ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಗೆ!

ಜಾತ್ಯಾತೀತ ಜನತಾದಳದ ಯುವ ನಾಯಕ ಡಾ.ಶಶಿಭೂಷಣ ಹೆಗಡೆ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಗಾಳಿಸುದ್ದಿಗಳಿರುವಂತೆ ಶಶಿಭೂಷಣ್ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಚರ್ಚೆಗಳೂ ಕೂಡಾ ಪ್ರಾರಂಭವಾಗಿವೆ.

ವಾಸ್ತವದಲ್ಲಿ ಶಶಿಭೂಷಣ್ ಹೆಗಡೆ ಮತ್ತವರ ಕುಟುಂಬ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಇದೇ ಕುಟುಂಬದ ಎಐಸಿ.ಸಿ. ಸದಸ್ಯ ಪ್ರಶಾಂತ್ ದೇಶಪಾಂಡೆ ಶಶಿಭೂಷಣ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಡಾ.ಶಶಿಭೂಷಣ್ ಕಾಂಗ್ರೆಸ್ ಸೇರುತ್ತಾರೆ. ಕಾಂಗ್ರೆಸ್ ನಿಂದ ಯಲ್ಲಾಪುರ ಕ್ಷೇತ್ರ ಅಥವಾ ಅವರ ಹಳೆ ಕ್ಷೇತ್ರ ಕುಮಟಾದಿಂದ ವಿಧಾನಸಭೆಯ ಅಭ್ಯರ್ಥಿಯಾಗುತ್ತಾರೆ ಎನ್ನಲಾಗುತ್ತಿದೆ.

ಇದರ ಮಧ್ಯೆ ಈ ಹಿಂದೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಶಾಂತ್ ದೇಶಪಾಂಡೆ ಶಶಿಭೂಷಣ ಮತ್ತವರ ಜಾತಿ ಬೆಂಬಲದಿಂದ ಕುಮಟಾ, ಹಳಿಯಾಳ, ಯಲ್ಲಾಪುರಗಳಲ್ಲಿ ವಿಧಾನಸಭಾ ಅಭ್ಯರ್ಥಿಯಾಗುವ ಯೋಚನೆಯಲ್ಲಿದ್ದಾರೆ ಹಾಗಾಗಿ ಡಾ. ಶಶಿಭೂಷಣ್ ರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದರೆ ವಿಧಾನಸಭೆ ಅಥವಾ ಲೋಕಸಭೆಗೆ ಅವರನ್ನೂ ಕಳಿಸಬಹುದು ಅಥವಾ ಅವರ ನೆರವಿನಿಂದ ತಾನೂ ಕೂಡಾ ವಿಧಾನಸಭೆ ಅಥವಾ ಲೋಕಸಭೆಗೆ ಪಾದಾರ್ಪಣೆ ಮಾಡಬಹುದು ಎಂದು ಯೋಚಿಸಿದ್ದಾರೆ ಎನ್ನುವ ಲೆಕ್ಕಾಚಾರದ ಸುತ್ತ ಈ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಈ ಲೆಕ್ಕಾಚಾರ, ಸಾಧ್ಯತೆಗಳು ಒಂದೆಡೆಯಾದರೆ ಮಾನಸಿಕವಾಗಿ ಬಿ.ಜೆ.ಪಿ. ಕಡೆ ಇರುವ ಡಾ.ಶಶಿಭೂಷಣ ಹೆಗಡೆ ಯಲ್ಲಾಪುರ, ಶಿರಸಿ,ಕುಮಟಾಗಳಿಂದ ಬಿ.ಜೆ.ಪಿ. ವಿಧಾನಸಭಾ ಅಭ್ಯರ್ಥಿಯಾಗುವ ಯೋಚನೆಯಿಂದ ಬಸವರಾಜ್ ಬೊಮ್ಮಾಯಿ ಮೂಲಕ ಶಶಿ ಕಮಲ ಮುಡಿಯುತ್ತಾರೆ ಎನ್ನುವ ಚರ್ಚೆ ಕೂಡಾ ನಡೆದಿದೆ. ಹೀಗೆ ಅನೇಕ ಲೆಕ್ಕಾಚಾರ, ಶಿಷ್ಟಾಚಾರಗಳು, ಅನಿವಾರ್ಯತೆಗಳ ನಡುವೆ ಶಶಿಭೂಷಣ ಜೆ.ಡಿ.ಎಸ್. ತೊರೆದು ಕಾಂಗ್ರೆಸ್ ಅಥವಾ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಚರ್ಚೆಗಳಂತೂ ಚಾಲ್ತಿಯಲ್ಲಿವೆ. ಈ ಹೊಸ ಬೆಳವಣಿಗೆಗಳ ಸುತ್ತ, ಶಶಿಭೂಷಣ್ ರ ತೆರೆಮರೆಯ ಮೌನ! ಗಳ ಹಿನ್ನೆಲೆಯಲ್ಲಿ samaajamukhi.net ಹಾಗೂ smaajamukhi ಯೂ ಟ್ಯೂಬ್ ಚಾನೆಲ್ ಮಾತಿಗೆಳೆದಾಗ ಡಾ. ಶಶಿಭೂಷಣ ಹೊರಗೆಡವಿದ ಸತ್ಯ,ಯೋಚನೆ, ಯೋಜನೆ ಗಳೇ ಬೇರೆ. ಈ ಸಂದರ್ಶನ ನೋಡಿ, samaajamukhi ಯುಟ್ಯೂಬ್ ಚಾನೆಲ್ ಗೆ subscribe ಆಗುವುದನ್ನು ಮರೆಯದಿರಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *