ಹಸಿರುಕಣಿವೆಯ ಗ್ರೀನ್‍ವ್ಯಾಲಿ ಆರ್ಗ್ಯಾನಿಕ್ ಸ್ಫೈಸಿಸ್‍ನ ಸಾಗರೋತ್ತರ ಸಾಧನೆಯ ಕತೆ

ಸಿದ್ಧಾಪುರದ ಗ್ರೀನ್‍ವ್ಯಾಲಿ ಆರ್‍ಗ್ಯಾನಿಕ್ ಸ್ಫೈಸಿಸ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ.
ಕಳೆದ ದಶಕದಲ್ಲಿ ಸಣ್ಣ ಉದ್ದಿಮೆಯಾಗಿ ಪ್ರಾರಂಭವಾದ ಈ ಸಂಸ್ಥೆ ಒಂದು ದಶಕದ ಅವಧಿಯಲ್ಲಿ ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ರಾಜ್ಯಮಟ್ಟದ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ.
ಸಿದ್ಧಾಪುರದಂಥ ಹಿಂದುಳಿದ ತಾಲೂಕು, ಉತ್ತರ ಕನ್ನಡ ಜಿಲ್ಲೆಯಂಥ
ಹಿಂದುಳಿದ ಜಿಲ್ಲೆಯಲ್ಲಿ ಹುಟ್ಟಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂಥ ಅನುಕೂಲ ಈ ಪ್ರದೇಶದವರಿಗಿಲ್ಲ ಆದರೆ ಸಿದ್ಧಾಪುರದ ಗ್ರೀನ್‍ವ್ಯಾಲಿ ಸ್ಫೈಸಿಸ್ ಹಸಿರು ಕಣಿವೆಯಲ್ಲಿ ಕುಳಿತು ಅಂತರಾಷ್ಟ್ರೀಯ ನಕ್ಷೆಯಲ್ಲಿ ಮಿನುಗುತ್ತಿದೆ.
ಒಂದು ಕಾಲದಲ್ಲಿ ಕಾಳುಮೆಣಸಿನ ನಾಡು ಎನ್ನಲಾಗುತಿದ್ದ ಉತ್ತರ ಕನ್ನಡ ಕ್ರಮೇಣ ಆ ವಿಶೇಷಣಕ್ಕೆ ಅಪವಾದದಂತಿತ್ತು.
ಇಂಥ ಪ್ರತಿಕೂಲ ಸ್ಥಿತಿಯಲ್ಲಿ ಸಿದ್ಧಾಪುರದ ಕೆಲವು ಯುವಕರ ಪ್ರಯತ್ನ, ಕನಸಿನ ಸಂಸ್ಥೆಯಾಗಿ ಕಾರ್ಯಾರಂಭ ಮಾಡಿತು ಗ್ರೀನ್‍ವ್ಯಾಲಿ ಆರ್ಗ್ಯಾನಿಕ್ ಸ್ಫೈಸಿಸ್. ಅನ್ಯರಿಗಿರಲಿ ಸ್ವಯಂ ಈ ಸಂಸ್ಥೆಯ ಪ್ರಮುಖರಿಗೆ ಗ್ರೀನ್ ವ್ಯಾಲಿ ಸೃಷ್ಟಿಸಲಿರುವ ಜಾದು ಬಗ್ಗೆ ನಂಬಿಕೆ ಇರಲಿಲ್ಲ. ಆದರೆ ಶ್ರಮ, ಬದ್ಧತೆ, ಕನಸುಗಳೆಲ್ಲಾ ಮೇಳೈಸಿದ ಯುವಕರ ತಂಡ ಪ್ರಯೋಗ ಮಾಡುತ್ತಾ ಹೊರಟದ್ದೇ ಆರಂಭ ಒಂದೊಂದು ಪ್ರಯೋಗಗಳೂ ಫಲ ಕೊಟ್ಟು ಈಗ ಸಂಸ್ಥಾಪಕರ ನಿರೀಕ್ಷೆ ಮೀರಿ ಬೆಳೆದಿರುವ ಗ್ರೀನ್‍ವ್ಯಾಲಿ ಸ್ಫೈಸಿಸ್ ನೂರಾರು ಜನರಿಗೆ ಉದ್ಯೋಗ ನೀಡಿದ ಕೀರ್ತಿಗೆ ಪಾತ್ರವಾಗಿದೆ.
ಸಿದ್ಧಾಪುರದಲ್ಲಿ ಪ್ರಧಾನಕಛೇರಿ ಹೊಂದಿರುವ ಈ ಸಂಸ್ಥೆಯ ಕಛೇರಿಗಳು, ಪಾಲುದಾರ ಸಂಸ್ಥೆಗಳು ಉತ್ತರಕನ್ನಡದಿಂದ ಜಗತ್ತಿನಾದ್ಯಂತ ವಿಸ್ತರಿಸಿವೆ. ಈ ಪ್ರಗತಿ-ವಿಸ್ತಾರ ಗಮನಿಸಿದ ರಾಜ್ಯ ಸರ್ಕಾರ ಕೈಗಾರಿಕಾ ಇಲಾಖೆಯ ಮೂಲಕ 2014-15 ಮತ್ತು 17-18 ರಲ್ಲಿ ಎರಡುಬಾರಿ ರಾಜ್ಯಶ್ರೇಷ್ಠ ರಫ್ತು ಪ್ರಶಸ್ತಿ ನೀಡಿ ಗೌರವಿಸಿದೆ.
ಕೆಲವೇ ಸ್ನೇಹಿತರ ಗ್ರೀನ್‍ವ್ಯಾಲಿ, ಕಂಪನಿಯಾಗಿ,ರೈತಉತ್ಫಾದಕ ಕಂಪನಿಯಾಗಿ ರಾಜ್ಯಸರ್ಕಾರದ ಪ್ರಶಸ್ತಿ, ಗೌರವಕ್ಕೆ ಪಾತ್ರವಾಗಿರುವ ಸಂಸ್ಥೆ ಜಿಲ್ಲೆಯ ಕಾಳುಮೆಣಸು, ಏಲಕ್ಕಿ, ಅರಿಶಿಣ, ರಾಜ್ಯದ ಕಾಫಿ ಸೇರಿದಂತೆ ಅನೇಕ ಉತ್ಫನ್ನಗಳ ಸಂಸ್ಕರಣಾ ಘಟಕ ಮತ್ತು ಮಾರಾಟ ಸಂಸ್ಥೆಯಾಗಿ ಹೆಸರುಮಾಡುತ್ತಿದೆ.
ತಿತಿತಿ.suಡಿvಚಿm.ಟಿeಣ ನಲ್ಲಿ ಲಭ್ಯವಿರುವ ಈ ಸಂಸ್ಥೆಯ ಮಾಹಿತಿ ಅದರ ಆಳ, ವಿಸ್ತಾರಗಳನ್ನು ತಿಳಿಸುತ್ತಿದೆ.
ಈ ಸಂಸ್ಥೆಯ ಪ್ರಮುಖ ರಾಘವೇಂದ್ರ ಶಾಸ್ತ್ರಿ ಇಂಜಿನಿಯರಿಂಗ್ ಪದವಿಧರರಾಗಿದ್ದು ತಂದೆಯ ನಿಧನನಂತರ ಸಿದ್ಧಾಪುರದಲ್ಲಿರಬೇಕಾದ ಅನಿವಾರ್ಯತೆಯನ್ನು ಅವಕಾಶವನ್ನಾಗಿ ಬಳಸಿಕೊಂಡ ಶಾಸ್ತ್ರಿ ತಮ್ಮ ನಾಚಿಕೆ ಸ್ವಭಾವದ ಒಳಗೆ ಇರುವ ಕನಸುಗಾರ ಎಂಥಾ ಪ್ರಚಂಡ ಎಂಬುದನ್ನು ಈ ಸಂಸ್ಥೆಯ ಸಾಧನೆಯೇ ಹೇಳುತ್ತದೆ.
ಇವರೊಂದಿಗಿರುವ ಇನ್ನೊಬ್ಬ ಸಹವರ್ತಿ ಶಿರಸಿ ಟಿ.ಎಸ್.ಎಸ್. ನ ನಿರ್ದೇಶಕ ರಾಮಕೃಷ್ಣ ಹೆಗಡೆ ಅಳಗೋಡು ಇವರೊಂದಿಗಿರುವ ಅನೇಕ ಸಮಾನಮನಸ್ಕರ ತಂಡ ಸಿದ್ಧಾಪುರದಿಂದಲೂ ಅಂತರಾಷ್ಟ್ರೀಯ ವ್ಯಾಪಾರ, ವ್ಯವಹಾರ ಮಾಡಬಹುದೆಂಬುದನ್ನು ತೋರಿಸಿದ ಛಲಗಾರರ ಗುಂಪು. ಜಗತ್ತೇ ಹಳ್ಳಿಯಂತಾಗಿರುವ ಇಂದಿನ ವಾತಾವರಣದಲ್ಲಿ ಹಳ್ಳಿಯನ್ನು ಜಗತ್ತಿನ ಸಂಪರ್ಕಕ್ಕೆ ಜೋಡಿಸುವ ಮೂಲಕ ಸಿದ್ಧಾಪುರದ ಸಾಂಬಾರು ಉತ್ಫನ್ನಗಳ ಘಮವನ್ನು ಜಗತ್ತಿಗೆ ಸ್ಫುರಿಸಿದೆ.ಸಾಗರವನ್ನು ನೀನಾಸಂ ಮೂಲಕ ಜಗತ್ತಿಗೆ ಪರಿಚಯಿಸಿದಂತೆ ಸಾಂಬಾರು ಉತ್ಫನ್ನಗಳ ಮೂಲಕ ಸಿದ್ಧಾಪುರ, ಉತ್ತರಕನ್ನಡವನ್ನು ಜಗತ್ತಿನಸಾಂಬಾರು ಉತ್ಫನ್ನಗಳ ಹೆಬ್ಬಾಗಿಲಿಗೆ ತಂದು ನಿಲ್ಲಿಸಿರುವ ಗ್ರೀನ್‍ವ್ಯಾಲಿ ಸ್ಫೈಸಿಸ್ ನ ಸರ್ವಂ ತಂಡಕ್ಕೆ ಸಮಾಜಮುಖಿ ಸಲಾಂ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *