ಶಿರಸಿಯ ಕದಂಬ ಜಿಲ್ಲೆಗಾಗಿ ಪತ್ರಚಳವಳಿಯಿಂದ ನ್ಯಾಯಾಂಗ ಹೋರಾಟದ ವರೆಗೆ….

ಶಿರಸಿ ಕೇಂದ್ರವನ್ನಾಗಿಸಿಕೊಂಡು 7-8 ತಾಲೂಕುಗಳ ಕದಂಬ ಜಿಲ್ಲೆಗಾಗಿ ಹೋರಾಟ ಪ್ರಾರಂಭವಾಗಿದೆ. ಈ ಹೋರಾಟ ಇತ್ತೀಚಿನ ಒಂದು ದಶಕದ ಹೋರಾಟವಾದರೂ ಉತ್ತರ ಕನ್ನಡ ಜಿಲ್ಲೆಯನ್ನು ಮಧ್ಯವರ್ತಿ ಸ್ಥಳದಲ್ಲಿ ಕೇಂದ್ರಸ್ಥಳವಾಗಿಸಬೇಕೆಂಬ ಬೇಡಿಕೆ ಅರ್ಧಶತಮಾನದಷ್ಟು ಹಳೆಯದು.

ಈ ಹಳೆ ಬೇಡಿಕೆ ಮಧ್ಯಪ್ರದೇಶದಲ್ಲಿ ಜಿಲ್ಲಾಕೇಂದ್ರ ಸ್ಥಾಪನೆ ವಿಚಾರ ಕೈಬಿಟ್ಟು ಈಗ ಶಿರಸಿ ಕೇಂದ್ರಿತ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಪ್ರಾರಂಭವಾಗಿದೆ. ಕಳೆದ ವಾರ ಶಿರಸಿಯಿಂದ ಪ್ರಾರಂಭಿಸಿದ ಶಿರಸಿ ಜಿಲ್ಲೆಯ ಪತ್ರಚಳವಳಿಯ ಕಾರ್ಯಕ್ರಮ ಸಿದ್ಧಾಪುರದಲ್ಲಿ ನಡೆದಿದೆ. ಇದೇ ಕಾರ್ಯಕ್ರಮ ಉಳಿದ ತಾಲೂಕುಗಳಲ್ಲಿಯೂ ನಡೆಯಲಿದೆ.

ಹೀಗೆ ಕಾರ್ಯಕ್ರಮ, ಹೋರಾಟ, ಚಳವಳಿ ನಂತರ ಕಾನೂನುಹೋರಾಟದ ಮೂಲಕ ಶಿರಸಿ ಜಿಲ್ಲೆಯಾಗುವವರೆಗೆ ಜನಹೋರಾಟ,ಹಕ್ಕೊತ್ತಾಯ ಮಾಡಲಲು ಶಿರಸಿ ಜಿಲ್ಲಾ ಹೋರಾಟ ಸಮೀತಿ ನಿರ್ಧರಿಸಿದೆ. ಭೌಗೋಲಿಕವಾಗಿ ವಿಸ್ತಾರವಾಗಿರುವ ಉತ್ತರ ಕನ್ನಡ ಜಿಲ್ಲೆ ಭೌಗೋಲಿಕವಾಗಿ ವಿಭಿನ್ನವಾಗಿರುವುದರಿಂದ ಇದನ್ನು ಎರಡು ಜಿಲ್ಲೆಗಳನ್ನಾಗಿ ವಿಭಜಿಸಿದರೆ ಆಡಳಿತಾತ್ಮಕವಾಗಿ ಹಾಗೂ ಸ್ಥಳೀಯರ ಅನುಕೂಲದ ಕಾರಣಗಳಿಂದ ಅವಶ್ಯ ಎಂದು ಭಾವಿಸಲಾಗಿದೆ.

ಈ ಶಿರಸಿ ಜಿಲ್ಲೆ ಹೋರಾಟ ಸಮೀತಿಯ ಅಧ್ಯಕ್ಷ ಉದ್ಯಮಿ ಉಪೇಂದ್ರ ಪೈ ಈಗ ಹಕ್ಕೊತ್ತಾಯದ ಭಾಗವಾಗಿ ಪತ್ರಚಳುವಳಿ, ನಂತರ ಜನಹೋರಾಟ ಅಂತಿಮವಾಗಿ ಕಾನೂನು ಹೋರಾಟದ ಮೂಲಕ ಶಿರಸಿ ಜಿಲ್ಲೆ ಸ್ಥಾಪನೆಗಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ. ಸಿದ್ಧಾಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಎಂ.ಎಂ. ಭಟ್, ಸುಬ್ರಾಯ ಮತ್ತೀಹಳ್ಳಿ ಸೇರಿದ ಅನೇಕರು ಘಟ್ಟದ ಮೇಲಿನ ಉತ್ತರ ಕನ್ನಡ ಜಿಲ್ಲೆಯ ಜನರ ಶಿರಸಿ ಜಿಲ್ಲೆ ಬೇಡಿಕೆ ನ್ಯಾಯೋಚಿತ ಈ ಬಗ್ಗೆ ಜನಾಂದೋಲನ ಆಗುವ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ.

ಹೀಗೆ ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡುಗಳ ಈ ಶಿರಸಿ ಕದಂಬ ಜಿಲ್ಲೆ ಬೇಡಿಕೆ ಈಗ ಜನಾಂದೋಲನದ ರೂಪ ಪಡೆಯುತ್ತಿದೆ. ಈ ವಿದ್ಯಮಾನ. ಪ್ರಯತ್ನಗಳ ಹಿನ್ನೆಲೆಯಲ್ಲಿ ಸಮಾಜಮುಖಿ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮೀತಿಯ ಅಧ್ಯಕ್ಷ ಉಪೇಂದ್ರ ಪೈ ರನ್ನು ಮಾತನಾಡಿಸಿದಾಗ ಅದು ಸಂದರ್ಶನದ ರೂಪ ಪಡೆಯಿತು. ಸಮಾಜಮುಖಿ ಯೂಟ್ಯೂಬ್ ಚಾನಲ್ ನ ಈ ಸಂದರ್ಶನ ನೋಡಿ samaajamukhi (kannesh) yOutube ಮತ್ತು ಸಮಾಜಮುಖಿ saamajamukhi.net ಗೆ subscribe ಆಗುವ ಮೂಲಕ ಸಹಕರಿಸಲು ಮನವಿ.

ಸಂದರ್ಶನದ ಲಿಂಕ್- https://samajamukhi.net/2020/09/14/kadamba-a-name-of-sirsi-district/?fbclid=IwAR2jF-nN27218bWW6WKZXBZIwR8jDuJoeFjkCx0LVq_o82wJB1SAi1wlgj8 ಈ ಸಂರ್ಶನ ಏನಿದು ಶಿರಸಿ ಕದಂಬ ಜಿಲ್ಲೆ ಎನ್ನುವ ಸುದ್ದಿಯಲ್ಲಿಯೂ ಲಭ್ಯವಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *