![](https://i0.wp.com/samajamukhi.net/wp-content/uploads/2020/06/mundige-kere-bird-sanctuary-sonda-sirsi-tourist-attraction-2twbmwd.jpg?resize=587%2C411&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆಕೆರೆ, ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ ಸೇರಿದಂತೆ ಒಟ್ಟು 5 ಪ್ರದೇಶಗಳನ್ನು ಪಾರಂಪರಿಕ ತಾಣಗಳಿಗೆ ಸೇರ್ಪಡೆಗೊಳಿಸಲು ವಿಶ್ವ ಪರಿಸರ ದಿನಾಚರಣೆಯ ವೇಳೆ ಅರಣ್ಯ ಇಲಾಖೆ ಹಾಗೂ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.
![ರಾಮನಗರದ ಗುಡ್ಡ One of the hillocks of Ramanagara](https://i0.wp.com/media.kannadaprabha.com/uploads/user/imagelibrary/2020/6/5/w900X450/VDFDF.jpg?w=760&ssl=1)
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆಕೆರೆ, ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ ಸೇರಿದಂತೆ ಒಟ್ಟು 5 ಪ್ರದೇಶಗಳನ್ನು ಪಾರಂಪರಿಕ ತಾಣಗಳಿಗೆ ಸೇರ್ಪಡೆಗೊಳಿಸಲು ವಿಶ್ವ ಪರಿಸರ ದಿನಾಚರಣೆಯ ವೇಳೆ ಅರಣ್ಯ ಇಲಾಖೆ ಹಾಗೂ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.
ಉತ್ತರ ಕನ್ನಡದ ಶಿರಸಿಯ ಸೋಂದಾ ಬಳಿ ಇರುವ ಮುಂಡಿಗೆಕೆರೆ ಸಣ್ಣ ಸರೋವರವಾಗಿದ್ದು, ಈ ಪ್ರದೇಶವನ್ನು ಪಾರಂಪರಿಕ ತಾಣ ಎಂದು ಗುರುತಿಸಲು ಸ್ಥಳೀಯ ಪಂಚಾಯತ್ ನಲ್ಲಿ 3 ತಿಂಗಳ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಈಗಾಗಲೇ ಈ ಪ್ರದೇಶವನ್ನು ಪಕ್ಷಿಧಾಮ ಎಂದು ಗುರುತಿಸಲಾಗಿದ್ದು, ಇದೇ ಸರಣಿಯಲ್ಲಿ ಇನ್ನೂ 10 ಸರೋವರಗಳನ್ನು ರಕ್ಷಿಸಲು ಮಂಡಳಿ ನಿರ್ಧರಿಸಿದೆ.
ಜೀವವೈವಿಧ್ಯ ಮಂಡಳಿಯ ಸದಸ್ಯರು ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ, ರಾಮನಗರ, ಚಿಕ್ಕಮಗಳೂರಿನ ಗುಡ್ಡಗಳನ್ನು ಪಾರಂಪರಿಕ ತಾಣಗಳಿಗೆ ಸೇರಿಸಲು ಕ್ರಮ ಕೈಗೊಂಡಿದ್ದಾರೆ.
ಬೋರ್ಡ್ ನ ಅಧ್ಯಕ್ಷ ಅನಂತ್ ಹೆಗ್ಡೆ ಈ ಬಗ್ಗೆ ಮಾತನಾಡಿದ್ದು, ಈ ಎಲ್ಲಾ ಪ್ರದೇಶಗಳನ್ನು ಪಾರಂಪರಿಕ ಸ್ಥಳಗಳನ್ನಾಗಿ ಘೋಷಿಸುವವರೆಗೂ ಸ್ಥಳೀಯ ಆಡಳಿತಕ್ಕೆ ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗದ ಅಂಬರಗುಡ್ಡ, ಬೆಂಗಳೂರಿನ ಗಾಂಧಿ ಜಿಕೆವಿಕೆ, ದೇವನಹಳ್ಳಿಯ ನಲ್ಲೂರು ಹುಣಸೆ ತೋಪು, ಚಿಕ್ಕಮಗಳೂರಿನ ಹೊಗ್ರೆಕನ್ ಗಳನ್ನು ಈಗಾಗಲೇ ಪಾರಂಪರಿಕ ತಾಣಗಳನ್ನಾಗಿ ಘೋಷಣೆ ಮಾಡಲಾಗಿದೆ.
![](https://i0.wp.com/samajamukhi.net/wp-content/uploads/2020/06/sahasralinga-sirsi-tourist-attraction-xlee88v0s3.jpg?resize=692%2C605&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)