ಸಂಘ ಶಕ್ತಿಯ ವಿರುದ್ಧ ದಲಿತ ಶಕ್ತಿಯ ಗೆಲುವು! ತಾನು ಕಸಗುಡಿಸುತ್ತಿದ್ದ ಪಂಚಾಯ್ತಿಗೆ ಈಗ ಅಧ್ಯಕ್ಷೆಯಾದ ಮಹಿಳೆ

ಶಿರಸಿ-ಸಿದ್ಧಾಪುರ, ಉತ್ತರ ಕನ್ನಡ, ಕರಾವಳಿ ಉದ್ದಕ್ಕೂ ವಿಸ್ತರಿಸಿದ ಸಂಘ ಶಕ್ತಿಯ ವಿರುದ್ಧ ಬಹುಜನಶಕ್ತಿ ಅಥವಾ ದಲಿತಶಕ್ತಿ ಶಕ್ತಿಯುತವಾಗುವ ಲಕ್ಷಣ ಈ ಗ್ರಾಮ ಪಂಚಾಯತ್ ಚುನಾವಣೆ ಪ್ರತಿಬಿಂಬಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅತಿಹೆಚ್ಚು ಪ್ರಮಾಣದ ಸಾವಿರ ಸಂಖ್ಯೆಯಲ್ಲಿ ಗ್ರಾಮ ಪಂಚಾಯತ್ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಹೆಚ್ಚು ಶಾಸಕರು, ಸಂಸದರನ್ನು ಹೊಂದಿರುವ ಬಿ.ಜೆ.ಪಿ. ಮೂರಂಕಿ ಸಂಖ್ಯೆಗಳನ್ನು ದಾಟಿಲ್ಲ, ಜೆ.ಡಿ.ಎಸ್. ಮೂರಂಕಿಗೆ ಸಮಾಧಾನ ಪಟ್ಟಿದೆ.

ಬನವಾಸಿಯಲ್ಲಿ 9 ವಾರ್ಡ್ ಗಳಲ್ಲಿ 9 ಕಡೆ ಮುಸ್ಲಿಂ ಸಮೂದಾಯದವರೇ ಆಯ್ಕೆಯಾಗಿ ಆಡಳಿತಾರೂಢ ಬಿ.ಜೆ.ಪಿ.ಗೆ ಮುಟ್ಟಿನೋಡಿಕೊಳ್ಳುವಂಥಹ ಏಟು ನೀಡಿದೆ.

ಸಿದ್ಧಾಪುರದಲ್ಲಿ ಆಡಳಿತ ಬಿ.ಜೆ.ಪಿ 23 ಗ್ರಾಮ ಪಂಚಾಯತ್ಗಳ 46 ಪರಿಶಿಷ್ಟರ ಸ್ಥಾನಗಳಿಗೆ ಮಹಿಳಾ ಮೀಸಲಾತಿ ನಿಗದಿಪಡಿಸಿ ಪುರುಷ ಪರಿಶಿಷ್ಟರು ಸ್ಫರ್ಧಿಸದಂತೆ ಮೀಸಲಾತಿ ನಿಗದಿ ಮಾಡಿತ್ತು.ಈ ಉಳಿಗಮಾನ್ಯ ಬಿ.ಜೆ.ಪಿ. ಮನಸ್ಥಿತಿಗೆ ಸೆಡ್ಡುಹೊಡೆದಿರುವ ಕಾನಗೋಡು ಗ್ರಾ.ಪಂ. ನ ಮಾಜಿ ಅಧ್ಯಕ್ಷ ಶಿವಾನಂದ ಎಚ್.ಕೆ. ಸಾಮಾನ್ಯ ಕ್ಷೇತ್ರದಲ್ಲಿ ಸ್ಫರ್ಧಿಸಿ ಅನಂತಕುಮಾರ ಹೆಗಡೆ ಶಿಷ್ಯ ಮತ್ತು ಆರ್.ಎಸ್.ಎಸ್. ವ್ಯಕ್ತಿಯೆದುರು ಜಯ ಗಳಿಸಿ ದಾಖಲೆ ಮಾಡಿದ್ದಾರೆ.

ತಾನು ಕಸಗುಡಿಸುತ್ತಿದ್ದ ಪಂಚಾಯ್ತಿಗೆ ಈಗ ಅಧ್ಯಕ್ಷೆಯಾದ ಮಹಿಳೆ, ಥ್ಯಾಂಕ್ಸ್ ಟು ಪ್ರಜಾಪ್ರಭುತ್ವ!

ಸುಮಾರು ಒಂದು ದಶಕದ ಹಿಂದೆ ಕೇರಳದ ಪಥನಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಅರೆಕಾಲಿಕ ಸ್ವೀಪರ್ (ಕಸಗುಡಿಸುವ ಕೆಲಸ) ಆಗಿ ಕೆಲಸ ಮಾಡುತ್ತಿದ್ದ ಆನಂದವಳ್ಳಿ ಅವರು, ತಾನೂ ಒಂದು ದಿನ ಈ ಸ್ಥಳೀಯ ಸಂಸ್ಥೆಯ ಮುಖ್ಯಸ್ಥೆಯಾಗಬಹುದು ಎಂದು ಯಾವತ್ತೂ ಭಾವಿಸಿರಲಿಲ್ಲ.

anandavalli

ಕೊಲ್ಲಂ: ಸುಮಾರು ಒಂದು ದಶಕದ ಹಿಂದೆ ಕೇರಳದ ಪಥನಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಅರೆಕಾಲಿಕ ಸ್ವೀಪರ್ (ಕಸಗುಡಿಸುವ ಕೆಲಸ) ಆಗಿ ಕೆಲಸ ಮಾಡುತ್ತಿದ್ದ ಆನಂದವಳ್ಳಿ , ತಾನೂ ಒಂದು ದಿನ ಈ ಸ್ಥಳೀಯ ಸಂಸ್ಥೆಯ ಮುಖ್ಯಸ್ಥೆಯಾಗಬಹುದು ಎಂದು ಯಾವತ್ತೂ ಭಾವಿಸಿರಲಿಲ್ಲ. ಆದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಪ್ರಭು ಆಗಬಹುದು ಎಂಬುದನ್ನು ಈ ಮಹಿಳೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ದಮನಿತ ವರ್ಗಗಳ ಸಬಲೀಕರಣದ ಸಂಕೇತವಾಗಿ, ಪರಿಶಿಷ್ಟ ಜಾತಿಗೆ ಸೇರಿದ 46 ವರ್ಷದ ಸಿಪಿಎಂ ಸದಸ್ಯೆ ಆನಂದವಳ್ಳಿ ಅವರು ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

“ನಾನು ಅಂತಹ ಉನ್ನತ ಹುದ್ದೆಯನ್ನು, ಅದೂ ನಾನು ಅರೆಕಾಲಿಕ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಅಲಂಕರಿಸುತ್ತೇನೆ ಎಂದು ಎಂದೂ ಯೋಚಿಸಿರಲಿಲ್ಲ” ಎಂದು ಇಬ್ಬರು ಮಕ್ಕಳ ತಾಯಿ ಆನಂದವಳ್ಳಿ ಅವರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಪಥನಪುರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಹುದ್ದೆಗೆ ಆನಂದವಳ್ಳಿ ಅವರ ಹೆಸರನ್ನು ಸೂಚಿಸಿತ್ತು. 13 ಸದಸ್ಯ ಬಲದ ಈ ಬ್ಲಾಕ್ ಪಂಚಾಯತ್‌ನಲ್ಲಿ ಎಲ್‌ಡಿಎಫ್ ಏಳು ಸ್ಥಾನಗಳನ್ನು ಗೆದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರು ಸ್ಥಾನಗಳನ್ನು ಗಳಿಸಿತ್ತು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *