

ಸಾಹಸಿ ಎಸ್.ಪಿ. ರವಿ ಚೆನ್ನಣ್ಣನವರ್ ಮಾರುವೇಷದ ಕಾರ್ಯಚರಣೆಗೆ ಸಿಕ್ಕು ಅಮನತ್ತಾದ ಎರಡುಜನ ಇನ್ಫೆಕ್ಟರ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸರಕು-ಸಾಗಾಣಿಕೆ ವಾಹನಗಳಿಂದ ಅಧಿಕಾರಿಗಳು ಲಂಚ ಪಡೆಯುತಿದ್ದಾರೆ ಎನ್ನುವ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ರವಿ ಚೆನ್ನಣ್ಣನವರ್ ಕಳೆದ ಗುರುವಾರ ಲಾರಿ ಚಾಲಕರಾಗಿ ಮಾರುವೇಷ ಹಾಕಿಕೊಂಡು ಅತ್ತಿಬೆಲೆ ಚೆಕ್ ಪೋಸ್ಟ್ ಗೆ ಬಂದರು.



ನಿರೀಕ್ಷೆಯಂತೆ ಹೊಸೂರು ಅತ್ತಿಬೆಲೆ ತಪಾಸಣಾ ನಾಕೆಯಲ್ಲಿದ್ದ ಕರಿಯಪ್ಪ ಮತ್ತು ಜಯಣ್ಣ ಎನ್ನುವ ಇಬ್ಬರು ಇನ್ಪೆಕ್ಟರ್ ಗಳು ಲಂಚಕ್ಕಾಗಿ ಬೇಡಿಕೆ ಇಟ್ಟರು. ಲಾರಿಚಾಲಕ ರವಿ ಚೆನ್ನಣ್ಣನವರ್ ರಿಂದ ಲಂಚವಸೂಲಿಗೆ ಪ್ರಯತ್ನಿಸಿದ ಆರೋಪದ ಮೇಲೆ ಆ ಇನ್ಪೆಕ್ಟರ್ ಗಳನ್ನು ಬಂಧಿಸಿ, ಅವರಿಂದ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದರು ಚೆನ್ನಣ್ಣನವರ್.
ಇದರ ಪರಿಣಾಮ ಶುಕ್ರವಾರ ಸಂಜೆ ಈ ಇಬ್ಬರು ಇನ್ಪೆಕ್ಟರ್ ಗಳನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಅತ್ತಿಬೆಲೆ ಚೆಕ್ಪೋಸ್ಟ್ ನಲ್ಲಿ ಇವರು ಹಂಗಾಮಿ ನೌಕರರಾದ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಬಳಸಿಕೊಳ್ಳುತಿದ್ದರು ಎನ್ನಲಾಗಿದೆ.


ಲಾಕ್ಡೌನ್ ಸಮಯದಲ್ಲಿ ಅವಶ್ಯವಸ್ತು ಸಾಗಾಟ ಮಾಡುತಿದ್ದ ವಾಹನಚಾಲಕರನ್ನು ಸುಲಿಯುತಿದ್ದ ಅಧಿಕಾರಿಗಳನ್ನು ಮಾರುವೇಶದಲ್ಲಿ ಬಂಧಿಸಿದ ರವಿ ಬೆನ್ನಣ್ನನವರ್ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________







Really very good job. Proud of him.