಡೀ ಉತ್ತರ ಕರ್ನಾಟಕದ ಕೇಸುಗಳೆಲ್ಲಾ ಈ ಕಛೇರಿಗಳಿಗೇ ಬರುತಿದ್ದವು. ಯತೇಚ್ಛ ಕೆಲಸ, ಕೇಸುಗಳ ನಡುವೆ ನಮಗೆ ಕಲಿಯಲು ಸಾಧ್ಯವಾಯಿತು. ಕೆ.ಎ.ಸ್ವಾಮಿ ಯಾವ ಕಿರಿಯ ವಕೀಲರಿಗೆ ಕರೆಯಬಹುದೆನ್ನುವ ಸ್ಫಷ್ಟತೆ ಇರಲಿಲ್ಲ, ಹಾಗಾಗಿ ಡಿಕ್‍ಟೇಶನ್ ಗೆ ನನ್ನನ್ನೇ ಕರೆಯಬಹುದೆಂದು ನಾವೆಲ್ಲಾ ತಡರಾತ್ರಿಯವರೆಗೆ ಕಾಯುತ್ತಾ ಕುಳಿತಿರುತಿದ್ದೆವು ಆ ಅನುಭವ ನಮಗೆ ನೆರವಾಯಿತು.
ಸಮಾಜಮುಖಿ- ಹೊಸ ಪೀಳಿಗೆಯ ಗ್ರಾಮೀಣ ವಕೀಲರಿಗೆ ಸಲಹೆ?
ಜ.ಪಾ.- ಈಗಿನ ರೀತಿ-ನೀತಿ ಬದಲಾಗಿದೆ. ಹೊಸ 5 ವರ್ಷಗಳ ಕಾನೂನು ಪದವಿ ಅನುಕೂಲಕರವಾಗಿದೆ. ಹೊಸ-ಹಳೆ ಹಳ್ಳಿ ಹುಡುಗರ ತೊಂದರೆ ಇಂಗ್ಲೀಷ್ ಮತ್ತು ಕೀಳರಿಮೆ. ಕೀಳರಿಮೆಯಿಂದ ಹೊರಬಂದು ನಾನೇನೂ ಮಾಡಬಲ್ಲೆ ಎಂದು ಹೊರಟರೆ ಸಾಧನೆ ಸಾಧ್ಯ. ಹಳ್ಳಿಗಾಡಿನ ಯುವಕರು ಹುಂಬತನದಿಂದಲೇ ಮುನ್ನುಗ್ಗಬೇಕು. ವಕೀಲಕೆಗೆ ಹುಂಬುತನವೂ ಗುಣವೇ. ಶೃದ್ಧೆ, ಶ್ರಮ, ಬದ್ಧತೆ ಇವುಗಳಿಂದ ಸಾಧನೆ ಸಾಧ್ಯ. ಮೈಕ್ರೋ ಬಯಾಲಜಿ ಸೀಟು ಸಿಗದ ನನಗೆ ಜೆ.ಎಸ್.ಎಸ್. ಕಾನೂನು ಮಹಾವಿದ್ಯಾಲಯದಲ್ಲಿ ರ್ಯಾಂಕ್ ಬಂತು. ನ್ಯಾಯವಾದಿಯಾದರೆ ಬೆಂಗಳೂರಿನಲ್ಲೇ ಎಂದುಕೊಂಡಿದ್ದ ನಾನು ಕೆಳ ಹಂತಗಳಲ್ಲೆಲ್ಲೂ ಎನ್ರೋಲ್ ಮಾಡದೆ, ತಡಮಾಡಿ ಬೆಂಗಳೂರಿನಲ್ಲೇ ಮಾಡಿದೆ.ವೃತ್ತಿ ಮಾತ್ಸರ್ಯ, ಸ್ಫರ್ಧೆ ಎಲ್ಲವೂ ಇತ್ತು. ಆದರೆ ಶ್ರಮ-ಗುಣಕ್ಕೆ ಎಲ್ಲೂ ಗೌರವ ದೊರೆಯುತ್ತದೆ.
ಸಮಾಜಮುಖಿ- ನೀವು ನ್ಯಾಯಾಧೀಶರಾಗಲಿಲ್ಲ ಯಾಕೆ?
ಜ.ಪಾ.- ಅದೊಂಥರಾ ಕತ್ತೆ ಕೆಲಸ. ಯಾವ ಕೆಲಸ ಮಾಡಿದರೂ ಅದರಲ್ಲಿ ಖುಷಿ ಕಾಣಬೇಕೆನ್ನುವವನು ನಾನು. ನನಗೆ ನ್ಯಾಯಾಧೀಶನಾಗಿ ಆ ಕೆಲಸದಲ್ಲಿ ಖುಷಿಕಾಣುವ ನಂಬಿಕೆ ಇರಲಿಲ್ಲ ಹಾಗಾಗಿ ನಾನು ಅದಾಗಲು ಇಷ್ಟಪಡಲಿಲ್ಲ.
ಸಮಾಜಮುಖಿ- ಬಾರ್‍ಕೌನ್ಸಿಲ್ ಅಧ್ಯಕ್ಷರಾಗಿದ್ದು ಹೇಗೆ?
ಜ.ಪಾ.- ಅದೂ ಆಕಸ್ಮಿಕವೇ. ಹುರುಪಿನಿಂದ ಚುನಾವಣೆ ಸ್ಫರ್ಧಿಸಿದೆ. ಒಂದು, ಎರಡು, ಪ್ರತಿಬಾರಿ ನಮ್ಮ ಜಿಲ್ಲೆಯಲ್ಲಿ ಕಡಿಮೆ ಮತಗಳು ಬಂದವು. ನನಗೆ ಉತ್ತರಕರ್ನಾಟಕದ ಸಂಪರ್ಕ, ವಕೀಲರ ಸ್ನೇಹವಿತ್ತಲ್ಲ ಅಲ್ಲಲ್ಲಿಯ ಕಡಿಮೆ ಮತಗಳೇ ಸೇರಿ ನಿರಂತರ ನಾಲ್ಕು ಬಾರಿ ಬಾರ್ ಕೌನ್ಸಿಲ್ ಸದಸ್ಯನಾದೆ. ಅದೊಂಥರಾ ಟ್ರೇನಿಂಗ್. ಅಲ್ಲಿಯೂ ಕಲಿತೆ.ಹೊಸತನ, ಹೊಸಕನಸಿನ ಹಸಿವು ನಮ್ಮನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತೆ ಹೋಗಬೇಕಷ್ಟೆ.
ಸಮಾಜಮುಖಿ- ನಿಮ್ಮ ಮುಂದಿನ ನಡೆ?
ಜ.ಪಾ.- ಗೊತ್ತಿಲ್ಲ, ನಾವು ಅಂದುಕೊಂಡಂತೆ ಆಗಬಹುದು, ಆಗದೇ ಇರಬಹುದು. ಪ್ರಾರಂಭದಿಂದಲೂ ನಿಶ್ಚಿತವಲ್ಲದ ಮಾರ್ಗ ನನ್ನದು, ಬಾರ್ ಕೌನ್ಸಿಲ್ ಸದಸ್ಯತ್ವ, ಹಿರಿಯ ಶ್ರೇಣಿ ವಕೀಲನಾಗಿದ್ದು ಎಲ್ಲವೂ ಅಸಹಜ ಅನ್ನುವಂತೆಯೇ ಆಗಿಹೋಗಿವೆ. ಯಾವಾಗಲೂ ಹೀಗೆ ಆಗಬೇಕೆಂದೇನೂ ಇಲ್ಲ. ಬದುಕು ರೋಚಕವಾಗಿ ಕಂಡಿದ್ದೇ ಅದೃಷ್ಟ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *