mala adiga of nri (usa) ಹೆಮ್ಮೆ ಪಡುವ ವಿಷಯ: ಜಿಲ್‌ ಬೈಡನ್‌ ಅವರ ನೀತಿ ನಿರ್ದೇಶಕರಾಗಿ ಕುಂದಾಪುರ ಮೂಲದ ಮಾಲಾ ಅಡಿಗ ನೇಮಕ

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ ಅವರ ನೀತಿ ನಿರ್ದೇಶಕರಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರು ಆಯ್ಕೆಯಾಗಿದ್ದಾರೆ

Mala adiga

ಉಡುಪಿ: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ ಅವರ ನೀತಿ ನಿರ್ದೇಶಕರಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರು ಆಯ್ಕೆಯಾಗಿದ್ದಾರೆ. 

ಭಾರತ ಮೂಲದ ಮಾಲಾ ಅಡಿಗ ಅವರು ಬೈಡನ್ ಆಡಳಿತದಲ್ಲಿ ಪ್ರಮುಖ ಹುದ್ದೆ ಪಡೆದುಕೊಂಡಿದ್ದಾರೆ.  ಬೈಡನ್ ಪ್ರತಿಷ್ಠಾನದಲ್ಲಿ ಉನ್ನತ ಶಿಕ್ಷಣ ಮತ್ತು ಸೇನಾ ಕುಟುಂಬಗಳ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಾಲಾ ಅಡಿಗ ಅವರು, ಒಬಾಮ ಆಡಳಿತದ ಅವಧಿಯಲ್ಲಿ ಒಬಾಮ ಸರ್ಕಾರದ ಅವಧಿಯಲ್ಲಿ ಜೋ ಬೈಡನ್ ಉಪಾಧ್ಯಕ್ಷರಾಗಿದ್ದಾಗ ಅವರ ಪತ್ನಿ ಜಿಲ್ ಬೈಡನ್ ಅವರಿಗೆ ನೀತಿ ಸಲಹೆಗಾರರೂ ಆಗಿದ್ದರು. ಈ ಬಾರಿ ಅವರು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ನೀತಿ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.

ಮಾಲಾ ಅಡಿಗ ಅವರು ಹುಟ್ಟಿಬೆಳೆದದ್ದು, ಅಮೆರಿಕದಲ್ಲಾದರೂ, ಆಕೆ ಉಡುಪಿ ಜಿಲ್ಲೆಯ ಕುಂದಾಪುರದ ಕಕ್ಕುಂಜೆ ಗ್ರಾಮದ ಮಣ್ಣಿನ ಮಗಳು. ಅವರು ಕಕ್ಕುಂಜೆ ಡಾ. ಚಂದ್ರಶೇಖರ ಅಡಿಗ ಮೊಮ್ಮಗಳು, ಡಾ.ರಮೇಶ್‌ ಅಡಿಗರ ಮಗಳು. ಡಾ.ರಮೇಶ್‌ ಅಡಿಗ ಅವರು ವೈದ್ಯಕೀಯ ಪದವಿ ಪಡೆದು ತಮ್ಮ 24ನೇ ವಯಸ್ಸಿನಲ್ಲೇ ಅಮೆರಿಕಕ್ಕೆ ತೆರಳಿದ್ದರು. ಕಳೆದ 50 ವರ್ಷಗಳಿಂದ ಅಲ್ಲಿಯೇ ನೆಲೆ ನಿಂತಿದ್ದಾರೆ.

ಮಾಲಾ ಅಮೆರಿಕಾದಲ್ಲೇ ಜನಿಸಿದರು ತಮ್ಮ ಊರನ್ನು ಮರೆತಿಲ್ಲ,  ತಮ್ಮ ಪತಿ ಚಾರ್ಲ್ ಬೈರೋ ಜೊತೆ ಹಲವು ವಿವಾಹ ಸಮಾರಂಭಗಳಿಗೆ ಕುಂದಾಪುರಕ್ಕೆ ಆಗಮಿಸುತ್ತಿರುತ್ತಾರೆ.  ಕುಂದಾಪುರದ ಚೈತನ್ಯ ವಿಶೇಷ ಶಾಲೆಯ ಪೋಷಕಿಯೂ ಆಗಿರುವ ಮಾಲಾ ಮತ್ತು ಚಾರ್ಲ್ಸ್‌ಗೆ ಆಶಾ ಎಂಬ 15 ವರ್ಷದ ಮಗಳು ಇದ್ದಾಳೆ.

ಮಾಲಾ ತುಂಬಾ ಪರಿಶ್ರಮ ಪಡುವ ಮಹಿಳೆ, ಹೀಗಾಗಿ ಆಕೆ ಅತ್ಯುನ್ನತ ಸ್ಥಾನಕ್ಕೇರಿದ್ದಾರೆ. ವಾರ್ಷಿಕವಾಗಿ ಭಾರತಕ್ಕೆ ಪ್ರವಾಸ ಬರುವ ಆಕೆ ಎಲ್ಲಾ ಕುಟುಂಬ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ ಎಂದು ಮಾಲಾ ಸಂಬಂಧಿ ಸುಜಾತಾ ನಕ್ಕತ್ತಾಯ ಎಂಬುವರು ಹೇಳಿದ್ದಾರೆ.

ಕುಂದಾಪುರದಲ್ಲಿ ಕಕ್ಕುಂಜೆ ಅಡಿಗರ ಮನೆತನ ಬಹಳ ಪ್ರಸಿದ್ಧ. ಈ ಮನೆತನದ ಸೂರ್ಯನಾರಾಯಣ ಅಡಿಗರು ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಇದೇ ಮನೆತನದ ಮಗಳು ಮಾಲಾ ಅಡಿಗ, ಈಗ ಅಮೆರಿಕಾದ ಪ್ರಥಮ ಮಹಿಳೆಯ ನೀತಿ ನಿರ್ದೇಶಕಿಯಾಗಿದ್ದಾರೆ. ಇದು ಕುಂದಾಪುರಕ್ಕೆ ಮಾತ್ರವಲ್ಲ ಕನ್ನಡ ನಾಡಿಗೆ ಹೆಮ್ಮೆಯ ವಿಷಯ. ಊರಿನವರಿಗೆಲ್ಲ ಬಹಳ ಸಂತೋಷವಾಗಿದೆ. ಮಾಲಾ ಅಡಿಗ ಅವರು ತಮ್ಮ ಹುದ್ದೆಯಲ್ಲಿ ಯಶಸ್ವಿಯಾಗಲಿ, ಇನ್ನೂ ದೊಡ್ಡ ಹುದ್ದೆಗೇರಲಿ ಎಂಬುದೇ ನಮ್ಮೆಲ್ಲರ ಹಾರೈಕೆ ಎಂದು ಹೇಳಿದ್ದಾರೆ.

ಮಾಲಾ ಅಡಿಗ ಅಮೆರಿಕಾಗ ಗ್ರಿನೆಲ್ ಕಾಲೇಜು, ಮಿನ್ನೆಸೋಟಾ ಸ್ಕೂಲ್ ಆಪ್ ಹೆಲ್ತ್ ವಿವಿ, ಶಿಕಾಗೋ ಲಾ ಸ್ಕೂಲ್ ವಿವಿಗಳಿಂದ ಪದವಿ ಗಳಿಸಿದ್ದಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *