pete mandi hallige bandru-corona-effect-ಪಟ್ಟಣವೋ, ಹಳ್ಳಿಯೋ ಉತ್ತರ ಸಿಗದ ಬದುಕು.

ಅದೆಷ್ಟೋ ಹಳ್ಳಿ ಯುವಕ, ಯುವತಿಯರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಜೀವನದಲ್ಲಿ ಹಲವಾರು ಕನಸುಗಳು ಹಾಗೂ ಮನೆಯ ಜವಾಬ್ದಾರಿಗಳನ್ನು ಹೊತ್ತು ಕೆಲಸವನ್ನು ಅರಸಿ ಬೆಂಗಳೂರಿನತ್ತ ಮುಖ ಮಾಡಿದ್ದರು. ತಮ್ಮ ತಮ್ಮ ಕೌಶಲ್ಯಗಳಿಗನುಸಾರವಾಗಿ ಕೆಲಸವನ್ನು ಪಡೆದುಕೊಂಡಿದ್ದರು. ಕಷ್ಟಪಟ್ಟು  ರಾತ್ರಿ ಹಗಲು ದುಡಿದು ಸಂಬಳವನ್ನು ತಿಂಗಳ ಕೊನೆಯಲ್ಲಿ ಕಾದು ಅದನ್ನು ಪಡೆದು ಮನೆಯ ಖರ್ಚುಗಳನ್ನು ಹಾಗೂ ತಮ್ಮ ಖರ್ಚುಗಳನ್ನು ನಿಭಾಯಿಸುತ್ತಿದ್ದರು.        ಕೆಲವರಿಗೆ ಒಬ್ಬ ವ್ಯಕ್ತಿ ಬೆಂಗಳೂರಿನಲ್ಲಿ ಇದ್ದಾನೆ ಎಂದರೆ ಸಾಕು ಅವನೇನು ಅರಾಮಿದ್ದಾನೆ ಒಳ್ಳೆಯ  ಕೆಲಸ, ಒಳ್ಳೆಯ ಸಂಬಳ ಅಂತೆಲ್ಲ ಅಂದುಕೊಳ್ಳುತ್ತಾರೆ. ಆದರೆ ಅವನು ಎಲ್ಲಾ ಜಂಜಾಟಗಳ ಮಧ್ಯೆ ರಾತ್ರಿ ಹಗಲು ಪಡುವ ಕಷ್ಟ ಅವನಿಗೆ ಮಾತ್ರ ಗೊತ್ತಿರತ್ತೆ, ನೋಡೋಕೆ ಚೆನ್ನಾಗಿ ಕಾಣುತ್ತಿರಬಹುದು ಅಷ್ಟೇ. ಕೆಲವರು ಅವನಿಗೆ ಇರುವ ಸಂಬಳದ ಇಮ್ಮಡಿ ಸಂಬಳ ಇದೆ ಎಂದುಕೊಂಡಿರುತ್ತಾರೆ. ಜನರ ಯೋಚನೆಗೆ ತಡೆ ಎಲ್ಲಿರತ್ತೆಸುಮ್ಮನೆ ಉಪಮೇಯ ಅಲಂಕಾರಗಳನ್ನು ಹಚ್ಚಿ ಹೊಗಳುತ್ತಾರೆ . ಬರುವ ಸಂಬಳದಲ್ಲಿ ಇರುವ ಖರ್ಚುಗಳನ್ನು ಕಳೆದು ಸೌಲ್ಪ ಹಣವನ್ನು ತಮ್ಮ ಮುಂದಿನ ಭವಿಷ್ಯಕ್ಕೆ ಉಳಿಸಿಕೊಳ್ಳುವುದು  ಅವರ ತಲೆಯಲ್ಲಿ ಸದಾ ಇರುತ್ತದೆ. ಇವೆಲ್ಲದರ ಮಧ್ಯೆ ಹೇಗೋ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು. ಆದರೆ ಕೆಲ ತಿಂಗಳುಗಳಿಂದ ಹರಡುತ್ತಿರುವ ಮಾರಕ ಕೊರೊನಾ ರೋಗದಿಂದ  ಹಲವಾರು ಕುಟುಂಬಗಳ, ಯುವಕರ, ಯುವತಿಯರ ಬದುಕು ಅತೀ ಕ್ಲಿಷ್ಟಕರವಾಗಿದೆ. ಹೇಗೋ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತಿದ್ದವರ ಸ್ಥಿತಿ ಕೆಲಸವಿಲ್ಲದೇ ಪರದಾಡುವಂತಾಗಿದೆ. ಅವರು ಕೆಲಸ ಮಾಡುತ್ತಿದ್ದ ಹಲವಾರು ಖಾಸಗಿ ಕಂಪನಿಗಳು ಈ ಕೊರೊನ ರೋಗದ ಪರಿಣಾಮದಿಂದ ಮುಚ್ಚಿರುವ ಕಾರಣ ಹೆಚ್ಚಿನ ನಿರುದ್ಯೋಗ ಉಂಟಾಗಿದೆ. ಎಲ್ಲರೂ ದಾರಿ ತೋಚದೆ ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮೊದಲೆಲ್ಲ ಬೆಂಗಳೂರಿನಿಂದ ಊರಿಗೆ ಬಂದವರನ್ನು ಚೆನ್ನಾಗಿ ಮಾತನಾಡಿಸಿ ಸ್ವಾಗತಿಸುತ್ತಿದ್ದ ಜನ ಇವಾಗ ಅಲ್ಲಿಂದ ಯಾಕಾದರೂ ಬರುತ್ತಾರೋ ಅನ್ನೋ ಮಟ್ಟಿಗೆ ಬಂದು ತಲುಪಿದೆ.

ಅನಿವಾರ್ಯದ ಸ್ಥಿತಿ ಕೆಲಸವು ಇಲ್ಲದೆ ಯಾವುದೇ ಆದಾಯವಿಲ್ಲದೆ ಬೆಂಗಳೂರಿನಲ್ಲಿ ಅಥವಾ ಯಾವುದೇ ಪಟ್ಟಣದಲ್ಲಿ ಇರಲು ಸಾಧ್ಯವೇ, ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೆ ಊರಿನ ಕಡೆ ಬಂದಿರುತ್ತಾರೆಯೇ ಹೊರತು ಈ ಕೊರೊನ ಸೋಂಕನ್ನು ಹಳ್ಳಿಗಳಿಗೆ ಅಲ್ಲಿರುವ ಜನರಿಗೆ ಹರಡಬೇಕೆಂಬ ಉದ್ದೇಶ ಅವರದಾಗಿರುವುದಿಲ್ಲ. ಇಷ್ಟಾದರೂ ಅವರಿಗೆ ನಮ್ಮ ಮುಂದಿನ ಭವಿಷ್ಯವೇನು, ನನ್ನ ಜೀವನ ಹೇಗೆ ಎಂಬ ಚಿಂತೆ ಕಾಡುತ್ತದೆ. ಮೊದಲಿನಿಂದ ಊರಿನಲ್ಲಿದ್ದ ಯುವಕರು ಸಣ್ಣ ಪುಟ್ಟ ಕೆಲಸ ಮಾಡುತ್ತಿರುತ್ತಾರೆ. ಆದರೆ ಇವರು ಊರಿನಲ್ಲಿ ಏನು ಮಾಡುವುದೆಂದು ತೋಚದೆ ಅದರ ಬಗ್ಗೆಯೇ ಆಲೋಚಿಸುತ್ತಿರುತ್ತಾರೆ. ಗಾರೆ ಕೆಲಸ ಹಾಗೂ ಇನ್ನಿತರ ಕೆಲ್ಸಕ್ಕೆ ಕೆಲವರು ಹೋಗುತ್ತಿದ್ದಾರೆ, ಈ ಕೆಲಸ ಮಾಡಲು ಇಷ್ಟೆಲ್ಲ ಓದಿ ಪಟ್ಟಣಕ್ಕೆ ಹೋಗಿ ಬರಬೇಕಿತ್ತ ಎಂದು ಅಣುಕಿಸುವ ಕೆಲವು ಜನರು. ಇದೆಲ್ಲ ಬಿಟ್ಟು ಏನಾದರು ವ್ಯಾಪಾರ ಮಾಡೋಣ ಎಂದುಕೊಂಡರೆ ಈಗಾಗಲೇ ಎಲ್ಲಾ ಕ್ಷೇತ್ರದ ವ್ಯಾಪಾರಗಳು ಸ್ಪರ್ಧಾತ್ಮಕವಾಗಿವೆ. ಅವರೆಲ್ಲರಿಗಿಂತ ದೊಡ್ಡದಾಗಿ ವ್ಯಾಪಾರ ಮಾಡಲು ಬಂಡವಾಳದ ಕೊರತೆ ಎದುರಾಗುತ್ತದೆ. ಈ ಮಹಾಮಾರಿಯಿಂದ ಹಲವಾರು ಕುಟುಂಬಗಳು ಬೀದಿಗೆ ಬರುವ ಸ್ಥಿತಿಗೆ ಬಂದು ತಲುಪಿವೆ. ಬಹುಬೇಗ ಈ ಸೋಂಕು ನಮ್ಮ ರಾಜ್ಯದಿಂದ, ದೇಶದಿಂದ, ಪ್ರಪಂಚದಿಂದ ದೂರವಾಗಿ ಎಲ್ಲವೂ ಮೊದಲಿನಂತೆ ಸಹಜ ಸ್ಥಿತಿಗೆ ತಲುಪುವಂತಾಗಲಿ. ಇದಕ್ಕೆ ಎಲ್ಲರ ಸಹಕಾರ ಬಹುಮುಖ್ಯವಾಗಿರುತ್ತದೆ. ಸರ್ಕಾರದ ಆದೇಶಗಳನ್ನು ಪಾಲಿಸಿ ಈ ಸೋಂಕನ್ನು ಓಡಿಸಲು ಎಲ್ಲರೂ ಹೋರಾಡಬೇಕಾಗಿದೆ. 

✍✍ ಗೋಪಾಲ್ ನಾಯ್ಕ್ ಮನಮನೆ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *