ಶಿರಸಿಗೆ ಕರಾಳವಾದ ಈ ವಾರ-ಎರಡು ದಿಗ್ಗಜರ ಅಂತ್ಯ

ಶಿರಸಿಯ ಎರಡು ಮೇರು ಪರ್ವತಗಳಂತಿದ್ದ ಸಹಕಾರಿ ರತ್ನ ಡಾ.ವಿ.ಎಸ್.ಸೋಂದೆ ಮತ್ತು ಬನವಾಸಿಯ ರಸ ಋಷಿ, ಕೃಷಿತಜ್ಞ ಡಾ. ಅಬ್ದುಲ್ ರವೂಪ್ ಸಾಬ್ ಸಾವು ಶಿರಸಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ತುಂಬಲಾರದ ಹಾನಿ. ಇಂದು ನಿಧನರಾದ ಡಾ. ಅಬ್ದುಲ್ ರವೂಫ್ ಬನವಾಸಿಯ ಮಣ್ಣಿನ ಮಗ, ಬಡಕುಟುಂಬದ ನಿರ್ವಹಣೆಗೆ ಸಂಪಿಗೆ ಹೂವು ಕೊಯ್ದು ಮಾರುತ್ತಾ ಬೆಳೆದು ನಂತರ ಕೃಷಿಯಲ್ಲಿ ಸಾಧನೆ ಮಾಡಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೆ ಪಾತ್ರರಾದವರು. ಬನವಾಸಿಯಿಂದ ಪ್ರಾರಂಭಿಸಿ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೃಷಿ ಮಾಡುತ್ತಾ ನೇರವಾಗಿ ನೂರಾರು, ಪರೋಕ್ಷವಾಗಿ ಸಾವಿರಾರು ಜನರಿಗೆ ಅನ್ನದಾತರೆನಿಸಿಕೊಂಡಿದ್ದರು. ನೂರಾರು ಎಕರೆಯಲ್ಲಿ ಶುಂಠಿ, ಭತ್ತ, ತೆಂಗು,ಕಾಫಿ,ಅನಾನಸ್, ಪಪ್ಪಾಯಿ ಬೆಳೆದು ಅವುಗಳ ಸಂಸ್ಕರಣ ಘಟಕ ಸ್ಥಾಪಿಸಿದವರು.

ನೂರಾರು ಎಕರೆ ಜಮೀನಿನ್ನು ಮಕ್ಕಳಿಗಾಗಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯಾಗಿಸಬೇಕು. ಎನ್ನುವ ಅಂತಿಮ ಸತ್ಯ ಅರಿತವರಂತೆ ಕಳೆದೆರಡು ವರ್ಷಗಳ ಕೆಳಗೆ ನನ್ನೊಂದಿಗೆ ತಮ್ಮ ಅನುಭವದ ಕಾಣ್ಕೆ ಹಂಚಿಕೊಂಡಿದ್ದ ರವೂಫ್ ‘ಎಷ್ಟ್ ವರ್ಷ ಆತ ತಮ ಈ ಕೆಲಸ ಮಾಡ್ತಾ ‘ಎಂದು ಕಿರಿಯರಿಗೆ ತಮ್ಮ ಅನುಭವದ ಸತ್ಯ,ವಾಸ್ತವ ಹೇಳುತಿದ್ದ ರವೂಫ್ ಕೃಷಿ,ಕೃಷಿ ಉತ್ಫನ್ನಗಳ ವ್ಯಾಪಾರ,ಸಂಸ್ಕರಣೆ ಸೇರಿದಂತೆ ಕೃಷಿಯ ಆಳ-ಅಗಲಗಳನ್ನು ಅರಿತಿದ್ದ ಅವರಿಗೆ ಹಿತಮಿತದ ಕೃಷಿ-ಸಹಜ,ಸರಳತೆಯ ಕೃಷಿ ಬದುಕು ನೆಮ್ಮದಿಯ ಮೂಲ ಎನ್ನುವ ಕಾಣ್ಕೆಯೂ ದಕ್ಕಿತ್ತು.

ನಾಯಕನಾಗುವುದಕ್ಕಿಂತ ಕಿಂಗ್ ಮೇಕರ್ ಆಗು ಎನ್ನುತ್ತಿದ್ದ ಸಾಬ್ ತಮ್ಮ ಬದುಕಿನಲ್ಲಿ ಸದಾ ಕಿಂಗ್ ಮೇಕರ್ ಆಗಿ ಮಿಂಚಿದವರು. ಜಾತಿ-ಧರ್ಮಶ್ರೇಷ್ಠತೆಯ ಕುಷ್ಠಗಳಿಂದ ದೂರವಿದ್ದು ಆರೋಗ್ಯಕರ ಅಂತರ ಕಾಪಾಡಿಕೊಂಡಿದ್ದ ರವೂಫ್ ರನ್ನು ಧರ್ಮಾಂಧತೆ ಕಾಡಿಸಿದ್ದೂ ಉಂಟು ಆದರೆ ಕೃಷಿಗೆ ತಮ್ಮ ಬದುಕು ಅರ್ಪಿಸಿಕೊಂಡಿದ್ದ ಅವರು ಧರ್ಮಕುಷ್ಠಗಳ ಬಗ್ಗೆ ನಿರ್ಲಿಪ್ತತೆ ತೋರಿದ್ದರು. ಕನ್ನಡ ಶಾಲೆಯ ಪ್ರಾಥಮಿಕ ತರಗತಿಗಳನ್ನೂ ಪೂರೈಸದ ಅಬ್ದುಲ್ ಕೃಷಿ ವಿಜ್ಞಾನಿಗಳು, ಸಂಶೋಧಕರು, ಸಾಧಕರ ಪಾಲಿಗೆ ಮಾಹಿತಿಯ ಕಣಜವಾಗಿದ್ದರು. ಸಾಧನೆ,ಯಶಸ್ಸಿನ ಜೀವಂತ ದಂತಕತೆಯಾಗಿದ್ದ ರವೂಪ್ ಇಂದಿನಿಂದ ಕೇವಲ ನೆನಪು.

ಡಾ. ಸೋಂದೆ-

ಸರಿಸುಮಾರು ಡಾ.ಅಬ್ದುಲ್ ರವೂಫ್ ರ ಸಮಕಾಲೀನರಾಗಿದ್ದ ಡಾ.ವಿ.ಎಸ್.ಸೋಂದೆ ಅಬ್ದುಲ್ ರವೂಫರಿಗೆ ವ್ಯತಿರಕ್ತವಾದ ಹಾದಿ ಸವೆಸಿದವರು. ಶಿರಸಿ ನಗರದ ಅಗರ್ಭಶ್ರೀಮಂತ ಸೋಂದೆ ಮನೆತನದ ಕುಡಿಯಾಗಿದ್ದ ಡಾ.ವಿ.ಎಸ್. ಸೋಂದೆ ಸ್ವಾತಂತ್ರ್ಯಪೂರ್ವಕಾಲದ ಶಿಕ್ಷಣ ಪಡೆದವರು. ಬಿ.ಎಸ್.ಸಿ. ಎಗ್ರಿ ಪದವಿಧರರಾಗಿದ್ದ ಸೋಂದೆ ಕೃಷಿ, ಸಹಕಾರಿ, ಶಿಕ್ಷಣ, ಸಾಮಾಜಿಕ ಹೀಗೆ ಸೋಂದೆ ಅರಿಯದ ವಿಷಯವಿಲ್ಲ ಎನ್ನುವ ಮಟ್ಟಿಗೆ ಸಾಧಕರು, ಜ್ಞಾನಿಗಳು. ಎಂ.ಇ.ಎಸ್. ಶಿಕ್ಷಣ ಸಂಸ್ಥೆ, ಶಿರಸಿ ಅರ್ಬನ್ ಬ್ಯಾಂಕ್ ಸೋಂದೆ ಸಾಧನೆಯ ಅಂಗಳ. ಓದು, ತಲಸ್ಫರ್ಶಿಜ್ಞಾನ, ಅಗಾಧ ಅನುಭವಗಳ ಗಣಿ ಯಾಗಿದ್ದ ಡಾ. ವಿ.ಎಸ್.ಸೋಂದೆಯವರನ್ನು ನಾಲ್ಕೈದು ಬಾರಿ ಸಂದಿಸಿ, ಒಂದೆರಡು ಸಂದರ್ಶನಗಳನ್ನೂ ಮಾಡಿದ್ದೆ. ಭಾಷಣ,ಸಭೆ, ಉಪನ್ಯಾಸ ಎಲ್ಲಾ ಕಡೆ ನಿಗದಿತ ಅಂಕಿಸಂಖ್ಯೆಗಳು, ಅವಶ್ಯ ಮಾಹಿತಿಗಳೊಂದಿಗೆ ಮಾತನಾಡುತಿದ್ದ ಸೋಂದೆ ಬಾಯಿ ತೆರೆದರೆಂದರೆ..ಅದು ಸನ್ 1800….. ಹತ್ತೊಂಬತ್ತು ನೂರಾ…. ಎಂದೇ ಪ್ರಾರಂಭವಾಗುತಿದ್ದ ಸೋಂದೆ ಜ್ಞಾನ, ಮಾಹಿತಿ ಕೇಳುಗರನ್ನು ಅಚ್ಚರಿಗೆ ನೂಕುತಿತ್ತು. ಇಂಥ ಸೋಂದೆ ಮತ್ತು ಡಾ.ಅಬ್ದುಲ್ ರವೂಫ್ ಒಂದೇ ವಾರದಲ್ಲಿ ಇಹಲೋಕ ತ್ಯಜಿಸಿದ್ದು ಶಿರಸಿ, ಉತ್ತರ ಕನ್ನಡ, ರಾಜ್ಯಕ್ಕೆ ಆದ ಗಣನೀಯ ಹಾನಿ. ಈ ಸಾಧಕರಿಗೆ ಸಮಾಜಮುಖಿಯ ಅಂತಿಮ ನಮನ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *