u turn uttarkumara-ಶಿಸ್ತುಕ್ರಮ,ವಿರೋಧಕ್ಕೆ ಹೆದರಿ ಉಲ್ಟಾ ಹೊಡೆದ ಉತ್ತರಕುಮಾರ!

ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಗಾಂಧಿ ಅವಹೇಳನ ಮಾಡಿ ಸಾರ್ವಜನಿಕರಿಂದ ಚೀ..ತೂ… ಎಂದು ಉಗಿಸಿಕೊಂಡ ಮೇಲೆ ಇಂದು ತಾನು ಗಾಂಧಿ ಹೆಸರು ಹೇಳಿಲ್ಲ ಎನ್ನುವ ಮೂಲಕ ತನ್ನ ಮಾತು, ನಡವಳಿಕೆಗೆ ಯಾವ ಮಹತ್ವವಿದೆ ಎಂಬುದನ್ನು ಸಾಬೀತುಮಾಡಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ದುಷ್ಟಪರಿವಾರದ ಲಾಗಾಯ್ತಿನ ನಡವಳಿಕೆಯಂತೆ ಅನಂತಕುಮಾರ ಸ್ವಾತಂತ್ರ್ಯ ಹೋರಾಟ, ಗಾಂಧಿ ಮಹತ್ವವನ್ನು ಲೇವಡಿ ಮಾಡಿದ್ದರು. ಇಂಥ ಮತಾಂಧ ವಿವೇಕಶೂನ್ಯನ ಅವಿವೇಕದ ಮಾತು ನಡತೆಗೆ ಸಾರ್ವಜನಿಕ ವಲಯ,ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ವಿರೋಧಗಳ ಹಿನ್ನೆಲೆಯಲ್ಲಿ ತಾನು ಗಾಂಧಿ ಹೆಸರು ಹೇಳಿರಲಿಲ್ಲ ಎನ್ನುವ ಮೂಲಕ ಅನಂತಕುಮಾರ ಹೆಗಡೆ ಯು ಟರ್ನ್ ಹೊಡೆಯುವ ಮೂಲಕ ತಾನು ಉತ್ತರಕುಮಾರ ಎಂದು ಪ್ರತಿಬಿಂಬಿಸಿದ್ದಾರೆ.
ಅನಂತಕುಮಾರ ಹೆಗಡೆ ಸಂಸದರ ನಿಧಿ ಬಳಸದೆ, ಕ್ಷೇತ್ರದ ಕೆಲಸ ಮಾಡದೆ ಬೇಜವಾಬ್ಧಾರಿ ಜನಪ್ರತಿನಿಧಿಯೆಂದು ಆರೋಪಿಸಿಕೊಂಡಿರುವ ಮನುಷ್ಯ. ಕೆಲಸಮಾಡದೆ, ಜನಹಿತದ ಪರವಾಗಿ ವರ್ತಿಸದೆ ಅವಿವೇಕದ ಮಾತು, ನಡತೆಗಳಿಂದ ಕುಪ್ರಸಿದ್ಧನಾಗಿರುವ ಈ ಜನಪ್ರತಿನಿಧಿ ತನ್ನ ಅತಿರೇಕ,ಅವಿವೇಕದ ಮಾತು, ಮತಾಂಧತೆಯ ಹೀನ ನಡತೆಗಳಿಂದ ಪಕ್ಷ,ರಾಜಕೀಯ ವಲಯದಲ್ಲೂ ತಿರಸ್ಕರಿಸಲ್ಪಟ್ಟ ವ್ಯಕ್ತಿ.
ಹಿಂದಿನ ಎನ್.ಡಿ.ಎ. ಸರ್ಕಾರದಲ್ಲಿ ಸಚಿವನಾಗಿದ್ದ ಅನಂತಕುಮಾರ ಹೆಗಡೆ ರಾಜ್ಯದಲ್ಲಿ ಪ್ರಚಾರ ಮಾಡುವುದು ಬೇಡ, ಚುನಾವಣಾ ಪ್ರಚಾರಕ್ಕೆ ಅವರನ್ನು ಕರೆಯಲು ತಮ್ಮ ವಿರೋಧವಿದೆ ಎಂದು ಬಿ.ಜೆ.ಪಿ. ಮುಖಂಡರೇ ಹೈಕಮಾಂಡ್ ಗೆ ದೂರು ನೀಡಿದ್ದರು.
ನಂತರ ಚುನಾವಣೆ ಮುಗಿದು ಅನಂತಕುಮಾರರಿಗೆ ಸಚಿವಸ್ಥಾನದ ಅವಕಾಶ ತಪ್ಪಿಸಿದ್ದು ಅವರ ಅವಿವೇಕದ ನಾಲಿಗೆಯೆ.
ಕೆಲವು ದಿವಸ ಸುಮ್ಮನಿರುವುದು, ಮತಾಂಧರು, ಬ್ರಾಹ್ಮಣರ ಸಂಘಟನೆ, ಸಂಘಗಳಲ್ಲಿ ಹುಚ್ಚನಂತೆ ವರ್ತಿಸುವುದು ಮಾಡುವ ಈ ಸಂಸದ ಬುದ್ಧಿನೆಟ್ಟಗಿಲ್ಲದವನು ಎನ್ನುವುದಕ್ಕೆ 25 ವರ್ಷಗಳ ನೂರಾರು ದೃಷ್ಟಾಂತಗಳಿವೆ. ಇಂಥ ಮತಾಂಧ ವೈದಿಕ ಈಗ ಮತ್ತೆ ತನ್ನ ಹಿಂದಿನ ಚಾಳಿಯಂತೆ ಅವಿವೇಕದ ಮಾತನಾಡಿ,ಕ್ಷಮೆ ಕೇಳಿದ್ದಾರೆ. ಇಂಥ ಅವಿವೇಕದ ಮಾತು,ಅತಿರೇಕ, ಅನಾಚಾರದ ನಡವಳಿಕೆಗಳಿಂದ ಉತ್ತರಕನ್ನಡದ ಮಾನವನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಕಳೆದ ಅನಂತಹೆಗಡೆ ವಿರುದ್ಧ ಜಿಲ್ಲೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕುತಂತ್ರಿಯ ಪರವಾಗಿ ಶೂದ್ರ ಸಂಘಿ ಹೇಸಿಗೆಗಳು ಬೊಗಳುತ್ತಿರುವುದು ಗುಲಾಮಿತನದ ಅತಿರೇಕ ಎನಿಸಿಕೊಳ್ಳುತ್ತಿದೆ.

ಅನಂತ ವಿರೋಧ,
ವ್ಯಾಪಕ ಖಂಡನೆ
ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧಿ ನಿಂದನೆ ಮಾಡಿದ ಸಂಸದ ಅನಂತಕುಮಾರ ಹೆಗಡೆ ಮತಾಂಧ ನಡವಳಿಕೆ ವಿರೋಧಿಸಿ ತಾಲೂಕು, ಜಿಲ್ಲೆ, ರಾಜ್ಯದಿಂದ ರಾಷ್ಟ್ರಮಟ್ಟದವರೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಶಿರಸಿಯಲ್ಲಿ ಪ್ರತಿಭಟನೆ ಮಾಡಿದ ಜಿಲ್ಲಾ ಕಾಂಗ್ರೆಸ್ ನಗರದ ಮಾರುಕಟ್ಟೆಯ ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಧರಣಿ ನಡೆಸಿದೆ.ಅನಂತಕುಮಾರ ಹೆಗಡೆಯವರನ್ನು ಸಂಸದ ಸ್ಥಾನದಿಂದ ವಜಾಮಾಡಲು ಆಗ್ರಹಿಸಿ ಲೋಕಸಭೆಯ ಸ್ಪೀಕರ್ ರಿಗೆ ಮನವಿ ಮಾಡಿದ್ದರೆ. ಸ್ವಯಂ ಬಿ.ಜೆ.ಪಿ. ಪಕ್ಷದ ಪ್ರಮುಖರೇ ಈ ಅವಿವೇಕಿಯ ಬಾಯಿ ಮುಚ್ಚಿಸುವಂತೆ ತಮ್ಮ ಪಕ್ಷದ ವರಿಷ್ಠರನ್ನು ಆಗ್ರಹಿಸಿದ್ದಾರೆ.

ಅನಂತ ಹೆಗಡೆಗೆ ಕ್ಷಮೆಯಾಚಿಸಲು ಪಕ್ಷದ ಆದೇಶ
ಉತ್ತರಕನ್ನಡದ ಸಂಸದ ಮಾಜಿ ಸಚಿವ ಅನಂತಕುಮಾರ ಹೆಗಡೆ ಉಸುರವಳ್ಳಿಯಂತೆ ವರ್ತಿಸುವುದು, ಮಾತನಾಡುವುದು ಅವರ ಲಾಗಾಯ್ತಿನ ಚಾಳಿ.
ಇದೇ ಮನುಷ್ಯ ಕೆಲವು ತಿಂಗಳುಗಳ ಹಿಂದೆ ಗಾಂಧಿ ಪರವಾಗಿ ಬಿ.ಜೆ.ಪಿ. ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಪರವಾಗಿ ಮಾತನಾಡಿ ನಾಟಕಮಾಡಿದ.್ದ
ಹೀಗೆ ಗಾಂಧಿ ಮಹಾತ್ಮನನ್ನು ರಾಜಕೀಯ ಲಾಭಕ್ಕಾಗಿ ಇವರು ಹೊಗಳಿದ ಹಿಂದೆಮುಂದೆ ಅವರು ಗಾಂಧಿಯನ್ನು ತೆಗಳಿದ ಸಂದರ್ಭಗಳ್ಯಾವುವು ಎಂಬುದನ್ನು ಅರಿಯಬೇಕು.
ಬ್ರಾಹ್ಮಣರ ಸಮ್ಮೇಳನ,ಬ್ರಾಹ್ಮಣರು, ಬ್ರಾಹ್ಮಣ್ಯದ ಪೋಶಕ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಮತಿವಿಕಲನಂತೆ ಅರಚಿ ತನ್ನ ಬ್ರಾಹ್ಮಣಿಕೆಯ ಹುಚ್ಚುತನ ಪ್ರದರ್ಶಿಸುವ ಈ ವೈದಿಕವೈರಸ್ ಹಿಂದುಳಿದವರು, ದಲಿತರಾದ ಭಾರತೀಯ ಬಹುಸಂಖ್ಯಾತರೆದುರು ಮತಾಂಧತೆಯ ಹಿಂದುತ್ವದ ಭಾಷಣ ಮಾಡುತ್ತಾರೆ.
ಉತ್ತರಕನ್ನಡದಲ್ಲಿ ಮತಾಂಧವೈದಿಕತೆಯನ್ನು ಬೆಂಬಲಿಸುವ ಕುತಂತ್ರಿಗಳನ್ನು ಬಿಟ್ಟರೆ ಈ ಉತ್ತರಕುಮಾರನ ಅವಾಂತರಗಳು, ಹುಚ್ಚುತನದ ಹೇಳಿಕೆಗಳನ್ನು ಉಪೇಕ್ಷಿಸುವವರೆ ಹೆಚ್ಚು, ಈ ಉಪೇಕ್ಷೆಯಲ್ಲಿ ಕೆಲವು ಬಾರಿ ಈ ವಿವೇಕಶೂನ್ಯನನ್ನು ನಿರ್ಲಕ್ಷಿಸುವುದಿರಬಹುದು ಆದರೆ ಅನೇಕಬಾರಿ ಈತನ ಹುಚ್ಚುತನಗಳನ್ನು ಉಪೇಕ್ಷಿಸಿದಂತೆ ಮಾಡಿ ಈತನ ಮಂಗಾಟಕ್ಕೆ ಪರೋಕ್ಷವಾಗಿ ಬೆಂಬಲಿಸುವ ಕುತಂತ್ರಗಳೂ ನಡೆಯುವುದುಂಟು.
ಅನಂತಕುಮಾರ ಹೆಗಡೆ ಕಾಂಗ್ರೆಸ್‍ನಿಂದಿಸುವುದು, ಜಾತ್ಯಾತೀತರು, ಪ್ರಗತಿಪರರು, ಧರ್ಮನಿರಪೇಕ್ಷರನ್ನು ದೂಷಿಸುವುದು ಸರ್ವೇಸಾಮಾನ್ಯ. ಆದರೆ ಇವರ ನಡೆ ನುಡಿಗಳನ್ನು ನೋಡಿದರೆ ಇವರ ಆಶಾಢಭೂತಿತನ, ಕಪಟತನ ಅರ್ಥವಾಗುತ್ತದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *