ಕರೋನಾ: ಅತಿಕೆಟ್ಟ ರಾಷ್ಟ್ರೀಯ ದುರಂತವನ್ನೂ ವ್ಯಕ್ತಿ ಆರಾಧನೆಗಾಗಿ (ದುರ್ಬಳಕೆ) ಬಳಕೆ ?

ಹಿರಿಯ ಲೇಖಕ, ಚಿಂತಕ ರಾಮಚಂದ್ರ ಗುಹಾ ಅವರ ಟ್ವೀಟ್:

ಈಗಾಗಲೇ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯೊಂದು ಅಸ್ತಿತ್ವದಲ್ಲಿರುವಾಗ ಹೊಸ ನಿಧಿಯನ್ನು ಸ್ಥಾಪಿಸುವ ಅಗತ್ಯವಾದರೂ ಏನಿದೆ?

ಅದೂ ಅಲ್ಲದೆ PM-CARES ಎನ್ನುತ್ತ ತನ್ನನ್ನು ತಾನೇ ಉಬ್ಬಿಸಿಕೊಳ್ಳುವಂತೆ ಹೆಸಿರಿಟ್ಟುಕೊಳ್ಳುವುದೇಕೆ? ಒಂದು ಅತಿಕೆಟ್ಟ ರಾಷ್ಟ್ರೀಯ ದುರಂತವನ್ನೂ ವ್ಯಕ್ತಿ ಆರಾಧನೆಗಾಗಿ (ದುರ್ಬಳಕೆ) ಬಳಕೆ ಮಾಡಿಕೊಳ್ಳಬೇಕೇ?

PM-CARES ಒಂದು ಸಾರ್ವಜನಿಕ ದತ್ತಿ ಸಂಸ್ಥೆಯಾಗಿದೆ. ಪ್ರಧಾನ ಮಂತ್ರಿಯು ಅದರ ಅಧ್ಯಕ್ಷರಾಗಿದ್ದು, ದೇಶದ ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಮಂತ್ರಿ ಈ ಸಂಸ್ಥೆಯ ಇತರ ಸದಸ್ಯರಾಗಿರುತ್ತಾರೆ.

ಸಂಸ್ಥೆಯ ಘೋಷಿತ ಧ್ಯೇಯೋದ್ದೇಶ: ಯಾವುದೇ ವಿಧವಾದ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವುದು ಮತ್ತು ಅದರಿಂದ ಬಾಧಿತರಾದವರಿಗೆ ಪರಿಹಾರ ಒದಗಿಸುವುದು.

ಉದಾಹರಣೆಗೆ ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದ ಉಂಟಾಗಿರುವ ತುರ್ತು ಪರಿಸ್ಥಿತಿ.
ಇದರ ಕುರಿತು ಕೆಲವು ಪ್ರಶ್ನೆಗಳು:

1. ಸಾರ್ವಜನಿಕ ದತ್ತಿ ಸಂಸ್ಥೆಯನ್ನು ರಚಿಸಲು ತೀರ್ಮಾನಿಸಿದ್ದು ಯಾವಾಗ?

2. ಹಾಗೆ ಮಾಡಲೇಬೇಕೆಂಬ ಬಲವಾದ ಕಾರಣಗಳೇನು?

3. ಈಗಾಗಲೇ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಅಸ್ತಿತ್ವದಲ್ಲಿದ್ದರೂ ಹೊಸದಾಗಿ ಸಾರ್ವಜನಿಕ ದತ್ತಿ ಸಂಸ್ಥೆಯೊಂದನ್ನು ಸ್ಥಾಪಿಸುವುದರಿಂದ ಉಂಟಾಗುವ ಪ್ರಯೋಜನಗಳೇನು?

4. ಅದರ ನಿಯಮಾವಳಿಗಳನ್ನು (ಬೈ ಲಾ) ನೋಡಲು/ ಓದಲು ನಮಗೆ ಅವು ಎಲ್ಲಿ ಲಭ್ಯವಾಗುತ್ತವೆ?

5. ಯಾವ ಕಾಯಿದೆಯ ಅಡಿಯಲ್ಲಿ ಈ ಸಂಸ್ಥೆಯನ್ನು ನೋಂದಣಿ ಮಾಡಲಾಗಿದೆ?

6. ಎಲ್ಲಿ ಮತ್ತು ಯಾವಾಗ ಈ ನೋಂದಣಿ ಮಾಡಲಾಯಿತು?

7. ಉಪ-ನೋಂದಣಾಧಿಕಾರಿಯವರು ಪ್ರಧಾನ ಮಂತ್ರಿಯವರ ಮನೆಗೆ ಭೇಟಿ ನೀಡಿದರೇ ಅಥವಾ ಪ್ರಧಾನಿಯವರೇ ಉಪ-ನೋಂದಣಾಧಿಕಾರಿಯವರ ಕಛೇರಿಗೆ ಹೋಗಿ ಬಂದರೇ?

8. ಈ ದತ್ತಿ ಸಂಸ್ಥೆಯ ಸೆಟ್ಲರ್ (ಸಂಸ್ಥೆಯನ್ನು ಪ್ರಾರಂಭಿಸುವವ) / ಅಧ್ಯಕ್ಷ ಯಾರು? – ಭಾರತದ ಪ್ರಧಾನ ಮಂತ್ರಿಯವರೇ ಅಥವಾ ನರೇಂದ್ರ ಮೋದಿಯವರೇ?

9. ಇತರ ಸದಸ್ಯರನ್ನು ಅವರವರ ವ್ಯಕ್ತಿಗತ ಹೆಸರುಗಳಿಂದ ನಾಮಕರಣ ಮಾಡಲಾಗಿದೆಯೋ ಅಥವಾ ಅವರ ಅಧಿಕೃತ ಹುದ್ದೆಗಳ ಮೂಲಕವೋ?

10. PM-CARES ಟ್ರಸ್ಟ್ ಕಛೇರಿ ನೋಂದಣಿಯಾಗಿರುವ ಅಧಿಕೃತ ವಿಳಾಸವೇನು?

11. ಹಾಗಾದರೆ ದೀರ್ಘಕಾಲದಿಂದ ಸಾಂಸ್ಥೀಕರಣಗೊಂಡಿರುವ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುವ ಬದಲಿಗೆ, ಹೊಸದಾಗಿ ಉದ್ಭವವಾಗಿರುವ ಈ ಸಾರ್ವಜನಿಕ ದತ್ತಿ ನಿಧಿಗೆ ದಾನ ಮಾಡಲು ಅಕ್ಷಯ್ ‘ಕೆನಡಾ’ ಕುಮಾರ್ (ಹಿಂದಿ ಸಿನಿಮಾ ನಟ), ವಿಜಯ್ ‘ಪೇ ಟಿಎಂ’ (ಉದ್ಯಮಿ – Paytm ಕಂಪನಿಯ ಸಂಸ್ಥಾಪಕ), ಜೇ ‘ಬಿಸಿಸಿಐ’ ಶಾ (ಅಮಿತ್ ಶಾ ಪುತ್ರ), ಮುಂತಾದವರು ಒಬ್ಬರ ಮೇಲೊಬ್ಬರು ಬೀಳುತ್ತಿರುವುದಕ್ಕೆ ಕಾರಣವೇನು?

#DeMo (ಡೀಮಾನೆಟೈಸೇಶನ್ – ನೋಟ್ ಅಮಾನ್ಯೀಕರಣ) ದ ಮರುದಿನವೇ Paytm ಜಾಹೀರಾತುಗಳಲ್ಲಿ ಮೋದಿ ಕಾಣಿಸಿಕೊಂಡಿದ್ದನ್ನು ಮರೆತಿದ್ದೀರೇನು?

– Translated by Com. Jyothi. A

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *