news today- ರಾಜ್ಯಾದ್ಯಂತ ಮಾಸ್ಕ್ ದಿನ ಆಚರಣೆ, ಭೂಸುಧಾರಣೆ ಕಾಯಿದೆ ತಿದ್ದುಪಡಿಗೆ ವಿರೋಧ

ಇಂದು ರಾಜ್ಯದಾದ್ಯಂತ ಮಾಸ್ಕ್ ದಿನ ಆಚರಿಸಲಾಗಿದ್ದು ಮುಖಗವಸು ಕಟ್ಟಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಬಳಕೆಯ ಉಪಯೋಗಗಳನ್ನು ತಿಳಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲೂ ಸ್ಥಳಿಯ ಆಡಳಿತಗಳು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಸಿದವು. ಸಿದ್ಧಾಪುರದಲ್ಲಿ ನಗರದಲ್ಲಿ ಮರವಣಿಗೆ ನಡೆಸಿದ ಕೋವಿಡ್ ಕಾರ್ಯಕರ್ತರು ಚಂದ್ರಗುತ್ತಿ ವೃತ್ತದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಮಾಸ್ಕ್ ಪ್ರಯೋಜನ ಮತ್ತು ಮಾಸ್ಕ್ ದಿನದ ಮಹತ್ವ ಸಾರಿದರು.

ಮನವಿ ಅರ್ಪಣೆ- ರಾಜ್ಯ ಸರ್ಕಾರದ ಎಂ.ಪಿ.ಎಂ.ಸಿ. ಕಾಯಿದೆ ತಿದ್ದುಪಡಿ ಮತ್ತು ಭೂಸುಧಾರಣೆ ಕಾಯಿದೆ ತಿದ್ದುಪಡಿ ವಿರುದ್ಧ ಜನಜಾಗೃತಿ ನಡೆಯುತಿದ್ದು ರಾಜ್ಯದ ಅನೇಕ ಕಡೆ ರೈತ ಸಂಘಟನೆಗಳು ವಿರೋಧಿಪಕ್ಷಗಳು ಈ ಕಾಯಿದೆ ತಿದ್ದುಪಡಿ ಪ್ರಸ್ತಾಪ ಹಿಂಪಡೆಯಬೇಕೆಂದು ಹೋರಾಟ ಮಾಡಿವೆ.

ಉತ್ತರಕನ್ನಡ ಜಿಲ್ಲೆಯಲ್ಲೂ ಕೆಲವೆಡೆ ಪ್ರತಿಭಟನೆ, ಮನವಿ ಅರ್ಪಣೆಗಳು ನಡೆದಿವೆ. ಇಂದು ಸಿದ್ಧಾಪುರದಲ್ಲಿ ಜನತಾದಳ ಜಾತ್ಯಾತೀತ ಪಕ್ಷದ ಜಿಲ್ಲಾ ಘಟಕದಿಂದ ರಾಜ್ಯಸರ್ಕಾರ ಕರ್ನಾಟಕ ಭೂಸುಧಾರಣೆಕಾಯಿದೆಗೆ ತರುತ್ತಿರುವ ಬದಲಾವಣೆ, ತಿದ್ದುಪಡಿ ಕ್ರಮವನ್ನು ಖಂಡಿಸಲಾಯಿತು. ಈ ಬಗ್ಗೆ ಸ್ಥಳಿಯ ತಹಸಿಲ್ಧಾರ ಮಂಜುಳಾ ಭಜಂತ್ರಿಯವರ ಮೂಲಕ ರಾಜ್ಯ ರಾಜಪಾಲರಿಗೆ ಮನವಿ ನೀಡಿದ ಮುಖಂಡರು ಈ ಕಾಯಿದೆ ತಿದ್ದುಪಡಿ ಪ್ರಸ್ತಾಪ ಕೈ ಬಿಡುವಂತೆ ಆಗ್ರಹಿಸಿದರು.

1974 ರಲ್ಲಿ ದೇವರಾಜ್ ಅರಸು ಭೂಸುಧಾರಣೆ ಕಾಯಿದೆ ಜಾರಿ ಮಾಡಿ ರಾಜ್ಯದ ಜನತೆಗೆ ಬದುಕು ಕೊಟ್ಟಿದ್ದರು, ಈಗ ಈಗಿನ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರ ಊಳುವವನೇ ಒಡೆಯನಾಗಿದ್ದವನಿಂದ ಜಮೀನು ಕಸಿದು ಉಳ್ಳವರನ್ನು ಒಡೆಯನ್ನಾಗಿಸಹೊರಟಿದೆ. ಇದರಿಂದ ಬಡ ರೈತರಿಗೆ ತೊಂದರೆ ಕಪ್ಪು ಹಣ ಇದ್ದವರಿಗೆ ಲಾಭ ಆಗಲಿದೆ. ಜನವಿರೋಧಿಯಾದಂಥ ಅಂಶಗಳನ್ನು ಈ ಕಾನೂನಿನಲ್ಲಿ ಸೇರಿಸಿ, ರಾಜ್ಯದ ರೈತರಿಗೆ ತೊಂದರೆಮಾಡುವ ಈ ಕಾಯಿದೆ ತಿದ್ದುಪಡಿ ಆಗಬಾರದು, ಈ ಬಗ್ಗೆ ಪಕ್ಕ, ಸಂಘ, ಸಂಸ್ಥೆಗಳು, ಜನಸಾಮಾನ್ಯರೂ ಕೂಡಾ ಹೋರಾಟಕ್ಕಿಳಿಯುವ ಅನಿವಾರ್ಯತೆ ಎದುರಾಗಿದೆ.- ಬಿ.ಆರ್. ನಾಯ್ಕ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ.

yesardays breaking news-
ವಿಧಾನಸಭಾ ಅಧ್ಯಕ್ಷರ ಬೃಷ್ಟರಾಜಕಾರಣ: ಎಲ್ಲಡೆ ತಕರಾರು! ಛೀ… ಥೂ… ಗೌರವ.
ರಾಜ್ಯ ವಿಧಾನಸಭೆ ಅಧ್ಯಕ್ಷ ಮತ್ತು ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷುಲ್ಲಕ ರಾಜಕಾರಣ ಮತ್ತು ಬೃಷ್ಟಾಚಾರದ ಪೋಷಣೆಯಲ್ಲಿ ತೊಡಗಿದ್ದಾರಾ ಎನ್ನುವ ಪ್ರಶ್ನೆ ರಾಜ್ಯಮಟ್ಟದಲ್ಲಿ ಧುತ್ತನೆ ಎದ್ದಿದ್ದು ಅದಕ್ಕೆ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಾಗಿರುವ ಅಪರಾತಪರಾಗಳು ಸಾಕ್ಷಿ ಒದಗಿಸುವಂತಿವೆ.


ಕರೋನಾ ಲಾಕ್ ಔಟ್ ಹಿನ್ನೆಲೆ, ವಲಸೆ ಕಾರ್ಮಿಕರ ನೆಪದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ಅವ್ಯವಹಾರಗಳು ನಡೆದಿವೆ. ಈ ಅವ್ಯವಹಾರ, ಅಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರ ನೇರ ಕೈವಾಡವಿದ್ದರೆ,ಸಭ್ಯತೆ,ಸರಳತೆಗಳ ನಾಟಕದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಾ ಈ ಅವ್ಯವಹಾರದಲ್ಲಿ ಪಾಲುದಾರರಾಗಿರುವುದು ಈಗ ಚರ್ಚೆಯ ವಿಷಯವಾಗಿದೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕ ಕಲ್ಯಾಣ ಇಲಾಖೆಯ ಹಣದಲ್ಲಿ ತಮ್ಮ ಕ್ಷೇತ್ರದಲ್ಲಿ 5 ಸಾವಿರ ಆಹಾರ ಕಿಟ್ ವಿತರಿಸಿದ್ದು ಸುದ್ದಿಯಾಗಿತ್ತು. ಈ ಕಿಟ್ ಅವ್ಯವಹಾರದ ವಾಸನೆ ಹಿಡಿದ ವಕೀಲ, ಜಿಲ್ಲಾ ಅರಣ್ಯ ಹಕ್ಕು ಹೋರಾಟಸಮೀತಿ ಅಧ್ಯಕ್ಷ ಎ.ರವೀಂದ್ರ ಹೆಬ್ಬಾರರ ಕಿಟ್ ಹಣದ ಧನದ ಮೂಲ ತಿಳಿಸಿ ಎಂದು ಲೆಕ್ಕ ಕೇಳಿದ್ದರು.
ಇದಕ್ಕೂ ಮೊದಲೇ ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರೆಡ್ಡಿ ರಾಜ್ಯ ವಿಧಾನಸಭೆ ಅಧ್ಯಕ್ಷರು ಆರೋಗ್ಯ ಇಲಾಖೆಯ ಪರಿಕರಗಳ ಖರೀದಿಯ ಹಗರಣದ ತನಿಖೆಗೆ ತಡೆಯಾಜ್ಞೆ ನೀಡುವ ಮೂಲಕ ಬ್ರಷ್ಟಾ ಚಾರಕ್ಕೆ ಬೆಂಬಲಿಸಿದ್ದಾರೆ. ಈ ವಿಚಾರದಲ್ಲಿ ವಿಶ್ವೇಶ್ವರ ಹೆಗಡೆ ಪ್ರಾಮಾಣಿಕರಾಗಿದ್ದರೆ ಅವರ ಊರ ಮಾರಿಕಾಂಬಾ ದೇವಿಯ ಎದುರು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು.
ಈ ಎರಡೂ ಪ್ರಕರಣಗಳೂ ಬಿಡಿಬಿಡಿ ಸನ್ನಿವೇಶಗಳಾದರೂ ಈ ಘಟನೆಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಮತ್ತು ವಿಧಾನಸಭಾ ಅಧ್ಯಕ್ಷ ಕಾಗೇರಿ ಹೆಗಡೆಯವರ ಕೈವಾಡವಿರುವುದು ಸ್ಫಷ್ಟ…………….. ಓದಿ-ವಿಧಾನಸಭಾ ಅಧ್ಯಕ್ಷರ ಬೃಷ್ಟರಾಜಕಾರಣ: ಎಲ್ಲಡೆ ತಕರಾರು! ಛೀ… ಥೂ… ಗೌರವ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *