ಕದಂಬವಂಶ ಈಡಿಗರದ್ದು,ಧರ್ಮ-ಧರ್ಮಗಳ ನಡುವೆ ದ್ವೇಶ ಬಿತ್ತುವವನೇ ದೇಶದ್ರೋಹಿ -ಮಹೇಂದ್ರಕುಮಾರ

ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳ ಕತ್ತು ಹಿಸುಕಿ ಮತಾಂಧತೆ, ಧರ್ಮಾಧಾರಿತ ಸರ್ವಾಧಿಕಾರವನ್ನು ಜಾರಿಮಾಡುವ ಹುನ್ನಾರ ಪಟ್ಟಭದ್ರರ ಗುರಿಯಾಗಿದ್ದು ಇಂಥವರಿಂದ ದೇಶವನ್ನು ರಕ್ಷಿಸುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಹಿರಿಯ ಸಾಹಿತಿ ಮುಕುಂದರಾಜ್ ಹೇಳಿದರು. ಶಿರಸಿಯಲ್ಲಿ ಸೌಹಾರ್ದ ವೇದಿಕೆಯಿಂದ ನಡೆದ ನಾವು ಮತ್ತು ನಮ್ಮ ಸಂವಿಧಾನ ಸಂವಾದ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು ಬೌದ್ಧಧರ್ಮ,ಲಿಂಗಾಯತ ಧರ್ಮ,ವಿಶ್ವಧರ್ಮವನ್ನು ಕೊಟ್ಟ ಕನ್ನಡ ಸಾಹಿತ್ಯ ರಾಷ್ಟ್ರದ ಶ್ರೇಷ್ಠ ಸಾಹಿತ್ಯ, ಇಂಥ ಸಾಹಿತ್ಯ ರಚಿಸಿದಸಾಹಿತಿಗಳು, ಬುದ್ಧಿಜೀವಿಗಳನ್ನು ಬುದ್ಧಿಜೀವಿಗಳು, ಲದ್ದಿಜೀವಿಗಳು,ಗಂಜಿಗಿರಾಕಿಗಳೆಂದು ಲೇವಡಿಮಾಡುವ ಬೌದ್ಧಿಕ ದಾರಿದ್ರ್ಯದ ಮತಾಂಧರನ್ನು ಬೆಂಬಲಿಸಿ, ಚುನಾಯಿಸುವ ಮೂಲಕ ನಾವು ನಮ್ಮ ನಾಡು,ನುಡಿ,ಸಾಹಿತ್ಯಕ್ಕೆ ಅಪಮಾನಮಾಡುತಿದ್ದೇವೆ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಸುಧೀರ್ ಮೊರಳ್ಳಿ ಮಾತನಾಡಿ ಭಾರತ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ ಎಲ್ಲರಿಗಾಗಿ ಎಲ್ಲರನ್ನೂಒಳಗೊಳ್ಳುವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯಿದೆ, ಎನ್.ಆರ್.ಸಿ. ಎನ್.ಆರ್.ಪಿ.ಗುಮ್ಮಗಳನ್ನು ತೋರಿಸುತ್ತಿರುವ ಸರ್ಕಾರ ತನ್ನ ವಿಫಲತೆ, ಅರಾಜಕತೆಯ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಈ ಕಾಯಿದೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.

ವೈದಿಕತೆಯ ಮೂಲಕ ಭಾರತೀಯ ಬಹುಸಂಖ್ಯಾತರನ್ನು ಮೂರ್ಖರನ್ನಾಗಿಸಲಾಗುತ್ತಿದೆ. ಭಾರತೀಯ ಮೂಲನಿವಾಸಿಗಳು ಕೋಮುವಾದಿಗಳಿಂದ ದೇಶಪ್ರೇಮದ ಪಾಠ ಕಲಿಯುವ ದುಸ್ಥಿತಿ ನಮಗಿಲ್ಲ ಎಂದು ವಿವರಿಸಿದ ನಮ್ಮ ಧ್ವನಿ ಸಂಸ್ಥಾಪಕ ಮಹೇಂದ್ರಕುಮಾರ ಕೊಪ್ಪ ನಮ್ಮದು ದೇಶ,ಸಮಾಜದ ಪರವಾದ ಶಕ್ತಿ-ಹೋರಾಟ ಎಂದರು.
ದಲಿತರು,ಹಿಂದುಳಿದವರ ಅವಿವೇಕದಿಂದಲೇ ಉತ್ತರಕನ್ನಡದಲ್ಲಿ ಕೋಮುವಾದಿಗಳ ಅಟ್ಟಹಾಸ ನಡೆಯುತ್ತಿದೆ. ಇಂಥ ಷಡ್ಯಂತ್ರಗಳ ಮೂಲಕವೇ ದೇಶವನ್ನು ಭಯಾನಕಗೊಳಿಸಿ ಸರ್ವಾಧಿಕಾರದ ಮೂಲಕ ಬಹುತ್ವ ಹಾಳುಮಾಡುವ ಮತೀಯವಾದಿಗಳ ಕುತಂತ್ರ ದೇಶಕ್ಕೆ ಮಾರಕ
-ಮಹೇಂದ್ರಕುಮಾರ
ಉತ್ತರಕನ್ನಡದಲ್ಲಿಜಾತಿ-ಧರ್ಮ,ಹಿಂದುತ್ವದ ಹೆಸರಲ್ಲಿ 25 ವರ್ಷಗಳಿಂದ ಆಡಳಿತದಲ್ಲಿರುವ ಹೆಗಡೆಗಳು ತಮ್ಮ ಜವಾಬ್ಧಾರಿ ನಿರ್ವಹಿಸಿಲ್ಲ. ಅಪದ್ಧಮಾತನಾಡುವ ಅನಂತಕುಮಾರ ಹೆಗಡೆ, ಅಪ್ರಬುದ್ಧ ನಡವಳಿಕೆಗಳ ಮೂಲಕ ವಿಧಾನಸಭಾಧ್ಯಕ್ಷತೆಯ ಘನತೆಗೆ ಕುಂದು ತಂದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ನೆಲಕ್ಕೆ ಅವಮಾನ ಮಾಡುತಿದ್ದಾರೆ.
-ಸುಧೀರ್ ಕುಮಾರ ಮೊರಳ್ಳಿ
ಮೇಲ್ವರ್ಗದ ಐತಿಹಾಸಿಕ ಪ್ರಮಾದಗಳಿಂದ ನಮಗೆ ವಿಸ್ಮೃತಿ ಆವರಿಸಿದೆ. ಧೀವರ ಯೋಧರು, ಕೃಷಿಕರನ್ನು ಕಟ್ಟಿಕೊಂಡು ಕದಂಬಸಾಂಮ್ರಾಜ್ಯವನ್ನು ಸ್ಥಾಪಿಸಿದ ಮಯೂರವರ್ಮ ದೀವರ ಕುಲದವನು. ಕದಂಬವೃಕ್ಷವೆಂದರೆ ಈಚಲುಮರ, ಆದರೆ ದೀವರು, ಈಡಿಗರ ಸಾಹಸ, ಕನ್ನಡಸಾಂಮ್ರಾಜ್ಯದ ಹಿರಿಮೆಯನ್ನು ಮರೆಮಾಚಿ ಸಾಹಿತ್ಯ, ಇತಿಹಾಸಕ್ಕೆ ವೈದಿಕತೆಯನ್ನು ಲೇಪಿಸಿದ ಮೇರ್ಲಗ್ವದ ಇತಿಹಾಸಕಾರರು ಭಾರತದ ಇತಿಹಾಸವನ್ನೇ ಕಲುಷಿತಗೊಳಿಸಿದ್ದಾರೆ.
-ಮುಕುಂದರಾಜ್, ಸಾಹಿತಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *