ಒಂದು ಹನಿ ನೀರು ಎರಡು ಬಿಂದುಗಳಾಗುವ ಪವಾಡ!

ನನ್ನೂರಿನ ಮಳೆ ಬಿಂದು.ಭೌಗೋಳಿಕವಾಗಿ ಸಹ್ಯಾದ್ರಿ ಪರ್ತದ ಶಿರಸ್ಸು ಶಿರಸಿ ನಗರವಾಗಿ ಬೆಳೆದಿದೆ ಶಿರಸಿ ನಗರದಿಂದ ಪೂರ್ವಕ್ಕೆ15 ಕಿ ಮಿ ಕ್ರಮಿಸಿದರೆ ಈಗ ನಾನು ವಾಸ್ಥವ್ಯದಲ್ಲಿರುವ ನನ್ನೂರು ಎಕ್ಕಂಬಿ-ಬಿಸಲಕೊಪ್ಪ, ಅವಳಿನಗರಗಳಂತೆ ಈ ಅವಳಿ ಹಳ್ಳಿ ಬೆಸುದುಕೊಂಡಿದೆ.ಈಗ ನನ್ನೂರು ಗ್ರಾಮೀಣಮುಸುಕು ಸರಿಸಿ ಅರೆ ಪಟ್ಟಣದ ವೇಷದರಿಸಿ ಬೆಳೆಯುತ್ತಿದೆ.. ಕರ್ನಾಟಕಲ್ಲಿಯೆ ಏಕೈಕ ಅಪರೂಪದ ನಿತ್ಯ ಪೂಜೆಗೊಳ್ಳುವ ಶ್ರೀ ಸೂರ್ಯನಾರಾಯಣ ದೇವರು ನಮ್ಮ ಗ್ರಾಮದೇವತೆ.. ಈ ದೇವಸ್ಥಾ ನದ ಹಿಂದೆಯೆ ನೂರಾರು ಎಕರೆ ಕರಡದ ಬೇಣವಿದೆ (ಜಾನುವಾರುಗಳಿಗೆ ಹುಲ್ಲು ಬೆಳೆಯುವ ಪ್ರದೇಶ) ಈ ಹುಲ್ಲುಗಾವಲಿನ ನೆತ್ತಿಯ ಮೇಲೆ ನಿಂತು ಇಲ್ಲಿ ಸುರಿಯುವ ಮಳೆಯ ರಭಸವನ್ನು ಅನುಭವಿಸಿದರೆ ಮಾತ್ರ ಅದರ ಸೊಬಗು ರೌದ್ರತೆ ಭೀಕರ ತಂಪು ಸ್ವಭಾವಗಳನ್ನು ವರ್ಣಿಸಬಹುದು.

ಈ ಹುಲ್ಲು ಗಾವಲಿನ ನೆತ್ತಿಯ ಮೇಲೆ ಬಿದ್ದ ಮಳೆಹನಿ ಸಿಡಿದು ಚೂರುಗಳಾಗಿ ಮೂರು ದಿಕ್ಕಿನ ಇಳಿಜಾರಲ್ಲಿ ಬದುಕಿನ ಪಯಣದ ಸಾರ್ಥಕತೆಗಾಗಿ ಓಡುತ್ತವೆ.. ಹೀಗೆ ಬಿದ್ದ ಮಳೆಯ ಬಿಂದು ಪೂರ್ವಾಭಿ ಮುಖವಾಗಿ ಹರಿಯುವಾಗ ಊರಿನ ಹಳ್ಳ ಸವಳುಗಳನ್ನು ಸೇರಿ ಮುಂದೆ ಧರ್ಮನದಿಯಲ್ಲಿ ಕರಗಿ ಬಳಿಕ ಮಳಗಿ ಸಮೀಪದ ಧರ್ಮಜಲಾಶಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ದಣಿವಾರಿಸಿಕೊಂಡು ದಣಿವಿನ ಬೇಗೆಯಲ್ಲಿ ದಣಿದ ಹಾನಗಲನಲ್ಲಿ ರೈತರಿಗೆ ನಗುವಿನ ವರವಾಗಿ ಮುಂದೆ ವರದಾ ನದಿ ಸೇರಿ ಬಯಲು ಸೀಮೆಯಲ್ಲಿ ಹಸಿರನ್ನು ಹೆಚ್ಚಿಸಿ ಮತ್ತೆ ತುಂಗಾಭದ್ರೆಯರಲ್ಲಿ ಮುಳುಗೇ ಳುತಾ ಮಂತ್ರಾಲಯದ ಮಠಕ್ಕೆ ಪ್ರದಕ್ಷಿಣೆ ಹಾಕಿ ಬಳಿಕ ಕೃಷ್ಣೆಯನ್ನು ಕೂಡಿ ಮಿಲನ ಸುಖದ ಸಂಭ್ರಮದೋಂದಿಗೆ ವಿಶಾಖಪಟ್ಟಣದ ಬಂಗಾಳಕೊಲ್ಲಿ ಸೇರುವಾಗ ಸುಮಾರು 840 ಕಿ ಮಿ ಪ್ರಯಾಣ. ರೋಚಕ ಕಥನದಂತೆ ಭಾಸವಾಗುತ್ತದೆ.

ಆದರೆ ಮತ್ತರ್ಧ ಬಿಂದು ಮತ್ತೆ ವಿಭಾಗವಾಗಿ ಪಶ್ಚಿಮಾಭಿಮುಖವಾಗಿ ಹರಿಯುತ್ತಾ ಒಂದು ಚಿಕ್ಕ ಹಳ್ಳದ ಮೂಲಕ ಧರ್ಮ ನದಿಯ ಬಲಭಾಗದಲ್ಲಿ ಹರಿದು ಘಟ್ಟ ಇಳಿಯುವಾಗ ಬೆಣ್ಣೆ ಹೊಳೆಯಲ್ಲಿ ಮಿಂದು ಚಂಡಿಕಾನದಿಯಲ್ಲಿ ಜಲಕ್ರೀಡೆಯಾಡಿ ಅಘನಾಶಿನಿಯ ಒಡಲೊಳಗೆ ಬೆಚ್ಚಗೆ ಅವಿತು ಉಂಚಳ್ಳಿಯಲ್ಲಿ ನೊರೆಯ ಜಲಪಾತವಾಗಿ ಧುಮುಕಿ ಕುಮಟಾದಲ್ಲಿಯ ನದಿಪಾತ್ರದ ಹಳ್ಳಿಗಳಲ್ಲಿ ನೆರೆಯಾಗಿ ಕೆಲವೊಮ್ಮೆ ಅವರ ಕಣ್ಣೀರನ್ನು ತನ್ನುದರದಲ್ಲಿ ಸೇರಿಸಿಕೊಂಡು ಅಘನಾಶಿನಿ ತದಡಿ ಬಂದರುಗಳ ಬಳಿ ಕಲಗಾ, ಬಳಚು,ಏಡಿ ಸಿಗಡಿಯಂತಹ ಜಲಚರಗಳ ಜೀವಕ್ಕೆ ಆಸರೆಯಾಗಿ, ಅಘನಾಶಿನಿ -ತದಡಿ ಗ್ರಾಮಗಳನ್ನು ವಿಭಜಿಸಿ ತದಡಿ ಸರ್ವ ಋತು ಬಂದರನ್ನು ನಿರ್ಮಿಸಿ ಅರಬಿ ಸಮುದ್ರ ಸೇರುವಾಗ 80 ಕಿ ಮಿ ದೂರ ಪ್ರಯಾಣದ ಖುಷಿ ಅನುಭವಿಸುತ್ತದೆ…

ಮತ್ತೊಂದು ನೀರ ಹನಿ ಚಿಕ್ಕ ಹಳ್ಳಗಳ ಮೂಲಕ ದಕ್ಷಿಣಕ್ಕೆ ಹರಿದು ಕೆಂಗ್ರೆ ಹೊಳೆ ಸೇರಿ ಶಿರಸಿ ನಗರದ ದಾಹ ತಣಿಸುವ ಗಂಗೆಯಾಗಿ ಮನ ತಣಿಸಿದ ಬಳಿಕ ಶಾಲ್ಮಲಾ ನದಿ ಸೇರಿ ನರ್ತಿಸುತ್ತಾ ಮುಂದೆ ಬೇಡ್ತಿನದಿಯಲ್ಲಿ ಲೀನವಾಗಿ ಬಳಿಕ ಗಂಗಾವಳಿ ನದಿಯಲ್ಲಿ ಮಿಂದು ಅಂಕೋಲಾದಲ್ಲಿ ಅರಬಿ ಸಮುದ್ರ ಸೇರುತ್ತದೆ ತಾನು ಹರಿಯುವ ಮಾರ್ಗದುದ್ದಕ್ಕೂ ದಟ್ಟ ನಿತ್ಯ ಹರಿದ್ವರ್ಣ ಕಾಡನ್ನು ಬೆಳೆಸುತ್ತಾ ತನ್ನ ಭೂಸ್ಪರ್ಷದ ಬದುಕಿನ ಧನ್ಯತೆಯನ್ನು ಪಡೆಯುತ್ತದೆ ಹೀಗೆ ನನ್ನೂರಿನಲ್ಲಿಯ ಮಳೆಯ ಬಿಂದುವೊಂದು ತನ್ನ ಗಮ್ಯತೆಯ ಪಡೆವಲ್ಲಿ ದಟ್ಟ ಕಾನನದ ಮಡಿಲಲ್ಲಿ ಬೆಳ್ಳಿ ನೊರೆಯಾಗಿ,ಹಸುರಿಗೆ ಆಸರೆಯಾಗಿ,ಅನೇಕ ಜೀವ ಸಂಕುಲಗಳ ಸೃಷ್ಟಿಗೆ ಸಹಕರಿಸಿ ತನ್ನ ಯಾತ್ರೆಯ ಧನ್ಯತೆ ಪಡೆಯುತ್ತವೆ…

-ರಾಜು ನಾಯ್ಕ, ಬಿಸಲಕೊಪ್ಪ

ನದಿ_ಮೂಲ_ಅರಸಿ_ಬೆಟ್ಟದ_ಬೆನ್ನೇರಿ ……..ಇದು ನಮ್ಮೂರಿನ ಕಾಡಿನ ನಡುವಿನ ಉಬ್ಬು. ಉಬ್ಬು ಎಂದರೆ ಕಾಡಿನ ಎತ್ತರದ ಪ್ರದೇಶ. ಕಣಿವೆಯ ದಡಗಳ ಭುಜ ಭಾಗ. ನಾನು ನಿಂತಿರುವ ಈ ಜಾಗಕ್ಕೆ ಭೌಗೋಳಿಕವಾಗಿ ಬಹಳ ಮಹತ್ವ ಇದೆ. ಕುತೂಹಲಕಾರಿ ಭೌಗೋಳಿಕ ವಿದ್ಯಮಾನದ ಕೇಂದ್ರ ಬಿಂದು ಇದು. ಒಂದು ರೀತಿಯ ನೈಸರ್ಗಿಕ ವಿಭಜಕ ರೇಖೆಯ ಮೇಲೆ ನಾನು ನಿಂತಿರುವೆ.ಮೂರೂ ಕಡೆ ಇಳಿಜಾರಿರುವ ಉಬ್ಬಿನ ನೆತ್ತಿಯ ಈ ಜಾಗದಲ್ಲಿ ಬೀಳುವ ಪ್ರತಿ ಮಳೆ ಹನಿಯೂ ಚದುರಿ ಸಿಡಿದರೆ, ಎರಡು ಕಣಿವೆಗಳ ಪಾಲಾಗುತ್ತದೆ. ಸಂಪಳ್ಳಿ ಮತ್ತು ಜಂಬೂರುಮನೆ ಎಂಬ ಎರಡು ಹಳ್ಳಿಗಳನ್ನು ಬೇರ್ಪಡಿಸುವ ಈ ಬಿಂದುವಿನಿಂದ ಉತ್ತರ ಮತ್ತು ಪೂರ್ವ ದಿಕ್ಕಿನ ಕಣಿವೆ ಪೂರ್ವಾಭಿಮುಖಿ ನೀರಿನ ಹರಿವಿಗೂ, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಕಣಿವೆ ಪಶ್ಚಿಮವಾಹಿನಿ ನೀರಿನ ಹರಿವಿಗೂ ನೆಲೆ.ಹಾಗಾಗಿ ಇಲ್ಲಿ ಬಿದ್ದ ಹನಿ ಒಡೆದರೆ ಅದರ ಒಂದು ಭಾಗ ಸಂಪಳ್ಳಿ ಸವಳು(ಕಣಿವೆ ನೀರಿನ ತೊರೆ) ಸೇರಿ, ಅಲ್ಲಿಂದ ಕಲ್ಲುಸಾರದ ಹಳ್ಳ, ಮುಂದೆ ಅಂಬ್ಲಿಗೊಳ್ಳ ಜಲಾಶಯ, ನಂತರ ಶಿಕಾರಿಪುರದ ಗೌರಿ ಹಳ್ಳ, ನಂತರ ಮದಗದ ಕೆರೆ, ಬಳಿಕ ವರದಾ ನದಿ, ಮುಂದೆ ತುಂಗಭದ್ರಾ ನದಿ, ಬಳಿಕ ಕೃಷ್ಣಾ ನದಿ, ಕೊನೆಗೆ ಬಂಗಾಳ ಕೊಲ್ಲಿಯ ಪಾಲಾಗುತ್ತದೆ. ಇದು ಸಂಪಳ್ಳಿಯ ಈ ‘ಸೀಗೆಮಟ್ಟಿ ಉಬ್ಬಿ’ನಿಂದ ಬಂಗಾಳ ಕೊಲ್ಲಿವರೆಗಿನ ಅರೆ ಹನಿಯೊಂದರ ರೋಚಕ ಪಯಣ.

ಒಡೆದ ಹನಿಯ ಮತ್ತೊಂದು ಪಾಲು, ಜಂಬೂರುಮನೆ ಸವಳು ಸೇರಿ, ಅಲ್ಲಿಂದ ಬ್ಯಾಡರಕೊಪ್ಪ ಹಳ್ಳ ಸೇರಿ, ಮುಂದೆ ನಂದಿಹೊಳೆ ಸೇರಿ, ನಂತರ ಶರಾವತಿಯ ಒಡಲು ಸೇರುತ್ತದೆ. ಲಿಂಗನಮಕ್ಕಿಯಲ್ಲಿ ನಿಂತು, ಜೋಗದ ಗುಂಡಿಯಲ್ಲಿ ಜಿಗಿದು, ಗೇರುಸೊಪ್ಪಾ, ಹೊನ್ನಾ ವರ ಮೂಲಕ ಅರಬ್ಬೀ ಕಡಲು ಸೇರುತ್ತದೆ. ಈ ನಡುವೆ ನಿಮ್ಮ ಮನೆಯ ವಿದ್ಯುತ್ ದೀಪದ ಬೆಳಕಾಗಿಯೂ ಬೆಳಗುತ್ತದೆ! ಇದು ಮತ್ತರ್ಧ ಹನಿಯ ಪಶ್ಚಿಮವಾಹಿನಿ ಪಯಣದ ಕಥೆ.

ಹೀಗೆ ಒಂದು ಹನಿ ಮಳೆ, ಒಂದು ಬೊಗಸೆ ನೀರು, ಒಂದು ಕಾಲುದಾರಿಯ ಹರಿವು ಎರಡಾಗಿ, ತೊರೆಯಾಗಿ, ತೊರೆ ಹಳ್ಳವಾಗಿ ಹಳ್ಳ ಹೊಳೆಯಾಗಿ, ಹೊಳೆ ನದಿಯಾಗಿ, ನದಿ ಕಡಲಾಗುವ ಪರಿಗೆ ಈ ಸೀಗೆಮಟ್ಡಿ ಉಬ್ಬು ಅಮಾಯಕ ಸಾಕ್ಷಿ.ಹೀಗೆ ನದಿ ಮೂಲ ಅರಸುವ ರೋಚಕ ಹವ್ಯಾಸ ಇಪ್ಪತ್ತು ವರ್ಷಗಳ ಹಿಂದೆ ಒಂದು ಕುತೂಹಲಕಾರಿ ಬರಹಕ್ಕೆ ಕಾರಣವಾಗಿತ್ತು. ಈಗ ಮೊನ್ನೆ ಕಾಡಲ್ಲಿ ಅಲೆವಾಗ ಈ ವಿಭಜಕ ಬಿಂದುವಿನಲ್ಲಿ ಕ್ಷಣ ನಿಂತಾಗ ಎಲ್ಲ ನೆನಪಾಯಿತು.. ನಿಮ್ಮೂರಲ್ಲೂ ಇಂಥ ಕುತೂಹಲಕಾರಿ ನಿಗೂಢಗಳಿರಬಹುದು.. ಅಲ್ಲವಾ?ಹಾಂ.. ಮತ್ತೊಂದು ವಿಶೇಷವೆಂದರೆ ಇದೇ ಸೀಗೆ ಮಟ್ಟಿ ಉಬ್ಬಿನಲ್ಲೇ ನನ್ನ ಬಾಲ್ಯದ ದಿನಗಳಲ್ಲಿ ಅಜ್ಜಿಯ ಮನೆಯಿಂದ ಬರುವಾಗ, ಈ ಕಗ್ಗಾಡಿನ ನಡುವಿನ ಕಾಲುದಾರಿಯಲ್ಲೇ ಹುಲಿ ದರ್ಶನವಾಗಿತ್ತು. ಅದು ನಾನು ಕಂಡ ಮೊದಲ ಜೀವಂತ ಹುಲಿ. ಹಾಗೇ ಇದೇ ದಾರಿಯಲ್ಲೇ ಕೆಸರಲ್ಲಿ ಜಾರಿ ಬಿದ್ದು ಅಂಗೈ ಸಿಗಿದು ಹೋಗಿತ್ತು. ಆ ಗುರುತು ಕೂಡ ಈಗಲೂ ಇದೆ ಮಾಸದೆ, ಹುಲಿಯ ಮೊದಲ ನೋಟದಷ್ಟೇ ನಿಚ್ಛಳವಾಗಿ.. ಹಾಗಾಗಿ ಇದು ನನ್ನ ಪ್ರಜ್ಞೆಯ ಭಾಗವೇ ಆಗಿಹೋಗಿದೆ. ಈಗಲೂ ಈ ಅಸುಪಾಸಲ್ಲಿ ಹುಲಿ ಒಡನಾಟ ಇದೆ…ಮೊನ್ನೆ ಕೂಡ ಹುಲಿ ಪಂಜ ತೀಡಿದ ಗುರುತುಗಳು ಕಾಲುದಾರಿಯುದ್ದಕ್ಕೂ ಸಿಕ್ಕವು!ಇದು ವೈಯಕ್ತಿಕವಾಗಿ ನನಗೂ ಈ ಸೀಗೆಮಟ್ಟಿ ಉಬ್ಬಿಗೂ ಇರುವ ನಂಟು..

-ಶಶಿ ಸಂಪಳ್ಳಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *