

ಲಂಕೇಶ್ ಮತ್ತು ತೇಜಸ್ವಿ ನವೋದಯದ ಹರಿಕಾರರು. ಲೋಹಿಯಾವಾದದಿಂದ ಪ್ರಭಾವಿತರಾಗಿದ್ದ ಈ ಜೋಡಿ ಆರೋಗ್ಯಕರ ಸ್ಫರ್ಧೆ, ಹೊಸತನ, ಕ್ರೀಯಾಶೀಲತೆ ನವೋದಯದ ವಿಭಿನ್ನ ಮಾರ್ಗದ ಮೂಲಕ ಕನ್ನಡ ನಾಡು, ನುಡಿಗಳ ವೈಶಿಷ್ಟ್ಯ, ಕೌತುಕತೆ ಬೆಳೆಸಿದವರು.

ಪತ್ರಿಕೋದ್ಯಮದ ದಿಕ್ಕನ್ನು ಬದಲಾಯಿಸಿದ ಶ್ರೇಯಸ್ಸು ಲಂಕೇಶ್ ರಿಗೆ ದಕ್ಕಿದ್ದರೆ, ಕನ್ನಡ ಸಾಹಿತ್ಯವನ್ನು ಹೆಚ್ಚು ರಿಡೇಬಲ್ ಆಗಿಸಿದವರು ತೇಜಸ್ವಿ. ನೆಲದ ಕಂಪಿನೊಂದಿಗೆ ವಿಶ್ವದ ಬೆರಗನ್ನು ಕನ್ನಡಿಗರಿಗೆ ಪರಿಚಯಿಸಿದ ಈ ಜೋಡಿ ಕನ್ನಡ ಸಾಹಿತ್ಯದ ಜೋಡೆತ್ತುಗಳು. 1900 ರ ಕೊನೆಯ ದಶಕಗಳಲ್ಲಿ ಅಕ್ಷರದಿಂದ ಏನನ್ನೂ ಸಾಧಿಸಬಹುದು ಎಂದು ತೋರಿಸಿದ ಧೀಮಂತರಿವರು. ಇವರೊಂದಿಗಿನ ಒಡನಾಟದ ಬೆಚ್ಚಗಿನ ಅನುಭವ ತೆರೆದಿಡುವ ಸರದಿ ಸಾಹಿತಿ ಗಂಗಾಧರ ಕೊಳಗಿಯವರದ್ದು. ಕೊಳಗಿ, ಲಂಕೇಶ್, ತೇಜಸ್ವಿಯವರ ಸಾಹಿತ್ಯಯಾನ ನಿಮಗೂ ಬದುಕುವ,ಸಾಧಿಸುವ ತುಮುಲ,ತವಕ ಹೆಚ್ಚಿಸಲಿ ಎನ್ನುವ ಆಕಾಂಕ್ಷೆ ಯೊಂದಿಗೆ ಈ ಮೂವರನ್ನೂ ಇಲ್ಲಿ ಜೋಡಿಸಿದ್ದೇವೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






