ನಿಜ ಕಲಾವಿದರ ನೈಜ ಸಮಾಜಮುಖಿ ಕೆಲಸ

ಕೆಲವು ವಿಶೇಶ ಹಿತಾಸಕ್ತರು ಡಾ.ರಾಜ್‍ಕುಮಾರರನ್ನು ಒಪ್ಪಿಕೊಳ್ಳುತ್ತಾರೆ, ಒಪ್ಪಿಕೊಂಡಂತೆ ಮಾತನಾಡುತ್ತಲೇ ನಿಧಾನವಾಗಿ ಡಾ. ರಾಜ್ ರಾಜ್ ಕುಮಾರ ಕುಟುಂಬ ರಾಜ್ಯ ದೇಶಕ್ಕೇನು ಕೊಟ್ಟಿದೆ ಎಂದು ಪ್ರಶ್ನಿಸುತ್ತಾರೆ. ರಾಜ್‍ಕುಮಾರ್ ಕೊಡುಗೆ ಎಲ್ಲರಿಗೂ ತಿಳಿದಿರಬೇಕೆಂದೇನೂ ಇಲ್ಲ ಆದರೆ ಉದ್ದೆಶಪೂರ್ವಕವಾಗಿ ಅವರ ಬಗ್ಗೆ ಉಪಾಯದಿಂದ ತಕರಾರು ಎತ್ತಿ ವಿಮರ್ಶಿಸುವವರು ಅವರ ಕೊಡುಗೆ, ಸಾಧನೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ.
ಇಂಥದ್ದೇ ತಕರಾರುಗಳು ಅವರ ಕುಟುಂಬ,ಮಕ್ಕಳ ಮೇಲಿವೆ.

ಈ ರಾಜ್‍ಕುಮಾರ, ಕುವೆಂಪು, ಲಂಕೇಶ್ ರ ಕೊಡುಗೆ, ಸಾಧನೆ, ಸಮಾಜಮುಖೀ ಚಟುವಟಿಕೆಗಳ ಬಗ್ಗೆ ಕೇಳಿ, ವಿಮರ್ಶಿಸುವವರು ಇತ್ತೀಚೆಗೆ ಪ್ರಕಾಶ್ ರೈ ಎಂಬ ಕನ್ನಡಿಗರ ಹೆಮ್ಮೆಯ ವ್ಯಕ್ತಿಯ ಬಗ್ಗೆಯೂ ತಕರಾರೆತ್ತುವುದಿದೆ.
ಇವರ ಸಮಸ್ಯೆ ಅವರ ಸಾಧನೆ, ಪ್ರಸಿದ್ಧಿ, ಕೊಡುಗೆಗಳ ಬಗ್ಗೆ ಅಲ್ಲ ಯಾಕೆಂದರೆ ಇವರ ಬಗ್ಗೆ ತಕರಾರು ಎತ್ತಿ, ವಿಮರ್ಶಿಸುವವರು ಒಂದೋ ಅವರು ಇವರ ಬಗ್ಗೆ ತಿಳಿದುಕೊಂಡು ಕೊಂಕು ನುಡಿಯುವ ನವಭಾರತದ ಮತಾಂಧ ವೈಚಾರಿಕತೆಯವರಿರುತ್ತಾರೆ, ಅಥವಾ ತಮ್ಮ ದೇವರು, ಧರ್ಮ,ನಂಬಿಕೆಗಳ ಸುಲಭ ಜೀವನೋಪಾಯದ ವಂಚಕ ಪರಿವಾರದವರಿರುತ್ತಾರೆ. ಇಂಥವರು ಈಗಿನ ಕರೋನಾ ಸಂಕಷ್ಟ ಕಾಲದಲ್ಲಿ ಯಾರ್ಯಾರು ಏನೇನು ಮಾಡುತಿದ್ದಾರೆ ಎಂದು ಗಮನಿಸಿದರೆ ಅವರ ಲಾಗಾಯ್ತಿನ ವೈರಸ್ ಗೆ ಮದ್ದು ಕಂಡುಕೊಂಡಂತಾಗುತ್ತದೆ.
ಈಗಿರುವ ಮಾಹಿತಿಗಳ ಪ್ರಕಾರ ರಾಜ್ ಪುತ್ರ ಶಿವರಾಜ್ ಕುಮಾರ ಚಿತ್ರರಂಗದ 5000 ಜನ ಸಿನಿ ಕಾರ್ಮಿಕರಿಗೆ ನಿತ್ಯ ಊಟೋಪಚಾರದ ವ್ಯವಸ್ಥೆ ಮಾಡುತಿದ್ದಾರೆ.
ಪುನೀತ್ ರಾಜ್ ಕುಮಾರ್ ಮುಖ್ಯಮಂತ್ರಿ ಕರೋನಾ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿದೇಣಿಗೆ ನೀಡಿದ್ದಾರೆ.

ಪ್ರಕಾಶ್‍ರಾಜ್ 250 ಜನ ದಿನಗೂಲಿ ಕಾರ್ಮಿಕರಿಗೆ ನಿತ್ಯ ಊಟೋಪಚಾರದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ತಮ್ಮ ಮನೆಕೆಲಸದವರಿಗೆ ಎರಡು ತಿಂಗಳ ಮುಂಚಿತ ವೇತನ ನೀಡಿ ರಜೆ ನೀಡಿದ್ದಾರೆ.
ಹೀಗೆ ಸಿನಿಕಲಾವಿದರು, ಸಮಾಜಮುಖಿ ವ್ಯಕ್ತಿಗಳು ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಉದಾರವಾಗಿ ನೆರವಾಗುತಿದ್ದಾರೆ.
ಇಂಥ ನೆರವು, ಸಹಾಯ,ನಾಯಕತ್ವ, ಸಮಾಜಸೇವೆ ಮಾಡಿದ ಅನೇಕ ಸೆಲಿಬ್ರಿಟಿಗಳು ನಮ್ಮೆದುರಿಗಿದ್ದಾರೆ. ಆದರೆ ನಂಜುಕಾರುವ ಪರಿವಾರ ಮತ್ತವರ ಬೆಂಬಲಿಗರು ಸದಾ ತಮ್ಮ ಒಳಿತು ನೋಡುತ್ತಾ ಇಂಥ ಕಲಾವಿದರು, ಸಮಾಜಮುಖಿ ವ್ಯಕ್ತಿಗಳ ವಿರುದ್ಧ ಮಾತನಾಡುವ, ಕೆಲಸ ಮಾಡುವ ವಿದ್ಯಮಾನವನ್ನು ನೋಡುತಿದ್ದೇವೆ. ಸರ್ಕಾರದ ಕ್ಷೇತ್ರ ಅಭಿವೃದ್ಧಿ ನಿಧಿಯನ್ನೇ ಕರೋನಾ ಪರಿಹಾರ ನಿಧಿ ಗೆ ನೀಡಿ ಪ್ರಚಾರ ಪಡೆಯುತ್ತಿರುವ ಈಗಿನ ಸರ್ಕಾರದ ಸಂಸದರು, ಶಾಸಕರು, ಸಚಿವ ಕಲಾವಿದರ ನಡುವೆ ಪ್ರಚಾರವಿಲ್ಲದೆ ಕೆಲಸ ಮಾಡುತ್ತಿರುವ ನಿಜಕಲಾವಿದರು ಗ್ರೇಟ್ ಅಲ್ಲವೆ? ಅಷ್ಟಕ್ಕೂ ಈ ಕಲಾವಿದರು ಜನಸಾಮಾನ್ಯರ ಮತ ಪಡೆದು, ಜನಸಾಮಾನ್ಯರ ತೆರಿಗೆಯ ಸರ್ಕಾರದ ಸೌಲತ್ತು, ವೇತನ, ಅವಕಾಶ, ಅನುಕೂಲಗಳನ್ನು ಪಡೆದುಕೊಂಡವರಲ್ಲವಲ್ಲ, ಮತ ಪಡೆದು ಅಧಿಕಾರ ಪಡೆ ದು ಮನೆಯಲ್ಲಿ ಸುಖ, ಶಾಂತಿ ಪಡೆಯುತ್ತಿರುವ ಜನಪ್ರತಿನಿಧಿಗಳ ಎದುರು ಕಲಾವಿದರ ಸಮಾಜಮುಖೀ ವ್ಯಕ್ತಿತ್ವ ಗೌರವಕ್ಕೆ ಅರ್ಹ ಅಲ್ಲವೆ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *