ಅಡಿಕೆ: ಕಳ್ಳರಿದ್ದಾರೆ ಎಚ್ಚರಿಕೆ! ಮತಾಂಧರ ಕೈವಾಡದ ಶಂಕೆ?

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಕದಿಯಲು ಬಂದ ಕಳ್ಳರು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಶಿರಸಿ-ಸಿದ್ಧಾಪುರದ ಕೆಲವೆಡೆ ಕಳ್ಳರು ಅಡಿಕೆ ಕದಿಯುವ ಹಿನ್ನೆಲೆಯಲ್ಲಿ ನಾನಾ ವೇಷಗಳಲ್ಲಿ ಹೊಂಚುಹಾಕುತಿದ್ದಾರೆ ಎನ್ನುವ ಗಾಳಿಸುದ್ದಿಗಳು ಕೇಳಿಬರುತ್ತಿವೆ.
ಕಳೆದ ವಾರ ಒಂದು ರಾತ್ರಿ ಅವರಗುಪ್ಪಾದಲ್ಲಿ (ಸಿದ್ಧಾಪುರ) ಅಡಿಕೆ ಸಂಗ್ರಹಿಸಿಟ್ಟಿದ್ದ ಮನೆಯ ಮುಂದೆ ಮಾರುತಿ ಒಮಿನಿಯಲ್ಲಿ ಬಂದಿದ್ದ ಜನರು ಹಾರ್ನ್ಮಾಡಿ ಮನೆಯ ಜನರು ಬೆಳಕು ಹೊತ್ತಿಸುತ್ತಲೇ ಪರಾರಿಯಾದ ಘಟನೆ ನಡೆದಿದೆ.
ಇದೇ ರಾತ್ರಿ ಬಹುತೇಕ ಇದೇ ಸಮಯದಲ್ಲಿ ಇದೇ ಒಮಿನಿಯಲ್ಲಿ ಬಂದಿರಬಹುದಾದ ಕೆಲವು ಜನರು ಅವರಗುಪ್ಪಾದ ಗೌಡರ್ ಮನೆಯಲ್ಲಿ ಸಂಗ್ರಹಿಸಿದ್ದ ಕೆಂಪುಅಡಿಕೆಯ ಚೀಲಗಳನ್ನು ಕೊಂಡುಯ್ಯುವ ಪ್ರಯತ್ನದಲ್ಲಿದ್ದಾಗ ಲೈಟ್ ಹಾಕಿದ ಮನೆಯವರು ಎಚ್ಚರಾಗಿರಬಹುದು ಎಂದು ತಿಳಿದು ಕಳ್ಳರು ಪರಾರಿಯಾಗಿದ್ದಾರೆ.
ಈ ಕಳ್ಳರು ಗೌಡರ ಮನೆಯ ಒಣ(ಚಾಲಿ)ಅಡಿಕೆ ಚೀಲಕ್ಕೆ ಕೈಹಾಕದೆ, ಕೆಂಪು ಅಡಿಕೆ ಚೀಲವನ್ನೇ ಹುಡುಕಿ ಬಾಗಿಲ ವರೆಗೆ ಎಳೆದುತಂದು ದಿಢೀರ್ ಹೊತ್ತಿದ ಬೆಳಕಿನಿಂದಾಗಿ ಓಡಿ ಪರಾರಿಯಾಗಿದ್ದಾರೆ. ಮನೆಯವರು ಶೌಚಕ್ಕೆ ಎದ್ದಿದ್ದರು ಎನ್ನಲಾಗಿದ್ದು. ಅಡಿಕೆ ಸಂಗ್ರಹಿಸುವ ಪ್ರದೇಶ, ಚಾಲಿ ಅಡಿಕೆ ಚೀಗಳೊಂದಿಗಿದ್ದ ಕೆಂಪು ಅಡಿಕೆ ಚೀಲವನ್ನೇ ಗುರುತಿಸಿ ಕೈ ಹಚ್ಚಿದ್ದು, ರಾತ್ರಿ 2ರಿಂದ ಮೂರರ ಅವಧಿಯಲ್ಲಿ ಈ ಘಟನೆ ನಡೆದಿದ್ದು ಈ ಎಲ್ಲಾ ಅಂಶಗಳ ಆಧಾರದಲ್ಲಿ ಸಿದ್ಧಾಪುರದಲ್ಲಿ ಸ್ಥಳಿಯರ ಸಹಕಾರ, ನೆರವಿನಿಂದ ಒಳಗಿನವರು, ಹೊರ ಊರವರೆಲ್ಲಾ ಸೇರಿ ಈ ಕಳ್ಳತನ ಮಾಡುತ್ತಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ.
ಅಡಿಕೆಗೆ 30-35ಸಾವಿರಗಳಷ್ಟಿದ್ದ ಬೆಲೆ ಇತ್ತೀಚಿನ ದಿನಗಳಲ್ಲಿ ಹತ್ತು ಸಾವಿರದಷ್ಟು ಹೆಚ್ಚಿದ್ದು ಅಡಿಕೆ ಕದಿಯುವ ಕಳ್ಳರಿಗೆ ಉತ್ತೇಜನ ನೀಡಿದಂತಾಗಿದೆ.
20 ವರ್ಷಗಳ ಹಿಂದೆ ಹಗಲು ದೇಶಪ್ರೇಮಿಗಳು ರಾತ್ರಿ ಕಳ್ಳರು ಆಗಿ ಹೊನ್ನಾವರ-ಸಿದ್ಧಾಪುರ ಭಾಗದಲ್ಲಿ ದೇವಾಲಯಗಳ ಕಳ್ಳತನ ಮಾಡಿ ರಾಜಕಾರಣ ಮಾಡುತಿದ್ದ ಮತಾಂಧರಿಗೆ ಈಗ ಸರ್ಕಾರ, ಜನಪ್ರತಿನಿಧಿತ್ವ ಎಲ್ಲವೂ ಅವರ ಬಳಿಯೇ ಇರುವುದರಿಂದ ಈ ಹಗಲು ದೇಶಭಕ್ತರು ರಾತ್ರಿ ಕಳ್ಳರಾಗುವ ಮತಾಂಧರೆ ಇರಬಹುದು ಎನ್ನುವ ಶಂಕೆಯೂ ವ್ಯಕ್ತವಾಗಿದೆ.
ಅಂದಹಾಗೆ 20-25 ವರ್ಷಗಳ ಹಿಂದೆ ರಾತ್ರಿ ದೇವಸ್ಥಾನಗಳ ಕಳ್ಳತನ ಮಾಡಿ ದೇಶಭಕ್ತರ ಗೆಟಪ್ ಹಾಕುತಿದ್ದವರು ಮಾಜಿ ಸಚಿವರೊಬ್ಬರ ಆಪ್ತರು, ಹಿಂಬಾಲಕರು ಆಗಿದ್ದ ಅವರಲ್ಲಿ ಬದುಕಿರುವ ಕೆಲವರು ನಾಗಪುರದ ಅವರ ಹೆಡ್ಡಾಫೀಸ್ ಬಳಿ ಸೇರಿಕೊಂಡಿದ್ದಾರೆ ಎನ್ನುವ ಮಾಹಿತಿಗಳು ಪೊಲೀಸರ ಬಳಿ ಇರುವುದು ಮತಾಂಧರ ದ್ವಿಪಾತ್ರ,ತ್ರಿಪಾತ್ರಗಳಿಗೆ ದೃಷ್ಟಾಂತ ಎನ್ನಲಾಗುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *