ಅನುಗಾರ ಬೆನಕ, ಸವಿಜೇನಿನ ಜನಕ!

ತಾಲೂಕಿನ ಬೆಳ್ಳುಮನೆಯ ಬೆನಕ ಬಿಳಗಿ ಜೇನುಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ತಾತ್ಕಾಲಿಕ ಉದ್ಯೋಗಿ.
ಈ ಡಿ. ದರ್ಜೆಯ ಅನುಗಾರ
ಅಲ್ಲಿ ಕೆಲಸ ಮಾಡಿಕೊಂಡು ಇಲಾಖೆಯ ಜವಾಬ್ಧಾರಿ ನಿರ್ವಹಿಸುತ್ತಾ ಕಾಲ ಕಳೆದಿದ್ದರೆ ಬೆನಕ ನಿವೃತ್ತಿಯ ನಂತರವೂ ಸುದ್ದಿಯಾಗದೆ ಕಳೆದು ಹೋಗುತಿದ್ದ ಯಾಕೆಂದರೆ….. ಈತ ಅಲ್ಲಿಯ ಹಂಗಾಮಿ ನೌಕರ.
ಆದರೆ ಇದರಾಚೆ ತನ್ನ ಆಸಕ್ತಿ,ಸಾಧನೆಯಿಂದ
ಈತ ಅನುಗಾರ ಬೆನಕ ಸವಿಜೇನಿನ ಜನಕ ಎನ್ನುವ ಶೀರ್ಷಿಕೆಗೆ ಮಹತ್ವ ತಂದಿದ್ದಾನೆ.
ಸಿದ್ಧಾಪುರ ಕ್ಯಾದಗಿ ಗ್ರಾಮ ಪಂಚಾಯತಿಯ ಕುಗ್ರಾಮ ಬೆಳ್ಳುಮನೆಯ ಕೃಷಿಕ ದಂಪತಿಗಳ ಪುತ್ರ ಬೆನಕ ಎಲ್ಲರಂತೆ ಶಾಲಾ ಕಾಲೇಜು ಕಲಿತ, ಯಾಕೆಂದರೆ, ಈ ಗ್ರಾಮದ ಇವರ ಸರೀಕರೇ ದೂರದ ನಗರ, ಶಾಲಾ, ಕಾಲೇಜುಗಳ ಪರಿಶ್ರಮದ ಕಲಿಕೆಯಿಂದಲೇ ವೈದ್ಯರು, ಉಪನ್ಯಾಸಕರು ಆಗಿದ್ದಾರೆ. ಆದರೆ ಇವರ ಮಾರ್ಗ ಬೇರೆಯಾಗಿತು.್ತ
ವಿದ್ಯಾರ್ಥಿ ದೆಸೆಯಿಂದಲೇ ಜೇನುಕೃಷಿ ಬಗ್ಗೆ ಆಸಕ್ತಿ ತಳೆದಿದ್ದ ಇವರ ಆಸಕ್ತಿ, ಅಭಿರುಚಿಗೆ ತಕ್ಕಂತೆ ಜೇನು ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ಬಿಳಗಿಯಲ್ಲಿ ತಾತ್ಕಾಲಿಕ ಕೆಲಸ ಸಿಕ್ಕಿತ್ತು!
ಈ ಡಿ. ದರ್ಜೆಯ ಕೆಲಸದೊಂದಿಗೆ ಕುಟುಂಬದ ಸಹಕಾರದಿಂದ ಮನೆಯಲ್ಲಿ ಜೇನು ಪೆಟ್ಟಿಗೆ ಇಡತೊಡಗಿದ್ದಾಗ ಊರಿಗೊಂದಾದರೆಪೋರಗೊಂದು ಎಂದು ಜನ ಮೂಗು ಮುರಿದಿರಬಹುದು ಆದರೆ ಆಸಕ್ತಿ, ಛಲ, ಹಠವಿತ್ತಲ್ಲ ಅದು ಅವರನ್ನು ನೂರಾಐವತ್ತರಷ್ಟು ಜೇನು ಪೆಟ್ಟಿಗೆ ಇಡುವಂತೆ ಮಾಡಿತು.
ಅವುಗಳಿಂದ 5-6 ಕ್ವಿಂಟಾಲ್ ಜೇನು ಉತ್ಫಾದಿಸುವಂತೆ ಉತ್ತೇಜಿಸಿತು. ಈಗ ಈ ಯುವಕ ತಾಲೂಕಿನ ದೊಡ್ಡ ಜೇನು ಉತ್ಫಾದಕ. ನಸರಿ, ತುಡವೆಜೇನು ಸಾಕುವ ಬೆನಕ ಈಗ ಜೇನಿನ ಪಂಡಿತನಾಗಿ ಬೆಳೆದಿದ್ದಾನೆ.
ಜೇನಿನಿಂದ ಕನಿಷ್ಟ 25-50% ಬೆಳೆ ವೃದ್ಧಿ, ಅದರ ಪರಾಗ, ಪುಷ್ಫರಸಕ್ಕಿರುವ ಮಹತ್ವ, ಜೇನು ತಿಂದರೆ ಅವುಗಳಿಂದ ನಿಯಮಿತವಾಗಿ ಕಡಿಸಿಕೊಂಡರೆ ಏನೇನೆಲ್ಲಾ ಅನುಕೂಲ ಎಂಬುದನ್ನು ಅನುಭವಗಳ ದೃಷ್ಟಾಂತಗಳ ಆಧಾರದಿಂದ ವಿವರಿಸುತ್ತಾನೆ.
ಜೇನಿಗೆ ಸರ್ಕಾರ, ಸಾರ್ವಜನಿಕರ ಸಹಕಾರ ಮುಖ್ಯ ಎನ್ನುವ ಇವರು ಬೆಳೆಯುವ ಜೇನಿಗೆ ಮನೆ ಬಾಗಿಲಲ್ಲೇ ಮಾರುಕಟ್ಟೆ. ವಾರ್ಷಿಕ 5-6 ಕ್ವಿಂಟಾಲ್ ಜೇನನ್ನು ಮನೆಬಾಗಿಲಿಗೆ ಬಂದು ಖುಷಿಯಿಂದ ಹಣಕೊಟ್ಟು ಖರೀದಿಸುತ್ತಾರೆ ಎನ್ನುವ ಬೆನಕ ಈ ಕ್ಷೇತ್ರದಲ್ಲಿ ಬೆಳೆಯಲು ಇಷ್ಟುಸಾಕು ಎನ್ನುವ ಸಾರ್ವಜನಿಕರ ಬೆಂಬಲಕ್ಕೂ ಕೃತಜ್ಞತೆ ಹೇಳುತ್ತಾರೆ.
ಸಾಧನೆಗೆ ಮಹಾನಗರ, ಸಕಲ ಸೌಕರ್ಯಗಳೇ ಬೇಕು ಎನ್ನುವ ಯುವ ಜನರ ನಡುವೆ ಕಾಡಂಚಿನ ಕುಗ್ರಾಮದಲ್ಲಿ ಪರಿಸರಕ್ಕೆ ಪೂರಕವಾಗಿ ಸರಳವಾಗಿ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಬೆನಕ ಮಾದರಿಯ ಉದಾಹರಣೆಯಾಗಿದ್ದಾರೆ.
ಒಂದು ದಶಕಕ್ಕಿಂತ ಹೆಚ್ಚಿನ ಇವರ ಈ ಆಸಕ್ತಿ,ಶ್ರಮ, ಪರಿಸರರಕ್ಷಣೆಯ ಕೆಲಸಕ್ಕೆ ಈವರೆಗೂ ಅಭಿನಂದನೆ ದೊರೆಯದಿರುವುದೇ ಆಶ್ಚರ್ಯ. ಸರ್ಕಾರ, ಸಾರ್ವಜನಿಕ ಸಂಘ, ಸಂಸ್ಥೆಗಳು ಇಂಥ ಎಲೆಮರೆಯ ಸಾಧಕರನ್ನು ಗುರುತಿಸುವಂತಾಗಲಿ ಎನ್ನುವುದಷ್ಟೇ ಸಮಾಜಮುಖಿ ಹಕ್ಕೊತ್ತಾಯ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *