ದೀಪದ ಬುಡ…

ದೀಪದ ಬುಡ…
-ಪಾದಚಾರಿ
ದೀಪದ ಬುಡದಲ್ಲಿ ಕತ್ತಲೆ ಎನ್ನುವ ಮಾತಿದೆ. ಆ ಮಾತು ಎಷ್ಟು ಸತ್ಯ ಎಂದರೆ ನಮ್ಮ ಮನೆಯಲ್ಲೇ ಪ್ರತಿಭಾವಂತರಿದ್ದರೂ ನಾವು ಗಮನನೀಡುವುದಿಲ್ಲ. ನಮ್ಮ ತೋಟದಲ್ಲೇ ಒಳ್ಳೆಯ ತರಕಾರಿ ಇರುತ್ತದೆ. ಆದರೆ ನಮಗದು ಕಾಣುವುದಿಲ್ಲ. ಕಂಡರೂ ಇಷ್ಟವಾಗುವುದಿಲ್ಲ. ಎಷ್ಟೋ ವಸ್ತುಗಳು ನಮ್ಮಲ್ಲೇ ಇರುತ್ತವೆ.ಆದರೆ ನಾವು ಉಪಯೋಗಿಸುವುದಿಲ್ಲ. ಯಾಕೆಂದರೆ ಅದರಮಹತ್ವ ನಮಗೆ ನಗಣ್ಯ.
ದೂರದಿಂದ ಬಂದದ್ದು ಮಾತ್ರ ಒಳ್ಳೆಯದೆಂದು ತಲೆಯಲ್ಲಿ ತುಂಬಿಕೊಳ್ಳುತ್ತೇವೆ. ನಮಗೆ ಬೇಕಾದ ವಸ್ತು ಸನಿಹದಲ್ಲೇ ಇದ್ದರೂ ಗಮನಿಸದೆ ಎಲ್ಲೆಲ್ಲೋ ಹುಡುಕುತ್ತಿರುತ್ತೇವೆ. ಅಂತಹ ಸಂದರ್ಭದಲ್ಲಿ ಹೇಳುವ ಮಾತು ದೀಪದ ಬುಡದಲ್ಲಿ ಕತ್ತಲೆ ಎಂದೋ ಅಥವಾ ಅಂಗೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕೆ ಅಲೆದಾಟ ಎಂದು.
ಈ ಗಾದೆ ಏಕೆ ನೆನಪಾಯಿತು ಎಂದರೆ, ನಮ್ಮೂರಿನ ಸ್ವಾತಂತ್ರ್ಯ ಸೇನಾನಿ ಚೌಡ ನಾಯ್ಕರ ಹೆಸರನ್ನು ನನ್ನ ಶಾಲಾ ಜೀವನದಲ್ಲಿ ಕೇಳಿಯೇ ಇರಲಿಲ್ಲ. ನಾನು ಪ್ರಾಥಮಿಕ, ಮಾಧ್ಯಮಿಕ ಶಾಲೆಯ ಒಂಭತ್ತನೆಯವರೆಗೆ ಓದಿದ್ದು ಸಿದ್ಧಾಪುರ ತಾಲೂಕಿನಲ್ಲೇ. ಆದರೆ ಚೌಡ ನಾಯ್ಕರ ಹೆಸರು ಮಾತ್ರ ಎಲ್ಲೂ ಕೇಳಲಿಲ್ಲ.
ಶಾಲೆಬಿಟ್ಟ 24-25 ವರ್ಷಗಳ ನಂತರ ಶ್ರೀಪಾದ ಹೆಗಡೆ ಮಗೇಗಾರ್ ಬರೆದ ಕ್ರಾಂತಿಯ ಕಿಡಿ ಎನ್ನುವ ನಾಟಕದ ಪುಸ್ತಕವನ್ನು ಕೊಟ್ಟವರು ಬೆಂಗಳೂರಿನ ನಾರಾಯಣ ಶಾನುಭಾಗರು. ಬೆಂಗಳೂರಿನಿಂದ ನಾರಾಯಣ ಶಾನುಭಾಗರು ಪ್ರೀತಿಯಿಂದ ಮುಂಬಯಿಯ ನನ್ನ ಮನೆ ವಿಳಾಸಕ್ಕೆ ಕ್ರಾಂತಿಯ ಕಿಡಿ ಕಳುಹಿಸಿದ ಶಾನುಭಾಗರ ಸಾಹಿತ್ಯಾಸಕ್ತಿಗೆ ಧನ್ಯವಾದಗಳು ಎಂದು ಹೇಳಲು ದೂರವಾಣಿ ಮಾಡಿದ್ದೆ. ನೀನು ಸಿದ್ಧಾಪುರದವ, ಸಿದ್ಧಾಪುರದ ಕಥೆ ನಿನಗೂ ತಿಳಿದಿರಲಿ. ನೀನು ಕೃತಿಯನ್ನು ಇಷ್ಟಪಡಬಹುದು ಎಂದು ಕಳುಹಿಸಿರುವೆ ಎಂದರು.
40 ಪುಟಗಳ ನಾಟಕ ಓದುತ್ತ ಹೋದಂತೆ ಅನೇಕ ವಿಚಾರಗಳು ಮನಸ್ಸಿನಲ್ಲಿ ಮೊಳಕೆಯೊಡೆದವು. ಅಷ್ಟೇ ಅಲ್ಲ ದೀಪದ ಬುಡದಲ್ಲಿ ಕತ್ತಲೆಎನ್ನುವ ಗಾದೆಯೂ ನೆನಪಾಯಿತು.
ನಾನು ಶಾಲೆಗೆ ಹೋಗುವಾಗ ಬಾಬರ್, ಅಕ್ಬರ್, ಷಹಜಹಾನ್, ಔರಂಗಜೇಬ, ಬಾದಶಾಹ, ರಾರ್ಟ್
ಕ್ಲೈವ್, ಚರ್ಚಿಲ್, ಮೌಂಟ್ ಬ್ಯಾಟನ್, ಸುಲ್ತಾನರು, ಹೈದರಾಲಿ, ಟಿಪ್ಪು ಅವರ ಬಗ್ಗೆ ಬಹಳಷ್ಟು ಪಾಠಗಳಿದ್ದವು. ಆದರೆ ನಮ್ಮ ಚೌಡನಾಯ್ಕರ ಕುರಿತು ಯಾಕೆ ಪ್ರಸ್ಥಾಪ ಇಲ್ಲಎಂದು ಯೋಚಿಸಿದೆ. ಇತಿಹಾಸದ ಪುಟದಲ್ಲಿ ಸ್ವಾತಂತ್ರ್ಯ ಸೇನಾನಿ ಚೌಡ ನಾಯ್ಕರ ಹೆಸರು ಉಲ್ಲೇಖವಾಗದೆ ಇರಲು ಕಾರಣವೇನು? ಎಂದು ನನ್ನ 36ನೇ ವರ್ಷದಲ್ಲಿ ಯೋಚಿಸಿದೆ.
ನಮ್ಮ ಬೇಡ್ಕಣಿ ಚೌಡ ನಾಯ್ಕರ ಕುರಿತು ಒಂದು ಪಾಠ ಬೇಡ, ಎಲ್ಲಾದರೂ ಉಲ್ಲೇಖವಾದರೂ ಆಗಬೇಕಿತ್ತಲ್ಲ. ಯಾರ ಬಾಯಲ್ಲೂ ಅವರ ಹೆಸರು ಕೇಳಿರಲಿಲ್ಲ. ಯಾಕೆ ಹೀಗಾಯಿತು ಎಂದು ಯೋಚಿಸುತ್ತಿರುತ್ತೇನೆ. 1947ರಿಂದ ಇಷ್ಟೊಂದು ಜನ ಪ್ರತಿನಿಧಿಗಳು ಬಂದು ಹೋದರೂ ಸಹ ಚೌಡ ನಾಯ್ಕರ ಕುರಿತು ಒಂದು ಚಿಕ್ಕ ಸ್ಮೃತಿ ಭವನವಾಗಲಿ, ಅವರ ಹೆಸರಿನಲ್ಲಿ ಗ್ರಂಥಾಲಯವಾಗಲಿ ಏಕಿಲ್ಲ. ಕೆಲವರನ್ನು ಕೇಳಿದೆ- ಸರ್ಕಲ್‍ಗೆ ಅವನ (ರ) ಹೆಸರು ಹಾಕಿರುವರು ಎಂಬ ಉತ್ತರ ಬಂತು.
ಒಂದು ಸರ್ಕಲ್‍ಗೆ ಅವರ ಹೆಸರನ್ನು ಹಾಕಿದರೆ ಅದು ಏನೂ ಸಾಲದು. ಸಿದ್ದಾಪುರದಲ್ಲಿರುವ ನೆಹರೂ ಮೈದಾನಕ್ಕೆ ವೀರ ಸ್ವಾತಂತ್ರ್ಯ ಸೇನಾನಿ ಚೌಡನಾಯ್ಕ ಮೈದಾನ’ ಎಂದು ಮರು ನಾಮಕರಣ ಯಾಕೆ ಮಾಡಬಾರದು ಎಂಬ ಯೋಚನೆಯೂ ಬಂತು.
ಆದರೆ ಅಂತಹ ಸಹೃದಯಿನಾಗರಿಕರು ನಮ್ಮೂರಲ್ಲಿಲ್ಲವಲ್ಲ ಇದ್ದರೆ ಅವರನ್ನು ಎಚ್ಚರಿಸಿ ನಿರಂತರ ಅಹಿಂಸಾತ್ಮಕವಾದ ಜನಜಾಗೃತಿಯಿಂದ ಈ ಚಿಕ್ಕ ಕಾರ್ಯ ಸಾಧ್ಯವಾಗುವಂತೆ ಮಾಡಬಹುದು. ಆದರೆ ದೀಪದ ಬುಡದಲ್ಲಿ ಕತ್ತಲು ಅಲ್ಲವೆ?
ಚೌಡ ನಾಯ್ಕರ ರಾಷ್ಟ್ರಪ್ರೇಮ ಕೇಳುತ್ತಾ ಹೋದರೆ ಎಂತಹವರಿಗಾದರೂ ಮೈ ಜುಂ ಎನ್ನುತ್ತದೆ. ಹಾಗಾದರೆ ಯಾಕಾಗಿ ಅವರ ಹೆಸರನ್ನು ಮರೆತಿದ್ದೇವೆ? ಶ್ರೀಮಂತ ಕುಟುಂಬದಿಂದ ಬಂದ ಚೌಡ ನಾಯ್ಕರು ಆ ಕಾಲದಲ್ಲಿ ಮೆಟ್ರಿಕ್ ಓದಿದ ಅವರಿಗೆ ತಂದೆಯ ಹೆಸರಿನಿಂದ ಒಳ್ಳೆಯ ಸರಕಾರಿ ಹುದ್ದೆ ಗಿಟ್ಟಿಸಬಹುದಿತ್ತು. ಆದರೆ ಬ್ರಿಟೀಷರ ಕೈಕೆಳಗೆ ದುಡಿಯುವುದಕ್ಕಿಂತ ಸಾವೇ ಲೇಸು ಎಂದೆಣಿಸಿದ ಕ್ರಾಂತಿವೀರ ಹೆತ್ತ ತಂದೆಯ ವಿರೋಧವನ್ನು ಕಟ್ಟಿಕೊಂಡು ಬ್ರಿಟಿಷರ ಪೆಟ್ಟಿಗೆ (ಹೊಡೆತಕ್ಕೆ) ಮೈಕೊಟ್ಟು ಕೊನೆಗೆ ವೀರಯೋಧ ದೂರದ ಧಾರವಾಡದಲ್ಲಿ ಆಸ್ಪತ್ರೆ ಸೇರಿ ವೀರ ಮರಣವನ್ನಪ್ಪಿದ ಚೌಡ ನಾಯ್ಕ ನಮ್ಮ ತಾಲೂಕಿನವರಿಗೆ ನಗಣ್ಯವಾಗಲು ಕಾರಣ ದೀಪದ ಬುಡದಲ್ಲಿ ಕತ್ತಲೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *