ಮತ್ತೆ ಬರುತಿದ್ದಾರೆ ಶಂಕರ್!

ಶಂಕರ್ ಸಿ.ಎ. 30 ವರ್ಷಗಳ ಹಿಂದಿನ ದೊಡ್ಡ ಹೆಸರು.

ಸಿದ್ಧಾಪುರದಂಥ ಸಾಂಪ್ರದಾಯಿಕ ಹಳ್ಳಿಯಂಥ ತಾಲೂಕಿನಲ್ಲಿ ಆ ಕಾಲದಲ್ಲೇ ಡಿ.ಎಸ್.ಎಸ್. ನ ಪ್ರತಿಭಟನೆಗಳು ನಡೆಯುತಿದ್ದವು. ಚಳವಳಿ ಕಾವೇರುತಿದ್ದ ಕಾಲದಲ್ಲಿ ಹೋರಾಟವನ್ನು ಹತ್ತಿಕ್ಕಿದ ರಾಮಕೃಷ್ಣ ಹೆಗಡೆಯಂಥ ಮುಖ್ಯಮಂತ್ರಿಯವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಿದ್ದ ಯುವಕ ಸಿ.ಎ.ಶಂಕರ್ ಈ ಹೋರಾಟ, ಚಳವಳಿಗಳಿಂದ ಹಿಂದೆ ಸರಿದು ಶಿಕ್ಷಕರಾಗಿಬಿಟ್ಟಿದ್ದರು.

ಶಿಕ್ಷಕರಾಗುವ ಮೊದಲು ಪ್ರಗತಿಪರರ ವೇದಿಕೆ ಕಟ್ಟಿಕೊಂಡು ಪಟ್ಟಭದ್ರರಿಗೆ ಸಿಂಹಸ್ವಪ್ನವಾಗಿರುತಿದ್ದ ಕಾವಂಚೂರು ಹಿತ್ತಲಕೊಪ್ಪದ ಶಂಕರ್ ನೀನಾಸಂಗೆ ನಡೆದರು. ನೀನಾಸಂ ನಲ್ಲಿ ಕೂಡಾ ಬಂಡಾಯದಿಂದಲೇ ಹೆಸರಾಗಿದ್ದ ಶಂಕರ್ ಸಿದ್ಧಾಪುರದಲ್ಲಿ ಮುನಿವೆಂಕಟಪ್ಪನವರ ನೇತೃತ್ವದಲ್ಲಿ ನಡೆದ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೂ ದುಡಿದಿದ್ದರು.

ಡಿ.ಎಸ್.ಎಸ್. ನ ಹಾಡು, ರೈತ ಸಂಘ, ಪ್ರಗತಿಪರ ಸಂಘಟನೆಗಳ ಹೋರಾಟ, ಚಳವಳಿಯ ಎಳೆಯ ಹುಡುಗನಾಗಿದ್ದ ಶಂಕರ್ ಸರಳವಿವಾಹದ ಮೂಲಕ 30 ವರ್ಷಗಳ ಹಿಂದೇ ಸುದ್ದಿಮಾಡಿದ್ದರು. ಹೀಗೆ ಬಂಡಾಯ, ಹೋರಾಟಗಳ ಮೂಲಕ ಜನಪರವಾಗಿ, ಜನಸಾಮಾನ್ಯನ ಪರವಾಗಿ ಧ್ವನಿ ಮಾಡುತಿದ್ದ ಶಂಕರ್ ಶಿಕ್ಷಕರಾಗಿ ತೆರೆಯಿಂದ ಮರೆಯಾಗಿದ್ದರು.

ಮೊನ್ನೆ ಜುಲೈ ಕೊನೆಗೆ ಶಂಕರ್ ಸಾಗರದಲ್ಲಿ ನಿವೃತ್ತರಾದರು. ಸಾಗರದಿಂದ ಸೇವೆಪ್ರಾರಂಭವಾಗಿ ಸಾಗರದಲ್ಲಿ ನಿವೃತ್ತರಾಗುವ ನಡುವಿನ ಻ಅವಧಿಯಲ್ಲಿ ಶಂಕರ್ ಸಿ.ಎ. ದಾಂಡೇಲಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಸೇವೆಯಲ್ಲಿನ ಕಟ್ಟುಪಾಡುಗಳ ನಡುವೆ ದೀನ, ದಲಿತರು,ದುರ್ಬಲವರ್ಗದವರು, ಅಸಹಾಯಕರ ನೆರವಿಗೆ ಧಾವಿಸುತಿದ್ದ ಶಂಕರ್ ಈಗ ತಮ್ಮ ಸೇವೆಯಿಂದ ನಿವೃತ್ತರಾಗಿದ್ದು ಮತ್ತೆ ಸಿದ್ಧಾಪುರ, ಉತ್ತರ ಕನ್ನಡದಲ್ಲಿ ದಲಿತಸಂಘರ್ಷ ಸಮೀತಿ,ಪ್ರಗತಿಪರರ ಒಕ್ಕೂಟ ಕಟ್ಟುವ ಉತ್ಸಾಹದಲ್ಲಿದ್ದಾರೆ.

ಕಲೆ,ಸಂಸ್ಕೃತಿ, ಸಾಹಿತ್ಯ,ಸಾಮಾಜಿಕ ಬದುಕಿನ ನಿರಂತರ ಹೋರಾಟಗಾರರಾಗಿರುವ ಶಂಕರ್ ಅವರಿಗೆ ಈಗ ಸರ್ಕಾರ, ವ್ಯವಸ್ಥೆಯ ಬಂಧನ ಕಳಚಿಕೊಂಡ ಻಻ಅನುಭವ. ಅವರ ಆಗಮನ,ಅಭಿಲಾಷೆ, ಹೋರಾಟದ ಬದ್ಧತೆಗಳನ್ನು ಕಂಡಿರುವ ಻ಅವರ ಻ಅನೇಕ ಸ್ನೇಹಿತರು ಅವರ ಸೇವಾ ನಿವೃತ್ತಿಗೆ ಶುಭಕೋರಿ ಕಾಲುಶತಮಾನದ ನಂತರದ ಹೋರಾಟದ ಬದುಕಿಗೆ ಶುಭ ಹಾರೈಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *