amminmattu on media-ಮಾಧ್ಯಮದ ಭವಿಷ್ಯದ ಬಗ್ಗೆ ಭರವಸೆ ಇಡಿ

ನಾಲ್ಕು ವರ್ಷಗಳ ಹಿಂದಿನ ಒಂದು ಪೋಸ್ಟ್:ವೃತ್ತಿಯಾಗಿದ್ದ ಮಾಧ್ಯಮ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗಿ ಬದಲಾವಣೆಯಾಗಿರುವ ವಾಸ್ತವವನ್ನು ಒಪ್ಪಿಕೊಂಡು ಇಂದಿನ ಪತ್ರಕರ್ತರು ಕೆಲಸಮಾಡಬೇಕಾದ ಪರಿಸ್ಥಿತಿ ಇದೆ.. ಈ ಬಗ್ಗೆ ಆಕ್ಷೇಪ ಇದ್ದವರು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ. ಇದರ ಬದಲಿಗೆ ‘’ನಾನು ಒಳಗಿದ್ದೇ ಹೋರಾಡುತ್ತೇನೆ, ಇವರನ್ನೆಲ್ಲ ಬಯಲುಮಾಡುತ್ತೇನೆ, ಇದನ್ನು ಬದಲಾಯಿಸಿಯೇ ತೀರುತ್ತೇನೆ ಎಂದು ಹೊರಟವರ ಹೋರಾಟ ತಕ್ಷಣದ ಫಲ ನೀಡಲಾರದು. ಆ ಹೋರಾಟದ ಹಾದಿ ಹಿಡಿದರೆ ಪತ್ರಕರ್ತನಾಗಿ ತಾನು ಮಾಡಬಯಸಿದ್ದನ್ನು ಕೂಡಾ ಮಾಡಲಾಗದೆ ಕೊರಗುತ್ತಾ ಇರಬೇಕು- ಇದು ನನ್ನ ಖಚಿತ ಅಭಿಪ್ರಾಯ.

ಮುಂಗಾರು ಪತ್ರಿಕೆಯಲ್ಲಿ ನಾನು ಮಾಡಿದ್ದ ವರದಿಯೊಂದನ್ನು ಉಲ್ಲೇಖಿಸಿ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಮೂಡಿರುವ ಗೊಂದಲ ನಿವಾರಣೆಗೆ ಈ ಪ್ರಯತ್ನ. ಭಿನ್ನಾಭಿಪ್ರಾಯಕ್ಕೆ ಸ್ವಾಗತ.

ವೃತ್ತಿಯಾಗಿದ್ದ ಮಾಧ್ಯಮ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗಿ ಬದಲಾವಣೆಯಾಗಿರುವ ವಾಸ್ತವವನ್ನು ಒಪ್ಪಿಕೊಂಡು ಇಂದಿನ ಪತ್ರಕರ್ತರು ಕೆಲಸಮಾಡಬೇಕಾದ ಪರಿಸ್ಥಿತಿ ಇದೆ.. ಈ ಬಗ್ಗೆ ಆಕ್ಷೇಪ ಇದ್ದವರು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ. ಇದರ ಬದಲಿಗೆ ‘’ನಾನು ಒಳಗಿದ್ದೇ ಹೋರಾಡುತ್ತೇನೆ, ಇವರನ್ನೆಲ್ಲ ಬಯಲುಮಾಡುತ್ತೇನೆ, ಇದನ್ನು ಬದಲಾಯಿಸಿಯೇ ತೀರುತ್ತೇನೆ ಎಂದು ಹೊರಟವರ ಹೋರಾಟ ತಕ್ಷಣದ ಫಲ ನೀಡಲಾರದು. ಆ ಹೋರಾಟದ ಹಾದಿ ಹಿಡಿದರೆ ಪತ್ರಕರ್ತನಾಗಿ ತಾನು ಮಾಡಬಯಸಿದ್ದನ್ನು ಕೂಡಾ ಮಾಡಲಾಗದೆ ಕೊರಗುತ್ತಾ ಇರಬೇಕು- ಇದು ನನ್ನ ಖಚಿತ ಅಭಿಪ್ರಾಯ.

‘ಏನ್ಸಾರ್, ನೀವೂ ಹೀಗೆ ಹೇಳಿದರೆ ಹೇಗೆ? ಎಂದು ನನ್ನ ಯುವಪತ್ರಕರ್ತ ಮಿತ್ರರು ನನ್ನನ್ನು ದಬಾಯಿಸಬಹುದು. ಉದ್ಯಮಿಗಳ ಹಿಡಿತದಿಂದ ಮಾಧ್ಯಮ ಕ್ಷೇತ್ರವನ್ನು ಬಿಡುಗಡೆಗೊಳಿಸುವುದು ಸುದೀರ್ಘವಾದ ಹೋರಾಟ. ಅದು ನನ್ನ ತಲೆಮಾರಿನಲ್ಲಿ ಮುಗಿಯುವ ಭರವಸೆ ನನಗಿಲ್ಲವಾದರೂ ಈ ಹೋರಾಟ ವ್ಯರ್ಥ ಎಂದು ನಾನು ಹೇಳಲಾರೆ. ಈ ಹೋರಾಟ ಮುಂದುವರಿಯಬೇಕು. ನ್ಯಾಯಾಲಯದ ಒಂದು ತೀರ್ಪು, ಜ್ಞಾನೋದಯದ ಫಲವಾಗಿ ಶಾಸಕಾಂಗ ಕೈಗೊಳ್ಳುವ ಒಂದು ಜನಪರ ತೀರ್ಮಾನ ಎಲ್ಲವನ್ನೂ ಬದಲಾಯಿಸಿಬಿಡಬಹುದೇನೋ? ಆ ಭರವಸೆ ನಮ್ಮಲಿರಲಿ.


ಆದರೆ ಆ ದಿನ ಬರುವ ವರೆಗೆ ನಾನು ಪೆನ್ ಕೈಗೆತ್ತಿಕೊಳ್ಳುವುದಿಲ್ಲ ಕೀಪ್ಯಾಡ್ ಮುಟ್ಟುವುದೇ ಇಲ್ಲ ಎಂದು ಪತ್ರಕರ್ತರು ತೀರ್ಮಾನ ಕೈಗೊಂಡರೆ ಅದು ಮೂರ್ಖತನವಾಗುತ್ತದೆ. ನಮ್ಮಂತಹವರೆಲ್ಲ ಐಕಾನ್ ಎಂದು ಸ್ವೀಕರಿಸಿರುವ ಪಿ.ಸಾಯಿನಾಥ್ ‘ Everybody loves a good drought’ ಪುಸ್ತಕದ ಲೇಖನಗಳನ್ನು ಬರೆದಿರುವುದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಎನ್ನುವುದನ್ನು ಮರೆಯಬಾರದು. ಸಾಯಿನಾಥ್ ತನ್ನದೊಂದು ಆಸಕ್ತಿಯ ಕ್ಷೇತ್ರವನ್ನು ಹುಡುಕಿಕೊಳ್ಳದೆ ಮೊದಲು ಟೈಮ್ಸ್ ಆಫ್ ಇಂಡಿಯಾದೊಳಗೆ ಸಂಪಾದಕೀಯ ವಿಭಾಗದ ತಲೆಮೇಲೆ ಕೂತಿರುವ ಜಾಹಿರಾತು ವಿಭಾಗದವರ ವಿರುದ್ಧವೇ ಬರೆಯುತ್ತೇನೆ, ಇಲ್ಲದೆ ಇದ್ದರೆ ಅದರ ಮಾಲೀಕರಾದ ಜೈನ್ ಬಳಗದ ಉದ್ಯಮದ ಬಗ್ಗೆಯೇ ತನಿಖಾ ವರದಿ ಮಾಡುತ್ತೇನೆ ಎಂದು ಹೊರಟಿದ್ದರೆ ನಮಗೊಬ್ಬ ಸಾಯಿನಾಥ್ ಸಿಗುತ್ತಿರಲಿಲ್ಲ.


ಸಾಯಿನಾಥ್ ಕೆಲಸ ಮಾಡಿದ ಪತ್ರಿಕೆಗಳಲ್ಲೆಲ್ಲಾ ಇಂತಹ ಬಿಕ್ಕಟ್ಟುಗಳಿದ್ದವು. ಕಾಸಿಗಾಗಿ ಸುದ್ದಿ ಹಗರಣದ ಬಗ್ಗೆ ಅವರು ಬರೆದದ್ದು ಇತ್ತೀಚಿನ ವರ್ಷಗಳಲ್ಲಿ. ಅಲ್ಲಿಯ ವರೆಗೆ ಸುದ್ದಿಯ ಛದ್ಮವೇಷದಲ್ಲಿ ಪ್ರಕಟಗೊಳ್ಳುತ್ತಿರುವ ಜಾಹೀರಾತು ಬಗ್ಗೆ ಅವರಿಗೆ ಗೊತ್ತಿರಲಿಲ್ಲವೇ? ಖಂಡಿತ ಗೊತ್ತಿತ್ತು. ಆದರೆ ಅವರ ಆದ್ಯತೆ ಬೇರೆ ಇತ್ತು. ಈ ವಿವೇಚನೆ ಒಬ್ಬ ಪತ್ರಕರ್ತನಿಗೆ ಇರಬೇಕೆಂದು ನನ್ನ ಅಭಿಪ್ರಾಯ. ಇದನ್ನು ಪ್ರಾಯೋಗಿಗ ನೋಟ ಎನ್ನುತ್ತಿರೋ? ವ್ಯವಸ್ಥೆಯ ಜತೆ ರಾಜೀ ಎನ್ನುತ್ತಿರೋ ಇದು ನಿಮಗೆ ಬಿಟ್ಟದ್ದು.
ನಾನು ಪ್ರಜಾವಾಣಿಯಲ್ಲಿದ್ದಾಗ ಹೊಸಬರ ನೇಮಕದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೆ. ಹೆಚ್ಚಿನವರಿಗೆ ವರದಿಗಾರರಾಗಬೇಕೆಂಬ ಅದರಲ್ಲೂ ರಾಜಕೀಯ ವರದಿಗಾರರಾಗುವ ಆಸೆ. ಯಾರೊಬ್ಬರೂ ‘’ನನಗೆ ಸಾಯಿನಾಥ್ ರೀತಿಯ ಪತ್ರಕರ್ತನಾಗಬೇಕೆಂಬ ಉದ್ದೇಶ ಎಂದು ಹೇಳಿದ್ದನ್ನು ಕೇಳಿರಲಿಲ್ಲ. ಇದು ನಮ್ಮ ಸಮಸ್ಯೆ.

ಆರು ವರ್ಷಗಳ ಹಿಂದೆ ನಾನು ತೀರಾ ಅನಾರೋಗ್ಯದಿಂದ ಚೇತರಿಸಿಕೊಂಡು ಕಚೇರಿಗೆ ಬಂದಾಗ ನಮ್ಮ ಸಂಪಾದಕರು ರಾಜ್ಯದಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶದ ಪರಿಹಾರ ಕಾರ್ಯದ ಬಗ್ಗೆ ಹೋಗಿ ವರದಿಮಾಡಿ ಎಂದರು. ಆಗಿನ್ನೂ ನಾನೂ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ, ಯಾರಾದರೂ ಕಿರಿಯರು ತಾವು ಹೋಗ್ತೇವೆ ಎಂದು ಕೈ ಎತ್ತಬಹುದೇ ಎಂದು ಕಾದೆ. ಯಾರೂ ಕಾಣಲಿಲ್ಲ. ಈಗ ಪತ್ರಿಕೋದ್ಯಮದ ಬಗ್ಗೆ ತಮ್ಮ ಅಂಕಣಗಳಲ್ಲಿ ಪಾಠ ಮಾಡುವ ನನ್ನ ಹಿರಿಯ ಸಹದ್ಯೋಗಿಗಳು ಕೂಡಾ ಬಾಯಿ ಬಿಟ್ಟಿರಲಿಲ್ಲ.
ಅದರ ನಂತರ ಅಸ್ಸಾಂ ಗಲಭೆಪೀಡಿತ ಪ್ರದೇಶಕ್ಕೆ ಹೋದೆ, ಉತ್ತರಪ್ರದೇಶದ ವಿಧಾನಸಭಾ ಚುನಾವಣೆಕಾಲದಲ್ಲಿ ಒಂದು ತಿಂಗಳು ಸುತ್ತಿದೆ,ರಾಜ್ಯದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಸುಮಾರು 5000 ಕಿ.ಮೀ. ಸುತ್ತಿದೆ. ನನ್ನ ಢಂಗುರ ಬಾರಿಸಲು ಇದನ್ನು ಹೇಳುತ್ತಿಲ್ಲ. ನಾನು ಈ ವರದಿಮಾಡಲು ಹೋಗದೆ ಪ್ರಜಾವಾಣಿ ಮಾಲೀಕರು ಯಾವುದೋ ಡಿನೋಟಿಪೀಕೆಷನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಬಗ್ಗೆಯೇ ವರದಿಮಾಡುತ್ತೇನೆಂದು ಪಟ್ಟು ಹಿಡಿದು ಕೂತಿದ್ದಲ್ಲಿ ನನಗೆ ಈ ವರದಿಗಳನ್ನು ಮಾಡಲು ಅವಕಾಶ ಸಿಗುತ್ತಿತ್ತೇ?

ಅಂದಹಾಗೆ ಇಂತಹ ಆರೋಪ-ಅನುಮಾನಗಳು ಗಾಳಿಯಲ್ಲಿ ಸುಳಿದಾಡುತ್ತಿರುವಾಗಲೇ ನಾನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಕಟುಟೀಕೆಗಳ ಸರಮಾಲೆಯ ಅಂಕಣಗಳನ್ನು ಬರೆದೆ. ಸಂಪಾದಕರು ಅದರ ಒಂದು ಸಾಲು ಬದಲಿಸದೆ, ಸಣ್ಣ ಆಕ್ಷೇಪದ ಗೊಣಗಾಟವನ್ನೂ ಮಾಡದೆ ನನಗೆ ಸ್ವಾತಂತ್ರ್ಯ ಕೊಟ್ಟಿದ್ದರು.
ನಾನು ಪ್ರಾಯೋಗಿಕವಾಗಿ ನೋಡಲು ಹೋಗಿ ವ್ಯವಸ್ಥೆಯ ಜತೆ ರಾಜಿಮಾಡಿಕೊಂಡೆ ಎಂದು ಹೇಳುತ್ತಿರಾ? ತೀರ್ಮಾನ ನಿಮಗೆ ಬಿಟ್ಟದ್ದು. ನನ್ನ ತೀರ್ಮಾನದ ಹಿಂದೆ ನಾನು ಪ್ರಾರಂಭದಲ್ಲಿಯೇ ಕಲಿತ ಪಾಠ ಮತ್ತು ಕಟು ವಾಸ್ತವದ ಅರಿವು ಇತ್ತು ಎಂದಷ್ಟೇ ನಾನು ಹೇಳಬಲ್ಲೆ.

ಮುಂಗಾರು ಪತ್ರಿಕೆಗೆ ಹೊಟೇಲ್ ಉದ್ಯಮಿ ರಾಂಪಣ್ಣ ಕೂಡಾ ಒಬ್ಬ ನಿರ್ದೇಶಕರಾಗಿದ್ದರು. ಅವರ ಮನೆಯಲ್ಲಿ ನಡೆದ ಭೂತದ ಕೋಲದ ಪೋಟೊ ಮುಂಗಾರು ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂದು ಅವರ ಬಯಕೆಯಾಗಿತ್ತು. ಇದಕ್ಕಾಗಿ ಆಗಿನ ನಮ್ಮ ಸಂಪಾದಕೀಯ ಬಳಗದಲ್ಲಿ ಒಂದು ದೊಡ್ಡ ‘ಸೈದ್ಧಾಂತಿಕ ಯುದ್ಧ’ವೇ ನಡೆದಿತ್ತು. ತಿರುಗಿನೋಡಿದಾಗ ಆ ಯುದ್ಧದಲ್ಲಿ ಪಾಲ್ಗೊಂಡವರಿಗೂ ಅಂದಿನ ಜಗಳ ಬಾಲಿಷ ಅನಿಸಬಹುದು. ಮುಂಗಾರು ಇಂದಿಗೂ ಉಳಿದಿದ್ದರೆ ಅವಿಭಜಿತ ದಕ್ಷಿಣ ಕನ್ನಡ ತಥಾಕಥಿತ ‘ಹಿಂದುತ್ವದ ಪ್ರಯೋಗಶಾಲೆ’; ಖಂಡಿತ ಆಗುತ್ತಿರಲಿಲ್ಲ ಎನ್ನುವುದು ನನ್ನ ನಂಬಿಕೆ. ವೃತ್ತಿಯ ಪ್ರಾರಂಭದ ದಿನಗಳಲ್ಲಿ ನಾನು ಬೆರಗುಕಣ್ಣುಗಳಿಂದ ನೋಡುತ್ತಿದ್ದ, ಗುರುವೆಂದು ಈಗಲೂ ತಿಳಿದುಕೊಂಡಿರುವ ಎನ್.ಎಸ್. ಶಂಕರ್ ಅವರ ಅಭಿಪ್ರಾಯ ಬೇರೆ ಇರಬಹುದೇನೋ? ಅದನ್ನು ತಿಳಿದುಕೊಳ್ಳುವ ಆಸೆ ನನಗೂ ಇದೆ.
ಇದನ್ನೆಲ್ಲ ಬರೆಯುತ್ತಲೇ ಹೋಗಬಹುದು, ಮತ್ತೊಮ್ಮೆ ಈ ಬಗ್ಗೆ ಮಾತಾಡೋಣ. ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಂಡು ಮುನ್ನಡೆಯೋಣ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *