ಕೆರೆಕೋಣದಲ್ಲಿ ಸಹಯಾನ ಸಾಹಿತ್ಯೋತ್ಸವ!

ಮಲೆನಾಡಿನಲ್ಲಿ ಮೇಸ್ಟ್ರಾಗಿದ್ದ ಆರ್.ವಿ.ಭಂಡಾರಿಯವರು ತಣ್ಣಗಿರದೆ, ಸದಾ ಸಮಾನತೆಗಾಗಿ ತಲ್ಲಣಿಸಿದವರು. ಬಂಡಾಯವೆಂಬ ಬಂಡಿಯ ನೊಗಹೊತ್ತು, ಬೂದಿಮುಚ್ಚಿದ ಕೆಂಡದಂತಿರುವ ಮೌಢ್ಯಗಳ ಮುಖವಾಡ ಕಳಚಲು, ಸಮಾಜಮುಖಿಯಾಗಿ ದುಡಿದು ಹಣ್ಣಾಗಿ ಮಣ್ಣಾದವರು. ಇಂದು ಭೌತಿಕವಾಗಿ ಆರ್.ವಿಯವರು ನಮ್ಮೊಂದಿಗಿರದಿದ್ದರೂ, ಅವರ ಚಿಂತನೆಗಳನ್ನು ‘ಸಹಯಾನ’ ಸಂಸ್ಥೆ ಕಲೆ, ಸಾಹಿತ್ಯ, ಸಂವಾದ, ಕಮ್ಮಟ, ಗೋಷ್ಠಿ, ನಾಟಕ, ನೃತ್ಯ, ಉಪನ್ಯಾಸ, ಕರಪತ್ರ, ಪುಸ್ತಕ ಹೀಗೆ ಹಲವು ರೀತಿಯಲ್ಲಿ ಆರ್.ವಿಯವರ ಆಶಯಗಳನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸುತ್ತಿದೆ.
ವರ್ಗ ವರ್ಣ ವೈಷಮ್ಯಗಳೆಲ್ಲವ ಅಳಿಸಿ, ಎಳೆಯರೆದೆಯಲಿ ಪ್ರೀತಿಯ ಬೀಜ ಬಿತ್ತಿ, ಬಹುತ್ವದ ಬೆಳೆ ಬೆಳೆಯಬೆಕೆಂಬ ಆರ್.ವಿಯವರ ಕನಸಿನಂತೆ, ಸಹಯಾನ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಸಾಹಿತ್ಯೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ನಾಡಿನ ಪ್ರಗತಿಪರ ಚಿಂತಕರು, ನ್ಯಾಯಮೂರ್ತಿಗಳು, ಸಾಹಿತಿಗಳು, ಕವಿಗಳು, ಹೋರಾಟಗಾರರು, ಕಲಾವಿದರು ಈ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡಿರುವುದನ್ನು ಅವಲೋಕಿಸಿದಾಗ ‘ಸಹಯಾನ’ದ ಒಲವು ನಿಲುವು ಗಟ್ಟಿತನ ಎಲ್ಲವೂ ಅರ್ಥವಾಗುತ್ತವೆ.
ಇಂದು ಬಹುಪಾಲು ಸಾಹಿತ್ಯೋತ್ಸವಗಳು ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿರುವುದು ಗೊತ್ತಿರುವ ವಿಚಾರ, ಆದರೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಿಂದ ಹನ್ನೊಂದು ಕಿ.ಮಿ ದೂರದಲ್ಲಿರುವ ಕೆರೆಕೋಣ ಅನ್ನೊ ಪುಟ್ಟ ಹಳ್ಳಿಯ ತೋಟದ ಮನೆಯಲಿ, ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಸಹಯಾನ ಸಾಹಿತ್ಯೋತ್ಸವ ನಡೆಯಲಿದೆ. ನಗರಮುಖಿಯಾಗುತ್ತಿರುವ ಹೊಸತಲೆಮಾರನ್ನು ಸಾಹಿತ್ಯದ ಮೂಲಕವೇ ನೆಲಮುಖಿಯಾಗಿ ಆಲೋಚನೆಗೆಹಚ್ಚುವ ಇಂಥ ಉತ್ಸವಗಳ ಸಂಖ್ಯೆ ಹೆಚ್ಚಬೇಕಿದೆ.
ಈ ಸಾರಿಯ ಸಾಹಿತ್ಯೋತ್ಸವ ಸಿನಿಮಾ ಕುರಿತು ನಡೆಯುತ್ತಿರುವುದು ವಿಶೇಷ. ಸಧ್ಯದ ಸಾಮಾಜಿಕ ಸಂಕಟ, ಬಿಕ್ಕಟ್ಟು, ಪ್ರಭುತ್ವ ಪರೋಕ್ಷವಾಗಿ ಒಳಸುಳಿಗೆ ತಳ್ಳುತ್ತಿರುವುದು, ಹೆಚ್ಚುತ್ತಿರುವ ಬೃಷ್ಟಾಚಾರ, ನಿರುದ್ಯೋಗ, ವೈರಸ್ ಮುಂತಾದ ಸಂದಿಗ್ಧ ಸ್ಥಿತಿಯಲ್ಲಿ ಸಿನಿಮಾ ಜಗತ್ತಿನ ಜವಬ್ದಾರಿ ಹೆಗಿದೆ? ಹೆಗಿರಬೇಕಿತ್ತು? ವರ್ತಮಾನದ ತಲ್ಲಣಗಳಿಗೆ ಚಿತ್ರರಂಗ ಮುಖಾಮುಖಿಯಾಗುತ್ತಿದೆಯೇ? ಹೊಸತಲೆಮಾರಿನ ನಿರೀಕ್ಷೆ, ನಿರುತ್ಸಾಹ ಎಲ್ಲ ಒಳಹೊರ ಮಗ್ಗುಲಗಳ ಕುರಿತು ಒಂದುದಿನ ಚಿಂತನ ಮಂಥನ ಸಂವಾದ ಮತ್ತು ಆಯ್ದ ಚಿತ್ರಗಳ ವೀಕ್ಷಣೆ ನಡೆಯಲಿದೆ.
ಒಟ್ಟಾರೆ ಆರ್.ವಿ ಭಂಡಾರಿಯವರ ಸದಾಶಯದಂತೆ ‘ಸಹಯಾನ ಸಂಸ್ಥೆ’ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಿಷ್ಟು ಸೃಜನಶೀಲವಾಗಿ, ಜನಪರವಾಗಿ, ಸಾಂಸ್ಕøತಿಕವಾಗಿ, ಸಾಹಿತ್ಯಿಕವಾಗಿ ಮೌನ ಚಳವಳಿಯನ್ನು ಹುಟ್ಟುಹಾಕಿದೆ. ಸಂಸ್ಥೆ ಈ ಸಾರಿ ದಶಮಾನೋತ್ಸವದ ನೆನಪಿನಲೆಯಲ್ಲಿ ಸಿನಿಮಾ ಸಾಹಿತ್ಯೋತ್ಸವ ನಡೆಸುತ್ತಿರುವುದು ಖುಷಿಯ ಸಂಗತಿ. ಬರಗೂರು ರಾಮಚಂದ್ರಪ್ಪ, ವಿಷ್ಣು ನಾಯ್ಕ, ಶಾಂತರಾಮ ನಾಯಕ ಹಿಚ್ಕಡ, ಮಾಸ್ತಿಗೌಡ ಮುಂತಾದವರೇ ಸಹಯಾನದ ರಥ ಎಳೆಯುತ್ತಿದ್ದಾರೆಂದು ಸಂಸ್ಥೆಯ ಕಾರ್ಯದರ್ಶಿ ವಿಠ್ಠಲ ಭಂಡಾರಿ ನೆನೆಯುತ್ತಾರೆ.
-ಕೆ.ಬಿ.ವೀರಲಿಂಗನಗೌಡ್ರ.
ಸಿದ್ದಾಪುರ-581355. ಉ.ಕ ಜಿಲ್ಲೆ. ದೂ-9448186099 (09 ಫೆಬ್ರುವರಿ 2020ರಂದು ಕೆರೆಕೋಣದಲ್ಲಿ ನಡೆಯುವ ಸಾಹಿತ್ಯೋತ್ಸವ ನಿಮಿತ್ತ ಈ ಲೇಖನ)

ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿಶಾಲೆಗಳಲ್ಲಿ ಕಲಿಯಲು ಆದೇಶವಾಗಬೇಕು
ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದಬೇಕೆಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಬೇಕು. ಇಂಗ್ಲೀಷ್ ಒಂದು ಭಾಷೆಯಾಗಿ ಕಲಿಕಾಪಠ್ಯವಾಗಬೇಕೆ ಹೊರತು ಇಂಗ್ಲೀಷ್ ಮಾಧ್ಯಮದಲ್ಲಿ ಓದುವುದರಿಂದ ಮಕ್ಕಳು ತ್ರಿಶಂಕು ಸ್ಥಿತಿಗೆ ತಲುಪಿದಂತಾಗುತ್ತದೆ. ಈ ಬಗ್ಗೆ ಪಾಲಕರು ಸಹಕರಿಸಬೇಕು ಎಂದು ಬಂಡಾಯ ಸಾಹಿತಿ ಮತ್ತು ಪಂಪ ಪ್ರಶಸ್ತಿ ಪುರಸ್ಕøತ ಕವಿ ಡಾ.ಸಿದ್ಧಲಿಂಗಯ್ಯ ಹೇಳಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *