ಕದಂಬವಂಶ ಈಡಿಗರದ್ದು,ಧರ್ಮ-ಧರ್ಮಗಳ ನಡುವೆ ದ್ವೇಶ ಬಿತ್ತುವವನೇ ದೇಶದ್ರೋಹಿ -ಮಹೇಂದ್ರಕುಮಾರ

ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳ ಕತ್ತು ಹಿಸುಕಿ ಮತಾಂಧತೆ, ಧರ್ಮಾಧಾರಿತ ಸರ್ವಾಧಿಕಾರವನ್ನು ಜಾರಿಮಾಡುವ ಹುನ್ನಾರ ಪಟ್ಟಭದ್ರರ ಗುರಿಯಾಗಿದ್ದು ಇಂಥವರಿಂದ ದೇಶವನ್ನು ರಕ್ಷಿಸುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಹಿರಿಯ ಸಾಹಿತಿ ಮುಕುಂದರಾಜ್ ಹೇಳಿದರು. ಶಿರಸಿಯಲ್ಲಿ ಸೌಹಾರ್ದ ವೇದಿಕೆಯಿಂದ ನಡೆದ ನಾವು ಮತ್ತು ನಮ್ಮ ಸಂವಿಧಾನ ಸಂವಾದ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು ಬೌದ್ಧಧರ್ಮ,ಲಿಂಗಾಯತ ಧರ್ಮ,ವಿಶ್ವಧರ್ಮವನ್ನು ಕೊಟ್ಟ ಕನ್ನಡ ಸಾಹಿತ್ಯ ರಾಷ್ಟ್ರದ ಶ್ರೇಷ್ಠ ಸಾಹಿತ್ಯ, ಇಂಥ ಸಾಹಿತ್ಯ ರಚಿಸಿದಸಾಹಿತಿಗಳು, ಬುದ್ಧಿಜೀವಿಗಳನ್ನು ಬುದ್ಧಿಜೀವಿಗಳು, ಲದ್ದಿಜೀವಿಗಳು,ಗಂಜಿಗಿರಾಕಿಗಳೆಂದು ಲೇವಡಿಮಾಡುವ ಬೌದ್ಧಿಕ ದಾರಿದ್ರ್ಯದ ಮತಾಂಧರನ್ನು ಬೆಂಬಲಿಸಿ, ಚುನಾಯಿಸುವ ಮೂಲಕ ನಾವು ನಮ್ಮ ನಾಡು,ನುಡಿ,ಸಾಹಿತ್ಯಕ್ಕೆ ಅಪಮಾನಮಾಡುತಿದ್ದೇವೆ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಸುಧೀರ್ ಮೊರಳ್ಳಿ ಮಾತನಾಡಿ ಭಾರತ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ ಎಲ್ಲರಿಗಾಗಿ ಎಲ್ಲರನ್ನೂಒಳಗೊಳ್ಳುವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯಿದೆ, ಎನ್.ಆರ್.ಸಿ. ಎನ್.ಆರ್.ಪಿ.ಗುಮ್ಮಗಳನ್ನು ತೋರಿಸುತ್ತಿರುವ ಸರ್ಕಾರ ತನ್ನ ವಿಫಲತೆ, ಅರಾಜಕತೆಯ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಈ ಕಾಯಿದೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.

ವೈದಿಕತೆಯ ಮೂಲಕ ಭಾರತೀಯ ಬಹುಸಂಖ್ಯಾತರನ್ನು ಮೂರ್ಖರನ್ನಾಗಿಸಲಾಗುತ್ತಿದೆ. ಭಾರತೀಯ ಮೂಲನಿವಾಸಿಗಳು ಕೋಮುವಾದಿಗಳಿಂದ ದೇಶಪ್ರೇಮದ ಪಾಠ ಕಲಿಯುವ ದುಸ್ಥಿತಿ ನಮಗಿಲ್ಲ ಎಂದು ವಿವರಿಸಿದ ನಮ್ಮ ಧ್ವನಿ ಸಂಸ್ಥಾಪಕ ಮಹೇಂದ್ರಕುಮಾರ ಕೊಪ್ಪ ನಮ್ಮದು ದೇಶ,ಸಮಾಜದ ಪರವಾದ ಶಕ್ತಿ-ಹೋರಾಟ ಎಂದರು.
ದಲಿತರು,ಹಿಂದುಳಿದವರ ಅವಿವೇಕದಿಂದಲೇ ಉತ್ತರಕನ್ನಡದಲ್ಲಿ ಕೋಮುವಾದಿಗಳ ಅಟ್ಟಹಾಸ ನಡೆಯುತ್ತಿದೆ. ಇಂಥ ಷಡ್ಯಂತ್ರಗಳ ಮೂಲಕವೇ ದೇಶವನ್ನು ಭಯಾನಕಗೊಳಿಸಿ ಸರ್ವಾಧಿಕಾರದ ಮೂಲಕ ಬಹುತ್ವ ಹಾಳುಮಾಡುವ ಮತೀಯವಾದಿಗಳ ಕುತಂತ್ರ ದೇಶಕ್ಕೆ ಮಾರಕ
-ಮಹೇಂದ್ರಕುಮಾರ
ಉತ್ತರಕನ್ನಡದಲ್ಲಿಜಾತಿ-ಧರ್ಮ,ಹಿಂದುತ್ವದ ಹೆಸರಲ್ಲಿ 25 ವರ್ಷಗಳಿಂದ ಆಡಳಿತದಲ್ಲಿರುವ ಹೆಗಡೆಗಳು ತಮ್ಮ ಜವಾಬ್ಧಾರಿ ನಿರ್ವಹಿಸಿಲ್ಲ. ಅಪದ್ಧಮಾತನಾಡುವ ಅನಂತಕುಮಾರ ಹೆಗಡೆ, ಅಪ್ರಬುದ್ಧ ನಡವಳಿಕೆಗಳ ಮೂಲಕ ವಿಧಾನಸಭಾಧ್ಯಕ್ಷತೆಯ ಘನತೆಗೆ ಕುಂದು ತಂದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ನೆಲಕ್ಕೆ ಅವಮಾನ ಮಾಡುತಿದ್ದಾರೆ.
-ಸುಧೀರ್ ಕುಮಾರ ಮೊರಳ್ಳಿ
ಮೇಲ್ವರ್ಗದ ಐತಿಹಾಸಿಕ ಪ್ರಮಾದಗಳಿಂದ ನಮಗೆ ವಿಸ್ಮೃತಿ ಆವರಿಸಿದೆ. ಧೀವರ ಯೋಧರು, ಕೃಷಿಕರನ್ನು ಕಟ್ಟಿಕೊಂಡು ಕದಂಬಸಾಂಮ್ರಾಜ್ಯವನ್ನು ಸ್ಥಾಪಿಸಿದ ಮಯೂರವರ್ಮ ದೀವರ ಕುಲದವನು. ಕದಂಬವೃಕ್ಷವೆಂದರೆ ಈಚಲುಮರ, ಆದರೆ ದೀವರು, ಈಡಿಗರ ಸಾಹಸ, ಕನ್ನಡಸಾಂಮ್ರಾಜ್ಯದ ಹಿರಿಮೆಯನ್ನು ಮರೆಮಾಚಿ ಸಾಹಿತ್ಯ, ಇತಿಹಾಸಕ್ಕೆ ವೈದಿಕತೆಯನ್ನು ಲೇಪಿಸಿದ ಮೇರ್ಲಗ್ವದ ಇತಿಹಾಸಕಾರರು ಭಾರತದ ಇತಿಹಾಸವನ್ನೇ ಕಲುಷಿತಗೊಳಿಸಿದ್ದಾರೆ.
-ಮುಕುಂದರಾಜ್, ಸಾಹಿತಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *