ಶಿರಸಿಯ ಕದಂಬ ಜಿಲ್ಲೆಗಾಗಿ ಪತ್ರಚಳವಳಿಯಿಂದ ನ್ಯಾಯಾಂಗ ಹೋರಾಟದ ವರೆಗೆ….

ಶಿರಸಿ ಕೇಂದ್ರವನ್ನಾಗಿಸಿಕೊಂಡು 7-8 ತಾಲೂಕುಗಳ ಕದಂಬ ಜಿಲ್ಲೆಗಾಗಿ ಹೋರಾಟ ಪ್ರಾರಂಭವಾಗಿದೆ. ಈ ಹೋರಾಟ ಇತ್ತೀಚಿನ ಒಂದು ದಶಕದ ಹೋರಾಟವಾದರೂ ಉತ್ತರ ಕನ್ನಡ ಜಿಲ್ಲೆಯನ್ನು ಮಧ್ಯವರ್ತಿ ಸ್ಥಳದಲ್ಲಿ ಕೇಂದ್ರಸ್ಥಳವಾಗಿಸಬೇಕೆಂಬ ಬೇಡಿಕೆ ಅರ್ಧಶತಮಾನದಷ್ಟು ಹಳೆಯದು.

ಈ ಹಳೆ ಬೇಡಿಕೆ ಮಧ್ಯಪ್ರದೇಶದಲ್ಲಿ ಜಿಲ್ಲಾಕೇಂದ್ರ ಸ್ಥಾಪನೆ ವಿಚಾರ ಕೈಬಿಟ್ಟು ಈಗ ಶಿರಸಿ ಕೇಂದ್ರಿತ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಪ್ರಾರಂಭವಾಗಿದೆ. ಕಳೆದ ವಾರ ಶಿರಸಿಯಿಂದ ಪ್ರಾರಂಭಿಸಿದ ಶಿರಸಿ ಜಿಲ್ಲೆಯ ಪತ್ರಚಳವಳಿಯ ಕಾರ್ಯಕ್ರಮ ಸಿದ್ಧಾಪುರದಲ್ಲಿ ನಡೆದಿದೆ. ಇದೇ ಕಾರ್ಯಕ್ರಮ ಉಳಿದ ತಾಲೂಕುಗಳಲ್ಲಿಯೂ ನಡೆಯಲಿದೆ.

ಹೀಗೆ ಕಾರ್ಯಕ್ರಮ, ಹೋರಾಟ, ಚಳವಳಿ ನಂತರ ಕಾನೂನುಹೋರಾಟದ ಮೂಲಕ ಶಿರಸಿ ಜಿಲ್ಲೆಯಾಗುವವರೆಗೆ ಜನಹೋರಾಟ,ಹಕ್ಕೊತ್ತಾಯ ಮಾಡಲಲು ಶಿರಸಿ ಜಿಲ್ಲಾ ಹೋರಾಟ ಸಮೀತಿ ನಿರ್ಧರಿಸಿದೆ. ಭೌಗೋಲಿಕವಾಗಿ ವಿಸ್ತಾರವಾಗಿರುವ ಉತ್ತರ ಕನ್ನಡ ಜಿಲ್ಲೆ ಭೌಗೋಲಿಕವಾಗಿ ವಿಭಿನ್ನವಾಗಿರುವುದರಿಂದ ಇದನ್ನು ಎರಡು ಜಿಲ್ಲೆಗಳನ್ನಾಗಿ ವಿಭಜಿಸಿದರೆ ಆಡಳಿತಾತ್ಮಕವಾಗಿ ಹಾಗೂ ಸ್ಥಳೀಯರ ಅನುಕೂಲದ ಕಾರಣಗಳಿಂದ ಅವಶ್ಯ ಎಂದು ಭಾವಿಸಲಾಗಿದೆ.

ಈ ಶಿರಸಿ ಜಿಲ್ಲೆ ಹೋರಾಟ ಸಮೀತಿಯ ಅಧ್ಯಕ್ಷ ಉದ್ಯಮಿ ಉಪೇಂದ್ರ ಪೈ ಈಗ ಹಕ್ಕೊತ್ತಾಯದ ಭಾಗವಾಗಿ ಪತ್ರಚಳುವಳಿ, ನಂತರ ಜನಹೋರಾಟ ಅಂತಿಮವಾಗಿ ಕಾನೂನು ಹೋರಾಟದ ಮೂಲಕ ಶಿರಸಿ ಜಿಲ್ಲೆ ಸ್ಥಾಪನೆಗಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ. ಸಿದ್ಧಾಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಎಂ.ಎಂ. ಭಟ್, ಸುಬ್ರಾಯ ಮತ್ತೀಹಳ್ಳಿ ಸೇರಿದ ಅನೇಕರು ಘಟ್ಟದ ಮೇಲಿನ ಉತ್ತರ ಕನ್ನಡ ಜಿಲ್ಲೆಯ ಜನರ ಶಿರಸಿ ಜಿಲ್ಲೆ ಬೇಡಿಕೆ ನ್ಯಾಯೋಚಿತ ಈ ಬಗ್ಗೆ ಜನಾಂದೋಲನ ಆಗುವ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ.

ಹೀಗೆ ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡುಗಳ ಈ ಶಿರಸಿ ಕದಂಬ ಜಿಲ್ಲೆ ಬೇಡಿಕೆ ಈಗ ಜನಾಂದೋಲನದ ರೂಪ ಪಡೆಯುತ್ತಿದೆ. ಈ ವಿದ್ಯಮಾನ. ಪ್ರಯತ್ನಗಳ ಹಿನ್ನೆಲೆಯಲ್ಲಿ ಸಮಾಜಮುಖಿ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮೀತಿಯ ಅಧ್ಯಕ್ಷ ಉಪೇಂದ್ರ ಪೈ ರನ್ನು ಮಾತನಾಡಿಸಿದಾಗ ಅದು ಸಂದರ್ಶನದ ರೂಪ ಪಡೆಯಿತು. ಸಮಾಜಮುಖಿ ಯೂಟ್ಯೂಬ್ ಚಾನಲ್ ನ ಈ ಸಂದರ್ಶನ ನೋಡಿ samaajamukhi (kannesh) yOutube ಮತ್ತು ಸಮಾಜಮುಖಿ saamajamukhi.net ಗೆ subscribe ಆಗುವ ಮೂಲಕ ಸಹಕರಿಸಲು ಮನವಿ.

ಸಂದರ್ಶನದ ಲಿಂಕ್- https://samajamukhi.net/2020/09/14/kadamba-a-name-of-sirsi-district/?fbclid=IwAR2jF-nN27218bWW6WKZXBZIwR8jDuJoeFjkCx0LVq_o82wJB1SAi1wlgj8 ಈ ಸಂರ್ಶನ ಏನಿದು ಶಿರಸಿ ಕದಂಬ ಜಿಲ್ಲೆ ಎನ್ನುವ ಸುದ್ದಿಯಲ್ಲಿಯೂ ಲಭ್ಯವಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *