ಆಲಳ್ಳಿ ಅಂಗನವಾಡಿ ಬಳಿ ಬಂದ ಕಾಳಿಂಗಸರ್ಪ

ಸಿದ್ಧಾಪುರ ತಾಲೂಕಿನ ಇಟಗಿ ಆಲಳ್ಳಿಯ ಅಂಗನವಾಡಿ ಕಟ್ಟಡದ ಬಳಿ ಮುಸ್ಸಂಜೆವೇಳೆ ಬಂದಿದ್ದ 10 ಅಡಿ ಕಾಳಿಂಗ ಸರ್ಪವೊಂದನ್ನು ಹಿಡಿದು ಕಾಡಿಗೆ ಬಿಡಲಾಗಿದೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮನೋಹರ್ ಶಿರಸಿ ಈ ಕಾಳಿಂಗವನ್ನು ಕತ್ತಲೆಕಾನಿಗೆ ಬಿಟ್ಟಿದ್ದಾರೆ. ಈ ಕಾಳಿಂಗ ಕೆರೆಹಾವೊಂದನ್ನು ನುಂಗುತಿದ್ದಾಗ ಸೆರೆಯಾಗಿತ್ತು.

ಶಿಕ್ಷಕರು ಮತ್ತು ಪೋಷಕರಿಗೆ ಕೈಪಿಡಿಯಾಗಬಲ್ಲ ಅತ್ಯುತ್ತಮ ಪುಸ್ತಕ, ತೊತ್ತೋಚಾನ್ – ಡಿ. ರಾಮಪ್ಪ ಸಿರಿವಂತೆ, ಅಂಕೋಲಾ

ನಮ್ಮ ಶಾಲೆಗಳ ಇಂದಿನ ಸ್ಥಿತಿಗತಿ, ಮಕ್ಕಳ ಇಂದಿನ ಶಿಕ್ಷಣ ಕ್ರಮ, ಶಿಕ್ಷಣ ಸಂಸ್ಥೆಗಳ ಮತ್ತು ಶಿಕ್ಷಕರ ಧೋರಣೆಯ ಬಗ್ಗೆ, ನಮ್ಮ ಪೋಷಕರ ವಿಸ್ಮøತಿಯ ಬಗ್ಗೆ ಆತಂಕ ಮತ್ತು ಬೇಸರದಿಂದಿದ್ದಾಗ ತೆತ್ಸುಕೊ ಕುರೊಯನಾಗಿಯ ತೊತ್ತೋಚಾನ್”ಪುಸ್ತಕ ಸಿಕ್ಕಿತು.
ಈ ತೆತ್ಸುಕೊ ಕುರೊಯನಾಗಿ ಜಪಾನಿನವಳು ಮತ್ತು ಜಪಾನಿಯರು ಅಭಿಮಾನದಿಂದ ತುಂಬಾ ಮೆಚ್ಚಿದ ಪ್ರಖ್ಯಾತ ಹೆಸರು. ಜಪಾನಿ ಟೆಲಿವಿಷನ್‍ನ
ಅನಭಿಶಕ್ತ ರಾಣಿ -–14 ಬಾರಿ ಫೆವರಿಟ್ ಟೆಲಿವಿಷನ್ ಪರ್ಸನಾಲಿಟಿ ಪ್ರಶಸ್ತಿ ಪಡೆದವಳು!
ಒಪೇರಾ ಹಾಡುಗಾರ್ತಿ, ನಟಿ, ಯುನಿಸೆಫ್ ಸೌಹಾರ್ದ ರಾಯಭಾರಿ ಮತ್ತು ಲೇಖಕಿ! ಚಿಕ್ಕವಳಿದ್ದಾಗ ಕೊಂಚ ತುಂಟಿಯಾಗಿದ್ದ ಈಕೆಯನ್ನು ಎಲ್ಲಾ ಶಾಲೆಯವರೂ ಹೊರಗೆ ಹಾಕಿದ್ದರು. ಕೂಲಿಮಾಡಿ ಬದುಕು ಕಟ್ಟಿಕೊಳ್ಳಲು ಹಾಗು ಮಗಳ ಭವಿಷ್ಯ ರೂಪಿಸಲು ಪ್ರಯತ್ನಿಸುತ್ತಿದ್ದ ಅಮ್ಮ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಅಲೆದಲೆದು ದಣಿದು ಕೊನೆಗೆ ಒಂದು ತೊಮೋಯ್ ಗಾಕುನ್(ಪ್ರಾಥಮಿಕ ಶಾಲೆ)ಗೆ ಬರುತ್ತಾಳೆ.
ಅದು, ಪ್ರಖ್ಯಾತ ಶಿಕ್ಷಣತಜ್ಞ, ಸೆಸಾಕು ಕೊಬಾಯೆಷಿಯವರು ನಡೆಸುತ್ತಿದ್ದ ಶಾಲೆ ಎಂದು ಆಕೆಗೇನೂ ತಿಳಿದಿರಲಿಲ್ಲ; ತಿಳಿಯುವಷ್ಟು ವಿದ್ಯಾವಂತಳೂ ಆಕೆ ಆಗಿರಲಿಲ್ಲ. ಮಕ್ಕಳ ಪ್ರಕೃತಿಜನ್ಯ ಸಾಮಥ್ರ್ಯವನ್ನು ಅರಿತು ಅದನ್ನೇ ಉದ್ಧೀಪಿಸುವ ಪರಿಸರ ನಿರ್ಮಾಣ ಮಾಡುತ್ತಿದ್ದ ಸೆಸಾಕು ಕೊಬಾಯೆಷಿಯವರ ಪ್ರಯೋಗಗಳು ಇಂದಿಗೂ ನಮ್ಮ ಪೋಷಕರಿಗೆ ಮತ್ತು ಶಿಕ್ಷಕರಿಗೆ ಪ್ರಸ್ತುತ. ತನ್ನ ಬಾಲ್ಯಶಿಕ್ಷಣದ ಅನುಭವಗಳನ್ನು ನೆನಪುಮಾಡಿ ತೊತ್ತೋಚಾನ್‍ನಲ್ಲಿ (ಕಿಟಕಿಯಲ್ಲಿ ಪುಟ್ಟ ಬಾಲೆ) ತೆತ್ಸುಕೊ ಕುರೊಯನಾಗಿ ಬರೆದಿದ್ದಾಳೆ. ಅದನ್ನು ಆಕೆಯ ಮಾತಿನಲ್ಲೇ ಸಂಕ್ಷಿಪ್ತವಾಗಿ ಕೇಳಿ:
ಕಿಟಕಿಯಲ್ಲಿ ಪುಟ್ಟ ಬಾಲೆ –

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *