ಕರೋನಾ ಪರಿಣಾಮ-ಪಂಜು ಗಂಗೊಳ್ಳಿ ಬರೆದ ಮನಮಿಡಿಯುವ ಘಟನೆ

ನ್ಯಾಯಾಧೀಶ: ನೀನೇಕೆ ಮಾರುಕಟ್ಟೆಯಲ್ಲಿ ಆ ಮಹಿಳೆಯ ಪರ್ಸನ್ನುಕದ್ದೆ?

16 ವರ್ಷದ ಬಾಲಾಪರಾಧಿ: ನನ್ನ ತಾಯಿ ಹಸಿವೆಯಿಂದ ನರಳುವುದನ್ನು ನೋಡಲಾಗಲಿಲ್ಲ. ತಾಯಿಗೆ ಏನಾದರೂ ತಿನ್ನಲು ತರಲು ಹಣವಿಲ್ಲದೆ, ದುಡಿಮೆಯಿಲ್ಲದೆ ಬೇರೆ ದಾರಿ ಕಾಣದೆ ಪರ್ಸ್ ಕದ್ದೆ.ನ್ಯಾಯಾಧೀಶರು ಅಪರಾಧಿಯ ಬಿಡುಗಡೆಗೆ ಆಜ್ಞೆ ಮಾಡುತ್ತಾರೆ. ಅಷ್ಟೇ ಅಲ್ಲ, ಆತನಿಗೆ ದಿನಸಿ, ತರಕಾರಿ, ಬಟ್ಟೆಬರೆ ತಂದು ಕೊಡಲು ನ್ಯಾಯಾಲಯದ ಸಿಬ್ಬಂದಿಯೊಬ್ಬರಿಗೆ ಹಣವನ್ನು ಕೊಡುತ್ತಾರೆ. ನ್ಯಾಯಾಲಯದಲ್ಲಿ ನೆರೆದ ಹಲವರ ಕಣ್ಣು ಒದ್ದೆಯಾಗುತ್ತದೆ…ಇದು ಯಾವುದೋ ಹಳೇಯ ಕನ್ನಡ ಹಿಂದಿ ಸಿನಿಮಾದ ದೃಶ್ಯವಲ್ಲ. ಏಪ್ರಿಲ್ 17 ರಂದು ಬಿಹಾರಿನ ನಾಲಂದದ ಕೋರ್ಟೊಂದರಲ್ಲಿ ನಡೆದ ಅಪರೂಪದ ಘಟನೆ. ಕೆಲವು ವರ್ಷಗಳ ಹಿಂದೆ ಈ ಬಾಲಕನ ಅಪ್ಪ ತೀರಿಕೊಂಡ ನಂತರ ತಾಯಿ ಮತ್ತು 12 ವರ್ಷ ಪ್ರಾಯದ ತಮ್ಮನ ಜವಾಬ್ದಾರಿ ಇವನದಾಯಿತು. ತಾಯಿ ಮಾನಸಿಕವಾಗಿ ಅಸ್ವಸ್ಥಳು. ಯಾವುದೋ ಘಟನೆಯಲ್ಲಿ ಬಾಲಕನ ಕಾಲಿನ ಮೂಳೆ ಪೆಟ್ಟಾಗಿ ಕುಂಟಾಗಿದೆ. ಅದೂ ಸಾಲದೆಂಬಂತೆ ಕೆಲ ಸಮಯದ ಹಿಂದೆ ಕಲ್ಲು ತಾಗಿ ಇವನ ಬಲಗಣ್ಣು ಕುರುಡಾಗಿದೆ. ಹೀಗಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಕೂಲಿನಾಲಿ ಮಾಡಿ ಹೇಗೋ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಏಕಾಏಕಿ ಹೇರಲಾದ ಲಾಕ್ ಡೌನ್ ಅದನ್ನೂ ಇಲ್ಲವಾಗಿಸಿತು. ಕಳೆದ ತಿಂಗಳು ಮಾರುಕಟ್ಟೆಗೆ ಹೋದಾಗ ಒಬ್ಬ ಮಹಿಳೆಯ ಪರ್ಸನ್ನು ಕದ್ದ. ಸಿಸಿ ಟಿವಿಯ ಸಹಾಯದಿಂದ ಪೋಲಿಸರು ಇವನನ್ನು ಪತ್ತೆ ಹಚ್ಚಿ ಕೇಸು ಹಾಕಿ ಮ್ಯಾಜಿಸ್ಟ್ರೇಟ್ ಮಾನವೇಂದ್ರ ಸಿಂಗ್ ರ ಎದುರು ಹಾಜರು ಪಡಿಸಿದ್ದರು. ನ್ಯಾಯಾಧೀಶರ ಆಜ್ಞೆಯಂತೆ ಬಾಲಕನನ್ನು ಆತನ ಮನೆ ಮುಟ್ಟಿಸಲು ಹೋದ ಪೋಲಿಸರು ಆತನ ಮನೆಯ ಸ್ಥಿತಿ ನೋಡಿ ದಂಗಾದರು! ಮನೆ ಎಂದರೆ ಮುರುಕಲು ಗೋಡೆ, ಹರಿದ ಸೋಗೆಯ ಮಾಡು, ಅಷ್ಟೇ. ಮನೆಯಲ್ಲಿ ಚಾಪೆ ಇನ್ನಿತರ ವಸ್ತುಗಳು ಬಿಡಿ ಆಹಾರ ಬೇಯಿಸಲು ಇಂದು ಸ್ಟವ್ ಕೂಡಾ ಇಲ್ಲ! ತರಗೆಲೆ ಕಸಕಡ್ಡಿಗೆ ಬೆಂಕಿ ಹಾಕಿ ಅದರಲ್ಲಿ ಬೇಯಿಸಬೇಕು. ಆಧಾರ್, ರೇಷನ್ ಕಾರ್ಡ್ ಕೂಡಾ ಇಲ್ಲ. ನ್ಯಾಯಧೀಶರ ಆಜ್ಞೆಯ ಮೇರೆಗೆ ಸ್ಥಳೀಯಾಡಳಿತ ಬಾಲಕನ ಕುಟುಂಬಕ್ಕೆ ಜೀವನಾವಶ್ಯಕಗಳನ್ನು ಒದಗಿಸಲು ಈಗ ಮುಂದಾಗಿದೆ.(ಸಾಂದರ್ಭಿಕ ಚಿತ್ರ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *