ವ್ಯಕ್ತಿ ಪರಿಚಯ- ಬಿ.ವಿ.ನಾಯಕ…..01-

(ಪ್ರಖಾಂಡ ಪಾಂಡಿತ್ಯದ ಪ್ರಖರ ಜ್ಞಾನಿಯ “ಜಯವಾಗಲಿ” ವಾಣಿಯ ಸುತ್ತ.‌)

ಅದೊಂದೆ ಒಂದು ಅಭ್ಯಾಸ ತಮ್ಮಿಂದ ದೂರ ಇದ್ದಿದ್ದರೆ, ನನ್ನ ಜಿಲ್ಲೆ ಭಾರತದ ನಕಾಶೆಯಲ್ಲಿ ಧ್ರುವ ನಕ್ಷತ್ರದಂತೆ ಮಿನುಗುವ ಅವಕಾಶದಿಂದ ವಂಚಿತವಾಗುತ್ತಿರಲಿಲ್ಲ…ಅದನ್ನು ಸಾಧಿಸುವ ವಿದ್ಯೆ ಜ್ಞಾನ, ಆಶಯ, ತುಡಿತಗಳು ಮೇಳೈಸಿದ ಏಕೈಕ ವ್ಯಕ್ತಿ ನೀವಾಗಿದ್ದಿರಿ..ನನ್ನ ಜಿಲ್ಲೆಯ ಕನಸಿಗೆ ಬಣ್ಣ ಹಚ್ಚಲು ಜನ ತಮ್ಮನ್ನು ಆಯ್ಕೆ ಮಾಡಿದ್ದರು..ನೀವೇನು ಮಾಡಿಬಿಟ್ಟಿರಿ? ಕೇಳೋಣವೆಂದರೆ ಇಂದು ನೀವಿಲ್ಲ ..ನಮ್ಮ ಆತ್ಮದ ಕೂಗಾದರು ನಿಮಗೆ ಕೇಳಿಸದೆ.

ಬಿ.ವಿ.ಹೌದು ಇದು. ಭಾರತದ ರಾಜಕಾರಣದಲ್ಲಿ ಅತಿ ಬುದ್ಧಿವಂತನೆಂದು ಸ್ವತಃ ಇಂದಿರಾಗಾಂಧಿಯೆ ಕೈ ಬೀಸಿ.ಹತ್ತಿರಕ್ಕೆ ಕರೆದಾಗ, ಚಟಕ್ಕೆ ಬದುಕನ್ನೆ ಅರ್ಪಿಸಿಬಿಟ್ಟ ಪರಮಜ್ಞಾನಿಯ ಕಥೆ.. ಅವರು ಬಿ.ವಿ.ನಾಯಕ.ನನ್ನ ಜಿಲ್ಲೆಯ ರಾಜಕಾರಣ, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ದಿನಕರದೇಸಾಯಿಯಂತಹ ಪ್ರಖರ ವಾಗ್ಮಿಗಳ ಕೈಯಲ್ಲಿ ಅರಳಲೇ ಇಲ್ಲ.. ಅರಳಿಸುವ ಶಕ್ತಿ ಇದಿದ್ದು ಬಿ.ವಿ.ನಾಯಕರಿಗೆ ಮಾತ್ರ..ಆದರೆ ವಿಧಿಯಾಟ ನೋಡಿ.ಕರ್ನಾಟಕದ ಪ್ರಪ್ರಥಮ ಡಿ.ಸಿ ಘಾಟಿ ವೆಂಕಣ್ಣ ನಾಯಕರ ಮಗ ಬಿ.ವಿ ನಾಯಕ ಆ ಕಾಲದಲ್ಲಿಯೆ ಲಂಡನನಲ್ಲಿ ಸಹಕಾರಕ್ಷೇತ್ರದ( ಕೋ-ಆಪರೆಟಿವ್ ಸೆಕ್ಟರ) ಬಗ್ಗೆ ಓದಿ ಭಾರತಕ್ಕೆ ಬಂದಿದ್ದರು..ಒಂದಿಷ್ಟು ವರ್ಷ ರಾಯಚೂರಿನಲ್ಲಿ ಕೆಲಸ ಮಾಡಿದ್ದರಂತೆ.. 1971ರಿಂದ1976ರವರೆಗೆ ಉತ್ತರಕನ್ನಡ ಜಿಲ್ಲೆಯ ಎಂ.ಪಿ ಯಾಗಿದ್ದರು..ಅವರ ಭೌದ್ಧಿಕತೆಯನ್ನು ಗುರುತಿಸಿದ ಇಂದಿರಾ ಗಾಂಧಿರವರು ಹತ್ತಿರಕ್ಕೆ ಕರೆದು ನಾಳೆ ಭಾರತದ ಸಹಕಾರಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಬನ್ನಿರೆಂದಾಗ..ಖುಷಿಯಿಂದಲೆ ಹೊರಟರು..ಮಧ್ಯ ದಾರಿಯಲ್ಲಿ ವಿ.ಸಿ ಶುಕ್ಲನೆಂಬ ಪೆಡಂಭೂತ ಸಿಗದೆ ಹೋಗಿದ್ದರೆ, ಮುಂದೆ ಬಿ.ವಿ.ನಾಯಕ ಮಾತಾಡುತ್ತಿದ್ದರು..

.ಶುಕ್ಲನ ದುರಾಸೆ ಬಿ.ವಿ ನಾಯಕನೆಂಬ ಜ್ಞಾನಿಯ ರಾಜಕಾರಣದ ಬದುಕನ್ನೆ ಸರ್ವನಾಶ ಮಾಡಿಬಿಟ್ಟಿತ್ತು.. ಅಂದು ಅವರು ಗುಂಡು ಪಾರ್ಟಿ ಮಾಡಿದ್ದರಂತೆ ಅದು ಏನು ಹಾಕಿ ಕೊಟ್ಟರೊ ಬಿ.ವಿ.ನಾಯಕ ಕುಡಿದು ಮಲಗಿದವರು ಎಳಲೇ ಇಲ್ಲ… ಅತ್ತ ನಿರೀಕ್ಷೆ ಹುಸಿಯಾಗಿ ಇಂದಿರಾ ಆ ಖಾತೆಯನ್ನು ಬೇರೆಯವರಿಗೆ ಕೊಟ್ಟು ಬಿಟ್ಟರಂತೆ…ಶುಕ್ಲ ಮಾಡಿದ ದ್ರೋಹಕ್ಕೆ ಮಲಗಿದ್ದು ಬಿ.ವೀ ನಾಯಕ ಅಲ್ಲ..ಬದಲಾಗಿ ಉತ್ತರಕನ್ನಡ ಜಿಲ್ಲೆಯ ಚೈತನ್ಯದ ಭವಿಷ್ಯವೆ ಮಲಗಿಬಿಟ್ಟಿತ್ತು…ಮತ್ತೆ ಮೇಲೇಳಲೆ ಇಲ್ಲ.. ಈ ಜಿಲ್ಲೆ..

ಆಮೇಲೆ ನಿಷ್ಪ್ರಯೋಜಕ ರಾಜಕಾರಣಿಗಳ ತವರಾಯಿತು ಬೊಗಳೆ ಬಿಡುವವರೆ ರಾಜಕಾರಣದಲ್ಲಿ ರಾರಾಜಿಸಿದರು… ಮೈಛಳಿ ಬಿಟ್ಟು ಬಿ.ವಿ ಕೂಡ ಫೀಲ್ಡಿಗೆ ಬರಲೇ ಇಲ್ಲ…ಪರಿಶುದ್ಧ ಪ್ರಾಮಾಣಿಕತೆ, ಅತಿ ಒಳ್ಳೆಯತನಗಳು ವ್ಯಕ್ತಿಯನ್ನು ಯಾವ ಪರಿ ಹಿಂಸಿಸಿ ಬಿಡುತ್ತದೆ ಎಂಬುದಕ್ಕೆ ಅವರು ಉದಾಹರಣೆಯಾಗಿ ನಿಲ್ಲುತ್ತಾರೆ..ಅವರೊಬ್ಬ ರಾಜಕಾರಣದ ಗ್ರಾಮರ್ ಆಗಿದ್ದರು ಪ್ರಾಮಾಣಿಕ ರಾಜಕಾರಣದ ರೂವಾರಿ,.ಕೈ ಮುಷ್ಠಿ ಬಿಗಿದು ಭಾಷಣಕ್ಕೆ ನಿಂತರೆ ಕರಲೊ ದುನಿಯಾ ಮುಷ್ಠಿ ಮೆ ಎಂಬಂತೆ, ಇಡಿ ವಿಶ್ವದ ಭೌಗೋಳಿಕ , ಸಾಮಾಜಿಕ, ಆರ್ಥಿಕ, ರಾಜಕಿಯ ವ್ಯವಸ್ಥೆಯ ಬಗ್ಗೆ ಮಾತಾಡುವ ಜ್ನಾನ ಅವರಿಗಿತ್ತು..

ಉತ್ತರ ಕನ್ನಡ ಗುಡ್ಡಗಾಡು ಜಿಲ್ಲೆ, ತೋಟಗಾರಿಕಾ ಜಿಲ್ಲೆಯಾಗಬೇಕೆಂದು ಅವರು ಕನಸಿ ದ್ದರು.. ಅವರೊಬ್ಬ ಪತ್ರಕರ್ತರಾಗಿ ಜಯವಾಗಲಿ ಎಂದು ಸಂಭೋದಿಸುತ್ತಾ ಪರಿಶುದ್ಧ ಜೀವನ ನಡೆಸಿದ್ದರು..ಸಾಹಿತ್ಯ, ಕಲೆ, ವಿಜ್ಞಾನ, ಇತಿಹಾಸ ಯಕ್ಷಗಾನ, ವೈಚಾರಿಕತೆ, ಲೈಂಗಿಕ ಶಿಕ್ಷಣ ಹೀಗೆ ಆ ಮನುಷ್ಯ ಮಾತಾಡದ ವಸ್ತು ವಿಷಯಗಳೇ ಇಲ್ಲ..ಆಡು ಮುಟ್ಟದ ಸೊಪ್ಪಿಲ್ಲ..ಬಿ.ವಿ.ನಾಯಕ ತಿಳಿಯದ ವಿಚಾರಗಳಿಲ್ಲ..ಅಷ್ಟೊಂದು. ಭೌಧಿಕ ಶಿಖರದ ಕಿರೀಟದಂತಿದ್ದರು ಬಿ.ವಿ…

ಬಿ ವಿ.ನಾಯಕ ಮಾತಾಡುತ್ತಾರೆ ಎಂದರೆ, ಬರೆಯುತ್ತಾರೆ ಎಂದರೆ ಆ ಪತ್ರಿಕೆಗಳು ದಾವಣಗೇರಿಯ ಬೆಣ್ಣೆ ದೋಸೆಯಂತೆ ಖರ್ಚಾಗಿ ಬಿಡುತ್ತಿದ್ದವು…ಬಿ.ವಿ ನಾಯಕರ ಕನಸಿನ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಮುಂದೆ ಎಂದಾದರೂ ಬರೆಯುವೆ…ಭಾರತದ ಐದು ಸಾವಿರ ವರ್ಷಗಳ ಇತಿಹಾಸವನ್ನು ನಿಖರ ದಾಖಲೆ ದಿನಾಂಕಗಳೊಂದಿಗೆ ಹೇಳುತ್ತಿದ್ದರು..ಅವರೊಬ್ಬ ಐನ್ ಸ್ಟೈನರಂತ ಪಂಡಿತರಾಗಿದ್ದರು ಆ ಮೆದುಳು ನೆನಪುಗಳ ಕಣಜವಾಗಿತ್ತು… ಬಿ.ವಿ ನಾಯಕರಂತ ರಾಜಕಾರಣಿಯನ್ನು ಭಾರತದ.ರಾಜಕಾರಣದಲ್ಲಿಯೆ ನಾನು ಯಾರನ್ನು ನೋಡಿಲ್ಲ…ಅವರ ಬಗ್ಗೆ ಬರೆಯಲು ತುಂಬಾ ವಿಷಯವಿದೆ.. ಬರೆಯಲು ನನಗೆ ವಿಷಾಧವಿದೆ..

..ರಾಜು ನಾಯಕ..ಬಿಸಲಕೊಪ್ಪ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *