ಕರೋನಾ ಪರಿಣಾಮ-ಪಂಜು ಗಂಗೊಳ್ಳಿ ಬರೆದ ಮನಮಿಡಿಯುವ ಘಟನೆ

ನ್ಯಾಯಾಧೀಶ: ನೀನೇಕೆ ಮಾರುಕಟ್ಟೆಯಲ್ಲಿ ಆ ಮಹಿಳೆಯ ಪರ್ಸನ್ನುಕದ್ದೆ?

16 ವರ್ಷದ ಬಾಲಾಪರಾಧಿ: ನನ್ನ ತಾಯಿ ಹಸಿವೆಯಿಂದ ನರಳುವುದನ್ನು ನೋಡಲಾಗಲಿಲ್ಲ. ತಾಯಿಗೆ ಏನಾದರೂ ತಿನ್ನಲು ತರಲು ಹಣವಿಲ್ಲದೆ, ದುಡಿಮೆಯಿಲ್ಲದೆ ಬೇರೆ ದಾರಿ ಕಾಣದೆ ಪರ್ಸ್ ಕದ್ದೆ.ನ್ಯಾಯಾಧೀಶರು ಅಪರಾಧಿಯ ಬಿಡುಗಡೆಗೆ ಆಜ್ಞೆ ಮಾಡುತ್ತಾರೆ. ಅಷ್ಟೇ ಅಲ್ಲ, ಆತನಿಗೆ ದಿನಸಿ, ತರಕಾರಿ, ಬಟ್ಟೆಬರೆ ತಂದು ಕೊಡಲು ನ್ಯಾಯಾಲಯದ ಸಿಬ್ಬಂದಿಯೊಬ್ಬರಿಗೆ ಹಣವನ್ನು ಕೊಡುತ್ತಾರೆ. ನ್ಯಾಯಾಲಯದಲ್ಲಿ ನೆರೆದ ಹಲವರ ಕಣ್ಣು ಒದ್ದೆಯಾಗುತ್ತದೆ…ಇದು ಯಾವುದೋ ಹಳೇಯ ಕನ್ನಡ ಹಿಂದಿ ಸಿನಿಮಾದ ದೃಶ್ಯವಲ್ಲ. ಏಪ್ರಿಲ್ 17 ರಂದು ಬಿಹಾರಿನ ನಾಲಂದದ ಕೋರ್ಟೊಂದರಲ್ಲಿ ನಡೆದ ಅಪರೂಪದ ಘಟನೆ. ಕೆಲವು ವರ್ಷಗಳ ಹಿಂದೆ ಈ ಬಾಲಕನ ಅಪ್ಪ ತೀರಿಕೊಂಡ ನಂತರ ತಾಯಿ ಮತ್ತು 12 ವರ್ಷ ಪ್ರಾಯದ ತಮ್ಮನ ಜವಾಬ್ದಾರಿ ಇವನದಾಯಿತು. ತಾಯಿ ಮಾನಸಿಕವಾಗಿ ಅಸ್ವಸ್ಥಳು. ಯಾವುದೋ ಘಟನೆಯಲ್ಲಿ ಬಾಲಕನ ಕಾಲಿನ ಮೂಳೆ ಪೆಟ್ಟಾಗಿ ಕುಂಟಾಗಿದೆ. ಅದೂ ಸಾಲದೆಂಬಂತೆ ಕೆಲ ಸಮಯದ ಹಿಂದೆ ಕಲ್ಲು ತಾಗಿ ಇವನ ಬಲಗಣ್ಣು ಕುರುಡಾಗಿದೆ. ಹೀಗಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಕೂಲಿನಾಲಿ ಮಾಡಿ ಹೇಗೋ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಏಕಾಏಕಿ ಹೇರಲಾದ ಲಾಕ್ ಡೌನ್ ಅದನ್ನೂ ಇಲ್ಲವಾಗಿಸಿತು. ಕಳೆದ ತಿಂಗಳು ಮಾರುಕಟ್ಟೆಗೆ ಹೋದಾಗ ಒಬ್ಬ ಮಹಿಳೆಯ ಪರ್ಸನ್ನು ಕದ್ದ. ಸಿಸಿ ಟಿವಿಯ ಸಹಾಯದಿಂದ ಪೋಲಿಸರು ಇವನನ್ನು ಪತ್ತೆ ಹಚ್ಚಿ ಕೇಸು ಹಾಕಿ ಮ್ಯಾಜಿಸ್ಟ್ರೇಟ್ ಮಾನವೇಂದ್ರ ಸಿಂಗ್ ರ ಎದುರು ಹಾಜರು ಪಡಿಸಿದ್ದರು. ನ್ಯಾಯಾಧೀಶರ ಆಜ್ಞೆಯಂತೆ ಬಾಲಕನನ್ನು ಆತನ ಮನೆ ಮುಟ್ಟಿಸಲು ಹೋದ ಪೋಲಿಸರು ಆತನ ಮನೆಯ ಸ್ಥಿತಿ ನೋಡಿ ದಂಗಾದರು! ಮನೆ ಎಂದರೆ ಮುರುಕಲು ಗೋಡೆ, ಹರಿದ ಸೋಗೆಯ ಮಾಡು, ಅಷ್ಟೇ. ಮನೆಯಲ್ಲಿ ಚಾಪೆ ಇನ್ನಿತರ ವಸ್ತುಗಳು ಬಿಡಿ ಆಹಾರ ಬೇಯಿಸಲು ಇಂದು ಸ್ಟವ್ ಕೂಡಾ ಇಲ್ಲ! ತರಗೆಲೆ ಕಸಕಡ್ಡಿಗೆ ಬೆಂಕಿ ಹಾಕಿ ಅದರಲ್ಲಿ ಬೇಯಿಸಬೇಕು. ಆಧಾರ್, ರೇಷನ್ ಕಾರ್ಡ್ ಕೂಡಾ ಇಲ್ಲ. ನ್ಯಾಯಧೀಶರ ಆಜ್ಞೆಯ ಮೇರೆಗೆ ಸ್ಥಳೀಯಾಡಳಿತ ಬಾಲಕನ ಕುಟುಂಬಕ್ಕೆ ಜೀವನಾವಶ್ಯಕಗಳನ್ನು ಒದಗಿಸಲು ಈಗ ಮುಂದಾಗಿದೆ.(ಸಾಂದರ್ಭಿಕ ಚಿತ್ರ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *