ದೀಪದ ಬುಡ…

ದೀಪದ ಬುಡ…
-ಪಾದಚಾರಿ
ದೀಪದ ಬುಡದಲ್ಲಿ ಕತ್ತಲೆ ಎನ್ನುವ ಮಾತಿದೆ. ಆ ಮಾತು ಎಷ್ಟು ಸತ್ಯ ಎಂದರೆ ನಮ್ಮ ಮನೆಯಲ್ಲೇ ಪ್ರತಿಭಾವಂತರಿದ್ದರೂ ನಾವು ಗಮನನೀಡುವುದಿಲ್ಲ. ನಮ್ಮ ತೋಟದಲ್ಲೇ ಒಳ್ಳೆಯ ತರಕಾರಿ ಇರುತ್ತದೆ. ಆದರೆ ನಮಗದು ಕಾಣುವುದಿಲ್ಲ. ಕಂಡರೂ ಇಷ್ಟವಾಗುವುದಿಲ್ಲ. ಎಷ್ಟೋ ವಸ್ತುಗಳು ನಮ್ಮಲ್ಲೇ ಇರುತ್ತವೆ.ಆದರೆ ನಾವು ಉಪಯೋಗಿಸುವುದಿಲ್ಲ. ಯಾಕೆಂದರೆ ಅದರಮಹತ್ವ ನಮಗೆ ನಗಣ್ಯ.
ದೂರದಿಂದ ಬಂದದ್ದು ಮಾತ್ರ ಒಳ್ಳೆಯದೆಂದು ತಲೆಯಲ್ಲಿ ತುಂಬಿಕೊಳ್ಳುತ್ತೇವೆ. ನಮಗೆ ಬೇಕಾದ ವಸ್ತು ಸನಿಹದಲ್ಲೇ ಇದ್ದರೂ ಗಮನಿಸದೆ ಎಲ್ಲೆಲ್ಲೋ ಹುಡುಕುತ್ತಿರುತ್ತೇವೆ. ಅಂತಹ ಸಂದರ್ಭದಲ್ಲಿ ಹೇಳುವ ಮಾತು ದೀಪದ ಬುಡದಲ್ಲಿ ಕತ್ತಲೆ ಎಂದೋ ಅಥವಾ ಅಂಗೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕೆ ಅಲೆದಾಟ ಎಂದು.
ಈ ಗಾದೆ ಏಕೆ ನೆನಪಾಯಿತು ಎಂದರೆ, ನಮ್ಮೂರಿನ ಸ್ವಾತಂತ್ರ್ಯ ಸೇನಾನಿ ಚೌಡ ನಾಯ್ಕರ ಹೆಸರನ್ನು ನನ್ನ ಶಾಲಾ ಜೀವನದಲ್ಲಿ ಕೇಳಿಯೇ ಇರಲಿಲ್ಲ. ನಾನು ಪ್ರಾಥಮಿಕ, ಮಾಧ್ಯಮಿಕ ಶಾಲೆಯ ಒಂಭತ್ತನೆಯವರೆಗೆ ಓದಿದ್ದು ಸಿದ್ಧಾಪುರ ತಾಲೂಕಿನಲ್ಲೇ. ಆದರೆ ಚೌಡ ನಾಯ್ಕರ ಹೆಸರು ಮಾತ್ರ ಎಲ್ಲೂ ಕೇಳಲಿಲ್ಲ.
ಶಾಲೆಬಿಟ್ಟ 24-25 ವರ್ಷಗಳ ನಂತರ ಶ್ರೀಪಾದ ಹೆಗಡೆ ಮಗೇಗಾರ್ ಬರೆದ ಕ್ರಾಂತಿಯ ಕಿಡಿ ಎನ್ನುವ ನಾಟಕದ ಪುಸ್ತಕವನ್ನು ಕೊಟ್ಟವರು ಬೆಂಗಳೂರಿನ ನಾರಾಯಣ ಶಾನುಭಾಗರು. ಬೆಂಗಳೂರಿನಿಂದ ನಾರಾಯಣ ಶಾನುಭಾಗರು ಪ್ರೀತಿಯಿಂದ ಮುಂಬಯಿಯ ನನ್ನ ಮನೆ ವಿಳಾಸಕ್ಕೆ ಕ್ರಾಂತಿಯ ಕಿಡಿ ಕಳುಹಿಸಿದ ಶಾನುಭಾಗರ ಸಾಹಿತ್ಯಾಸಕ್ತಿಗೆ ಧನ್ಯವಾದಗಳು ಎಂದು ಹೇಳಲು ದೂರವಾಣಿ ಮಾಡಿದ್ದೆ. ನೀನು ಸಿದ್ಧಾಪುರದವ, ಸಿದ್ಧಾಪುರದ ಕಥೆ ನಿನಗೂ ತಿಳಿದಿರಲಿ. ನೀನು ಕೃತಿಯನ್ನು ಇಷ್ಟಪಡಬಹುದು ಎಂದು ಕಳುಹಿಸಿರುವೆ ಎಂದರು.
40 ಪುಟಗಳ ನಾಟಕ ಓದುತ್ತ ಹೋದಂತೆ ಅನೇಕ ವಿಚಾರಗಳು ಮನಸ್ಸಿನಲ್ಲಿ ಮೊಳಕೆಯೊಡೆದವು. ಅಷ್ಟೇ ಅಲ್ಲ ದೀಪದ ಬುಡದಲ್ಲಿ ಕತ್ತಲೆಎನ್ನುವ ಗಾದೆಯೂ ನೆನಪಾಯಿತು.
ನಾನು ಶಾಲೆಗೆ ಹೋಗುವಾಗ ಬಾಬರ್, ಅಕ್ಬರ್, ಷಹಜಹಾನ್, ಔರಂಗಜೇಬ, ಬಾದಶಾಹ, ರಾರ್ಟ್
ಕ್ಲೈವ್, ಚರ್ಚಿಲ್, ಮೌಂಟ್ ಬ್ಯಾಟನ್, ಸುಲ್ತಾನರು, ಹೈದರಾಲಿ, ಟಿಪ್ಪು ಅವರ ಬಗ್ಗೆ ಬಹಳಷ್ಟು ಪಾಠಗಳಿದ್ದವು. ಆದರೆ ನಮ್ಮ ಚೌಡನಾಯ್ಕರ ಕುರಿತು ಯಾಕೆ ಪ್ರಸ್ಥಾಪ ಇಲ್ಲಎಂದು ಯೋಚಿಸಿದೆ. ಇತಿಹಾಸದ ಪುಟದಲ್ಲಿ ಸ್ವಾತಂತ್ರ್ಯ ಸೇನಾನಿ ಚೌಡ ನಾಯ್ಕರ ಹೆಸರು ಉಲ್ಲೇಖವಾಗದೆ ಇರಲು ಕಾರಣವೇನು? ಎಂದು ನನ್ನ 36ನೇ ವರ್ಷದಲ್ಲಿ ಯೋಚಿಸಿದೆ.
ನಮ್ಮ ಬೇಡ್ಕಣಿ ಚೌಡ ನಾಯ್ಕರ ಕುರಿತು ಒಂದು ಪಾಠ ಬೇಡ, ಎಲ್ಲಾದರೂ ಉಲ್ಲೇಖವಾದರೂ ಆಗಬೇಕಿತ್ತಲ್ಲ. ಯಾರ ಬಾಯಲ್ಲೂ ಅವರ ಹೆಸರು ಕೇಳಿರಲಿಲ್ಲ. ಯಾಕೆ ಹೀಗಾಯಿತು ಎಂದು ಯೋಚಿಸುತ್ತಿರುತ್ತೇನೆ. 1947ರಿಂದ ಇಷ್ಟೊಂದು ಜನ ಪ್ರತಿನಿಧಿಗಳು ಬಂದು ಹೋದರೂ ಸಹ ಚೌಡ ನಾಯ್ಕರ ಕುರಿತು ಒಂದು ಚಿಕ್ಕ ಸ್ಮೃತಿ ಭವನವಾಗಲಿ, ಅವರ ಹೆಸರಿನಲ್ಲಿ ಗ್ರಂಥಾಲಯವಾಗಲಿ ಏಕಿಲ್ಲ. ಕೆಲವರನ್ನು ಕೇಳಿದೆ- ಸರ್ಕಲ್‍ಗೆ ಅವನ (ರ) ಹೆಸರು ಹಾಕಿರುವರು ಎಂಬ ಉತ್ತರ ಬಂತು.
ಒಂದು ಸರ್ಕಲ್‍ಗೆ ಅವರ ಹೆಸರನ್ನು ಹಾಕಿದರೆ ಅದು ಏನೂ ಸಾಲದು. ಸಿದ್ದಾಪುರದಲ್ಲಿರುವ ನೆಹರೂ ಮೈದಾನಕ್ಕೆ ವೀರ ಸ್ವಾತಂತ್ರ್ಯ ಸೇನಾನಿ ಚೌಡನಾಯ್ಕ ಮೈದಾನ’ ಎಂದು ಮರು ನಾಮಕರಣ ಯಾಕೆ ಮಾಡಬಾರದು ಎಂಬ ಯೋಚನೆಯೂ ಬಂತು.
ಆದರೆ ಅಂತಹ ಸಹೃದಯಿನಾಗರಿಕರು ನಮ್ಮೂರಲ್ಲಿಲ್ಲವಲ್ಲ ಇದ್ದರೆ ಅವರನ್ನು ಎಚ್ಚರಿಸಿ ನಿರಂತರ ಅಹಿಂಸಾತ್ಮಕವಾದ ಜನಜಾಗೃತಿಯಿಂದ ಈ ಚಿಕ್ಕ ಕಾರ್ಯ ಸಾಧ್ಯವಾಗುವಂತೆ ಮಾಡಬಹುದು. ಆದರೆ ದೀಪದ ಬುಡದಲ್ಲಿ ಕತ್ತಲು ಅಲ್ಲವೆ?
ಚೌಡ ನಾಯ್ಕರ ರಾಷ್ಟ್ರಪ್ರೇಮ ಕೇಳುತ್ತಾ ಹೋದರೆ ಎಂತಹವರಿಗಾದರೂ ಮೈ ಜುಂ ಎನ್ನುತ್ತದೆ. ಹಾಗಾದರೆ ಯಾಕಾಗಿ ಅವರ ಹೆಸರನ್ನು ಮರೆತಿದ್ದೇವೆ? ಶ್ರೀಮಂತ ಕುಟುಂಬದಿಂದ ಬಂದ ಚೌಡ ನಾಯ್ಕರು ಆ ಕಾಲದಲ್ಲಿ ಮೆಟ್ರಿಕ್ ಓದಿದ ಅವರಿಗೆ ತಂದೆಯ ಹೆಸರಿನಿಂದ ಒಳ್ಳೆಯ ಸರಕಾರಿ ಹುದ್ದೆ ಗಿಟ್ಟಿಸಬಹುದಿತ್ತು. ಆದರೆ ಬ್ರಿಟೀಷರ ಕೈಕೆಳಗೆ ದುಡಿಯುವುದಕ್ಕಿಂತ ಸಾವೇ ಲೇಸು ಎಂದೆಣಿಸಿದ ಕ್ರಾಂತಿವೀರ ಹೆತ್ತ ತಂದೆಯ ವಿರೋಧವನ್ನು ಕಟ್ಟಿಕೊಂಡು ಬ್ರಿಟಿಷರ ಪೆಟ್ಟಿಗೆ (ಹೊಡೆತಕ್ಕೆ) ಮೈಕೊಟ್ಟು ಕೊನೆಗೆ ವೀರಯೋಧ ದೂರದ ಧಾರವಾಡದಲ್ಲಿ ಆಸ್ಪತ್ರೆ ಸೇರಿ ವೀರ ಮರಣವನ್ನಪ್ಪಿದ ಚೌಡ ನಾಯ್ಕ ನಮ್ಮ ತಾಲೂಕಿನವರಿಗೆ ನಗಣ್ಯವಾಗಲು ಕಾರಣ ದೀಪದ ಬುಡದಲ್ಲಿ ಕತ್ತಲೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *