Kagodu speech -ಕಾಗೋಡು ತಿಮ್ಮಪ್ಪನವರ ಮಾತು ಕಣ್ಣು ತೇವಗೊಳಿಸಿತು

ಶಿವಮೊಗ್ಗದಲ್ಲಿ ದೀವರ ಬೂಮಣ್ಣಿ ಚಿತ್ತಾರ ಸ್ಪರ್ಧೆಯ ವಿಜೇತ ಹೆಣ್ಣು ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು ಆಡಿದ ಮಾತುಗಳು ಕಣ್ಣಂಚಿನಲ್ಲಿ ನೀರಾಡುವಂತೆ ಮಾಡಿದವು. ಒಬ್ಬ ವ್ಯಕ್ತಿ ಮಾಗಿದಾಗ ಮಗುವಿನಂತೆ ನಿಷ್ಕಲ್ಮಶನಾಗಿ ಆಗಿಬಿಡುತ್ತಾನೆ ಅನಿಸಿತು.

“ನಾವು ಚಿಕ್ಕವರಿದ್ದಾಗ ನಮ್ಮ ಜನ ಪಡಬಾರದ ಕಷ್ಟ ಪಡುತ್ತಿದ್ದುದನ್ನು ನೋಡಿದವರು. ಅಂತಹ ಗುಲಾಮಗಿರಿಯ ದಾರುಣ ಸ್ಥಿತಿಯಿಂದ ಹೊರಬರಲು, ಉಳುವವನೇ ಹೊಲದೊಡೆಯನಾಗಲು ಕಾಗೋಡು ಸತ್ಯಾಗ್ರಹ ನಡೆದಿತ್ತು. ಆಗ ಸಮಾಜವಾದಿ ನಾಯಕ ಗೋಪಾಲ ಗೌಡರನ್ನು ನಮ್ಮ ಗುರುಗಳಾಗಿ ಸ್ವೀಕರಿಸಿದ್ದೆವು. ದೂರದ ಲೋಹಿಯಾ ಅವರು ಇಲ್ಲಿನ ಹೋರಾಟದ ಸಂಗತಿ ತಿಳಿದು ಕಾಗೋಡಿಗೆ ಬಂದು ಹೋರಾಟ ಅಹಿಂಸಾತ್ಮವಾಗಿ ನಡೆಯಬೇಕು ಎಂದು ತಿಳಿ ಹೇಳಿದ್ದರು. ಅವರು ಗಾಂಧಿ ಮಾರ್ಗದಲ್ಲಿ ನಡೆಯುತ್ತಿದ್ದ ಸಮಾಜವಾದಿ.‌ ಈ ಸಂದರ್ಭದಲ್ಲಿ ನಮ್ಮ ಆಲೋಚನೆಗಳೆಲ್ಲಾ ಅದೇ ಆಗಿತ್ತು. ಆದರೆ ನಮ್ಮ ಸಮುದಾಯದ ಕಲೆ ಸಂಸ್ಕೃತಿಯ ಕುರಿತು ನಾವು ನಿಜವಾಗಿ ಗಮನ ಹರಿಸದೇ ಹೋದೆವು. ಅದು ಮುಖ್ಯ ಎಂದು ಅಂದು ನಮಗೆ ಹೊಳೆಯಲೇ ಇಲ್ಲ. ‌
ಇಂದು ನೀವೆಲ್ಲ ಆಯೋಜಿಸಿರುವ ಈ ಕಾರ್ಯಕ್ರಮ ನೋಡಿ ನಾವು ನಿಜವಾಗಿ ತಪ್ಪು ಮಾಡಿದ್ದೇವೆ ಅನಿಸುತ್ತಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ’ ಎಂದು ಹಿರಿಯ ಜೀವ‌ ನುಡಿದಾಗ ನಿಜಕ್ಕೂ ಮನ ಕಲಕಿತು.

ನಾವು ಮಲೆನಾಡಿನ ದೀವರ ಚಿತ್ತಾರದ ಬಗ್ಗೆ ಯೋಚಿಸುವಾಗ ಮಾತಾಡುವಾಗಲೆಲ್ಲ ಎಲ್ಲೋ ಮನಸಿನ ಒಂದು ಕಡೆ ನಮ್ಮ ರಾಜಕೀಯ ನಾಯಕರು ಇಂತಹ ವಿಶಿಷ್ಟ ಕಲೆಗೆ ಸರಿಯಾದ ಕಾಯಕಲ್ಪ ಮಾಡಲು ತೋರಿಸ ಅಸಡ್ಡೆ ಕುರಿತು ಬೇಸರ ವ್ಯಕ್ತಪಡಿಸಿದ್ದಿದೆ. ಈ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರಿಗೆ ಇದು ಅರಿವಿಗೆ ಬರಲಿ ಎಂಬ ಉದ್ದೇಶವೂ ಇತ್ತು. ಆದರೆ ನಮ್ಮ ಮನಸಿನ ನೋವು, ಅಸಮಾಧಾನವನ್ನು ತಾವಾಗಿಯೇ ಅರ್ಥ ಮಾಡಿಕೊಂಡಂತೆ ಮಾತಾಡಿ ಕ್ಷಮೆ ಕೇಳಿದ ಕಾಗೋಡು ತಿಮ್ಮಪ್ಪನವರು ನಿಜಕ್ಕೂ ದೊಡ್ಡವರಾಗಿಬಿಟ್ಟರು.

ಹೌದು, ಅಂದಿನ ಅವರ ಆದ್ಯತೆಗಳು ಬೇರೆಯೇ ಇದ್ದವು.‌ ಗೇಣಿದಾರರ ಸಮಸ್ಯೆಗಳು, ಬಲಾಡ್ಯ ಸಮುದಾಯಗಳ ದಬ್ಬಾಳಿಕೆಯಲ್ಲಿ ಸಾಮಾಜಿಕ ನ್ಯಾಯದ ವಿಷಯಗಳು ಆದ್ಯತೆಯಾಗಿದ್ದವು. ಆದರೂ ತಳ ಸಮುದಾಯದ ಕಲೆ ಸಂಸ್ಕೃತಿಗಳು ವಿನಾಶಹೊಂದುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಅವಶ್ಯವಾಗಿ ಮಾಡಬೇಕಿದ್ದ ಹಲವು ಕೆಲಸಗಳಿದ್ದವು. ದೀವರಂತಹುದೇ ವೊರ್ಲಿ ಸಮುದಾಯ ಚಿತ್ತಾರದಂತಹುದೇ ಕಲೆಯನ್ನು ದೇಶ ವಿಖ್ಯಾತಗೊಳಿಸಿದಂತೆ ದೀವರ ಚಿತ್ತಾರವೂ ಆಗಬೇಕಿತ್ತು.‌ ಈ ಕುರಿತು ಹಿರಿಯ ಸಾಹಿತಿ ನಾ ಡಿಸೋಜಾ ಅವರು ಮಾತಾಡುತ್ತಾ ಒಮ್ಮೆ ನನ್ನ ಬಳಿ ಹೀಗೆಂದಿದ್ದರು. ‘ದೀವರು ಆರ್ಥಿಕವಾಗಿ ರಾಜಕೀಯವಾಗಿ ಅಭಿವೃದ್ಧಿ ಹೊಂದುವುದು ಮಾತ್ರ ಸಮುದಾಯದ ಪ್ರಗತಿ ಎಂದು ತಿಳಿದು ತಮ್ಮ ಅತ್ಯಂತ ವಿಶಿಷ್ಟ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.‌ ಇದು ಬಹಳ ದುರದೃಷ್ಟದ ವಿಷಯ”.

ಬಹಳ ತಡವಾಗಿ ಎಚ್ಚೆತ್ತಿದ್ದೇವೆ. ಈಗಲೂ ಕಾಲ ಮಿಂಚಿಲ್ಲ. ಕಾಗೋಡು ತಿಮ್ಮಪ್ಪನವರು ಹೇಗೂ ನಮ್ಮ ಪ್ರಯತ್ನದಲ್ಲಿ ಜೊತೆಯಾಗಿರುವುದಾಗಿ ಹೇಳಿದ್ದಾರೆ. ಶಾಸಕರಾದ ಹಾಲಪ್ಪನವರೂ, ಮಾಜಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಅವರೂ ಚಿತ್ತಾರ ಕಲೆಯನ್ನು ಬೆಳೆಸುವಲ್ಲಿ ಸಮುದಾಯದ ಜೊತೆಗೆ ಕೈಗೂಡಿಸುವುದಾಗಿ ಮಾತು ಕೊಟ್ಟಿದ್ದಾರೆ.‌ ಕಾರ್ಮೋಡದ ನಡುವಿನಿಂದ ಬೆಳ್ಳಿ ಗೆರೆಯೊಂದು ಕಾಣಿಸಿಕೊಂಡಂತಾಗಿದೆ.‌

“ಹಿರಿಯರ ಪಾದಕ್ಕೆ ಶರಣೂ
ಅವರ ಮೆಟ್ಟಡಿಯ ಅರಿವೀಗೇ ಶರಣೂ” ಎಂಬ ಕೋಟಗಾನಳ್ಳಿ ರಾಮಯ್ಯ ಅವರ ಗೀತೆಯ ಸಾಲಿನಂತೆ ಹಿರಿಯ ಚೇತನಗಳಿಗೆ ವಂದಿಸಿ ಮುಂದೆ ಸಾಗೋಣ.

  • ಹರ್ಷಕುಮಾರ್ ಕುಗ್ವೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *