![](https://i0.wp.com/samajamukhi.net/wp-content/uploads/2020/06/New-Project-7.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ರಾಜ್ಯ ವಿಧಾನಸಭೆ ಅಧ್ಯಕ್ಷ ಮತ್ತು ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷುಲ್ಲಕ ರಾಜಕಾರಣ ಮತ್ತು ಬೃಷ್ಟಾಚಾರದ ಪೋಷಣೆಯಲ್ಲಿ ತೊಡಗಿದ್ದಾರಾ ಎನ್ನುವ ಪ್ರಶ್ನೆ ರಾಜ್ಯಮಟ್ಟದಲ್ಲಿ ಧುತ್ತನೆ ಎದ್ದಿದ್ದು ಅದಕ್ಕೆ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಾಗಿರುವ ಅಪರಾತಪರಾಗಳು ಸಾಕ್ಷಿ ಒದಗಿಸುವಂತಿವೆ.
ಕರೋನಾ ಲಾಕ್ ಔಟ್ ಹಿನ್ನೆಲೆ, ವಲಸೆ ಕಾರ್ಮಿಕರ ನೆಪದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ಅವ್ಯವಹಾರಗಳು ನಡೆದಿವೆ. ಈ ಅವ್ಯವಹಾರ, ಅಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರ ನೇರ ಕೈವಾಡವಿದ್ದರೆ,ಸಭ್ಯತೆ,ಸರಳತೆಗಳ ನಾಟಕದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಾ ಈ ಅವ್ಯವಹಾರದಲ್ಲಿ ಪಾಲುದಾರರಾಗಿರುವುದು ಈಗ ಚರ್ಚೆಯ ವಿಷಯವಾಗಿದೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕ ಕಲ್ಯಾಣ ಇಲಾಖೆಯ ಹಣದಲ್ಲಿ ತಮ್ಮ ಕ್ಷೇತ್ರದಲ್ಲಿ 5 ಸಾವಿರ ಆಹಾರ ಕಿಟ್ ವಿತರಿಸಿದ್ದು ಸುದ್ದಿಯಾಗಿತ್ತು. ಈ ಕಿಟ್ ಅವ್ಯವಹಾರದ ವಾಸನೆ ಹಿಡಿದ ವಕೀಲ, ಜಿಲ್ಲಾ ಅರಣ್ಯ ಹಕ್ಕು ಹೋರಾಟಸಮೀತಿ ಅಧ್ಯಕ್ಷ ಎ.ರವೀಂದ್ರ ಹೆಬ್ಬಾರರ ಕಿಟ್ ಹಣದ ಧನದ ಮೂಲ ತಿಳಿಸಿ ಎಂದು ಲೆಕ್ಕ ಕೇಳಿದ್ದರು.
ಇದಕ್ಕೂ ಮೊದಲೇ ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ರಾಜ್ಯ ವಿಧಾನಸಭೆ ಅಧ್ಯಕ್ಷರು ಆರೋಗ್ಯ ಇಲಾಖೆಯ ಪರಿಕರಗಳ ಖರೀದಿಯ ಹಗರಣದ ತನಿಖೆಗೆ ತಡೆಯಾಜ್ಞೆ ನೀಡುವ ಮೂಲಕ ಬೃಷ್ಟಾಚಾರಕ್ಕೆ ಬೆಂಬಲಿಸಿದ್ದಾರೆ. ಈ ವಿಚಾರದಲ್ಲಿ ವಿಶ್ವೇಶ್ವರ ಹೆಗಡೆ ಪ್ರಾಮಾಣಿಕರಾಗಿದ್ದರೆ ಅವರ ಊರ ಮಾರಿಕಾಂಬಾ ದೇವಿಯ ಎದುರು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು.
ಈ ಎರಡೂ ಪ್ರಕರಣಗಳೂ ಬಿಡಿಬಿಡಿ ಸನ್ನಿವೇಶಗಳಾದರೂ ಈ ಘಟನೆಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಮತ್ತು ವಿಧಾನಸಭಾ ಅಧ್ಯಕ್ಷ ಕಾಗೇರಿ ಹೆಗಡೆಯವರ ಕೈವಾಡವಿರುವುದು ಸ್ಫಷ್ಟ.
ಹೀಗೆ ಎರಡು ಜನ ಅಧಿಕಾರಸ್ಥರು, ಹಿರಿಯ ರಾಜಕಾರಣಿಗಳಾದ ಕಾಗೇರಿ, ಹೆಬ್ಬಾರ್ ಅವ್ಯವಹಾರದ ಬಗ್ಗೆ ಈಗ ರಾಜ್ಯದಾದ್ಯಂತ ಆರೋಪಗಳ ಸುರಿಮಳೆ ಶುರುವಾಗಿದೆ. ಇದಕ್ಕೆ ಪೂರಕವಾಗಿ ಶಿರಸಿ ಕ್ಷೇತ್ರದಲ್ಲಿ ಖರೀದಿಸಿದ ಆಹಾರದ ಕಿಟ್ ಗಳು ಮತ್ತು ವಿತರಿಸಿದ ಫಲಾನುಭವಿಗಳ ಆಯ್ಕೆಯಲ್ಲಿ ಪಕ್ಷಪಾತ, ರಾಜಕಾರಣ ನಡೆದಿರುವ ಬಗ್ಗೆ ಆಕ್ಷೇಪಗಳೆದ್ದಿವೆ.
ಎರಡು-ಮೂರು ಹಂತಗಳಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಕ್ಷೇತ್ರದಲ್ಲಿ ವಿತರಿಸಿದ ಕಿಟ್ ಗಳನ್ನು ಬಿ.ಜೆ.ಪಿ. ಕಾರ್ಯಕರ್ತರಿಗೆ ನೀಡಿ, ಅರ್ಹರಿಗೆ ವಂಚಿಸಲಾಗಿದೆ ಎಂದು ಇಟಗಿ ಗ್ರಾ,ಪಂ ಸದಸ್ಯ ಸುರೇಂದ್ರ ಗೌಡ ಆರೋಪಿಸಿದ್ದಾರೆ.
ಹೀಗೆ ಕರೋನಾ ಕಾರಣದ ಆಹಾರ ಕಿಟ್ ಅವ್ಯವಹಾರ, ಪಕ್ಷಪಾತಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆಬ್ಬಾರ್ ಮತ್ತು ಕಾಗೇರಿ ಹೆಗಡೆಗಳ ಹೆಸರು ಕೇಳಿ ಬಂದಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ತಯಾರಿ ಕೂಡಾ ನಡೆದಿರುವುದು ಬಹಿರಂಗವಾಗಿದೆ.
ದೇಶಪ್ರೇಮ, ರಾಷ್ಟ್ರೀಯತೆಯ ಹೆಸರು ಹೇಳುತ್ತಾ ಉತ್ತರ ಕನ್ನಡ ಜಿಲ್ಲೆಯ ಕೋಮುವಾದಿ ರಾಜಕಾರಣಿಗಳು ಮಾಡುತ್ತಿರುವ ಅನ್ಯಾಯ ,ಅಕ್ರಮ, ಅವ್ಯವಹಾರ ಬಯಲಾಗಿದ್ದು ಸಮಾಜಮುಖಿ ಈ ಅವ್ಯವಹಾರದ ಫುಲ್ಡಿಟೇಲ್ಸ್ ಮಾಹಿತಿಯನ್ನು ಇಷ್ಟರಲ್ಲೇ ಪ್ರಕಟಿಸಲಿದೆ.
ದೇಶಪ್ರೇಮ, ರಾಷ್ಟ್ರೀಯತೆ, ಹಿಂದುತ್ವದ ಹೆಸರಲ್ಲಿ ವಂಚಿಸುವುದನ್ನೇ ರಾಜಕಾರಣ ಎಂದುಕೊಂಡಿರುವ ಈ ಗೋಮುಖವ್ಯಾಘ್ರಗಳ ಕರೋನಾ ಕಿಟ್ಲೂಟಿ ಬಗ್ಗೆ ಸಾರ್ವಜನಿಕ ವಲಯ ಕೂಡಾ ಛೀ.. ಥೂ… ಎನ್ನತೊಡಗಿದೆ.
(burnning issue) ಭೂಸುಧಾರಣೆ ಕಾಯಿದೆ ತಿದ್ದುಪಡಿ ಯಾರ ಹಿತಕ್ಕಾಗಿ?
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಹೋರಾಡಲು ಡಾ. ಶಶಿಭೂಷಣ ಹೆಗಡೆ ಕರೆ
ಬಲಪಂಥೀಯ ಪಕ್ಷಗಳು ರೈತ ವಿರೋಧಿ ಮತ್ತು ಬಂಡವಾಳಶಾಹಿ ಪರ ಎನ್ನುವುದನ್ನು ಭೂಸುಧಾರಣೆ ಕಾಯಿದೆ ತಿದ್ದುಪಡಿ ಮೂಲಕ ಮತ್ತೊಮ್ಮೆ ಸಾಬೀತು ಮಾಡಿವೆ ಎಂದು ಬಲವಾಗಿ ಆರೋಪಿಸಿರುವ ಜಾತ್ಯಾತೀತ ಜನತಾದಳ ಮುಖಂಡ ಡಾ.ಶಶಿಭೂಷಣ ಹೆಗಡೆ ಈ ಕಾಯಿದೆ ತಿದ್ದುಪಡಿ ಮಾಡುವ ಮೂಲಕ ಬಿ.ಜೆ.ಪಿ. ಸರ್ಕಾರ ಐತಿಹಾಸಿಕ ಪ್ರಮಾದ ಮಾಡುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಆರೋಪ ಮಾಡಿದ ಅವರು ಕರ್ನಾಟಕದ ಪಂಚಾಯತ್ ರಾಜ್ ಮಸೂದೆ ಮತ್ತು ಭೂಸುಧಾರಣೆ ಕಾಯಿದೆಯನ್ನು ದೇಶದ ಚಾರಿತ್ರಿಕ ಶಾಸನಗಳು ಎನ್ನುತ್ತಾರೆ. ಇಂಥ ಮಹತ್ವದ ಮಸೂದೆಯ ಕೆಲವು ಪರಿಶ್ಚೇಧಗಳನ್ನು ತಿದ್ದುಪಡಿ ಮಾಡುವ ಮೂಲಕ ರಾಜ್ಯ ಸರ್ಕಾರ ರೈತರ ಪಾಲಿಗೆ ಮರಣಶಾಸನ ಬರೆಯುತ್ತಿದೆ ಎಂದರು. ರೈತರ ಹಿತ ಕಾಪಾಡುವ ಶಾಸನವೊಂದನ್ನು ತಿದ್ದುಪಡಿ ಮಾಡುವಾಗ ರೈತರ ಬವಣೆ ಬಗ್ಗೆ ಚಿಂತಿಸದ ಸರ್ಕಾರದ ಆದ್ಯತೆ ಏನು ಎನ್ನುವುದು ಸ್ಫಸ್ಟವಾಗುತ್ತದೆ. ಈ ರೈತವಿರೋಧಿ ತಿದ್ದುಪಡಿ ವಿರುದ್ಧ ಪಕ್ಷ,ಪ್ರಾದೇಶಿಕತೆಗಳ ಬೇಧವಿಲ್ಲದೆ ಎಲ್ಲರೂ ಒಂದಾಗಿ ಹೋರಾಟ ಮಾಡುವ ಕಾಲ ಬಂದಿದೆ ಎಂದರು.
![](https://i0.wp.com/samajamukhi.net/wp-content/uploads/2020/05/IMG-20200513-WA0055.jpg?resize=720%2C628&ssl=1)
![](https://i0.wp.com/samajamukhi.net/wp-content/uploads/2020/05/IMG-20200508-WA0029.jpg?resize=760%2C912&ssl=1)
![](https://i0.wp.com/samajamukhi.net/wp-content/uploads/2020/03/hebbar-visit.jpg?resize=760%2C428&ssl=1)
![](https://i0.wp.com/samajamukhi.net/wp-content/uploads/2020/05/20200502_181436-1.jpg?resize=760%2C616&ssl=1)
![](https://i0.wp.com/samajamukhi.net/wp-content/uploads/2020/06/New-Project-7.jpg?resize=760%2C506&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)