ಅರಣ್ಯ ಇಲಾಖೆಯ ಅಟ್ಟಹಾಸ ತೇಪೆಹಚ್ಚಿದ ಸ್ಪೀಕರ್

ಸಿದ್ಧಾಪುರದ ಅರಣ್ಯ ಇಲಾಖೆಯ ಅಧಿಕಾರಿಗಳು ಬಾನ್ಕುಳಿ ಗ್ರಾಮದ ನೇರಳೆಮನೆಯ ಬಡ ಕೃಷಿಕರ ನಿರ್ಮಾಣ ಹಂತದ ಮನೆಯನ್ನು ಧ್ವಂಸ ಮಾಡಿದ್ದರೂ ಬಾಧಿತರಿಗೆ ನ್ಯಾಯ ಒದಗಿಸುವ ದಿಸೆಯಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಫಲವಾಗಿದ್ದು ಅಧಿಕಾರಿಗಳ ಅಟ್ಟಹಾಸದ ಅಮಾನವೀಯತೆಗೆ ವಿರೋಧಿಸದ ಸ್ಪೀಕರ್ ಕ್ರಮ ಸಾರ್ವಜನಿಕ ವಿರೋಧಕ್ಕೆ ಒಳಗಾಗಿದೆ.
ಹಳೆಯ ಮನೆಯ ಜಾಗದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದ ನೇರಳೆಮನೆಯ ನಾರಾಯಣ ದುರ್ಗಾ ನಾಯ್ಕರ ಕುಟುಂಬ ವಾಸಕ್ಕೆ ಮನೆ ಇಲ್ಲದೆ ಕೊಟ್ಟಿಗೆಯಲ್ಲಿ ವಾಸ ಮಾಡಿತ್ತು. ಮಳೆಗಾಲದ ಹಿನ್ನೆಲೆಯಲ್ಲಿ ಮನೆ ನಿರ್ಮಾಣಕ್ಕೆ ತೊಡಗಿದ್ದ ಈ ಕುಟುಂಬದ ಮನೆ ಕಾಮಗಾರಿಯ ವಸ್ತುಗಳನ್ನು ಇಂದು ಹೊತ್ತೊಯ್ದ ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿ ತಮ್ಮ ಮನೆಮುರುಕುತನವನ್ನು ಸಮರ್ಥಿಸಿದರು.
ಈ ಬಗ್ಗೆ ನ್ಯಾಯ ಸಿಗಬಹುದೆಂದು ಶಾಸಕ, ಸ್ಫೀಕರ್ ವಿಶ್ವೇಶ್ವರ ಹೆಗಡೆಯವರು ಸಭೆ ನಡೆಸುತಿದ್ದ ತಾ.ಪಂ. ಆವರಣಕ್ಕೆ ಬಂದ ಬಾಧಿತರು ಶಾಸಕರಿಗೆ ತಮ್ಮ ಅಹವಾಲು ತಿಳಿಸಿದರು. ಆದರೆ ಲಾಕ್‍ಡೌನ್, ನಿಶೇಧಾಜ್ಞೆ ಅವಧಿಯಲ್ಲಿ ಬಡರೈತರ ಮನೆ ಕಿತ್ತ ಅರಣ್ಯ ಅಧಿಕಾರಿಗಳನ್ನು ವಿಚಾರಿಸದ ಸ್ಪೀಕರ್ ಮನೆ ಇಲ್ಲದಿದ್ದರೆ ಅಧಿಕಾರಿಗಳಿಗೆ ತಿಳಿಸಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ತೇಪೆ ಹಚ್ಚಿದರು.

ಶಾಸಕರು, ಸ್ಪೀಕರ್ ಆಗಿರುವ ಸ್ಥಳಿಯ ಜನಪ್ರತಿನಿಧಿ ತೊಂದರೆಗೆ ಒಳಗಾದ ಬಡ ರೈತರಿಗೆ ಸ್ಫಂದಿಸದ ಬಗ್ಗೆ ಸ್ಥಳದಲ್ಲಿದ್ದ ಸ್ಥಳಿಯರು ದೂರಿದರು. ಅಧಿಕಾರಿಗಳು ಕಾನೂನಿನ ಬೆದರಿಕೆ ಒಡ್ಡಿದರೆ, ಜನಪ್ರತಿನಿಧಿಗಳು ಸ್ಥಳಿಯ ವಿರೋಧಿಗಳ ಮೇಲೆ ಗೂಬೆ ಕೂರಿಸಿ ಕೈ ತೊಳೆದುಕೊಳ್ಳುತ್ತಾರೆ. ಉತ್ತರಕನ್ನಡ ಜಿಲ್ಲೆಯ ಹೊರಗೆ ಇರದ ಕಾನೂನು, ಕಟ್ಟಳೆ ಇಲ್ಲ್ಯಾಕೆ ಎಂದು ವಿರೋಧ ವ್ಯಕ್ತಪಡಿಸಿರುವ ಸ್ಥಳಿಯರು. ಜಿಲ್ಲೆಯಲ್ಲಿ ನಿಷೇಧಾಜ್ಞೆ, ಲಾಕ್‍ಔಟ್ ಸಂದರ್ಭದಲ್ಲಿ ಅಧಿಕಾರಿಗಳು ಕಾನೂನು ಬಲ ಪ್ರಯೋಗದ ಅಮಾನವೀಯತೆ ಪ್ರದರ್ಶಿಸುತಿದ್ದಾರೆ. ಇದನ್ನು ನಿಯಂತ್ರಿಸಬೇಕಾದ ಜನಪ್ರತಿನಿಧಿಗಳು ಬೇಜವಾಬ್ಧಾರಿಯಿಂದ ನಡೆದುಕೊಳ್ಳುತಿದ್ದಾರೆ. ಎಂದು ಆರೋಪಿಸಿದರು.

ಅಧಿಕಾರಿಗಳ ಅಟ್ಟಹಾಸ ನಿಯಂತ್ರಿಸದ ಉತ್ತರಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಿಂದಾಗಿ ಬಹುಸಂಖ್ಯಾತ ಬಡಜನರಿಗೇ ತೊಂದರೆ ಯಾಗುತ್ತಿದೆ, ಅಧಿಕಾರಿಗಳನ್ನು ಜನಪ್ರತಿನಿಧಿಗಳು ದೂರುವುದು, ಜನಪ್ರತಿನಿಧಿಗಳು ಅಧಿಕಾರಿಗಳತ್ತ ಕೈ ತೋರುವ ನಾಟಕದಿಂದಾಗಿ ಬಡಜನರು ಗೋಳಾಡುವಂತಾಗಿದೆ ಎನ್ನುವ ಆರೋಪ ಜಿಲ್ಲೆಯಲ್ಲಿ ವ್ಯಾಪಕವಾಗುತ್ತಿದೆ.. ಈ ಬಗ್ಗೆ ಪ್ರತಿಕ್ರೀಯಿಸಿರುವ ಕರ್ನಾಟಕ ರಣಧೀರ ಪಡೆಯ ತಾಲೂಕಾ ಅಧ್ಯಕ್ಷ ಹೇಮಂತ್ ನಾಯ್ಕ ಮತ್ತು ಕರ್ನಾಟಕ ರಾಷ್ಟ್ರೀಯ ಸಮೀತಿಯ ಜಿಲ್ಲಾ ಅಧ್ಯಕ್ಷ ನಾಗರಾಜ್ ನಾಯ್ಕ ಜಿಲ್ಲೆಯಲ್ಲಿ ಬೇಜವಾಬ್ಧಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಂದಾಗಿ ಬಡ ಜನರಿಗೆ ತೊಂದರೆ ಆಗುತ್ತಿದೆ. ಈ ಅವ್ಯವಸ್ಥೆಯನ್ನು ಖಂಡಿಸುತ್ತೇವೆ ಮತ್ತು ಜಿಲ್ಲಾಡಳಿತಕ್ಕೆ ಈ ಜನರ ನೆರವಿಗೆ ಬರಲು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ಉ.ಕ. ಮುಕ್ತ,ಮುಕ್ತ,ಮುಕ್ತ
11 ಜನ ಕೋವಿಡ್ ಸೋಂಕಿತರನ್ನು ಹೊಂದಿದ್ದ ಉತ್ತರಕನ್ನಡ ಜಿಲ್ಲೆಯ ಕೊನೆಯ ಕರೋನಾ ಸೋಂಕಿತ ಇಂದು ಡಿಸ್ಚಾರ್ಜ್ ಆಗುವ ಮೂಲಕ ಉತ್ತರಕನ್ನಡ ಕರೋನಾ ಮುಕ್ತ ಜಿಲ್ಲೆಯಾಗಿದೆ. ಉತ್ತರಕನ್ನಡದ 12 ತಾಲೂಕುಗಳಲ್ಲಿ ಭಟ್ಕಳ ಹೊರತು ಪಡಿಸಿ ಉಳಿದ 11 ತಾಲೂಕುಗಳಲ್ಲಿ ಒಂದೂ ಕೋವಿಡ್ ಪ್ರಕರಣಗಳಿರಲಿಲ್ಲ.
11 ರಲ್ಲಿ ಹತ್ತು ಜನರು ಕಳೆದ ವಾರದ ಮೊದಲೇ ಗುಣಮುಖರಾಗಿದ್ದರು. ಜಿಲ್ಲೆಯ 11 ಕೋವಿಡ್ ಸೋಕಿತರೂ ಗುಣಮುಖರಾಗುವ ಮೂಲಕ ಇಂದಿನಿಂದ ಉತ್ತರಕನ್ನಡ ಕರೋನಾ ಮುಕ್ತ ಜಿಲ್ಲೆಯಾಗಿದೆ. ಭಟ್ಕಳದ ಕರೋನಾ ಕೇಸುಗಳ ಪರಿಣಾಮ ವಿಶಾಲ ಉತ್ತರಕನ್ನಡಕ್ಕೆ ತಲೆನೋವಾಗಿತ್ತು. ಲಾಕ್‍ಡೌನ್,ನಿಷೇಧಾಜ್ಞೆಗಳಿದ್ದ ಮೌನಕ್ಕೆ ಜಾರಿದ್ದ ಜಿಲ್ಲೆ ಮೇ1 ರ ಕಾರ್ಮಿಕ ದಿನಾಚರಣೆಯಂದು ಕೋವಿಡ್ ಸೋಂಕುಮುಕ್ತ ಜಿಲ್ಲೆಯಾಗಿ, ಕೂಲಿ ಕಾರ್ಮಿಕರನ್ನು ಮರಳಿಸಿದ ಜಿಲ್ಲೆಯಾಗಿ ಮುಕ್ತ, ಮುಕ್ತ ಎನ್ನುವಂತಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *