

ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪ್ರಮುಖರಿಬ್ಬರು ಈ ವಾರ ನಿಧನರಾಗಿದ್ದಾರೆ.


ಅವರಲ್ಲಿ ಇಂದು ನಿಧನರಾದ ಭಟ್ಕಳ ಮುರ್ಡೇಶ್ವರದ ಶ್ರೀಪಾದ ಕಾಮತ್ ಕರಾವಳಿಯ ಕಾಂಗ್ರೆಸ್ ಮುಖಂಡರಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಸಚಿವ ಆರ್. ವಿ. ದೇಶಪಾಂಡೆಯವರ ನಿಕಟವರ್ತಿಯಾಗಿದ್ದ ಕಾಮತ್ ಉತ್ತರ ಕನ್ನಡ ಜಿ.ಪಂ. ನ ಕೃಷಿ ಮತ್ತು ಆರೋಗ್ಯ ಸ್ಥಾಯಿ ಸಮೀತಿ ಸದಸ್ಯರಾಗಿ ಕೆಲಸಮಾಡಿದ್ದರು.
ಕಳೆದ ಶನಿವಾರ ನಿಧನರಾದ ಮಂಜುನಾಥ ಹೆಗಡೆ ಗುಂಜಗೋಡು ಸಿದ್ಧಾಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲೆಯ ಪ್ರಮುಖ ಅಡಿಕೆ ವರ್ತಕರಾಗಿದ್ದ ಮಂಜುನಾಥ ಹೆಗಡೆ ಗುಂಜಗೋಡು ಜನಪರ ವ್ಯಕ್ತಿಗಳಾಗಿದ್ದು ಅವರ ಮಗ ಪ್ರಕಾಶ್ ಹೆಗಡೆ ಗುಂಜಗೋಡು ಸಿದ್ಧಾಪುರ ತಾಲೂಕಾ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿದ್ದಾರೆ.ಅವರಗುಪ್ಪಾದಲ್ಲಿ ವಾಸಿಸುತಿದ್ದ ಇವರು ಸಿದ್ಧಾಪುರ ಪ.ಪಂ. ನ ಮಾಜಿ ಅಧ್ಯಕ್ಷ ಪ್ರಕಾಶ ಹೆಗಡೆಯವರೊಂದಿಗೆ ಮೂರು ಜನ ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
