

ಒಂದು ಚಿತ್ರ ನೂರು ಶಬ್ಧಗಳಿಗೆ ಸಮಾನ. ಇಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಚಿತ್ರಗಳಿವು.

ಶಿವಾನಂದ ಕಳವೆ, ಸರ್ಜಾಶಂಕರ ಲಕ್ಷಾಂತರ ಶಬ್ಧಗಳ ಪುಸ್ತಕ ಪರಿಚಯಿಸಿದ್ದರೆ, ಸಚಿವ ಶಿವರಾಮ ಹೆಬ್ಬಾರ್ ಯಲ್ಲಾಪುರದಲ್ಲಿ ಕರೋನಾ ನಿರ್ವಹಣೆ, ಪರಿಹಾರ ಕ್ರಮಗಳ ಪರಶೀಲನೆ ನಡೆಸಿದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ರಿಕ್ಷಾ ಚಾಲಕರಿಗೆ ತಲಾ ಒಂದು ಸಾವಿರ ರೂಪಾಯಿ ವೈಯಕ್ತಿಕ ನೆರವು ವಿತರಿಸಿದರು. ಉಳಿದಂತೆ, ಎಂದಿನಂತೆ ಸ್ಫೀಕರ್ ಮತ್ತು ಸಂಸದರ ಗುರುತು-ಪತ್ತೆ ಇಲ್ಲ.
ಎಂದಿನಂತೆ ವೈದ್ಯರು, ನರ್ಸ್ಗಳು, ಪೊಲೀಸರು,ಸೈನಿಕರು ನಮಗಾಗಿ ದುಡಿದರು.
ರೈತರಿಗೆ ಹೊರೆಯಾದ ಕರೋನಾ,ರೈತರ ಉತ್ಫನ್ನಗಳನ್ನು ಕೇಳುವವರಿಲ್ಲದೆ ಹಾನಿ
ಕರೋನಾ ಸೋಕಿನ ಭಯ, ಲಾಕ್ಔಟ್ ಹಿನ್ನೆಲೆಗಳಲ್ಲಿ ಕೃಷಿ,ಕೃಷಿ ಉತ್ಫನ್ನಗಳು, ಕೃಷಿ ಸಂಬಂಧಿ ಉದ್ಯಮಗಳು ಹಾನಿಗೊಳಗಾಗಿವೆ. ಮಲೆನಾಡು ಪ್ರದೇಶದಲ್ಲಿ ಬೆಳೆದ ಅನಾನಸ್, ಬಾಳೆ ಬೆಳೆಗಳನ್ನು ಕೇಳುವವರಿಲ್ಲದೆ ಇವುಗಳನ್ನು ಬೆಳೆದ ರೈತ ತಾವು ಬೆಳೆದ ಬೆಳೆ ತಮ್ಮ ಕಣ್ಮುಂದೇ ಹಾಳಾಗುತ್ತಿರುವುದನ್ನು ನೋಡುವಂತಾಗಿದೆ.






_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
